यापुढे होणाऱ्या शांतता कमिटीच्या बैठकीसाठी पंडित ओगले हेच आमचे प्रतिनिधी ; सार्वजनिक श्री गणेशोत्सव व शिवजयंती उत्सव महामंडळाचे जिल्हा पोलीस प्रमुखांना निवेदन.
खानापूर : खानापूर शहर सार्वजनिक गणेशोत्सव महामंडळ व शिवजयंती उत्सव महामंडळाच्या पदाधिकाऱ्यांनी बेळगाव जिल्हा पोलीस प्रमुखांना गुरुवार दिनांक 16 एप्रिल रोजी निवेदन सादर केले. जिल्हा पोलीस प्रमुखांच्या अनुपस्थितीत सदर निवेदन अतिरिक्त जिल्हा पोलीस प्रमुख बसर्गी यांनी स्वीकारले. खानापूर पोलीस स्थानकात झालेल्या शांतता कमीटीच्या बैठकीत सहभागी झालेले महामंडळाचे पदाधिकारी पंडित ओगले, यांच्यावर काँग्रेसच्या पधिकाऱ्यांनी व काही समाज माध्यमांनी ‘रौडी शीटर’ संदर्भात केलेल्या आरोपांचे खंडन करण्यात आले असून स्पष्टीकरण देत योग्य न्याय देण्याची मागणी सदर दिलेल्या निवेदनात केली आहे. तसेच येथुन पुढे सुद्धा होणाऱ्या कोणत्याही शांतता कमिटीच्या बैठकीसाठी पंडित ओगले हेच आमचे प्रतिनिधी राहतील असे निवेदनात म्हटले आहे.

निवेदनानुसार, श्री पंडित प्रकाश ओगले हे गेल्या अनेक वर्षांपासून खानापूर येथील सार्वजनिक गणेशोत्सव महामंडळाचे अध्यक्ष म्हणून कार्यरत असून शहरातील सुमारे 17 गणेश मंडळांचे समन्वयक (प्रतिनिधी) म्हणून उत्तमरीत्या जबाबदारी पार पाडत आहेत. गणेशोत्सवादरम्यान कोणताही कायदा व सुव्यवस्थेचा प्रश्न निर्माण होऊ नये यासाठी त्यांनी सातत्याने पोलीस प्रशासनाला सहकार्य केले आहे. त्यामुळे मिरवणुका शांततेत पार पाडलेल्या आहेत. असे पदाधिकाऱ्यांनी दिलेल्या निवेदनात स्पष्ट केले आहे.
तसेच पंडित ओगले हे सार्वजनिक शिवजयंती उत्सव मंडळाचे अध्यक्ष असून दरवर्षी सुमारे 10 सार्वजनिक शिवजयंती उत्सव मंडळांच्या सहभागातून चित्ररथ मिरवणूक शांततेत पार पाडली जाते. गेल्या अनेक वर्षांत कोणताही अनुचित प्रकार घडू नये यासाठी त्यांनी सतत प्रयत्न केले असून पोलीस विभागाशी समन्वय राखला आहे, असेही निवेदनात म्हटले आहे.
सुमारे 15 वर्षांपूर्वी राजकीय प्रेरणेने व इतर राजकीय दबावामुळे त्यांच्यावर ‘रौडी शीटर’ची नोंद करण्यात आल्याचा दावा करण्यात आला असून त्यांच्या सामाजिक कार्याचा विचार करून कोणत्याही राजकीय दबावाला बळी न पडता योग्य निर्णय घ्यावा, अशी मागणी सार्वजनिक श्री गणेशोत्सव व शिवजयंती उत्सव महामंडळांच्या वतीने करण्यात आली आहे.
तसेच खानापूर शहर किंवा तालुक्यात होणाऱ्या कोणत्याही विविध शांतता कमिटीच्या व इतर बैठकींना महामंडळाच्या वतीने पंडित ओगले यांनाच प्रतिनिधी म्हणून आज पर्यंत पाठवण्यात आले आहे. व येथून पुढे होणाऱ्या कोणत्याही शांतता कमिटीच्या बैठकीला पंडित ओगले हेच आमचे प्रतिनिधी राहतील असेही निवेदनात नमूद करण्यात आले आहे.
