असोगा येथे रामलिंग देव ट्रस्ट कमीटीने रस्त्यावरील खड्डा बुजवला; मणतुर्गा ग्रामपंचायतीच्या काम चुकार अधिकाऱ्यांचे जाणुन बुजुन दुर्लक्ष.
खानापूर : प्रतिनिधी
असोगा (ता. खानापूर) गावानजीक असलेल्या मलप्रभा नदी पुलाजवळ गटार बुजल्यामुळे सांडपाणी रस्त्यावर येऊन रस्त्यामध्ये मोठा खड्डा पडला होता. तसेच त्या ठिकाणी पाणी साचत होते. त्यामुळे वाहनचालक, प्रवासी तसेच परिसरातील नागरिकांना मोठा त्रास सहन करावा लागत होता. या ठिकाणी दुर्गंधीही पसरली होती. याबाबत “आपलं खानापूर” न्यूज पोर्टलने वृत्त प्रसारित करून मणतुर्गा ग्रामपंचायतीचे लक्ष वेधले होते.
मात्र, यानंतरही मणतुर्गा ग्रामपंचायतीच्या कामचुकार पीडिओ व संबंधित अधिकाऱ्यांनी याकडे जाणून बुजून दुर्लक्ष केल्याचा आरोप नागरिकांकडून करण्यात येत होता. अखेर शुक्रवार दिनांक 22 मे 2026 रोजी असोगा येथील पवित्र तीर्थक्षेत्र असलेल्या श्री रामलिंग देव ट्रस्ट कमिटीच्या वतीने पुढाकार घेण्यात आला.
ट्रस्ट कमिटीने एक ट्रक मोहरम माती आणली व जेसीबीच्या सहाय्याने रस्त्यावरील खड्ड्यात मोहरम माती टाकून तो बुजविण्याचे काम केले. त्यामुळे त्या ठिकाणी साचणारे पाणी थांबले असून रस्ता पूर्ववत करण्यात आला आहे.
या कामामुळे मंदिरात येणाऱ्या भाविकांनी तसेच मणतुर्गा व नेरसा भागाकडे प्रवास करणाऱ्या वाहनचालक आणि प्रवाशांनी श्री रामलिंग देव ट्रस्ट कमिटीच्या पदाधिकाऱ्यांचे आभार मानले आहेत. तसेच ग्रामपंचायतीने अशा समस्यांकडे वेळेत लक्ष देण्याची मागणीही नागरिकांनी केली आहे.
ಅಸೋಗಾ ಗ್ರಾಮದ ರಾಮಲಿಂಗ ದೇವ ಟ್ರಸ್ಟ್ ಸಮಿತಿ ವತಿಯಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ; ಮಣತುರ್ಗಾ ಗ್ರಾಮ ಪಂಚಾಯಿತಿಯ ಸೋಮಾರಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ.
ಖಾನಾಪುರ : ಪ್ರತಿನಿಧಿ
ಅಸೋಗಾ (ತಾ. ಖಾನಾಪುರ) ಗ್ರಾಮದ ಸಮೀಪದಲ್ಲಿರುವ ಮಲಪ್ರಭಾ ನದಿ ಸೇತುವೆ ಬಳಿ ಗಟಾರ್ ಮುಚ್ಚಿದ ಪರಿಣಾಮ ಕೊಳಚೆ ನೀರು ರಸ್ತೆಯ ಮೇಲೆ ಹರಿದು, ರಸ್ತೆಯಲ್ಲಿ ದೊಡ್ಡ ಗುಂಡಿಗಳು ಉಂಟಾಗಿದವು. ಅಲ್ಲದೆ ಆ ಸ್ಥಳದಲ್ಲಿ ನೀರು ನಿಂತುಕೊಳ್ಳುತ್ತಿದ್ದುದರಿಂದ ವಾಹನ ಸವಾರರು, ಪ್ರಯಾಣಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದರಿಂದ ದುರ್ವಾಸನೆಯೂ ವ್ಯಾಪಿಸಿತ್ತು.
ಈ ಕುರಿತು “ಆಪಲ ಖಾನಾಪುರ” ನ್ಯೂಸ್ ಪೋರ್ಟಲ್ ವರದಿ ಪ್ರಸಾರ ಮಾಡಿ ಮಣತುರ್ಗಾ ಗ್ರಾಮ ಪಂಚಾಯಿತಿಯ ಗಮನ ಸೆಳೆದಿತ್ತು.
ಆದರೆ, ಇದಾದ ಬಳಿಕವೂ ಮಣತುರ್ಗಾ ಗ್ರಾಮ ಪಂಚಾಯಿತಿಯ ಸೋಮಾರಿ ಪಿಡಿಒ ಹಾಗೂ ಸಂಬಂಧಿತ ಅಧಿಕಾರಿಗಳು ಈ ಸಮಸ್ಯೆಯನ್ನು ತಿಳಿದ್ದರೂ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಕೊನೆಗೆ ಶುಕ್ರವಾರ, ದಿನಾಂಕ 22 ಮೇ 2026ರಂದು ಅಸೋಗಾದ ಪವಿತ್ರ ತೀರ್ಥಕ್ಷೇತ್ರವಾದ ಶ್ರೀ ರಾಮಲಿಂಗ ದೇವ ಟ್ರಸ್ಟ್ ಸಮಿತಿಯವರು ಮುಂದಾಳತ್ವದಲ್ಲಿ ಒಂದು ಟ್ರಕ್ ಮೊಹರಂ ಮಣ್ಣು ತರಿಸಿ, ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆ ಗುಂಡಿಯಲ್ಲಿ ಮಣ್ಣು ತುಂಬಿಸಿ ಗುಂಡಿಯನ್ನು ಮುಚ್ಚುವ ಕೆಲಸ ಮಾಡಿದರು. ಇದರಿಂದ ಆ ಸ್ಥಳದಲ್ಲಿ ನೀರು ನಿಲ್ಲುವುದು ನಿಂತಿದ್ದು, ರಸ್ತೆ ಮತ್ತೆ ಸಂಚಾರಕ್ಕೆ ಯೋಗ್ಯವಾಗಿದೆ.
ಈ ಕಾರ್ಯದಿಂದ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಮಣತುರ್ಗಾ ಮತ್ತು ನೇರಸಾ ಭಾಗಗಳಿಗೆ ಸಂಚರಿಸುವ ವಾಹನ ಸವಾರರು ಮತ್ತು ಪ್ರಯಾಣಿಕರು ಶ್ರೀ ರಾಮಲಿಂಗ ದೇವ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಇಂತಹ ಸಮಸ್ಯೆಗಳ ಕಡೆ ಗ್ರಾಮ ಪಂಚಾಯಿತಿ ಸಮಯಕ್ಕೆ ಸರಿಯಾಗಿ ಗಮನ ಹರಿಸಬೇಕು ಎಂಬ ಆಗ್ರಹವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.


