श्री नागेश महारुद्र मंदिराच्या कळसाची शोभायात्रा सोमवार दि. 20 एप्रिल रोजी.
खानापूर : नागुर्डा, नागुर्डावाडा व विश्रांतवाडी या तीन गावांचे आराध्य व थळदैवत असलेल्या श्री नागेश महारुद्र मंदिरच्या जीर्णोद्धार कार्यक्रमानिमित्त शनिवार दि. १८ एप्रिल रोजी मंदिराच्या आवारात बैठक पार पडली. बैठकीत विविध विषयांवर चर्चा होऊन मंदिराचे बांधकाम पूर्णत्वास आल्याने लवकरच कळस, नंदी, गणेश मूर्ती आदींची विधिवत स्थापना करून प्राणप्रतिष्ठापना करण्याचे ठरविण्यात आले.

मंदिरासाठी विविध देवतांच्या मूर्ती व कळस हे पंढरपूर येथून आणण्यात आले आहेत. कळसारोहणापूर्वी खानापूर, नागुर्डा, नागुर्डावाडा व विश्रांतवाडी येथील भाविकांना कळसाचे दर्शन व्हावे या उद्देशाने सोमवार, दि. २० एप्रिल २०२६ रोजी शोभायात्रा काढण्याचा निर्णय सर्वानुमते घेण्यात आला असल्याची माहिती मंदिर बांधकाम समितीचे अध्यक्ष श्री. निरंजन उदयसिंग सरदेसाई यांनी दिली.
या धार्मिक सोहळ्याबाबत परिसरात उत्साहाचे वातावरण असून नागुर्डा, नागुर्डावाडा व विश्रांतवाडी येथील पुरुष व महिलांचा मोठ्या संख्येने सहभाग अपेक्षित आहे. श्री नागेश महारुद्र हे खानापूरातील सरदेसाई परिवाराचे कुलदैवत असल्याने मंदिराचा कळस देसाई गल्लीतील सरदेसाई वाडा येथे ठेवण्यात आला होता. त्यामुळे शोभायात्रेला सुरुवात सरदेसाई वाडा येथून होणार आहे.
शोभायात्रा प्रथम मलप्रभा नदी घाट येथे जाईल. त्यानंतर अर्बन बँकेजवळील श्री नागेश महारुद्र मंदिर स्थळाला भेट देऊन देसाई गल्ली–घोडे गल्ली–निंगापूर गल्ली मार्गे शिवस्मारक–स्टेशन रोड–लक्ष्मी मंदिर–विठोबादेव गल्ली–गुरव गल्ली मार्गे रावळनाथ मंदिर येथे पोहोचेल. पुढे घाडी गल्ली–धर्मवीर संभाजी चौक–पारिश्वाड क्रॉस मार्गे चौराशी देवी मंदिर येथे जाऊन जांबोटी क्रॉस मार्गे विश्रांतवाडी येथे दुपारी भोजनासाठी थांबणार आहे.
भोजनानंतर शोभायात्रा नागुर्डा येथील विठ्ठल-रुक्मिणी मंदिराकडे प्रस्थान करेल. गावातील मुख्य मार्गाने भ्रमण करून अखेरीस नागुर्डावाडा येथील गणपती मंदिर येथे शोभायात्रेचा समारोप होईल.
भाविकांनी बहुसंख्येने उपस्थित राहून दर्शनाचा लाभ घ्यावा, असे आवाहन आयोजकांकडून करण्यात आले आहे.
बैठकीस मंदिर बांधकाम समितीचे अभिजित सरदेसाई, कृष्णा धुळ्याचे, रवळू वडगांवकर, बाळाप्पा बिर्जे, नामदेव पाटील, नागेश पाटील (पुणे), ज्ञानेश्वर पाटील, नागेश पारवाडकर, मारुती पाखरे, बाबुराव खन्नूकर, राघोबा चापगांवकर, जयराज चापगांवकर, भैय्या चव्हाण, मारुती देसूरकर, आप्पण्णा हुंदरे आदी उपस्थित होते. तसेच श्री आबासाहेब दळवी, कृष्णा महाजन, मारुती पाटील, धाकलू बिर्जे यांनी मार्गदर्शन केले.