यावेळी गणेशोत्सव महामंडळाचे व सार्वजनिक शिवजयंती उत्सव मंडळाचे पदाधिकारी प्रकाश देशपांडे, संजय कुबल, माजी नगरसेवक आप्पया कोडोळी, माजी नगरसेवक नारायण ओगले, वसंत देसाई, गुंडू तोपिनकट्टी, राहुल सावंत, हनमंत नाईक, संदीप शेंबले, विशाल कलबुर्गी, रवींद्र गुरव तसेच कार्यकर्ते उपस्थित होते.
सामाजिक कार्यकर्ते व नागरिकांचे तहसीलदारांना निवेदन; पंडित प्रकाश ओगले यांच्यावरील आरोपांविषयी योग्य न्याय देण्याची मागणी…
खानापूर : खानापूर तालुक्यातील विविध सामाजिक कार्यकर्ते व विविध संघटनेच्या पदाधिकाऱ्यांनी तहसीलदारांना निवेदन सादर करून पंडित प्रकाश ओगले यांच्यावर करण्यात आलेल्या आरोपांबाबत राजकीय दबावाला बळी न पडता योग्य न्याय द्यावा, अशी मागणी निवेदनात करण्यात आली आहे. निवेदनाचा स्वीकार खानापूरचे तहसीलदार दुंडाप्पा कोमार यांनी केला.

निवेदनात म्हटले आहे की, पंडित प्रकाश ओगले यांच्याविरोधात काही माध्यमे व काँग्रेस पक्षातील काही व्यक्तींनी आरोप केला आहे की, ओगले हे ‘रौडी शीटर’ असताना खानापूर पोलिस ठाण्यात आयोजित शांतता बैठकीत सहभागी होऊन भाषण करतात, त्यामुळे समाजावर विपरीत परिणाम होतो, असा जो आरोप करण्यात आला आहे तो चुकीचा असून, पंडित ओगले हे गेल्या अनेक वर्षांपासून खानापूर येथील श्री सार्वजनिक गणेशोत्सव महामंडळाचे अध्यक्ष म्हणून कार्यरत आहेत. शहरातील सुमारे 17 गणेश मंडळांचे समन्वयक म्हणून त्यांनी गणेशोत्सव काळात व मिरवणुकीत कोणत्याही प्रकारची शांतताभंग होऊ नये यासाठी पोलिस प्रशासनाला उत्तम रित्या सहकार्य केले आहे.
तसेच ते सार्वजनिक श्री शिवजयंती उत्सव मंडळाचे अध्यक्ष असून दरवर्षी सुमारे 10 सार्वजनिक शिवजयंती उत्सव मंडळांच्या चित्ररथ मिरवणुकीचे आयोजन शांततेत पार पाडण्यात त्यांचा सक्रिय सहभाग असतो. गेल्या अनेक वर्षांत तालुक्यात कोणताही अनुचित प्रकार घडू नये यासाठी त्यांनी प्रयत्न केले असून पोलिस विभागाला सहकार्य केले असल्याचे निवेदनात नमूद करण्यात आले आहे.
सुमारे 15 वर्षांपूर्वी राजकीय हेतूने त्यांच्यावर ‘रौडी शीटर’ची नोंद करण्यात आल्याचा दावाही निवेदनात करण्यात आला आहे.
खानापूर तालुक्यात कोणतीही सभा किंवा शांतता कमिटीची बैठक आयोजित झाल्यास, महामंडळाच्या वतीने पंडित ओगले यांना समन्वयक व प्रतिनिधी म्हणून पाठवण्यात येते. त्यामुळे कोणत्याही राजकीय दबावाला बळी न पडता योग्य तो निर्णय घ्यावा, अशी मागणी निवेदनाद्वारे तहसीलदारांकडे करण्यात आली आहे.
यावेळी धनश्री सरदेसाई, सुनीता पाटील, कल्पना सावंत, मुक्ता पाटील, सुभाष देशपांडे, किशोर हेबाळकर, दीपक वाळवे, रोहीत पोळ, पंकज कुट्रे, प्रज्योत दलाल, वीनायक चव्हाण, विश्वनाथ उप्पीन आदीजण उपस्थित होते.
