सीसीटीव्ही फोडण्याचा प्रयत्न; सिरॅमिक प्लॉट परिसरातील नागरिकांमध्ये संताप.
खानापूर : प्रतिनिधी
शहरातील रेल्वे स्थानकाजवळील 93/A1 श्री माऊली नगर, सिरॅमिक प्लॉट परिसरात काही समाजकंटकांकडून वारंवार त्रासदायक प्रकार घडत असल्याने स्थानिक नागरिकांमध्ये संतापाचे वातावरण निर्माण झाले आहे. काही दिवसांपूर्वी एका अनोळखी व्यक्तीने मेलेले पाळीव डुक्कर आणून या परिसरात टाकल्याची धक्कादायक घटना उघडकीस आली होती. हा प्रकार तेथे बसविण्यात आलेल्या सीसीटीव्ही कॅमेऱ्यात कैद झाला होता.
घटनेची माहिती मिळताच पोलिसांनी संबंधितांना सक्त ताकीद देत दुर्गंधीयुक्त मेलेले डुक्कर तातडीने हटविण्याचे आदेश दिले होते. मात्र ही घटना ताजी असतानाच पुन्हा एकदा त्याच परिसरातील सीसीटीव्ही कॅमेरे दगड मारून फोडण्याचा प्रयत्न काहीजणांकडून करण्यात आल्याचे समोर आले आहे. हा प्रकारही सीसीटीव्हीमध्ये कैद झाला असून त्यामुळे परिसरातील नागरिकांमध्ये भीतीचे वातावरण पसरले आहे.
स्थानिकांच्या म्हणण्यानुसार, या भागात वारंवार अशा प्रकारच्या घटना घडत असून काही समाजकंटक मुद्दाम नागरिकांना त्रास देण्याचा प्रयत्न करीत आहेत. त्यामुळे परिसरातील शांतता आणि सुरक्षिततेचा प्रश्न निर्माण झाला आहे.
खानापूर पोलीस स्थानकाचे पीआय एल. एच. गोवंडी हे कर्तव्यदक्ष अधिकारी म्हणून ओळखले जातात. या प्रकरणाची गांभीर्याने चौकशी करून संबंधित व्यक्तींवर केवळ ताकीद न देता कठोर कायदेशीर कारवाई करावी, अशी मागणी सिरॅमिक प्लॉट धारक व परिसरातील नागरिकांकडून करण्यात येत आहे.
ಸಿಸಿಟಿವಿ ಒಡೆದು ಹಾಕಲು ಯತ್ನ; ಸಿರಾಮಿಕ್ ಪ್ಲಾಟದಾರಕ ಮಾಲಿಕರಲ್ಲಿ ಆಕ್ರೋಶ
ಖಾನಾಪುರ : ಪ್ರತಿನಿಧಿ ನಗರದ ರೈಲು ನಿಲ್ದಾಣದ ಸಮೀಪದ 93/A1 ಶ್ರೀ ಮೌಲಿ ನಗರ, ಸೆರಾಮಿಕ್ ಪ್ಲಾಟ್ ಪ್ರದೇಶದಲ್ಲಿ ಕೆಲವು ಸಮಾಜಕಂಟಕರಿಂದ ನಿರಂತರವಾಗಿ ಕಿರಿಕಿರಿಯ ಘಟನೆಗಳು ನಡೆಯುತ್ತಿರುವುದರಿಂದ ಸ್ಥಳೀಯ ನಾಗರಿಕರಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರು ಸತ್ತಿದ್ದ ಸಾಕು ಹಂದಿಯನ್ನು ತಂದು ಈ ಪ್ರದೇಶದಲ್ಲಿ ಎಸೆದಿದ್ದ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸಂಬಂಧಪಟ್ಟವರಿಗೆ ಕಠಿಣ ಎಚ್ಚರಿಕೆ ನೀಡಿ ದುರ್ಗಂಧ ಹರಡುತ್ತಿದ್ದ ಸತ್ತ ಹಂದಿಯನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಈ ಘಟನೆ ಇನ್ನೂ ತಾಜಾಗಿಯೇ ಇರುವಾಗ ಮತ್ತೆ ಅದೇ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನು ಗುರಿಯಾಗಿಸಿ ಕಲ್ಲು ಎಸೆದು ಒಡೆದು ಹಾಕಲು ಕೆಲವರು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಪರಿಣಾಮವಾಗಿ ಪ್ರದೇಶದ ನಾಗರಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯರ ಹೇಳಿಕೆಯಂತೆ, ಈ ಭಾಗದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿದ್ದು, ಕೆಲವು ಸಮಾಜಕಂಟಕರು ಉದ್ದೇಶಪೂರ್ವಕವಾಗಿ ನಾಗರಿಕರಿಗೆ ತೊಂದರೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದೆ.
ಖಾನಾಪುರ ಪೊಲೀಸ್ ಠಾಣೆಯ ಪಿಐ ಎಲ್. ಎಚ್. ಗೋವಂಡಿ ಅವರು ಕರ್ತವ್ಯನಿಷ್ಠ ಅಧಿಕಾರಿಯಾಗಿ ಪರಿಚಿತರಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕೇವಲ ಎಚ್ಚರಿಕೆಗೆ ಸೀಮಿತವಾಗದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೆರಾಮಿಕ್ ಪ್ಲಾಟ್ ಮಾಲೀಕರು ಹಾಗೂ ಪ್ರದೇಶದ ನಾಗರಿಕರು ಆಗ್ರಹಿಸಿದ್ದಾರೆ.


