खानापूर तालुक्यातील गुणवंत विद्यार्थिनींचा घरोघरी जाऊन सत्कार.

खानापूर : खानापूर तालुका महाराष्ट्र एकीकरण समितीच्या वतीने यंदाच्या दहावीच्या परीक्षेत उल्लेखनीय यश संपादन केलेल्या गुणवंत विद्यार्थिनींचा त्यांच्या घरी जाऊन सत्कार करण्यात आला. यावेळी विद्यार्थिनींना पुढील शैक्षणिक वाटचालीसाठी शुभेच्छा व सदिच्छा देण्यात आल्या.

यंदाच्या दहावीच्या परीक्षेत खानापूर तालुक्यातील विद्यार्थी-विद्यार्थिनींनी उल्लेखनीय यश संपादन करत तालुक्याचा गौरव वाढवला आहे. झुंजवाड येथील दिव्या प्रदीप देसाई हिने 625 पैकी 624 गुण मिळवून राज्यात द्वितीय क्रमांक पटकावला आहे. इंग्रजी विषयाचा पेपर पुनर्मूल्यांकनासाठी पाठवला असून त्या विषयात गुण वाढून पूर्ण 625 गुण मिळण्याचा विश्वास तिने व्यक्त केला आहे.

झुंजवाड येथीलच आनंदगड विद्यालयाची विद्यार्थिनी कुमारी माया मंजुनाथ धबाले हिने प्रथम क्रमांक मिळवत उल्लेखनीय कामगिरी केली. हलशीवाडी येथील कुमारी अनुष्का रघुनाथ देसाई हिने 625 पैकी 621 गुण मिळवून विशेष श्रेणीत यश संपादन केले. तसेच कापोली येथील ज्येष्ठ नेते संभाजी देसाई यांची नात कुमारी राजलक्ष्मी हनुमंत देसाई हिने नंदगड येथील एक्झिलियन इंग्लिश मीडियम स्कूलमध्ये 97 टक्क्यांहून अधिक गुण मिळवून द्वितीय क्रमांक पटकावला. नंदगड येथील दक्षिण महाराष्ट्र शिक्षण संस्था संचालित कन्या विद्यालयाची विद्यार्थिनी कुमारी साक्षी कृष्णा बिडकर हिनेही उल्लेखनीय यश संपादन करत द्वितीय क्रमांक प्राप्त केला.
या सर्व गुणवंत विद्यार्थिनींचा सत्कार महाराष्ट्र एकीकरण समितीचे अध्यक्ष सूर्याजी सहदेव पाटील यांच्या नेतृत्वाखाली करण्यात आला. यावेळी माजी तालुका पंचायत अध्यक्ष सुरेशराव देसाई, समितीचे ज्येष्ठ नेते तथा नंदगड दक्षिण पीकेपीएसचे अध्यक्ष पी.एच. पाटील, तसेच समितीचे सचिव राजू पाटील उपस्थित होते. मान्यवरांनी विद्यार्थिनी व त्यांच्या पालकांना भेटून अभिनंदन करत भावी वाटचालीसाठी शुभेच्छा दिल्या.
विशेष म्हणजे या सर्व विद्यार्थिनी मराठी भाषिक सीमा भागातील असूनही त्यांनी कन्नड व इंग्रजी माध्यमातून शिक्षण घेत अत्यंत मेहनतीने हे यश संपादन केले आहे. याबद्दल महाराष्ट्र एकीकरण समितीने विशेष अभिमान व्यक्त केला.
यावेळी अध्यक्ष सूर्याजी सहदेव पाटील यांनी विद्यार्थिनींना आशीर्वाद देत त्यांच्या उज्ज्वल भविष्यासाठी शुभेच्छा दिल्या. तर सुरेशराव देसाई यांनी मार्गदर्शन करताना, पुढील शिक्षण घेत असताना मराठी भाषेबद्दल स्वाभिमान बाळगण्याचे आवाहन केले. इतर भाषांमध्ये शिक्षण घेत असतानाही मातृभाषा, परंपरा आणि संस्कृतीचा सन्मान राखत कुटुंब व गावाचे नाव उज्ज्वल करण्याचे त्यांनी सांगितले.
यावेळी गुणवंत विद्यार्थिनींचे पालक व समितीचे पदाधिकारी मोठ्या संख्येने उपस्थित होते.
ಖಾನಾಪುರ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಮನೆಗೆ ಭೇಟಿ ನೀಡಿ ಸನ್ಮಾನ
