डिजिटल अरेस्टचा सापळा : बेळगावात 15.45 कोटींची सायबर फसवणूक; हैदराबादमधून दोघे जेरबंद.
बेळगाव : डिजिटल अरेस्टच्या नावाखाली तब्बल 15 कोटी 45 लाख रुपयांची सायबर फसवणूक झाल्याचा धक्कादायक प्रकार उघडकीस आला असून, या प्रकरणी बेळगाव शहर सायबर गुन्हे पोलीस ठाण्याच्या पथकाने दोन संशयितांना अटक केली आहे. ही कारवाई तेलंगणा राज्यात करण्यात आली.
अटक करण्यात आलेल्या आरोपींची नावे व्यंकदूत शरत नाईक (वडील राजू नाईक, रा. गच्चीबोली, हॉस्टेल हैदराबाद) आणि देगावत श्रीपाद नाईक (वडील देगावत मंगल नाईक, रा. शिवदुर्गनगर, हैदराबाद) अशी आहेत.
बनावट ‘सीबीआय डायरेक्टर’ची धमकी….
या प्रकरणातील फिर्यादी अजित गोपाळकृष्ण सराफ (रा. आगरकर रोड, टिळकवाडी, बेळगाव) यांनी 18 मार्च 2026 रोजी सायबर गुन्हे पोलीस ठाण्यात तक्रार दाखल केली होती. तक्रारीनुसार, अज्ञात सायबर गुन्हेगाराने स्वतःला ‘के. सुब्रमण्यम, डायरेक्टर ऑफ सीबीआय’ असल्याचे भासवून सराफ यांच्याशी संपर्क साधला.
फसवणूक करणाऱ्याने सराफ यांच्या नावावर दोन सिम कार्ड कार्यरत असल्याचे सांगत, त्यांचा संपर्क जेट एअरवेजचे सीईओ नरेश गोयल यांच्याशी असल्याचा आरोप केला. तसेच नरेश गोयल यांना अटक करण्यात आल्याचे सांगून, सराफ यांनी त्यांच्या कॅनरा बँक खात्यातून 25 लाख रुपये मनी लॉन्ड्रिंगद्वारे पाठवले व त्याबदल्यात 5 लाख रुपये कमिशन घेतल्याचा खोटा आरोप करण्यात आला.
तपासात सहकार्य न केल्यास तात्काळ अटक करण्यात येईल, अशी धमकी देत सराफ यांच्यावर मानसिक दबाव आणण्यात आला.
आरटीजीएसद्वारे कोट्यवधींची उकळपट्टी…
या भीतीपोटी सराफ यांनी 7 फेब्रुवारी 2026 ते 9 मार्च 2026 या कालावधीत विविध वेळा आरटीजीएसद्वारे एकूण 15 कोटी 45 लाख रुपये हस्तांतरित केले. फसवणूक झाल्याचे लक्षात आल्यानंतर त्यांनी तक्रार नोंदवली.
तपासाची वेगवान चक्रे; 2 कोटी हस्तांतरणावेळी पकड….
गुन्हा दाखल होताच सायबर पोलिसांनी तपासाची दिशा निश्चित करत, पैशांचा मागोवा घेण्यास सुरुवात केली. फिर्यादीकडून व्यवहारांची सविस्तर माहिती घेतल्यानंतर आरोपींचा माग काढण्यात यश आले.
9 फेब्रुवारी 2026 रोजी इंडसइंड बँकेच्या चालू खात्यात 2 कोटी रुपये हस्तांतरित होत असताना आरोपी व्यंकदूत व देगावत यांचा संबंध समोर आला. त्यानंतर पोलिसांनी तेलंगणामध्ये सापळा रचून दोघांना अटक केली.
न्यायालयात हजर…
सोमवारी अटक करण्यात आलेल्या दोन्ही आरोपींना मंगळवार, 7 एप्रिल रोजी न्यायालयासमोर हजर करण्यात आले. पुढील तपास सुरू आहे.
ही कारवाई सहाय्यक पोलीस आयुक्त बी. एस. मंटूर यांच्या मार्गदर्शनाखाली पोलीस निरीक्षक श्रीशैल गाबी व त्यांच्या पथकाने केली.
