बैलूर येथे श्री लक्ष्मी यात्रेची जय्यत तयारी; 6 मे पासून यात्रेला प्रारंभ, पेवर्स बसविण्याच्या कामाचे भूमिपूजन उत्साहात.
बैलूर (ता. खानापूर) : खानापूर तालुक्यातील जांबोटी परिसरातील बैलूर येथे होणाऱ्या श्री लक्ष्मी देवी यात्रेला बुधवार दिनांक 6 मे 2026 पासून प्रारंभ होत असून, यात्रेच्या पार्श्वभूमीवर ग्रामस्थ व यात्रा कमिटीच्या वतीने जय्यत तयारी सुरू करण्यात आली आहे. यात्रेदरम्यान देवीची मूर्ती बसविण्यात येणाऱ्या गदगेसमोरील जागेवर पेवर्स बसविण्याच्या कामाचे भूमिपूजन शुक्रवार, दि. 24 एप्रिल 2026 रोजी ग्रामस्थांच्या उपस्थितीत उत्साहात पार पडले.

या भूमिपूजनाचा कार्यक्रम लक्ष्मी देवी यात्रा कमिटीचे अध्यक्ष मंगेश केरू गुरव यांच्या हस्ते तसेच मान्यवरांच्या उपस्थितीत संपन्न झाला. सदर कामासाठीचे अनुदान विधान परिषद सदस्य चन्नराज हट्टीहोळी यांच्या निधीतून मंजूर करण्यात आले असून, हे अनुदान मिळविण्यासाठी सामाजिक कार्यकर्ते इरफान तालिकोटी यांनी विशेष प्रयत्न केले आहेत.

कार्यक्रमाच्या प्रारंभी लक्ष्मी देवी यात्रा कमिटीचे सचिव कृष्णकांत कामांना बिर्जे यांनी प्रास्ताविक करून उपस्थितांचे स्वागत केले. त्यांनी यात्रेचे धार्मिक व सांस्कृतिक महत्त्व अधोरेखित करत यात्रेच्या नियोजनाबाबत माहिती दिली.
या प्रसंगी इरफान तालिकोटी, विधान परिषद सदस्य चन्नराज हट्टीहोळी यांचे स्वीय सहाय्यक विनोद पाटील, मनोहर बेळगावकर, लक्ष्मण झांजरे, धनश्री सरदेसाई, पुंडलिक नाकाडी, विठ्ठल गुरव, सी. एम. पाटील, भरमू गुरव, नारायण प. गावडे, रामलिंग नाकाडी, महादेव गावस, रामू नाकाडी, पांडुरंग नींगो गावडे, भरमाणा हालगेकर, विठ्ठल बिर्जे, पांडुरंग केरू गुरव, रवळू पावणू गुरव, रवळू बडकू गुरव, रामू खाचू गुरव, संपत बिर्जे, विठ्ठल राजगोळकर, संजय पाटील, अर्जुन कांबळे, मुस्ताक डंबळकर आदींसह ग्रामस्थ मोठ्या संख्येने उपस्थित होते.
ग्रामस्थांच्या सहकार्याने यंदाची यात्रा अधिक भव्य आणि सुयोजित पद्धतीने पार पाडण्याचा निर्धार यात्रा कमिटीने व्यक्त केला आहे.
ಬೈಲೂರುದಲ್ಲಿ ಶ್ರೀ ಲಕ್ಷ್ಮೀ ಜಾತ್ರೆಗೆ ಭರ್ಜರಿ ಸಿದ್ಧತೆ; ಮೇ 6ರಿಂದ ಜಾತ್ರೆಗೆ ಚಾಲನೆ, ಜಾತ್ರೆ ನಿಮಿತ್ಯ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ಕಾರ್ಯ ಉತ್ಸಾಹದಲ್ಲಿ ನೆರವೇರಿತು.