ಖಾನಾಪುರ : ಖಾನಾಪುರ ತಾಲ್ಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಈ ವರ್ಷದ 10 ನೇಯ ತರಗತಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಅವರ ಮನೆ ಮನೆಗೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಮುಂದಿನ ಶೈಕ್ಷಣಿಕ ಪಯಣಕ್ಕೆ ಶುಭಾಶಯಗಳು ತಿಳಿಸಲಾಯಿತು.
ಈ ವರ್ಷದ 10 ನೇಯ ತರಗತಿ ಪರೀಕ್ಷೆಯಲ್ಲಿ ಖಾನಾಪುರ ತಾಲ್ಲೂಕಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಝುಂಜವಾಡ ಗ್ರಾಮದ ದಿವ್ಯ ಪ್ರದೀಪ ದೇಸಾಯಿ ಅವರು 625ರಲ್ಲಿ 624 ಅಂಕಗಳನ್ನು ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ ವಿಷಯದ ಉತ್ತರಪತ್ರಿಕೆಯನ್ನು ಮರುಮೌಲ್ಯಮಾಪನಕ್ಕೆ ಕಳುಹಿಸಲಾಗಿದ್ದು, ಆ ವಿಷಯದಲ್ಲಿ ಅಂಕಗಳು ಹೆಚ್ಚಾಗಿ ಪೂರ್ಣ 625 ಅಂಕಗಳನ್ನು ಪಡೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅದೇ ಝುಂಜವಾಡ ಗ್ರಾಮದ ಆನಂದಗಡ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಮಾಯಾ ಮಂಜುನಾಥ ಧಬಾಲೆ ಅವರು ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಹಲಶಿವಾಡಿ ಗ್ರಾಮದ ಕುಮಾರಿ ಅನುಷ್ಕಾ ರಘುನಾಥ ದೇಸಾಯಿ ಅವರು 625ರಲ್ಲಿ 621 ಅಂಕಗಳನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹಾಗೆಯೇ ಕಾಪೋಲಿ ಗ್ರಾಮದ ಹಿರಿಯ ನಾಯಕ ಸಂಭಾಜಿ ದೇಸಾಯಿ ಅವರ ಮೊಮ್ಮಗಳು ಕುಮಾರಿ ರಾಜಲಕ್ಷ್ಮಿ ಹನುಮಂತ ದೇಸಾಯಿ ಅವರು ನಂದಗಡದ ಎಕ್ಸಿಲಿಯನ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 97 ಶೇಕಡಾಕ್ಕೂ ಹೆಚ್ಚು ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ನಂದಗಡದ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಸಂಸ್ಥೆ ನಡೆಸುವ ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಸಾಕ್ಷಿ ಕೃಷ್ಣ ಬಿಡ್ಕರ್ ಅವರು ಕೂಡ ಗಮನಾರ್ಹ ಸಾಧನೆ ಮಾಡಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಈ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ಸೂರ್ಯಾಜಿ ಸಹದೇವ ಪಾಟೀಲ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸುರೇಶರಾವ್ ದೇಸಾಯಿ, ಸಮಿತಿಯ ಹಿರಿಯ ನಾಯಕ ಹಾಗೂ ನಂದಗಡ ದಕ್ಷಿಣ ಪಿಕೆಪಿಎಸ್ ಅಧ್ಯಕ್ಷ ಪಿ.ಎಚ್. ಪಾಟೀಲ ಹಾಗೂ ಸಮಿತಿಯ ಕಾರ್ಯದರ್ಶಿ ರಾಜು ಪಾಟೀಲ ಉಪಸ್ಥಿತರಿದ್ದರು. ಗಣ್ಯರು ವಿದ್ಯಾರ್ಥಿನಿಯರು ಹಾಗೂ ಅವರ ಪಾಲಕರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಭವಿಷ್ಯದ ಸಾಧನೆಗೆ ಶುಭಾಶಯಗಳನ್ನು ಕೋರಿದರು.
ವಿಶೇಷವೆಂದರೆ, ಈ ಎಲ್ಲಾ ವಿದ್ಯಾರ್ಥಿನಿಯರು ಮರಾಠಿ ಭಾಷಿಕ ಗಡಿ ಭಾಗಕ್ಕೆ ಸೇರಿದವರಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಅಪಾರ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ವಿಶೇಷ ಹೆಮ್ಮೆ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಸೂರ್ಯಾಜಿ ಸಹದೇವ ಪಾಟೀಲ ಅವರು ವಿದ್ಯಾರ್ಥಿನಿಯರಿಗೆ ಆಶೀರ್ವಾದ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭಹಾರೈಸಿದರು. ಸುರೇಶರಾವ್ ದೇಸಾಯಿ ಅವರು ಮಾರ್ಗದರ್ಶನ ನೀಡುತ್ತಾ, ಮುಂದಿನ ವಿದ್ಯಾಭ್ಯಾಸದ ವೇಳೆ ಮರಾಠಿ ಭಾಷೆಯ ಬಗ್ಗೆ ಸ್ವಾಭಿಮಾನ ಹೊಂದಿರಬೇಕು ಎಂದು ಕರೆ ನೀಡಿದರು. ಇತರ ಭಾಷೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಮಾತೃಭಾಷೆ, ಪರಂಪರೆ ಮತ್ತು ಸಂಸ್ಕೃತಿಗೆ ಗೌರವ ನೀಡಿ ಕುಟುಂಬ ಹಾಗೂ ಗ್ರಾಮದ ಹೆಸರನ್ನು ಮತ್ತಷ್ಟು ಉಜ್ವಲಗೊಳಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರ ಪಾಲಕರು ಹಾಗೂ ಸಮಿತಿಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

