केपीसीईए-2024 ची तातडीने अंमलबजावणी करा; नोंदणी प्रक्रिया सुरू करण्याची सरकारकडे मागणी.
बेळगाव ; कर्नाटक व्यावसायिक नागरी अभियंता कायदा-2024 (KPCEA-2024) ची संपूर्ण अंमलबजावणी तातडीने करून व्यावसायिक नागरी अभियंत्यांची नोंदणी प्रक्रिया सुरू करावी, अशी मागणी बेळगाव कन्सल्टिंग सिव्हिल इंजिनिअर्स असोसिएशनने राज्य सरकारकडे केली आहे.
यासंदर्भात आयोजित पत्रकार परिषदेत संघटनेच्या पदाधिकाऱ्यांनी माहिती देताना, या कायद्याच्या अंमलबजावणीसाठी महत्त्वाची भूमिका बजावणारे मंत्री H. K. Patil आणि Satish Jarkiholi यांचे आभार मानले. सार्वजनिक सुरक्षितता, इमारतींची मजबुती, टिकाऊपणा आणि शाश्वत विकास सुनिश्चित करण्याच्या उद्देशाने राज्य सरकारने लागू केलेला हा ऐतिहासिक कायदा देशातील पहिलाच कायदा असल्याचे त्यांनी सांगितले.
या कायद्याअंतर्गत कर्नाटक व्यावसायिक नागरी अभियंता मंडळ (KCPCE) स्थापन करण्यात आले असून मंडळ कार्य सुरू करण्यासाठी पूर्णपणे सज्ज आहे. मात्र, कायदा लागू होऊन सुमारे २० महिने उलटूनही व्यावसायिक नागरी अभियंत्यांची नोंदणी प्रक्रिया अद्याप सुरू झालेली नाही. नियमावली अंतिम करण्यास झालेला विलंब तसेच आवश्यक प्रशासकीय मंजुरी न मिळाल्यामुळे ही प्रक्रिया रखडल्याचे त्यांनी नमूद केले.
कायद्यानुसार मंडळासाठी कार्यालयीन सुविधा उपलब्ध करून देण्याची स्पष्ट तरतूद असतानाही अद्याप आवश्यक कार्यालयीन व्यवस्था करण्यात आलेली नाही, ही खेदजनक बाब असल्याचे त्यांनी सांगितले. नोंदणी प्रक्रिया सुरू करण्यासाठी आवश्यक सर्व पूर्वतयारी मंडळाने पूर्ण केली असून शासनाच्या अंतिम मंजुरीची प्रतीक्षा सुरू आहे, असेही त्यांनी स्पष्ट केले.
संबंधित अधिकाऱ्यांनी नियमावलींना मंजुरी, आवश्यक प्रशासकीय परवानग्या आणि कार्यालयीन सुविधा तातडीने उपलब्ध करून देऊन नोंदणी प्रक्रिया सुरू करण्यासाठी आवश्यक पावले उचलावीत, अशी मागणी यावेळी करण्यात आली.
कर्नाटक व्यावसायिक नागरी अभियंता मंडळ प्रभावीपणे कार्यरत झाल्यास नागरिकांना सुरक्षित इमारती आणि दर्जेदार पायाभूत सुविधा उपलब्ध होतील. तसेच बांधकाम क्षेत्रात व्यावसायिक जबाबदारी वाढेल, अपात्र व्यक्ती आणि बनावट व्यावसायिकांवर आळा बसेल व शाश्वत विकासाला चालना मिळेल, असा विश्वास संघटनेने व्यक्त केला.
राज्य सरकारने या विषयाला सर्वोच्च प्राधान्य देऊन कर्नाटक व्यावसायिक नागरी अभियंता कायदा-2024 ची संपूर्ण अंमलबजावणी करण्यासाठी तातडीने आवश्यक कार्यवाही करावी, अशी मागणी बेळगाव कन्सल्टिंग सिव्हिल इंजिनिअर्स असोसिएशनने केली आहे.
या पत्रकार परिषदेला इंजिनिअर अजित कुमार एस. मगदूम, रमेश तुबची, एस.ए. पाटील, अरुण शिरापूर, आदर्श पी.एस. हिरेमठ आणि अजय पाटील उपस्थित होते.
ಕೆಪಿಸಿಇಎ-2024 ತ್ವರಿತ ಅನುಷ್ಠಾನಕ್ಕೆ ಆಗ್ರಹ
ನೋಂದಣಿ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ಮನವಿ.
ಬೆಳಗಾವಿ : ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಕಾಯ್ದೆ-2024 (KPCEA-2024)ಯನ್ನು ತ್ವರಿತವಾಗಿ ಸಂಪೂರ್ಣ ಅನುಷ್ಠಾನಗೊಳಿಸಿ, ವೃತ್ತಿಪರ ನಾಗರಿಕ ಅಭಿಯಂತರರ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ಬೆಳಗಾವಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಪದಾಧಿಕಾರಿಗಳು, ಕಾಯ್ದೆ ಜಾರಿಗೆ ಮಹತ್ವದ ಪಾತ್ರ ವಹಿಸಿದ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಸತೀಶ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರ ಸುರಕ್ಷತೆ, ಕಟ್ಟಡಗಳ ಸದೃಢತೆ, ಬಾಳಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಐತಿಹಾಸಿಕ ಕಾಯ್ದೆ ದೇಶದಲ್ಲೇ ಮೊದಲನೆಯದಾಗಿದೆ ಎಂದು ತಿಳಿಸಿದರು.