ಇನ್ನುಮುಂದೆ ನಡೆಯುವ ಶಾಂತಿ ಸಮಿತಿಯ ಸಭೆಗಳಿಗೆ ನಮ್ಮ ಪ್ರತಿನಿಧಿಯಾಗಿ ಪಂಡಿತ್ ಓಗಲೆ ಅವರೇ ; ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶಿವಜಯಂತಿ ಉತ್ಸವ ಮಹಾಮಂಡಳದ ವತಿಯಿಂದ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿವೇದನೆ.
ಖಾನಾಪುರ : ಖಾನಾಪುರ ನಗರ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ಹಾಗೂ ಶಿವಜಯಂತಿ ಉತ್ಸವ ಮಹಾಮಂಡಳದ ಪದಾಧಿಕಾರಿಗಳು ಗುರುವಾರ ದಿನಾಂಕ 16 ಏಪ್ರಿಲ್ ರಂದು ಬೆಳಗಾವಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರೂ. ಜಿಲ್ಲಾ ಪೊಲೀಸ್ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಈ ಮನವಿಯನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಸ್ವೀಕರಿಸಿದರು.
ಖಾನಾಪುರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಮಹಾಮಂಡಳದ ಪದಾಧಿಕಾರಿ ಪಂಡಿತ್ ಓಗಲೆ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಕೆಲವು ಪದಾಧಿಕಾರಿಗಳು ಹಾಗೂ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ‘ರೌಡಿ ಶೀಟರ್’ ಕುರಿತು ಮಾಡಲಾದ ಆರೋಪಗಳನ್ನು ಮನವಿಯಲ್ಲಿ ಖಂಡಿಸಲಾಗಿದ್ದು, ಸ್ಪಷ್ಟನೆ ನೀಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಹಾಗೂ ಇನ್ನು ಮುಂದೆ ನಡೆಯುವ ಯಾವುದೇ ಶಾಂತಿ ಸಮಿತಿಯ ಸಭೆಗಳಿಗೆ ಪಂಡಿತ್ ಓಗಲೆ ಅವರೇ ನಮ್ಮ ಪ್ರತಿನಿಧಿಯಾಗಿರುತ್ತಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಯ ಪ್ರಕಾರ, ಶ್ರೀ ಪಂಡಿತ್ ಪ್ರಕಾಶ ಓಗಲೆ ಅವರು ಕಳೆದ ಅನೇಕ ವರ್ಷಗಳಿಂದ ಖಾನಾಪುರದ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ನಗರದ ಸುಮಾರು 17 ಗಣೇಶ ಮಂಡಳಿಗಳ ಸಂಯೋಜಕರಾಗಿ (ಪ್ರತಿನಿಧಿಯಾಗಿ) ಉತ್ತಮ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಉಂಟಾಗದಂತೆ ಅವರು ನಿರಂತರವಾಗಿ ಪೊಲೀಸ್ ಇಲಾಖೆಗೆ ಸಹಕರಿಸಿದ್ದಾರೆ. ಇದರ ಫಲವಾಗಿ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿವೆ ಎಂದು ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ, ಪಂಡಿತ್ ಓಗಲೆ ಅವರು ಸಾರ್ವಜನಿಕ ಶಿವಜಯಂತಿ ಉತ್ಸವ ಮಂಡಳಿಯ ಅಧ್ಯಕ್ಷರಾಗಿದ್ದು, ಪ್ರತಿವರ್ಷ ಸುಮಾರು 10 ಸಾರ್ವಜನಿಕ ಶಿವಜಯಂತಿ ಉತ್ಸವ ಮಂಡಳಿಗಳ ಭಾಗವಹಿಸುವಿಕೆಯಲ್ಲಿ ನಡೆಯುವ ಚಿತ್ರರಥ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಯಾವುದೇ ಅನಾಹುತ ಅಥವಾ ಅಹಿತಕರ ಘಟನೆ ನಡೆಯದಂತೆ ಅವರು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು 15 ವರ್ಷಗಳ ಹಿಂದೆ ರಾಜಕೀಯ ಪ್ರೇರಣೆ ಹಾಗೂ ಒತ್ತಡದ ಪರಿಣಾಮವಾಗಿ ಅವರ ವಿರುದ್ಧ ‘ರೌಡಿ ಶೀಟರ್’ ದಾಖಲೆ ಮಾಡಲಾಗಿದೆ ಎಂಬುದಾಗಿ ಮನವಿಯಲ್ಲಿ ಹೇಳಲಾಗಿದೆ. ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶಿವಜಯಂತಿ ಉತ್ಸವ ಮಹಾಮಂಡಳದ ವತಿಯಿಂದ ಆಗ್ರಹಿಸಲಾಗಿದೆ.