ಬೈಲೂರು (ತಾ. ಖಾನಾಪುರ) : ಖಾನಾಪುರ ತಾಲ್ಲೂಕಿನ ಜಾಂಬೋಟಿ ಭಾಗದ ಬೈಲೂರು ಗ್ರಾಮದಲ್ಲಿ ನಡೆಯಲಿರುವ ಶ್ರೀ ಲಕ್ಷ್ಮೀ ದೇವಿ ಜಾತ್ರೆಗೆ ಬುಧವಾರ, ದಿನಾಂಕ 6 ಮೇ 2026ರಿಂದ ಚಾಲನೆ ದೊರೆಯಲಿದ್ದು, ಜಾತ್ರೆಯ ಹಿನ್ನೆಲೆ ಗ್ರಾಮಸ್ಥರು ಹಾಗೂ ಜಾತ್ರಾ ಸಮಿತಿಯ ವತಿಯಿಂದ ಭರ್ಜರಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಜಾತ್ರೆಯ ಸಂದರ್ಭದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವ ಗದಗೆಯ ಎದುರಿನ ಸ್ಥಳದಲ್ಲಿ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಶುಕ್ರವಾರ, ದಿನಾಂಕ 24 ಏಪ್ರಿಲ್ 2026ರಂದು ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿಪೂಜೆ ಉತ್ಸಾಹದಿಂದ ನೆರವೇರಿತು.
ಈ ಭೂಮಿಪೂಜೆ ಕಾರ್ಯಕ್ರಮವು ಲಕ್ಷ್ಮೀ ದೇವಿ ಜಾತ್ರಾ ಸಮಿತಿಯ ಅಧ್ಯಕ್ಷ ಮಂಗೇಶ ಕೇರು ಗುರವ ಅವರ ಹಸ್ತಗಳಿಂದ ಹಾಗೂ ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಈ ಕಾಮಗಾರಿಗಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ನಿಧಿಯಿಂದ ಅನುದಾನ ಮಂಜೂರಾಗಿದ್ದು, ಈ ಅನುದಾನ ದೊರಕಿಸಲು ಸಾಮಾಜಿಕ ಕಾರ್ಯಕರ್ತ ಇರ್ಫಾನ್ ತಾಲಿಕೋಟಿ ಅವರು ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಲಕ್ಷ್ಮೀ ದೇವಿ ಜಾತ್ರಾ ಸಮಿತಿಯ ಕಾರ್ಯದರ್ಶಿ ಕೃಷ್ಣಕಾಂತ ಕಾಮಣಾ ಬಿರಜೆ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಅವರು ಜಾತ್ರೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಒತ್ತಿಹೇಳಿ, ಜಾತ್ರೆಯ ಯೋಜನೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇರ್ಫಾನ್ ತಾಲಿಕೋಟಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಸ್ವೀಯ ಸಹಾಯಕ ವಿನೋದ ಪಾಟೀಲ್, ಮನೋಹರ ಬೆಳಗಾವ್ಕರ್, ಲಕ್ಷ್ಮಣ ಝಾಂಜರೆ, ಧನಶ್ರೀ ಸರದೇಶಾಯಿ, ಪುಂಡಲಿಕ ನಾಕಾಡಿ, ವಿಠ್ಠಲ ಗುರವ, ಸಿ.ಎಂ. ಪಾಟೀಲ್, ಭರಮು ಗುರವ, ನಾರಾಯಣ ಪಿ. ಗಾವಡೆ, ರಾಮಲಿಂಗ ನಾಕಾಡಿ, ಮಹಾದೇವ ಗವಸ್, ರಾಮು ನಾಕಾಡಿ, ಪಾಂಡುರಂಗ ನೀಂಗೋ ಗಾವಡೆ, ಭರಮಾಣ ಹಲಗೆಕರ, ವಿಠ್ಠಲ ಬಿರಜೆ, ಪಾಂಡುರಂಗ ಕೇರು ಗುರವ, ರವಳು ಪಾವಣು ಗುರವ, ರವಳು ಬಡಕು ಗುರವ, ರಾಮು ಖಾಚು ಗುರವ, ಸಂಪತ್ ಬಿರಜೆ ಸೇರಿದಂತೆ ಅನೇಕ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮಸ್ಥರ ಸಹಕಾರದೊಂದಿಗೆ ಈ ವರ್ಷದ ಜಾತ್ರೆಯನ್ನು ಇನ್ನಷ್ಟು ಭವ್ಯ ಹಾಗೂ ಸುಸಂಘಟಿತ ರೀತಿಯಲ್ಲಿ ನಡೆಸುವ ಸಂಕಲ್ಪವನ್ನು ಜಾತ್ರಾ ಸಮಿತಿ ವ್ಯಕ್ತಪಡಿಸಿದೆ.