ಶ್ರೀ ನಾಗೇಶ ಮಹಾರುದ್ರ ದೇವಸ್ಥಾನದ ಕಲಶದ ಶೋಭಾಯಾತ್ರೆ ಸೋಮವಾರ ದಿ. 20 ಏಪ್ರಿಲ್ ರಂದು
ಖಾನಾಪೂರ : ನಾಗುರ್ಡಾ, ನಾಗುರ್ಡಾವಾಡಾ ಮತ್ತು ವಿಶ್ರಾಂತವಾಡಿ ಈ ಮೂರು ಗ್ರಾಮಗಳ ಆರಾಧ್ಯ ಹಾಗೂ ಗ್ರಾಮದೇವತೆಯಾದ ಶ್ರೀ ನಾಗೇಶ ಮಹಾರುದ್ರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ನಿಮಿತ್ತ ಶನಿವಾರ ದಿ. 18 ಏಪ್ರಿಲ್ ರಂದು ದೇವಸ್ಥಾನದ ಆವರಣದಲ್ಲಿ ಸಭೆ ನಡೆದು ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ, ದೇವಸ್ಥಾನದ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವುದರಿಂದ ಶೀಘ್ರದಲ್ಲೇ ಕಲಶ, ನಂದಿ, ಗಣೇಶ ಮೂರ್ತಿ ಮುಂತಾದವುಗಳ ವಿಧಿವತ್ತಾದ ಪ್ರತಿಷ್ಠಾಪನೆ ಮಾಡಿ ಪ್ರಾಣಪ್ರತಿಷ್ಠೆ ನೆರವೇರಿಸಲು ತೀರ್ಮಾನಿಸಲಾಯಿತು.
ದೇವಾಲಯಕ್ಕಾಗಿ ವಿವಿಧ ದೇವತೆಗಳ ಮೂರ್ತಿಗಳು ಹಾಗೂ ಕಲಶವನ್ನು ಪಂಢರಪುರದಿಂದ ತರಲಾಗಿದೆ. ಕಲಶವನ್ನು ಮೊದಲು ಖಾನಾಪೂರ, ನಾಗುರ್ಡಾ, ನಾಗುರ್ಡಾವಾಡಾ ಹಾಗೂ ವಿಶ್ರಾಂತವಾಡಿ ಪ್ರದೇಶಗಳ ಭಕ್ತರಿಗೆ ಕಲಶದ ದರ್ಶನವಾಗುವ ಉದ್ದೇಶದಿಂದ ಸೋಮವಾರ, ದಿ. 20 ಏಪ್ರಿಲ್ 2026 ರಂದು ಶೋಭಾಯಾತ್ರೆ ನಡೆಸುವ ನಿರ್ಧಾರವನ್ನು ಏಕಮತದಿಂದ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಶ್ರೀ ನಿರಂಜನ್ ಉದಯಸಿಂಗ್ ಸರದೇಶಾಯಿ ತಿಳಿಸಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆ ಪ್ರದೇಶದಲ್ಲಿ ಹರ್ಷೋಲ್ಲಾಸದ ವಾತಾವರಣ ನಿರ್ಮಾಣಗೊಂಡಿದ್ದು, ನಾಗುರ್ಡಾ, ನಾಗುರ್ಡಾವಾಡಾ ಹಾಗೂ ವಿಶ್ರಾಂತವಾಡಿ ಗ್ರಾಮದ ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಶ್ರೀ ನಾಗೇಶ ಮಹಾರುದ್ರರು ಖಾನಾಪೂರದ ಸರದೇಶಾಯಿ ಕುಟುಂಬದ ಕುಲದೇವತೆ ಆಗಿರುವುದರಿಂದ ದೇವಸ್ಥಾನದ ಕಲಶವನ್ನು ದೇಸಾಯಿ ಗಲ್ಲಿಯಲ್ಲಿರುವ ಸರದೇಶಾಯಿ ವಾಡಾದಲ್ಲಿ ಇರಿಸಲಾಗಿತ್ತು. ಆದ್ದರಿಂದ ಶೋಭಾಯಾತ್ರೆ ಸರದೇಶಾಯಿ ವಾಡೆಯಿಂದ ಪ್ರಾರಂಭವಾಗಲಿದೆ.