ಹಾಗೂ ಖಾನಾಪುರ ನಗರ ಅಥವಾ ತಾಲೂಕಿನಲ್ಲಿ ನಡೆಯುವ ಯಾವುದೇ ಶಾಂತಿ ಸಮಿತಿ ಸಭೆಗಳು ಅಥವಾ ಇತರ ಸಭೆಗಳಿಗೆ ಮಹಾಮಂಡಳದ ಪರವಾಗಿ ಇದುವರೆಗೆ ಪಂಡಿತ್ ಓಗಲೆ ಅವರನ್ನೇ ಪ್ರತಿನಿಧಿಯಾಗಿ ಕಳುಹಿಸಲಾಗುತ್ತಿದ್ದು, ಮುಂದೆಯೂ ನಡೆಯುವ ಎಲ್ಲಾ ಶಾಂತಿ ಸಮಿತಿ ಸಭೆಗಳಿಗೆ ಅವರೇ ನಮ್ಮ ಪ್ರತಿನಿಧಿಯಾಗಿರುತ್ತಾರೆ ಎಂದು ಮನವಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಗಣೇಶೋತ್ಸವ ಮಹಾಮಂಡಳ ಮತ್ತು ಸಾರ್ವಜನಿಕ ಶಿವಜಯಂತಿ ಉತ್ಸವ ಮಂಡಳದ ಪದಾಧಿಕಾರಿಗಳಾದ ಪ್ರಕಾಶ ದೇಶಪಾಂಡೆ, ಸಂಜಯ್ ಕುಬಲ್, ಮಾಜಿ ನಗರಸಭಾ ಸದಸ್ಯ ಅಪ್ಪಯ್ಯ ಕೊಡೋಳಿ, ಮಾಜಿ ನಗರಸಭಾ ಸದಸ್ಯ ನಾರಾಯಣ ಒಗಲೆ, ವಸಂತ ದೇಸಾಯಿ, ಗುಂಡು ತೋಪಿನಕಟ್ಟಿ, ರಾಹುಲ್ ಸಾವಂತ್, ಸಂದೀಪ್ ಶೆಂಬಳೆ, ಹನಮಂತ ನಾಯ್ಕ್, ವಿಶಾಲ್ ಕಲಬುರಗಿ, ರವೀಂದ್ರ ಗುರವ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರಿಂದ ತಹಶೀಲ್ದಾರರಿಗೆ ಮನವಿ; ಪಂಡಿತ್ ಪ್ರಕಾಶ ಓಗಲೆ ವಿರುದ್ಧದ ಆರೋಪಗಳ ಕುರಿತು ನ್ಯಾಯ ನೀಡುವಂತೆ ಆಗ್ರಹ
ಖಾನಾಪುರ : ಖಾನಾಪುರ ತಾಲೂಕಿನ ವಿವಿಧ ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಪಂಡಿತ್ ಪ್ರಕಾಶ ಓಗಲೆ ಅವರ ವಿರುದ್ಧ ಮಾಡಲಾದ ಆರೋಪಗಳ ಕುರಿತು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮನವಿಯನ್ನು ಖಾನಾಪುರದ ತಹಶೀಲ್ದಾರ ದುಂಡಪ್ಪ ಕೋಮಾರ ಅವರು ಸ್ವೀಕರಿಸಿದರು.