ಕಾಯ್ದೆಯಡಿ ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಮಂಡಳಿ (KCPCE) ರಚನೆಯಾಗಿದ್ದು, ಮಂಡಳಿ ಕಾರ್ಯಾರಂಭಕ್ಕೆ ಸಂಪೂರ್ಣ ಸಿದ್ಧವಾಗಿದೆ. ಆದರೆ ಕಾಯ್ದೆ ಜಾರಿಯಾಗಿ ಸುಮಾರು 20 ತಿಂಗಳುಗಳು ಕಳೆದಿದ್ದರೂ ವೃತ್ತಿಪರ ನಾಗರಿಕ ಅಭಿಯಂತರರ ನೋಂದಣಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ನಿಯಮಾವಳಿ ಅಂತಿಮಗೊಳಿಸುವಿಕೆ ಹಾಗೂ ಅಗತ್ಯ ಆಡಳಿತಾತ್ಮಕ ಅನುಮೋದನೆಗಳಲ್ಲಿ ಉಂಟಾಗಿರುವ ವಿಳಂಬವೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಕಾಯ್ದೆಯಲ್ಲಿ ಮಂಡಳಿಗೆ ಕಚೇರಿ ಸೌಲಭ್ಯ ಒದಗಿಸುವ ಬಗ್ಗೆ ಸ್ಪಷ್ಟ ಉಲ್ಲೇಖವಿದ್ದರೂ, ಇದುವರೆಗೆ ಅಗತ್ಯ ಕಚೇರಿ ವ್ಯವಸ್ಥೆ ಕಲ್ಪಿಸದಿರುವುದು ವಿಷಾದನೀಯವಾಗಿದೆ. ಮಂಡಳಿಯು ನೋಂದಣಿ ಪ್ರಕ್ರಿಯೆ ಆರಂಭಿಸಲು ಬೇಕಾದ ಎಲ್ಲ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ನಿಯಮಾವಳಿಗಳ ಅನುಮೋದನೆ, ಆಡಳಿತಾತ್ಮಕ ಅನುಮತಿಗಳು ಹಾಗೂ ಕಚೇರಿ ಸೌಲಭ್ಯಗಳನ್ನು ತುರ್ತು ಆದ್ಯತೆಯ ಮೇರೆಗೆ ಒದಗಿಸಿ, ನೋಂದಣಿ ಪ್ರಕ್ರಿಯೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಮಂಡಳಿಯ ಪರಿಣಾಮಕಾರಿ ಕಾರ್ಯನಿರ್ವಹಣೆಯಿಂದ ಸಾರ್ವಜನಿಕರಿಗೆ ಸುರಕ್ಷಿತ ಕಟ್ಟಡಗಳು ಮತ್ತು ಮೂಲಸೌಕರ್ಯಗಳು ಲಭ್ಯವಾಗಲಿದ್ದು, ನಿರ್ಮಾಣ ಕ್ಷೇತ್ರದಲ್ಲಿ ವೃತ್ತಿಪರ ಹೊಣೆಗಾರಿಕೆ ಹೆಚ್ಚಲಿದೆ. ಅಲ್ಲದೆ ಅನರ್ಹ ವ್ಯಕ್ತಿಗಳು ಹಾಗೂ ನಕಲಿ ವೃತ್ತಿಪರರ ಹಾವಳಿಗೆ ಕಡಿವಾಣ ಬೀಳಲಿದ್ದು, ಸುಸ್ಥಿರ ಅಭಿವೃದ್ಧಿ ಮತ್ತು ಸಮಾಜದ ಹಿತಾಸಕ್ತಿ ಕಾಪಾಡಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರವು ಈ ವಿಷಯವನ್ನು ಅತ್ಯಂತ ಆದ್ಯತೆಯಿಂದ ಪರಿಗಣಿಸಿ, ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಕಾಯ್ದೆ-2024ರ ಸಂಪೂರ್ಣ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಬೆಳಗಾವಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಆಗ್ರಹಿಸಿತು.
ಈ ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರ್ಗಳಾದ ಅಜಿತ್ ಕುಮಾರ್ ಎಸ್. ಮಗದುಮ್, ರಮೇಶ್ ತುಬಚಿ, ಎಸ್.ಎ. ಪಾಟೀಲ, ಅರುಣ್ ಶಿರಾಪುರ್, ಆದರ್ಶ್ ಪಿ.ಎಸ್. ಹಿರೇಮಠ ಹಾಗೂ ಅಜಯ್ ಪಾಟೀಲ ಉಪಸ್ಥಿತರಿದ್ದರು.

