कोंगळा (ता. खानापूर) येथे उलटी-जुलाबचा प्रादुर्भाव; ग्रामस्थांचा नेरसा ग्रामपंचायतीवर गंभीर आरोप.
खानापूर : तालुक्यातील कोंगळा (ता. खानापूर) गावात उलटी व जुलाबचा प्रादुर्भाव सुरू झाल्याने ग्रामस्थांमध्ये चिंतेचे वातावरण निर्माण झाले आहे. या प्रकाराला गावातील वॉटर मॅन तसेच नेरसा ग्रामपंचायतीच्या अधिकाऱ्यांचे दुर्लक्ष कारणीभूत असल्याचा गंभीर आरोप ग्रामपंचायतीचे माजी सदस्य जयवंत गावकर यांनी केला आहे.
मिळालेल्या माहितीनुसार, भीमगड अभयारण्याच्या कुशीत वसलेले कोंगळा गाव नेरसा ग्रामपंचायतीच्या हद्दीत येते. गावात पाणीपुरवठा करणाऱ्या टाक्यांची गेल्या अनेक दिवसांपासून स्वच्छता करण्यात आलेली नाही. त्यामुळे दूषित पाण्यामुळे काही ग्रामस्थांना उलटी व जुलाबाचा त्रास सुरू झाला आहे. गुरुवारी काही रुग्णांवर खानापूर येथील दवाखान्यात उपचार करण्यात आले असून त्यांना उपचारानंतर घरी सोडण्यात आल्याची माहिती जयवंत गावकर यांनी दिली.
ग्रामस्थांनी अनेक वेळा संबंधित वॉटर मॅनला पाण्याच्या टाक्या स्वच्छ करण्याबाबत सांगितले होते. मात्र त्याकडे दुर्लक्ष करण्यात आले, असा आरोप करण्यात आला आहे. तसेच नेरसा ग्रामपंचायतीच्या अधिकाऱ्यांनाही याबाबत वारंवार कळविण्यात आले होते. तरीदेखील कोणतीही कार्यवाही करण्यात आली नसल्याचे ग्रामस्थांचे म्हणणे आहे.
यासंदर्भात ग्रामपंचायतीचे विकास अधिकारी (पीडीओ) यांच्याशी संपर्क साधण्याचा प्रयत्न करण्यात आला; मात्र त्यांनी फोन उचलला नसल्याचा आरोपही जयवंत गावकर यांनी केला आहे.
वरिष्ठ अधिकाऱ्यांनी या प्रकरणाची तात्काळ दखल घेऊन संबंधितांवर कारवाई करावी तसेच पाण्याच्या टाक्यांची त्वरित स्वच्छता करावी, अन्यथा भविष्यात काही अनुचित प्रकार घडल्यास त्यास ग्रामपंचायत व संबंधित अधिकारी जबाबदार राहतील, असा इशारा ग्रामस्थांनी दिला आहे.
पाण्याच्या टाक्या तात्काळ स्वच्छ न केल्यास ग्रामपंचायतीला कुलूप लावण्याचा इशाराही जयवंत गावकर व कोंगळा ग्रामस्थांनी दिला आहे.
ಕೊಂಗಳಾ (ತಾ. ಖಾನಾಪುರ) ಗ್ರಾಮದಲ್ಲಿ ವಾಂತಿ -ಬೆಧೆ ಸಾಂಕ್ರಾಮಿಕ ಕಾಯಿಲೆ; ನೆರಸಾ ಗ್ರಾಮಪಂಚಾಯತ್ ವಿರುದ್ಧ ಗ್ರಾಮಸ್ಥರ ಗಂಭೀರ ಆರೋಪ
ಖಾನಾಪುರ : ತಾಲ್ಲೂಕಿನ ಕೊಂಗಳಾ (ತಾ. ಖಾನಾಪುರ) ಗ್ರಾಮದಲ್ಲಿ ವಾಂತಿ -ಬೆಧೆ ಹಾಗೂ ಜಲಬಾಧೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಪರಿಸ್ಥಿತಿಗೆ ಗ್ರಾಮದ ವಾಟರ್ಮ್ಯಾನ್ ಹಾಗೂ ನೆರಸಾ ಗ್ರಾಮಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಪಂಚಾಯತ್ ಮಾಜಿ ಸದಸ್ಯ ಜಯವಂತ ಗಾವಕರ ಗಂಭೀರ ಆರೋಪ ಮಾಡಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ಭೀಮಗಡ ಅಭಯಾರಣ್ಯದ ಅಂಚಿನಲ್ಲಿ ನೆಲೆಸಿರುವ ಕೊಂಗಳಾ ಗ್ರಾಮವು ನೆರಸಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಗ್ರಾಮಕ್ಕೆ ನೀರು ಪೂರೈಸುವ ಟ್ಯಾಂಕ್ಗಳ ಸ್ವಚ್ಛತೆ ಹಲವಾರು ದಿನಗಳಿಂದ ಮಾಡಲಾಗಿಲ್ಲ. ಇದರಿಂದ ಮಾಲಿನ್ಯಗೊಂಡ ನೀರು ಬಳಕೆಯಾಗಿ ಕೆಲವು ಗ್ರಾಮಸ್ಥರಿಗೆ ವಾಂತಿ ಮತ್ತು ಜಲಬಾಧೆ ತೊಂದರೆ ಕಾಣಿಸಿಕೊಂಡಿದೆ.
ಗುರುವಾರ ಕೆಲವು ರೋಗಿಗಳಿಗೆ ಖಾನಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಜಯವಂತ ಗಾವಕರ ತಿಳಿಸಿದ್ದಾರೆ.
ಗ್ರಾಮಸ್ಥರು ಹಲವು ಬಾರಿ ಸಂಬಂಧಿತ ವಾಟರ್ಮ್ಯಾನ್ಗೆ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. ಇದೇ ವಿಷಯವನ್ನು ನೆರಸಾ ಗ್ರಾಮಪಂಚಾಯತ್ ಅಧಿಕಾರಿಗಳಿಗೂ ಹಲವು ಬಾರಿ ತಿಳಿಸಿದ್ದರೂ ಯಾವುದೇ ಕ್ರಮವಾಗಿಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲವೆಂದು ಜಯವಂತ ಗಾವಕರ ಆರೋಪಿಸಿದ್ದಾರೆ.
ಮೇಲಾಧಿಕಾರಿಗಳು ತಕ್ಷಣ ಈ ಪ್ರಕರಣದ ಕುರಿತು ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನೀರಿನ ಟ್ಯಾಂಕ್ಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಗ್ರಾಮಪಂಚಾಯತ್ ಮತ್ತು ಸಂಬಂಧಿತ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ನೀರಿನ ಟ್ಯಾಂಕ್ಗಳನ್ನು ತಕ್ಷಣ ಸ್ವಚ್ಛಗೊಳಿಸದಿದ್ದರೆ ಗ್ರಾಮಪಂಚಾಯತ್ ಕಚೇರಿಗೆ ಬೀಗ ಹಾಕುವಂತೆ ಜಯವಂತ ಗಾವಕರ ಹಾಗೂ ಕೊಂಗಳಾ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


