कवळे मठाच्या जमिनीवर अतिक्रमणाचा आरोप; प्रकरण न्यायालयात प्रलंबित, प्रशासनाकडे कारवाईची मागणी.
खानापूर : कवळे मठाच्या मालकीच्या सर्वेक्षण क्रमांक 30, 38, 40 आणि 45 या जमिनींवरून वाद उफाळून आला असून, या ठिकाणी काहीं लोकांनी अतिक्रमण केल्याने कायदा-सुव्यवस्थेचा प्रश्न निर्माण झाल्याची माहिती समोर आली आहे. याबाबत गौड सारस्वत ब्राह्मण समाजाचे स्वामीजी श्री शिवानंद सरस्वती स्वामीजी यांनी आज मंगळवार दिनांक 17 मार्च रोजी खानापूर येथील कवळे मठामध्ये पत्रकार परिषद घेऊन माहिती दिली. सुरुवातीला प्रकाश देशपांडे यांनी स्वागत व प्रास्ताविक केले. त्यांनी सांगितले कोल्हापुरच्या शाहू महाराजांनी कवळे मठाला दिलेल्या या जमिनीवर काहीजणांनी अतिक्रमण केल्याचे सांगितले. तर सामाजिक कार्यकर्ते शरद केसकामत यांनी सांगितले न्यायालयात प्रकरण प्रलंबित असताना अतिक्रमण करण्यात आले आहे. याबाबत खानापूर पोलीस व बेळगाव जिल्हा पोलीस प्रमुखाकडे तक्रार करण्यात आली आहे. मात्र त्यांनी सुद्धा या प्रकरणाकडे दुर्लक्ष केले आहे. त्यामुळे संपूर्ण देशभरातील गौड सारस्वत ब्राह्मण समाजाचे लोक एकत्र येऊन आंदोलन करण्याची तयारी करत असल्याचे सांगितले.
पुढे सविस्तर माहिती देताना श्री शिवानंद सरस्वती स्वामीजी म्हणाले, वरील सर्वेक्षण क्रमांक 1921 साली ‘द पायोनियर क्ले अँड इंडस्ट्रीज वर्क्स लिमिटेड’ या कंपनीला भाडेतत्त्वावर देण्यात आले होते. सुरुवातीला या कंपनीचे सर्व संचालक खानापूर येथील रहिवासी होते. नंतर काळानुसार श्री. नारायण तिमप्पा शानभाग यांचा कंपनीत समावेश झाला आणि जुन्या संचालकांनी निवृत्ती घेतली. पुढे त्यांनी कुमटा येथील श्री. काशीनाथ सीताराम नायक यांनाही संचालक म्हणून सामील करून घेतले.
यानंतर कंपनीची सूत्रे शानभाग कुटुंबाकडे राहिली असून, सध्या श्री. प्रकाश नारायण शानभाग यांचे वारसदार उदय, कु. दीपा तसेच श्री. काशीनाथ नायक यांचे पुत्र किरण हे संचालक म्हणून कार्यरत आहेत.
दरम्यान, 1960 साली भाडेपट्टा कालावधी संपल्यानंतर कवळे मठाने जमीन परत मागितली होती. मात्र कंपनीने जमीन परत न केल्याने मठाने न्यायालयात धाव घेतली. या प्रकरणात 1970 साली (दावा क्र. 128/70 व 129/70) दोन्ही पक्षांत तडजोड होऊन भाडेपट्टा 31 डिसेंबर 2017 पर्यंत वाढवण्यात आला आणि त्यानंतर जमीन मठाकडे सुपूर्द करण्याचे निश्चित झाले.
यानुसार, 6 फेब्रुवारी 2021 रोजी श्री. गोपाल कृष्ण कामत यांनी संबंधित जमिनींचा ताबा कवळे मठाकडे सुपूर्द केला. सध्या मठाच्या वतीने या जमिनींवर कृषी, व्यावसायिक व फलोत्पादन उपक्रम राबवले जात आहेत.
तथापि, हे प्रकरण सध्या खानापूर येथील दिवाणी न्यायालयात (प्रकरण क्रमांक MA 1, MA 2 व MA 35) तसेच कर्नाटक उच्च न्यायालयाच्या धारवाड खंडपीठात प्रलंबित आहे. न्यायालयाने संबंधित प्रतिवादींना जमिनीवर कोणताही तृतीय पक्ष हक्क निर्माण न करण्याचे स्पष्ट निर्देश दिले आहेत.
