नाथ पै सर्कलजवळ भीषण अपघात; टँकरच्या चाकाखाली सापडून दुचाकीस्वाराचा जागीच मृत्यू.
बेळगाव : प्रतिनिधी
बेळगाव शहरातील शहापूर परिसरात मंगळवारी (दि. 23) सायंकाळी घडलेल्या भीषण अपघातात एका दुचाकीस्वाराचा जागीच मृत्यू झाला, तर त्याच्यासोबत प्रवास करणारा एक जण जखमी झाला आहे. ही दुर्दैवी घटना नाथ पै सर्कलजवळील केएलई आयुर्वेदिक महाविद्यालयासमोर सायंकाळी सुमारे 4 वाजण्याच्या सुमारास घडली.
मिळालेल्या माहितीनुसार, नाथ पै सर्कलकडून गोवा वेसच्या दिशेने बुलेट दुचाकीवरून जात असताना दुचाकीची एका कारशी धडक झाली. या धडकेमुळे दुचाकीवरील नियंत्रण सुटल्याने चालक रस्त्यावर कोसळला.
दरम्यान, समोरून येत असलेल्या ऑइल टँकरखाली तो सापडल्याने टँकरचे चाक थेट त्याच्या डोक्यावरून गेले. त्यामुळे त्याचा घटनास्थळीच मृत्यू झाला. मृत व्यक्तीचे नाव गणेश असल्याचे प्राथमिक माहितीतून समोर आले आहे.
अपघातात दुचाकीवरील मागील प्रवासी रस्त्याच्या कडेला फेकला गेल्याने तो जखमी झाला असून त्याच्यावर उपचार सुरू आहेत. घटनेची माहिती मिळताच रहदारी दक्षिण पोलिसांनी तत्काळ घटनास्थळी धाव घेत पंचनामा केला. त्यानंतर मृतदेह शवविच्छेदनासाठी जिल्हा रुग्णालयात पाठविण्यात आला.
या भीषण अपघातामुळे परिसरात काही काळ तणावपूर्ण वातावरण निर्माण झाले होते. दरम्यान, शहरातील गर्दीच्या आणि वर्दळीच्या भागातून दिवसा अवजड वाहनांच्या वाहतुकीवर कठोर निर्बंध लागू करण्याची मागणी नागरिकांकडून पुन्हा एकदा जोर धरू लागली आहे.
ಬೆಳಗಾವಿಯ ನಾಥ್ ಪೈ ಸರ್ಕಲ್ ಬಳಿ ಭೀಕರ ಅಪಘಾತ; ಟ್ಯಾಂಕರ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು.
ಬೆಳಗಾವಿ : ಪ್ರತಿನಿಧಿ
ಬೆಳಗಾವಿ ನಗರದ ಶಹಾಪುರ ಪ್ರದೇಶದಲ್ಲಿ ಮಂಗಳವಾರ (ಜೂನ್ 23) ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಅವನೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಈ ದುರ್ಘಟನೆ ನಾಥ್ ಪೈ ಸರ್ಕಲ್ ಸಮೀಪದ ಕೆಎಲ್ಇ ಆಯುರ್ವೇದ ಮಹಾವಿದ್ಯಾಲಯದ ಎದುರು ಸಂಜೆ ಸುಮಾರು 4 ಗಂಟೆಗೆ ನಡೆದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ನಾಥ್ ಪೈ ಸರ್ಕಲ್ನಿಂದ ಗೋವಾ ವೇಸ್ ಕಡೆಗೆ ಬುಲೆಟ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಬೈಕ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡ ಸವಾರ ರಸ್ತೆ ಮೇಲೆ ಬಿದ್ದಿದ್ದಾನೆ.
ಈ ವೇಳೆ ಎದುರಿನಿಂದ ಬರುತ್ತಿದ್ದ ಎಣ್ಣೆ ಸಾಗಣೆ ಟ್ಯಾಂಕರ್ನಡಿ ಸಿಲುಕಿದ ಕಾರಣ, ಟ್ಯಾಂಕರ್ನ ಚಕ್ರ ನೇರವಾಗಿ ಅವನ ತಲೆಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಹೆಸರು ಗಣೇಶ್ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಅಪಘಾತದಲ್ಲಿ ಬೈಕ್ನ ಹಿಂಬದಿ ಸವಾರ ರಸ್ತೆ ಬದಿಗೆ ಎಸೆಯಲ್ಪಟ್ಟ ಪರಿಣಾಮ ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಈ ಭೀಕರ ಅಪಘಾತದಿಂದಾಗಿ ಕೆಲಕಾಲ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ನಗರದ ಜನಸಂದಣಿ ಮತ್ತು ಹೆಚ್ಚು ವಾಹನ ಸಂಚಾರ ಇರುವ ಪ್ರದೇಶಗಳಲ್ಲಿ ಹಗಲು ವೇಳೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಕಠಿಣ ನಿರ್ಬಂಧ ಹೇರಬೇಕೆಂಬ ಬೇಡಿಕೆ ನಾಗರಿಕರಿಂದ ಮತ್ತೊಮ್ಮೆ ಬಲವಾಗಿ ಕೇಳಿಬರತೊಡಗಿದೆ.


