दुर्गानगर-खानापूर येथे श्री साईबाबा मंदिराची प्राणप्रतिष्ठा व भव्य उद्घाटन सोहळा 12 ते 14 मे दरम्यान.
खानापूर : मौजे दुर्गानगर-खानापूर येथे श्री साईबाबा मंदिराच्या मूर्ती प्राणप्रतिष्ठापना व उद्घाटन सोहळ्याचे आयोजन मंगळवार दि. 12 मे 2026 ते गुरुवार दि. 14 मे 2026 या कालावधीत करण्यात आले आहे. तीन दिवस चालणाऱ्या या धार्मिक सोहळ्यात विविध धार्मिक विधी, मिरवणूक, सत्कार समारंभ व महाप्रसादाचे आयोजन करण्यात आले आहे.
दि. 12 मे रोजी दुपारी 3 वाजता शिवस्मारक येथून मूर्तीची भव्य मिरवणूक काढण्यात येणार आहे. ही मिरवणूक जांबोटी क्रॉस चौक, मंदिर बाजारपेठ, चिरमुरकर गल्ली, स्टेशन रोड मार्गे पुन्हा शिवस्मारक ते दुर्गानगर अशी पार पडणार आहे. हरिपाठ महिला भजनी मंडळ, दादोबा नगर (खानापूर) यांच्या भजनासह ढोल-ताशांच्या गजरात मिरवणूक उत्साहात होणार आहे.
दि. 13 मे रोजी दुपारी 2 वाजता विविध धार्मिक कार्यक्रमाचे आयोजन करण्यात आले आहे. यावेळी देवता स्थापना सह विविध धार्मिक विधी होणार आहेत. संध्याकाळी 7 वाजता माहेरवासीयांचा ओटी भरण्याचा कार्यक्रम तसेच दुर्गानगरमधील ज्येष्ठ नागरिक व महिलांचा सत्कार समारंभ आयोजित करण्यात आला आहे.
दि. 14 मे रोजी सकाळी 7 वाजता नवग्रह शांती, वास्तू शांती, ब्रह्मादी देवता पूजन व पर्याय होम होईल. सकाळी 9 वाजता कळसारोहण, मूर्ती स्थापना व आरती होणार आहे. सकाळी 11 वाजता मान्यवरांच्या उपस्थितीत मंदीराचा भव्य उद्घाटन सोहळा पार पडणार असून दुपारी 2 वाजता महाप्रसादाचे आयोजन करण्यात आले आहे.
उद्घाटन कार्यक्रमाचे अध्यक्षस्थान श्री. अमृत बडकू पाटील (एक्स आर्मी, संस्थापक अध्यक्ष साईबाबा मंदिर कमिटी व कर्नाटक राज्य सामाजिक पुरस्कार विजेते) भूषवणार आहेत. स्वागताध्यक्ष म्हणून श्री. संतोष एस. मडिवाळकर (प्रधान कार्यदर्शी, कर्नाटक युवा रक्षणा वेदिके, खानापूर) उपस्थित राहतील.
मंदिराचे उद्घाटन खासदार माननीय श्री. विश्वेश्वर हेगडे-कागेरी, कर्नाटक राज्याच्या महिला व बाल विकास मंत्री सौ. लक्ष्मी हेब्बाळकर यांच्या हस्ते होणार आहे. गाभाऱ्याचे उद्घाटन आमदार श्री. विठ्ठल सोमाण्णा हलगेकर व एमएलसी श्री. चन्नराज हट्टीहोळी यांच्या हस्ते होईल. कळसारोहण परमपूज्य श्री. चन्नबसवदेवरू (रुद्रस्वामी मठ, अवरोळी-बिळकी) यांच्या हस्ते संपन्न होणार आहे.
दीपप्रज्वलन सोहळा माजी आमदार श्री. दिगंबर पाटील, श्री. संजय पाटील, श्री. अरविंद चं. पाटील, सौ. अंजली निंबाळकर, श्री. प्रमोद कोचेरी, श्री. मुरलीधर ग. पाटील, श्री. सदानंद पाटील, श्री. संजय जयवंत कुबल आदी मान्यवरांच्या उपस्थितीत होणार आहे.