असे असतानाही, श्री. कंदी रविकुमार यांनी 50 ते 60 जणांसह सर्वेक्षण क्रमांक 40 व 45 मध्ये अनधिकृत प्रवेश करून अतिक्रमण केल्याचा आरोप करण्यात आला आहे. त्यांनी त्या ठिकाणी स्वतःच्या नावाचे तसेच ‘भीमसेना अध्यक्ष, कर्नाटक राज्य’ असा उल्लेख असलेले फलक लावले असून, डॉ. बाबासाहेब आंबेडकर यांचेही फलक उभारले आहेत. यामुळे परिसरातील कायदा व सुव्यवस्थेचा प्रश्न निर्माण झाला असल्याचा आरोप शिवानंद सरस्वती स्वामीजी यांनी यावेळी बोलताना केला.
या संदर्भात स्थानिक पोलीस तसेच बेळगाव जिल्हा पोलीस अधीक्षक यांच्याकडे तक्रार देण्यात आली असूनही कोणतीही कारवाई करण्यात आलेली नसल्याचा आरोप करण्यात आला आहे. त्यामुळे पोलिसांच्या भूमिकेबाबतही प्रश्नचिन्ह उपस्थित केले जात आहे.
दरम्यान, कंपनीच्या संचालकांनी हुबळी येथील श्री. चेतन अशोक भरदवाड यांना सामान्य मुखत्यारपत्र (GPA) दिले असून, ते राजकीय प्रभावाचा वापर करून प्रशासनावर दबाव आणत असल्याचा आरोपही करण्यात आला आहे.
या घडामोडींमुळे देशभरातील कवळे मठाचे भक्त अस्वस्थ झाले असून, मोठ्या संख्येने खानापूर येथे येऊन प्रशासन व पोलीस यांच्याकडे न्याय मागण्याची तयारी सुरू असल्याची माहिती समोर येत आहे.
सदर प्रकरणी तातडीने निष्पक्ष चौकशी करून अतिक्रमण हटवावे व न्यायालयाच्या आदेशांची अंमलबजावणी करावी, अशी मागणी होत आहे.
यावेळी अॅड. प्रद्युम्न जी. भाटे, अॅड. पद्मा हल्याळी, निलेश बोरकर, किशन चौधरी, जयंत खासनीस, किशोर नाईक, सुभाष देशपांडे, पुरुषोत्तम दलाल, डॉ सुधीर देशपांडे, प्रदीप दलाल व बंधू तसेच सदर जागेवर रोप लावलेले, बांधकाम केलेले गवंडी मिस्त्री, फॅब्रिकेशन मिस्त्री, रोहित पाटील, गणेश हल्याळकर, विठ्ठल साळुंखे, चंद्रकांत सुरोजी, प्रकाश अगणोजी उपस्थित होते.
ಕವಳೆ ಮಠದ ಜಮೀನಿನ ಅತಿಕ್ರಮಣ ಮಾಡಿದ ಆರೋಪ; ಪ್ರಕರಣ ನ್ಯಾಯಾಲಯದಲ್ಲಿ ಬಾಕಿ, ಆಡಳಿತದಿಂದ ಕ್ರಮಕ್ಕೆ ಒತ್ತಾಯ.
