“भाजपच्या व्हीपनुसारच मतदान केले; दिशाभूल करणाऱ्यांवर कायदेशीर कारवाई करणार” – आमदार विठ्ठलराव हलगेकर यांचे स्पष्टीकरण.
खानापूर : प्रतिनिधी
विधान परिषदेच्या नुकत्याच पार पडलेल्या निवडणुकीनंतर खानापूरचे आमदार विठ्ठलराव हलगेकर यांच्यावर करण्यात आलेल्या कथित “क्रॉस व्होटिंग”च्या आरोपांना त्यांनी ठाम शब्दांत फेटाळून लावले आहे. भारतीय जनता पक्षाने जारी केलेल्या अधिकृत व्हीपनुसारच आपण मतदान केल्याचा दावा त्यांनी केला आहे. काही वृत्तवाहिन्या, माध्यमे आणि राजकीय विरोधकांकडून जाणूनबुजून बदनामीचे षड्यंत्र रचले जात असल्याचा आरोप त्यांनी केला आहे.
“आपलं खानापूर”शी बोलताना आमदार हलगेकर म्हणाले की, विधान परिषद निवडणुकीत पक्षाच्या व्हीप नुसार त्यांनी पहिल्या पसंतीचे मत भाजपचे उमेदवार लिंगराज पाटील यांना, तर दुसऱ्या पसंतीचे मत जेडीएसचे उमेदवार गोविंद राजू यांना दिले आहे. हे मतदान पक्षाने दिलेल्या निर्देशांनुसारच झाले असून, काँग्रेसच्या उमेदवाराला मतदान केल्याचे आरोप पूर्णपणे खोटे, निराधार आणि राजकीय हेतूने प्रेरित आहेत.
त्यांनी सांगितले की, एक प्रादेशिक वृत्तवाहिनी तसेच सोशल मीडिया (फेसबुक) वर, पराभूत झालेले माजी आमदार कोणतेही ठोस पुरावे नसताना सनसनाटी बातम्या प्रसारित करत आहेत. केवळ टीआरपी आणि राजकीय फायद्यासाठी माझी प्रतिमा मलिन करण्याचा प्रयत्न केला जात असल्याचे त्यांनी नमूद केले.
हलगेकर यांनी विधानसभा निवडणुकीत पराभूत झालेल्या माजी लोकप्रतिनिधींवरही निशाणा साधला. त्यांनी म्हटले की, काही जणांनी या अप्रमाणित बातम्यांचा आधार घेत सोशल मीडियावर दिशाभूल करणाऱ्या पोस्ट टाकून जनतेमध्ये संभ्रम निर्माण करण्याचा प्रयत्न केला आहे. मात्र सत्य लवकरच जनतेसमोर येईल आणि आरोपांचे वास्तव स्पष्ट होईल, असा विश्वास त्यांनी व्यक्त केला.
कायदेशीर कारवाईचा इशारा…
आपल्याविरोधात खोट्या बातम्या आणि अफवा पसरविणाऱ्या प्रादेशिक वृत्तवाहिनी व व्यक्ती तसेच माध्यमांविरोधात कायदेशीर पावले उचलण्याची तयारी सुरू असल्याचेही त्यांनी स्पष्ट केले. यासंदर्भात कायदेतज्ज्ञांशी चर्चा सुरू असून लवकरच संबंधितांविरुद्ध कायदेशीर व न्यायालयीन कारवाई करण्यात येणार असल्याचे त्यांनी सांगितले.
“भाजपशी निष्ठा कायम”..
भारतीय जनता पक्षाशी असलेली आपली बांधिलकी आणि निष्ठा कधीही डळमळीत होणार नाही, असे सांगताना हलगेकर म्हणाले की, पक्षाची विचारधारा आणि पक्षादेश हेच आपल्यासाठी सर्वोच्च आहेत. आपण नेहमीच पक्षाच्या निर्णयांचे पालन केले असून या निवडणुकीतही अधिकृत उमेदवारालाच मतदान केले आहे.
विकासकामांना रोखण्यासाठी कट?..
आमदार झाल्यापासून खानापूर मतदारसंघातील विकासकामांना गती देण्यासाठी आणि दुर्गम भागातील नागरिकांच्या समस्या सोडवण्यासाठी आपण सातत्याने कार्यरत असल्याचे त्यांनी सांगितले. आपल्या वाढत्या जनसंपर्कामुळे आणि विकासाच्या कामांमुळे काही राजकीय घटक अस्वस्थ झाले असून, त्यातूनच ही बदनामी मोहीम राबविली जात असल्याचा आरोप त्यांनी केला.
“मतदारसंघात फूट पाडणे, कार्यकर्त्यांमध्ये संभ्रम निर्माण करणे आणि विकासाच्या कामांना अडथळा आणणे हाच या प्रचारामागील खरा उद्देश आहे. मात्र खानापूरच्या जनतेचा आणि पक्षाच्या कार्यकर्त्यांचा माझ्यावर पूर्ण विश्वास आहे. त्यामुळे अशा खोट्या आरोपांना जनता योग्य उत्तर देईल,” असेही ते म्हणाले.
