भुरूणकी (खानापूर) : अल्पवयीन मुलीचा लैंगिक छळ केल्याप्रकरणी आरोपींना 3 वर्षे सक्तमजुरी.
बेळगाव : बेळगाव येथील विशेष पोक्सो न्यायालयाने अल्पवयीन मुलीचा लैंगिक छळ केल्याप्रकरणी दोन आरोपींना प्रत्येकी 3 वर्षांच्या सक्तमजुरीची शिक्षा सुनावली आहे. तसेच दोघांनाही प्रत्येकी 10 हजार रुपयांचा दंड ठोठावण्यात आला असून दंड न भरल्यास अतिरिक्त 6 महिन्यांचा कारावास भोगावा लागेल, असे न्यायालयाने स्पष्ट केले आहे.
नंदगड पोलीस ठाण्याच्या हद्दीत राहणाऱ्या एका अल्पवयीन मुलीचा विनयभंग केल्याप्रकरणी मोशिन कासिमसाभ साहुकार आणि इरफान निसार वस्ताद (वय 24, रा. वडर गल्ली, भुरूणकी, ता. खानापूर) यांच्याविरुद्ध पोक्सो कायद्यान्वये गुन्हा दाखल करण्यात आला होता.
या प्रकरणाचा सखोल तपास करून तपासाधिकारी आर. एस. सपाटे यांनी बेळगाव येथील अतिरिक्त जिल्हा व सत्र न्यायालय तसेच विशेष शीघ्रगती पोक्सो न्यायालय-1 मध्ये दोषारोपपत्र दाखल केले होते.
सदर खटल्याची सुनावणी विशेष न्यायाधीश पुष्पलता सी. एम. यांच्या समोर झाली. न्यायालयाने एकूण 7 साक्षीदारांची साक्ष नोंदवून 29 महत्त्वाच्या कागदपत्रांची पडताळणी केली. उपलब्ध पुरावे व साक्षी यांच्या आधारे आरोपी मोशिन कासिमसाभ साहुकार आणि इरफान निसार वस्ताद यांच्यावरील आरोप सिद्ध झाल्याचे न्यायालयाने नमूद केले.
निकाल देताना न्यायाधीशांनी दोन्ही आरोपींना प्रत्येकी 3 वर्षांचा सक्तमजुरीसह कारावास व 10 हजार रुपयांचा दंड अशी शिक्षा सुनावली. दंडाची रक्कम न भरल्यास अतिरिक्त 6 महिन्यांचा कारावास भोगावा लागेल, असेही आदेशात नमूद करण्यात आले आहे.
तसेच पीडित अल्पवयीन मुलीच्या पुनर्वसनासाठी जिल्हा विधी सेवा प्राधिकरणामार्फत 1 लाख रुपयांची नुकसानभरपाई देण्याचे आदेश न्यायालयाने दिले आहेत. ही रक्कम कोणत्याही राष्ट्रीयीकृत बँकेत 5 वर्षांच्या मुदत ठेव स्वरूपात ठेवण्याचे निर्देश देण्यात आले आहेत.
या खटल्यात सरकारतर्फे विशेष सरकारी वकील एल. व्ही. पाटील यांनी काम पाहिले व प्रभावी युक्तिवाद सादर केला.
ಭುರುಣಕಿ (ಖಾನಾಪುರ) : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ; ಆರೋಪಿಗಳಿಗೆ ೩ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಬೆಳಗಾವಿ : ಬೆಳಗಾವಿ ಜಿಲ್ಲೆಯ ವಿಶೇಷ ಪಾಕ್ಸೋ ನ್ಯಾಯಾಲಯವು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ೩ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಲ್ಲದೆ ಇಬ್ಬರಿಗೂ ತಲಾ ೧೦ ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, ದಂಡವನ್ನು ಪಾವತಿಸದಿದ್ದಲ್ಲಿ ಹೆಚ್ಚುವರಿ ೬ ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಅಪ್ರಾಪ್ತ ಬಾಲಕಿಯೊಬ್ಬಳ ವಿನಯಭಂಗ ಮಾಡಿದ ಪ್ರಕರಣದಲ್ಲಿ ಮೋಶಿನ್ ಕಾಸಿಮಸಾಬ ಸಾಹುಕಾರ ಹಾಗೂ ಇರ್ಫಾನ್ ನಿಸಾರ್ ವಸ್ತಾದ್ (ವಯಸ್ಸು ೨೪, ವಡರ್ ಗಲ್ಲಿ, ಭುರುಣಕಿ, ತಾ. ಖಾನಾಪುರ) ಇವರ ವಿರುದ್ಧ ಪಾಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಸವಿಸ್ತಾರ ತನಿಖೆ ನಡೆಸಿದ ತನಿಖಾಧಿಕಾರಿ ಆರ್. ಎಸ್. ಸಪಾಟೆ ಅವರು ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗು ವಿಶೇಷ ಶೀಘ್ರಗತಿ ಪಾಕ್ಸೋ ನ್ಯಾಯಾಲಯ-೧ರಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಸದರ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಧೀಶ ಪುಷ್ಪಲತಾ ಸಿ. ಎಂ. ಅವರ ಮುಂದೆಯಾಯಿತು. ನ್ಯಾಯಾಲಯವು ಒಟ್ಟು ೭ ಸಾಕ್ಷಿದಾರರ ಸಾಕ್ಷಿಯನ್ನು ದಾಖಲಿಸಿಕೊಂಡು ೨೯ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿತು. ಲಭ್ಯವಿರುವ ಸಾಕ್ಷ್ಯಗಳು ಮತ್ತು ದಾಖಲೆಗಳ ಆಧಾರದ ಮೇಲೆ ಆರೋಪಿಗಳಾದ ಮೋಶಿನ್ ಕಾಸಿಮಸಾಬ ಸಾಹುಕಾರ ಹಾಗೂ ಇರ್ಫಾನ್ ನಿಸಾರ್ ವಸ್ತಾದ್ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶರು ಇಬ್ಬರು ಆರೋಪಿಗಳಿಗೆ ತಲಾ ೩ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೧೦ ಸಾವಿರ ರೂಪಾಯಿ ದಂಡ ವಿಧಿಸಿದರು. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ ೬ ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಪೀಡಿತ ಅಪ್ರಾಪ್ತ ಬಾಲಕಿಯ ಪುನರ್ವಸತಿ ಉದ್ದೇಶಕ್ಕಾಗಿ ಜಿಲ್ಲಾ ವಿಧಿ ಸೇವಾ ಪ್ರಾಧಿಕಾರದ ಮೂಲಕ ೧ ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಮೊತ್ತವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ೫ ವರ್ಷಗಳ ಅವಧಿಯ ಠೇವಣಿಯಾಗಿ ಇಡಲು ನಿರ್ದೇಶಿಸಲಾಗಿದೆ.
ಈ ಪ್ರಕರಣದಲ್ಲಿ ಸರ್ಕಾರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಅವರು ವಾದ ಮಂಡಿಸಿದರು.