ಮನವಿಯಲ್ಲಿ ತಿಳಿಸಿರುವಂತೆ, ಪಂಡಿತ್ ಪ್ರಕಾಶ ಓಗಲೆ ಅವರ ವಿರುದ್ಧ ಕೆಲವು ಮಾಧ್ಯಮಗಳು ಹಾಗೂ ಕಾಂಗ್ರೆಸ್ ಪಕ್ಷದ ಕೆಲವರು ಅವರು ‘ರೌಡಿ ಶೀಟರ್’ ಆಗಿದ್ದರೂ ಖಾನಾಪುರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡುತ್ತಾರೆ, ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆರೋಪ ಮಾಡಿದ್ದಾರೆ. ಆದರೆ ಈ ಆರೋಪ ಸಂಪೂರ್ಣ ತಪ್ಪಾಗಿದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪಂಡಿತ್ ಓಗಲೆ ಅವರು ಕಳೆದ ಅನೇಕ ವರ್ಷಗಳಿಂದ ಖಾನಾಪುರದ ಶ್ರೀ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ನಗರದ ಸುಮಾರು 17 ಗಣೇಶ ಮಂಡಳಿಗಳ ಸಂಯೋಜಕರಾಗಿ ಗಣೇಶೋತ್ಸವ ಹಾಗೂ ಮೆರವಣಿಗೆ ಸಂದರ್ಭಗಳಲ್ಲಿ ಯಾವುದೇ ಶಾಂತಿಭಂಗವಾಗದಂತೆ ಪೊಲೀಸ್ ಇಲಾಖೆಗೆ ಉತ್ತಮ ಸಹಕಾರ ನೀಡಿದ್ದಾರೆ.
ಅದೇ ರೀತಿ, ಅವರು ಸಾರ್ವಜನಿಕ ಶ್ರೀ ಶಿವಜಯಂತಿ ಉತ್ಸವ ಮಂಡಳಿಯ ಅಧ್ಯಕ್ಷರಾಗಿದ್ದು, ಪ್ರತಿವರ್ಷ ಸುಮಾರು 10 ಶಿವಜಯಂತಿ ಮಂಡಳಿಗಳ ಚಿತ್ರರಥ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವಲ್ಲಿ ಸಕ್ರಿಯ ಪಾತ್ರವಹಿಸುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ಅನಾಹುತ ನಡೆಯದಂತೆ ಅವರು ಪ್ರಯತ್ನಿಸಿಕೊಂಡಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಹಕಾರ ಸಾಧಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು 15 ವರ್ಷಗಳ ಹಿಂದೆ ರಾಜಕೀಯ ಉದ್ದೇಶದಿಂದ ಅವರ ವಿರುದ್ಧ ‘ರೌಡಿ ಶೀಟರ್’ ದಾಖಲಿಸಲಾಗಿದೆ ಎಂಬುದಾಗಿ ಮನವಿಯಲ್ಲಿ ಹೇಳಲಾಗಿದೆ.
ಖಾನಾಪುರ ತಾಲೂಕಿನಲ್ಲಿ ಯಾವುದೇ ಸಭೆ ಅಥವಾ ಶಾಂತಿ ಸಮಿತಿ ಸಭೆ ಆಯೋಜನೆಯಾದಾಗ ಮಹಾಮಂಡಳದ ಪರವಾಗಿ ಪಂಡಿತ್ ಓಗಲೆ ಅವರನ್ನು ಸಂಯೋಜಕ ಹಾಗೂ ಪ್ರತಿನಿಧಿಯಾಗಿ ಕಳುಹಿಸಲಾಗುತ್ತದೆ. ಆದ್ದರಿಂದ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿಯ ಮೂಲಕ ತಹಶೀಲ್ದಾರರನ್ನು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಧನಶ್ರೀ ಸರದೇಶಾಯಿ, ಸುನೀತಾ ಪಾಟೀಲ್, ಸುಭಾಷ್ ದೇಶಪಾಂಡೆ, ಕಿಶೋರ್ ಹೆಬಾಳ್ಕರ್, ದೀಪಕ್ ವಾಳವೇ, ರೋಹಿತ್ ಪೋಳ್, ಪಂಕಜ್ ಕುಟ್ರೆ, ಪ್ರಜ್ಯೋತ್ ದಲಾಲ್, ವಿನಾಯಕ ಚವ್ಹಾಣ್, ವಿಶ್ವನಾಥ್ ಉಪ್ಪೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