या तीन दिवसीय धार्मिक सोहळ्याचा लाभ सर्व भाविकांनी घ्यावा, असे आवाहन आयोजन समितीच्या वतीने करण्यात आले आहे.
ದುರ್ಗಾನಗರ–ಖಾನಾಪುರದಲ್ಲಿ ಶ್ರೀ ಸಾಯಿಬಾಬಾ ದೇವಸ್ಥಾನದ ಪ್ರಾಣಪ್ರತಿಷ್ಠೆ ಹಾಗೂ ಭವ್ಯ ಉದ್ಘಾಟನಾ ಸಮಾರಂಭ ಮೇ 12 ರಿಂದ 14ರವರೆಗೆ.
ಖಾನಾಪುರ : ಮೌಜೆ ದುರ್ಗಾನಗರ–ಖಾನಾಪುರದಲ್ಲಿ ಶ್ರೀ ಸಾಯಿಬಾಬಾ ದೇವಸ್ಥಾನದ ಮೂರ್ತಿ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನಾ ಸಮಾರಂಭವನ್ನು ಮಂಗಳವಾರ ದಿ. 12 ಮೇ 2026 ರಿಂದ ಗುರುವಾರ ದಿ. 14 ಮೇ 2026ರವರೆಗೆ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ವಿಧಿಗಳು, ಮೆರವಣಿಗೆ, ಸನ್ಮಾನ ಸಮಾರಂಭ ಹಾಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ದಿ. 12 ಮೇ ರಂದು ಮಧ್ಯಾಹ್ನ 3 ಗಂಟೆಗೆ ಶಿವಸ್ಮಾರಕದಿಂದ ಮೂರ್ತಿಯ ಭವ್ಯ ಮೆರವಣಿಗೆ ಹೊರಡಲಿದೆ. ಈ ಮೆರವಣಿಗೆ ಜಾಂಬೋಟಿ ಕ್ರಾಸ್ ಚೌಕ್, ಮಾರುಕಟ್ಟೆ ದೇವಸ್ಥಾನ , ಚಿರಮುರಕರ ಗಲ್ಲಿ, ಸ್ಟೇಷನ್ ರೋಡ್ ಮಾರ್ಗವಾಗಿ ಮತ್ತೆ ಶಿವಸ್ಮಾರಕದಿಂದ ದುರ್ಗಾನಗರವರೆಗೆ ಸಾಗಲಿದೆ. ಹರಿಪಾಠ ಮಹಿಳಾ ಭಜನಾ ಮಂಡಳಿ, ದಾದೋಬಾ ನಗರ (ಖಾನಾಪುರ) ಇವರ ಭಜನೆ ಹಾಗೂ ಡೋಲ್-ತಾಶಾ ಘೋಷಗಳೊಂದಿಗೆ ಮೆರವಣಿಗೆ ಉತ್ಸಾಹದಿಂದ ನಡೆಯಲಿದೆ.
ದಿ. 13 ಮೇ ರಂದು ಮಧ್ಯಾಹ್ನ 2 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ದೇವತಾ ಸ್ಥಾಪನೆ ಸೇರಿದಂತೆ ಹಲವು ಪೂಜಾ ವಿಧಿಗಳು ನಡೆಯಲಿವೆ. ಸಂಜೆ 7 ಗಂಟೆಗೆ ತವರಿನ ಹೆಣ್ಣು ಮಕ್ಕಳಿಗೆ ಹಣು ಉಡಿ ತುಂಬುವ ಕಾರ್ಯಕ್ರಮ ಹಾಗೂ ದುರ್ಗಾನಗರದ ಹಿರಿಯ ನಾಗರಿಕರು ಮತ್ತು ಮಹಿಳೆಯರ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ದಿ. 