खानापूरचा अभिमान! दिव्या देसाईला शिवस्वराज्य संघटनेतर्फे सन्मान.
खानापूर : राज्यातील दहावीच्या परीक्षेत दुसरा क्रमांक मिळवणे ही खानापूर तालुक्यासाठी अत्यंत अभिमानाची बाब असून, दिव्या देसाई हिने पुढील शिक्षण पूर्ण करून प्रशासकीय सेवेत उल्लेखनीय कामगिरी करावी, असे प्रतिपादन खानापूर तालुका महाराष्ट्र एकीकरण समितीचे कार्याध्यक्ष तसेच शिवस्वराज्य संघटनेचे अध्यक्ष निरंजन सरदेसाई यांनी केले.
दहावीच्या परीक्षेत राज्यात द्वितीय क्रमांक मिळवलेल्या झुंजवाड येथील दिव्या देसाई हिचा शिवस्वराज्य संघटनेतर्फे सत्कार करण्यात आला. प्रारंभी अध्यक्ष निरंजन सरदेसाई यांनी दिव्या देसाई हिला शाल व पुष्पगुच्छ देऊन सन्मानित केले.
यावेळी बोलताना सरदेसाई म्हणाले की, राज्यात दुसरा क्रमांक मिळवणे ही अत्यंत गौरवाची गोष्ट आहे. खानापूर तालुक्यातील जास्तीत जास्त विद्यार्थ्यांनी प्रशासकीय सेवा परीक्षेकडे वळावे, अशी अपेक्षा त्यांनी व्यक्त केली. कोणत्याही प्रकारची माहिती किंवा मदत आवश्यक असल्यास शिवस्वराज्य संघटना सातत्याने मदतीचा हात पुढे करेल, असेही त्यांनी सांगितले.
कार्यक्रमाच्या प्रारंभी माजी ग्रामपंचायत सदस्य आप्पाजी पाटील यांनी प्रास्ताविक व स्वागत केले.
या कार्यक्रमास संघटनेचे खजिनदार मुकुंद पाटील, गर्लगुंजी येथील माऊली क्रॉप सोसायटीचे अध्यक्ष सुनील पाटील, मिलिंद देसाई, संदेश कोडचवाडकर, हेब्बाळ मराठी शाळा सुधारणा समितीचे अध्यक्ष मोहन गुरव, धामणे शाळेतील क्रीडा शिक्षक एम. एम. पाटील, प्रदीप देसाई तसेच माजी ग्रामपंचायत अध्यक्षा दीपा देसाई आदी उपस्थित होते.
ಖಾನಾಪೂರ ತಾಲೂಕಿಗೆ ಹೆಮ್ಮೆ! ದಿವ್ಯಾ ದೇಶಾಯಿಗೆ ಶಿವಸ್ವರಾಜ್ಯ ಸಂಘಟನೆ ವತಿಯಿಂದ ಸನ್ಮಾನ.
ಖಾನಾಪೂರು : ರಾಜ್ಯದ 10 ನೇಯ ತರಗತಿ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಖಾನಾಪೂರು ತಾಲ್ಲೂಕಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದ್ದು, ದಿವ್ಯಾ ದೇಶಾಯಿ ಮುಂದಿನ ಶಿಕ್ಷಣವನ್ನು ಪೂರ್ಣಗೊಳಿಸಿ ಆಡಳಿತ ಸೇವೆಯಲ್ಲಿ ಗಮನಾರ್ಹ ಸಾಧನೆ ಮಾಡಬೇಕು ಎಂದು ಖಾನಾಪೂರು ತಾಲ್ಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಶಿವಸ್ವರಾಜ್ಯ ಸಂಘಟನೆಯ ಅಧ್ಯಕ್ಷರಾದ ನಿರಂಜನ್ ಸರದೇಶಾಯಿ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ 10 ನೇಯ ತರಗತಿ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ಝುಂಜವಾಡ ಗ್ರಾಮದ ದಿವ್ಯಾ ದೇಶಾಯಿಯನ್ನು ಶಿವಸ್ವರಾಜ್ಯ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಅಧ್ಯಕ್ಷ ನಿರಂಜನ್ ಸರದೇಶಾಯಿ ಅವರು ದಿವ್ಯಾ ದೇಶಾಯಿಗೆ ಶಾಲು ಮತ್ತು ಪುಷ್ಪಗುಚ್ಛ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರದೇಶಾಯಿ ಅವರು, ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆಯುವುದು ಅತ್ಯಂತ ಗೌರವದ ವಿಷಯವಾಗಿದೆ. ಖಾನಾಪೂರು ತಾಲ್ಲೂಕಿನ ಹೆಚ್ಚಿನ ವಿದ್ಯಾರ್ಥಿಗಳು ಆಡಳಿತ ಸೇವಾ ಪರೀಕ್ಷೆಗಳತ್ತ ಮುಖ ಮಾಡಬೇಕು ಎಂದು ಆಶಿಸಿದರು. ಯಾವುದೇ ರೀತಿಯ ಮಾಹಿತಿ ಅಥವಾ ಸಹಾಯ ಅಗತ್ಯವಿದ್ದಲ್ಲಿ ಶಿವಸ್ವರಾಜ್ಯ ಸಂಘಟನೆ ಸದಾ ಸಹಾಯಕ್ಕೆ ಸಿದ್ಧವಾಗಿರುತ್ತದೆ ಎಂದೂ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅಪ್ಪಾಜಿ ಪಾಟೀಲ ಅವರು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಖಜಾಂಚಿ ಮುಕುಂದ ಪಾಟೀಲ, ಗರ್ಲಗುಂಜಿ ಗ್ರಾಮದ ಮೌಲಿ ಕ್ರಾಪ್ ಸೊಸೈಟಿಯ ಅಧ್ಯಕ್ಷ ಸುನಿಲ್ ಪಾಟೀಲ, ಮಿಲಿಂದ ದೇಶಾಯಿ, ಸಂದೇಶ್ ಕೋಡಚವಾಡ್ಕರ್, ಹೆಬ್ಬಾಳ ಮರಾಠಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಮೋಹನ್ ಗುರುವ, ಧಾಮಣೆ ಶಾಲೆಯ ಕ್ರೀಡಾ ಶಿಕ್ಷಕ ಎಂ.ಎಂ. ಪಾಟೀಲ, ಪ್ರದೀಪ ದೇಶಾಯಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ದೇಶಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