सायबर गुन्ह्यांचे वाढते प्रमाण लक्षात घेता, कोणतीही शासकीय यंत्रणा फोनद्वारे अटक किंवा चौकशीची धमकी देत नाही, याची नागरिकांनी जाणीव ठेवावी, असे आवाहन सायबर पोलिसांनी केले आहे.
ಡಿಜಿಟಲ್ ಅರೆಸ್ಟ್ ವಂಚನೆ ಬಯಲು : ಬೆಳಗಾವಿಯಲ್ಲಿ 15.45 ಕೋಟಿ ಸೈಬರ್ ವಂಚನೆ; ಹೈದರಾಬಾದ್ನಿಂದ ಇಬ್ಬರು ಶಂಕಿತರ ಬಂಧನ.
ಬೆಳಗಾವಿ : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬರೋಬ್ಬರಿ 15 ಕೋಟಿ 45 ಲಕ್ಷ ರೂಪಾಯಿಗಳ ಸೈಬರ್ ವಂಚನೆ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಬೆಳಗಾವಿ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ತಂಡ ಇಬ್ಬರು ಶಂಕಿತರನ್ನು ಬಂಧಿಸಿದೆ. ಈ ಕಾರ್ಯಾಚರಣೆ ತೆಲಂಗಾಣ ರಾಜ್ಯದಲ್ಲಿ ನಡೆಸಲಾಗಿದೆ. ಬಂಧಿತರ ಹೆಸರು ವ್ಯಂಕದೂತ ಶರತ್ ನಾಯಕ್ (ತಂದೆ: ರಾಜು ನಾಯಕ್, ಸಾ: ಗಚ್ಚಿಬೌಲಿ, ಹಾಸ್ಟೆಲ್ ಹೈದರಾಬಾದ್) ಮತ್ತು ದೇಗಾವತ್ ಶ್ರೀಪಾದ್ ನಾಯಕ್ (ತಂದೆ: ದೇಗಾವತ್ ಮಂಗಲ್ ನಾಯಕ್, ಸಾ: ಶಿವದುರ್ಗನಗರ, ಹೈದರಾಬಾದ್) ಎಂದು ತಿಳಿದು ಬಂದಿದೆ.
ನಕಲಿ ‘ಸಿಬಿಐ ನಿರ್ದೇಶಕ’ನ ಹೆಸರಿಂದ ಬೆದರಿಕೆ….
ಈ ಪ್ರಕರಣದ ದೂರುದಾರ ಅಜಿತ್ ಗೋಪಾಲಕೃಷ್ಣ ಸರಾಫ್ (ವಾಸ: ಅಗರಕರ ರಸ್ತೆ, ಟಿಳಕವಾಡಿ, ಬೆಳಗಾವಿ) ಅವರು 18 ಮಾರ್ಚ್ 2026 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ಅಪರಿಚಿತ ಸೈಬರ್ ಅಪರಾಧಿ ತಾನು ‘ಕೆ. ಸುಬ್ರಹ್ಮಣ್ಯಂ, ಡೈರೆಕ್ಟರ್ ಆಫ್ ಸಿಬಿಐ’ ಎಂದು ಹೇಳಿಕೊಂಡು ಸರಾಫ್ ಅವರನ್ನು ಸಂಪರ್ಕಿಸಿದ್ದಾನೆ.
ವಂಚಕನು ಸರಾಫ್ ಅವರ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿ, ಅವರ ಸಂಪರ್ಕ ಜೆಟ್ ಏರ್ವೇಸ್ನ ಸಿಇಒ ನರೆಶ್ ಗೋಯಲ್ ಅವರೊಂದಿಗೆ ಇದೆ ಎಂದು ಆರೋಪಿಸಿದ್ದಾನೆ. ಅಲ್ಲದೆ ನರೆಶ್ ಗೋಯಲ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿ, ಸರಾಫ್ ಅವರು ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ 25 ಲಕ್ಷ ರೂಪಾಯಿಗಳನ್ನು ಹಣ ಅಕ್ರಮ ವಹಿವಾಟು (ಮನಿ ಲಾಂಡರಿಂಗ್) ಮೂಲಕ ಕಳುಹಿಸಿ, ಅದರ ಬದಲಿಗೆ 5 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂಬ ಸುಳ್ಳು ಆರೋಪ ಮಾಡಲಾಗಿದೆ. ತನಿಖೆಗೆ ಸಹಕರಿಸದಿದ್ದರೆ ತಕ್ಷಣ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿ, ಸರಾಫ್ ಅವರ ಮೇಲೆ ಮಾನಸಿಕ ಒತ್ತಡ ಹೇರಲಾಗಿದೆ.