“सत्य लवकरच समोर येईल”….
आपल्याविरोधात सुरू असलेल्या कथित खोट्या प्रचाराचा तीव्र निषेध करताना आमदार विठ्ठलराव हलगेकर यांनी सत्याचा विजय निश्चित असल्याचे सांगितले. “दूध का दूध आणि पाणी का पाणी” लवकरच होईल आणि वास्तव जनतेसमोर येईल, असा विश्वास त्यांनी व्यक्त केला. तसेच राजकीय आणि कायदेशीर दोन्ही स्तरांवर या आरोपांना सडेतोड उत्तर दिले जाईल, असेही त्यांनी स्पष्ट केले.
“ಬಿಜೆಪಿಯ ವಿಪ್ ಪ್ರಕಾರವೇ ಮತ ಚಲಾಯಿಸಿದ್ದೇನೆ ಎಂದು ಸ್ಪಷ್ಟನೆ; ದಿಕ್ಕುತಪ್ಪಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” – ಶಾಸಕ ವಿಠ್ಠಲರಾವ್ ಹಲಗೇಕರ ಅವರಿಂದ ಸ್ಪಷ್ಟನೆ.
ಖಾನಾಪುರ : ಪ್ರತಿನಿಧಿ
ಇತ್ತೀಚೆಗೆ ನಡೆದ ವಿಧಾನ ಪರಿಷತ್ (MLC) ಚುನಾವಣೆಯ ಬಳಿಕ ಖಾನಾಪುರ ಕ್ಷೇತ್ರದ ಶಾಸಕ ವಿಠ್ಠಲರಾವ ಹಲಗೇಕರ ಅವರ ವಿರುದ್ಧ ಕೇಳಿಬಂದಿರುವ “ಕ್ರಾಸ್ ವೋಟಿಂಗ್” ಆರೋಪಗಳನ್ನು ಅವರು ಖಡಾಖಂಡಿತವಾಗಿ ತಳ್ಳಿಹಾಕಿದ್ದಾರೆ. ಭಾರತೀಯ ಜನತಾ ಪಕ್ಷವು ಹೊರಡಿಸಿದ್ದ ಅಧಿಕೃತ ವಿಪ್ ಪ್ರಕಾರವೇ ತಾವು ಮತ ಚಲಾಯಿಸಿರುವುದಾಗಿ ಸ್ಪಷ್ಟಪಡಿಸಿದ ಅವರು, ಕೆಲವು ಮಾಧ್ಯಮಗಳು ಮತ್ತು ರಾಜಕೀಯ ವಿರೋಧಿಗಳು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದಾಗಿ ಆರೋಪಿಸಿದ್ದಾರೆ.
“ಆಪಲ ಖಾನಾಪುರ” ಜೊತೆ ಮಾತನಾಡಿದ ಶಾಸಕ ಹಲಗೇಕರ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವಿಪ್ ಪ್ರಕಾರವೇ ಮೊದಲ ಪ್ರಾಶಸ್ತ್ಯದ ಮತವನ್ನು ಬಿಜೆಪಿಯ ಅಭ್ಯರ್ಥಿ ಲಿಂಗರಾಜ್ ಪಾಟೀಲರಿಗೆ ಹಾಗೂ ಎರಡನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಇದು ಪಕ್ಷ ನೀಡಿದ ನಿರ್ದೇಶನಗಳ ಪ್ರಕಾರವೇ ನಡೆದ ಮತದಾನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದೇನೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು, ನಿರಾಧಾರ ಹಾಗೂ ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದ್ದಾರೆ.