ಶೋಭಾಯಾತ್ರೆ ಮೊದಲು ಮಲಪ್ರಭಾ ನದಿ ಘಾಟ್ ಬಳಿ ತೆರಳಿ, ನಂತರ ಅರ್ಬನ್ ಬ್ಯಾಂಕ್ ಸಮೀಪದ ಶ್ರೀ ನಾಗೇಶ ಮಹಾರುದ್ರ ದೇವಸ್ಥಾನ ಸ್ಥಳಕ್ಕೆ ಭೇಟಿ ನೀಡಲಿದೆ. ಅಲ್ಲಿಂದ ದೇಸಾಯಿ ಗಲ್ಲಿ–ಘೋಡೆ ಗಲ್ಲಿ–ನಿಂಗಾಪೂರ ಗಲ್ಲಿ ಮಾರ್ಗವಾಗಿ ಶಿವಸ್ಮಾರಕ–ಸ್ಟೇಷನ್ ರೋಡ್–ಲಕ್ಷ್ಮಿ ದೇವಸ್ಥಾನ–ವಿಠೋಬಾದೇವ ಗಲ್ಲಿ–ಗುರುವ್ ಗಲ್ಲಿ ಮೂಲಕ ರಾವಳನಾಥ ದೇವಸ್ಥಾನಕ್ಕೆ ತಲುಪಲಿದೆ.
ಮುಂದೆ ಘಾಡಿ ಗಲ್ಲಿ–ಧರ್ಮವೀರ ಸಂಭಾಜಿ ಚೌಕ್–ಪಾರಿಶ್ವಾಡ ಕ್ರಾಸ್ ಮಾರ್ಗವಾಗಿ ಚೌರಾಶಿ ದೇವಿ ದೇವಸ್ಥಾನಕ್ಕೆ ತೆರಳಿ, ಜಾಂಬೋಟಿ ಕ್ರಾಸ್ ಮೂಲಕ ವಿಶ್ರಾಂತವಾಡಿಯಲ್ಲಿ ಮಧ್ಯಾಹ್ನದ ಊಟಕ್ಕಾಗಿ ತಂಗಲಿದೆ. ಊಟದ ನಂತರ ಶೋಭಾಯಾತ್ರೆ ನಾಗುರ್ಡಾದ ವಿಠ್ಠಲ-ರುಕ್ಮಿಣಿ ದೇವಸ್ಥಾನದತ್ತ ಪ್ರಯಾಣಿಸಿ, ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ನಾಗುರ್ಡಾವಾಡಾದ ಗಣಪತಿ ದೇವಸ್ಥಾನದಲ್ಲಿ ಶೋಭಾಯಾತ್ರೆ ಸಮಾಪ್ತಿಗೊಳ್ಳಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದರ್ಶನದ ಪ್ರಯೋಜನ ಪಡೆಯಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಸಭೆಗೆ ದೇವಸ್ಥಾನ ನಿರ್ಮಾಣ ಸಮಿತಿಯ ಅಭಿಜಿತ್ ಸರದೇಶಾಯಿ, ಕೃಷ್ಣ ಧುಳ್ಯಾಚೆ, ರವಳು ವಡಗಾಂವಕರ, ಬಾಳಪ್ಪ ಬಿರ್ಜೆ, ನಮದೇವ ಪಾಟೀಲ, ನಾಗೇಶ ಪಾಟೀಲ (ಪುಣೆ), ಜ್ಞಾನೇಶ್ವರ ಪಾಟೀಲ, ನಾಗೇಶ ಪಾರವಾಡಕರ, ಮಾರುತಿ ಪಾಖರೆ, ಬಾಬುರಾವ ಖನ್ನೂಕರ, ರಾಘೋಬಾ ಚಾಪಗಾಂವಕರ, ಜಯರಾಜ್ ಚಾಪಗಾಂವಕರ, ಭಯ್ಯಾ ಚವ್ಹಾಣ, ಮಾರುತಿ ದೇಸೂರ್ಕರ್, ಅಪ್ಪಣ್ಣ ಹುಂದರೆ ಮೊದಲಾದವರು ಉಪಸ್ಥಿತರಿದ್ದರು. ಹಾಗೆಯೇ ಶ್ರೀ ಆಬಾಸಾಹೇಬ ದಳವಿ, ಕೃಷ್ಣಾ ಮಹಾಜನ್ ಹಾಗೂ ಮಾರುತಿ ಪಾಟೀಲ, ಧಾಕಲು ಬಿರ್ಜೆ ಅವರು ಮಾರ್ಗದರ್ಶನ ನೀಡಿದರು.