14 ಮೇ ರಂದು ಬೆಳಿಗ್ಗೆ 7 ಗಂಟೆಗೆ ನವಗ್ರಹ ಶಾಂತಿ, ವಾಸ್ತು ಶಾಂತಿ, ಬ್ರಹ್ಮಾದಿ ದೇವತಾ ಪೂಜೆ ಹಾಗೂ ಪರ್ಯಾಯ ಹೋಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಕಳಶಾರೋಹಣ, ಮೂರ್ತಿ ಸ್ಥಾಪನೆ ಮತ್ತು ಆರತಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಗಣ್ಯರ ಸಾನ್ನಿಧ್ಯದಲ್ಲಿ ದೇವಸ್ಥಾನದ ಭವ್ಯ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಮಧ್ಯಾಹ್ನ 2 ಗಂಟೆಗೆ ಮಹಾಪ್ರಸಾದ ವಿತರಣೆ ಮಾಡಲಾಗುತ್ತದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಮೃತ ಬಡಕು ಪಾಟೀಲ (ಎಕ್ಸ್ ಆರ್ಮಿ, ಸಂಸ್ಥಾಪಕ ಅಧ್ಯಕ್ಷರು – ಸಾಯಿಬಾಬಾ ದೇವಸ್ಥಾನ ಸಮಿತಿ ಹಾಗೂ ಕರ್ನಾಟಕ ರಾಜ್ಯ ಸಾಮಾಜಿಕ ಪ್ರಶಸ್ತಿ ಪುರಸ್ಕೃತರು) ವಹಿಸಲಿದ್ದಾರೆ. ಸ್ವಾಗತಾಧ್ಯಕ್ಷರಾಗಿ ಶ್ರೀ ಸಂತೋಷ ಎಸ್. ಮಡಿವಾಳಕರ (ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಯುವ ರಕ್ಷಣಾ ವೇದಿಕೆ, ಖಾನಾಪುರ) ಉಪಸ್ಥಿತರಿರುತ್ತಾರೆ.
ದೇವಾಲಯದ ಉದ್ಘಾಟನೆಯನ್ನು ಮಾನ್ಯ ಸಂಸದ ಶ್ರೀ ವಿಶ್ವೇಶ್ವರ ಹೆಗಡೆ-ಕಾಗೇರಿ ಹಾಗೂ ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸೌ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ನೆರವೇರಿಸಲಾಗುತ್ತದೆ. ಗರ್ಭಗುಡಿಯ ಉದ್ಘಾಟನೆಯನ್ನು ಶಾಸಕರಾದ ಶ್ರೀ ವಿಠ್ಠಲ ಸೋಮನ್ಣ ಹಲಗೆಕರ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀ ಚೆನ್ನರಾಜ ಹಟ್ಟಿಹೊಳಿ ಅವರಿಂದ ನೆರವೇರಿಸಲಾಗುತ್ತದೆ. ಕಳಶಾರೋಹಣವನ್ನು ಪರಮಪೂಜ್ಯ ಶ್ರೀ ಚೆನ್ನಬಸವದೇವರು (ರುದ್ರಸ್ವಾಮಿ ಮಠ, ಅವರೋಳಿ–ಬಿಳಕಿ) ಅವರಿಂದ ನೆರವೇರಿಸಲಾಗುತ್ತದೆ.
ದೀಪಪ್ರಜ್ವಲನಾ ಸಮಾರಂಭವು ಮಾಜಿ ಶಾಸಕರಾದ ಶ್ರೀ ದಿಗಂಬರ ಪಾಟೀಲ, ಶ್ರೀ ಸಂಜಯ ಪಾಟೀಲ, ಶ್ರೀ ಅರವಿಂದ ಚಂ. ಪಾಟೀಲ, ಸೌ. ಅಂಜಲಿ ನಿಂಬಾಳ್ಕರ್, ಶ್ರೀ ಪ್ರಮೋದ ಕೊಚೇರಿ, ಶ್ರೀ ಮುರಳೀಧರ ಗ. ಪಾಟೀಲ, ಶ್ರೀ ಸದಾನಂದ ಪಾಟೀಲ, ಶ್ರೀ ಸಂಜಯ ಜಯವಂತ ಕುಬಲ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಮೂರು ದಿನಗಳ ಧಾರ್ಮಿಕ ಸಮಾರಂಭದ ಪ್ರಯೋಜನವನ್ನು ಎಲ್ಲಾ ಭಕ್ತಾದಿಗಳು ಪಡೆಯಬೇಕು ಎಂದು ಆಯೋಜನಾ ಸಮಿತಿಯವರು ಮನವಿ ಮಾಡಿದ್ದಾರೆ.