ಕೆಲವು ಪ್ರಾದೇಶಿಕ ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್ಬುಕ್) ಸೋತಿರುವ ಮಾಜಿ ಶಾಸಕರು ಯಾವುದೇ ದೃಢವಾದ ಸಾಕ್ಷ್ಯಾಧಾರಗಳಿಲ್ಲದೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಕೇವಲ ಟಿಆರ್ಪಿ ಹಾಗೂ ರಾಜಕೀಯ ಲಾಭಕ್ಕಾಗಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಸೋತ ಕೆಲವು ಮಾಜಿ ಜನಪ್ರತಿನಿಧಿಗಳ ವಿರುದ್ಧವೂ ಹಲಗೇಕರ ಅವರು ವಾಗ್ದಾಳಿ ನಡೆಸಿದರು. ಪರಿಶೀಲಿಸದ ಸುದ್ದಿಗಳನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ದಿಕ್ಕುತಪ್ಪಿಸುವ ಪೋಸ್ಟ್ಗಳನ್ನು ಹಾಕಿ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಸತ್ಯವು ಶೀಘ್ರದಲ್ಲೇ ಜನರ ಮುಂದೆ ಬರಲಿದ್ದು, ಆರೋಪಗಳ ನಿಜಾಂಶ ಬಹಿರಂಗವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾನೂನು ಕ್ರಮದ ಎಚ್ಚರಿಕೆ…
ತಮ್ಮ ವಿರುದ್ಧ ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹಬ್ಬಿಸುತ್ತಿರುವ ಪ್ರಾದೇಶಿಕ ಸುದ್ದಿವಾಹಿನಿಗಳು, ವ್ಯಕ್ತಿಗಳು ಮತ್ತು ಇತರ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಬಂಧಪಟ್ಟವರ ವಿರುದ್ಧ ನ್ಯಾಯಾಲಯ ಸೇರಿದಂತೆ ಕಾನೂನುಬದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
“ಬಿಜೆಪಿಯ ಮೇಲಿನ ನಿಷ್ಠೆ ಅಚಲ”…
ಭಾರತೀಯ ಜನತಾ ಪಕ್ಷದೊಂದಿಗೆ ತಮ್ಮ ಬದ್ಧತೆ ಮತ್ತು ನಿಷ್ಠೆ ಎಂದಿಗೂ ಕುಂದುವುದಿಲ್ಲ ಎಂದು ಹೇಳಿದ ಶಾಸಕ ಹಲಗೇಕರ ಅವರು, ಪಕ್ಷದ ಸಿದ್ಧಾಂತ ಹಾಗೂ ಪಕ್ಷದ ಆದೇಶವೇ ತಮ್ಮ ಪಾಲಿಗೆ ಅತ್ಯುನ್ನತವಾಗಿದೆ ಎಂದರು. ತಾವು ಸದಾ ಪಕ್ಷದ ನಿರ್ಧಾರಗಳನ್ನು ಪಾಲಿಸಿಕೊಂಡು ಬಂದಿದ್ದು, ಈ ಚುನಾವಣೆಯಲ್ಲಿಯೂ ಪಕ್ಷದ ಅಧಿಕೃತ ಅಭ್ಯರ್ಥಿಗೇ ಮತ ಚಲಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅಭಿವೃದ್ಧಿ ಕಾಮಗಾರಿಗಳನ್ನು ತಡೆಯುವ ಸಂಚು?…
ಶಾಸಕರಾದ ಬಳಿಕ ಖಾನಾಪುರ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡಲು ಹಾಗೂ ದುರ್ಗಮ ಪ್ರದೇಶಗಳ ಜನರ ಸಮಸ್ಯೆಗಳನ್ನು ಪರಿಹರಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹಲಗೇಕರ ಹೇಳಿದರು. ತಮ್ಮ ಹೆಚ್ಚುತ್ತಿರುವ ಜನಸಂಪರ್ಕ ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಕೆಲವು ರಾಜಕೀಯ ಶಕ್ತಿಗಳು ಅಸಮಾಧಾನಗೊಂಡಿದ್ದು, ಅದರಿಂದಲೇ ಈ ಅಪಪ್ರಚಾರದ ಅಭಿಯಾನ ನಡೆಯುತ್ತಿದೆ ಎಂದು ಆರೋಪಿಸಿದರು.
“ಕ್ಷೇತ್ರದಲ್ಲಿ ಭಿನ್ನತೆ ಸೃಷ್ಟಿಸುವುದು, ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡುವುದು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವುದೇ ಈ ಸುಳ್ಳು ಪ್ರಚಾರದ ನಿಜವಾದ ಉದ್ದೇಶವಾಗಿದೆ. ಆದರೆ ಖಾನಾಪುರ ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಿದ್ದಾರೆ. ಆದ್ದರಿಂದ ಇಂತಹ ಸುಳ್ಳು ಆರೋಪಗಳಿಗೆ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ” ಎಂದು ಅವರು ಹೇಳಿದರು.
“ಸತ್ಯ ಶೀಘ್ರದಲ್ಲೇ ಹೊರಬರಲಿದೆ”…
ತಮ್ಮ ವಿರುದ್ಧ ನಡೆಯುತ್ತಿರುವ ಸುಳ್ಳು ಪ್ರಚಾರವನ್ನು ತೀವ್ರವಾಗಿ ಖಂಡಿಸಿದ ಶಾಸಕ ವಿಠ್ಠಲರಾವ್ ಹಲಗೇಕರ ಅವರು, ಅಂತಿಮವಾಗಿ ಸತ್ಯದ ವಿಜಯ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಹಾಲು ಹಾಲಾಗಿಯೂ, ನೀರು ನೀರಾಗಿಯೂ ಶೀಘ್ರದಲ್ಲೇ ಹೊರಬರಲಿದೆ. ನಿಜಾಂಶ ಜನರ ಮುಂದೆ ಸ್ಪಷ್ಟವಾಗಲಿದೆ. ರಾಜಕೀಯ ಹಾಗೂ ಕಾನೂನು – ಎರಡೂ ಮಟ್ಟಗಳಲ್ಲಿ ಈ ಆರೋಪಗಳಿಗೆ ತಕ್ಕ ಉತ್ತರ ನೀಡಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.