ಆರ್ಟಿಜಿಎಸ್ ಮೂಲಕ ಕೋಟ್ಯಂತರ ರೂ. ದೋಚಾಟ….
ಈ ಭೀತಿಯಿಂದ ಸರಾಫ್ ಅವರು 7 ಫೆಬ್ರವರಿ 2026 ರಿಂದ 9 ಮಾರ್ಚ್ 2026 ರವರೆಗೆ ವಿವಿಧ ಸಮಯಗಳಲ್ಲಿ ಆರ್ಟಿಜಿಎಸ್ ಮೂಲಕ ಒಟ್ಟು 15 ಕೋಟಿ 45 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ನಂತರ ವಂಚನೆ ನಡೆದಿರುವುದು ತಿಳಿದುಬಂದ ಬಳಿಕ ಅವರು ದೂರು ನೀಡಿದ್ದಾರೆ.
ತಪಾಸಣೆಯ ವೇಗ; 2 ಕೋಟಿ ವರ್ಗಾವಣೆಯ ವೇಳೆ ಪತ್ತೆ….
ಪ್ರಕರಣ ದಾಖಲಾಗುತ್ತಿದ್ದಂತೆಯೇ ಸೈಬರ್ ಪೊಲೀಸರು ಹಣದ ಹಾದಿ ಪತ್ತೆಹಚ್ಚಲು ತನಿಖೆ ಆರಂಭಿಸಿದರು. ದೂರುದಾರರಿಂದ ವ್ಯವಹಾರಗಳ ಸವಿಸ್ತಾರ ಮಾಹಿತಿ ಪಡೆದು ಆರೋಪಿಗಳ ಸುಳಿವು ಸಿಕ್ಕಿತು. 9 ಫೆಬ್ರವರಿ 2026 ರಂದು ಇಂಡಸ್ಇಂಡ್ ಬ್ಯಾಂಕ್ನ ಚಾಲು ಖಾತೆಗೆ 2 ಕೋಟಿ ರೂಪಾಯಿ ವರ್ಗಾವಣೆಯಾಗುವ ವೇಳೆ ವ್ಯಂಕದೂತ ಮತ್ತು ದೇಗಾವತ್ ಅವರ ಸಂಬಂಧ ಬಹಿರಂಗವಾಯಿತು. ಬಳಿಕ ಪೊಲೀಸರು ತೆಲಂಗಾಣದಲ್ಲಿ ಬಲೆ ಬೀಸಿ ಇಬ್ಬರನ್ನು ಬಂಧಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರು…
ಸೋಮವಾರ ಬಂಧಿಸಲಾದ ಇಬ್ಬರು ಆರೋಪಿಗಳನ್ನು ಮಂಗಳವಾರ, 7 ಏಪ್ರಿಲ್ ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ. ಮುಂದಿನ ತನಿಖೆ ಮುಂದುವರಿದಿದೆ. ಈ ಕಾರ್ಯಾಚರಣೆ ಸಹಾಯಕ ಪೊಲೀಸ್ ಆಯುಕ್ತ ಬಿ.ಎಸ್. ಮಂಟೂರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಶ್ರೀಶೈಲ ಗಾಬಿ ಮತ್ತು ಅವರ ತಂಡ ನಡೆಸಿತು.
ಸೈಬರ್ ಅಪರಾಧಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಸಂಸ್ಥೆ ಫೋನ್ ಮೂಲಕ ಬಂಧನ ಅಥವಾ ವಿಚಾರಣೆ ಬೆದರಿಕೆ ಹಾಕುವುದಿಲ್ಲ ಎಂಬುದನ್ನು ನಾಗರಿಕರು ಮನಗಾಣಬೇಕು ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.