ಖಾನಾಪುರ : ಕವಳೆ ಮಠದ ಮಾಲೀಕತ್ವದ ಸರ್ವೇ ಸಂಖ್ಯೆ 30, 38, 40 ಮತ್ತು 45 ಜಮೀನಿನ ಕುರಿತು ವಿವಾದ ಉಂಟಾಗಿದ್ದು, ಈ ಸ್ಥಳದಲ್ಲಿ ಕೆಲವರು ಅತಿಕ್ರಮಣ ಮಾಡಿರುವುದರಿಂದ ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಹೊರಬಂದಿದೆ. ಈ ಕುರಿತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಸ್ವಾಮೀಜಿ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಇಂದು ಮಂಗಳವಾರ, ಮಾರ್ಚ್ 17ರಂದು ಖಾನಾಪುರದ ಕವಳೆ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರಂಭದಲ್ಲಿ ಪ್ರಕಾಶ ದೇಶಪಾಂಡೆ ಅವರು ಸ್ವಾಗತ ಹಾಗೂ ಪ್ರಸ್ತಾವನೆ ಮಾಡಿದರು. ಸಾಮಾಜಿಕ ಕಾರ್ಯಕರ್ತ ಶರದ್ ಕೇಶಕಾಮತ ಅವರು ಮಾತನಾಡಿ, ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವಾಗಲೇ ಅತಿಕ್ರಮಣ ಮಾಡಲಾಗಿದೆ ಎಂದು ಹೇಳಿದರು. ಈ ಕುರಿತು ಖಾನಾಪುರ ಪೊಲೀಸ್ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಅವರು ಕೂಡ ಈ ಪ್ರಕರಣವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಇದರ ಹಿನ್ನೆಲೆಯಲ್ಲಿ ದೇಶದಾದ್ಯಂತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಒಟ್ಟುಗೂಡಿ ಹೋರಾಟಕ್ಕೆ ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.
ಮುಂದೆ ವಿವರ ನೀಡಿದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳುತ್ತಾ: ಮೇಲ್ಕಂಡ ಸರ್ವೇ ಸಂಖ್ಯೆಗಳು 1921ರಲ್ಲಿ ‘ದಿ ಪಯೋನಿಯರ್ ಕ್ಲೇ ಅಂಡ್ ಇಂಡಸ್ಟ್ರೀಸ್ ವರ್ಕ್ಸ್ ಲಿಮಿಟೆಡ್’ ಕಂಪನಿಗೆ ಬಾಡಿಗೆ ಆಧಾರದ ಮೇಲೆ ನೀಡಲಾಗಿತ್ತು. ಆರಂಭದಲ್ಲಿ ಈ ಕಂಪನಿಯ ಎಲ್ಲಾ ನಿರ್ದೇಶಕರು ಖಾನಾಪುರದ ನಿವಾಸಿಗಳಾಗಿದ್ದರು. ನಂತರ ಕಾಲಕ್ರಮೇಣ ಶ್ರೀ ನಾರಾಯಣ ತಿಮಪ್ಪ ಶಾನಭಾಗ ಅವರು ಕಂಪನಿಗೆ ಸೇರಿದ ನಂತರ ಹಳೆಯ ನಿರ್ದೇಶಕರು ನಿವೃತ್ತರಾದರು. ಬಳಿಕ ಕುಮಟಾದ ಶ್ರೀ ಕಾಶೀನಾಥ ಸೀತಾರಾಮ ನಾಯಕ್ ಅವರನ್ನು ಸಹ ನಿರ್ದೇಶಕರಾಗಿ ಸೇರಿಸಲಾಯಿತು. ನಂತರ ಕಂಪನಿಯ ನಿಯಂತ್ರಣ ಶಾನಭಾಗ ಕುಟುಂಬದವರ ಕೈಯಲ್ಲಿ ಉಳಿಯಿತು. ಪ್ರಸ್ತುತ ಶ್ರೀ ಪ್ರಕಾಶ ನಾರಾಯಣ ಶಾನಭಾಗ ಅವರ ವಾರಸುದಾರರಾದ ಉದಯ, ಕುಮಾರಿ ದೀಪಾ ಹಾಗೂ ಶ್ರೀ ಕಾಶೀನಾಥ ನಾಯಕ್ ಅವರ ಪುತ್ರ ಕಿರಣ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರಲ್ಲಿ, 1960ರಲ್ಲಿ ಬಾಡಿಗೆ ಅವಧಿ ಮುಗಿದ ನಂತರ ಕವಳೆ ಮಠವು ಜಮೀನು ಹಿಂದಿರುಗಿಸಲು ಕೇಳಿತ್ತು. ಆದರೆ ಕಂಪನಿಯವರು ಜಮೀನು ನೀಡದ ಕಾರಣ ಮಠವು ನ್ಯಾಯಾಲಯದ ಮೊರೆ ಹೋಗಿತು. 1970ರಲ್ಲಿ (ದಾವೆ ಸಂಖ್ಯೆ 128/70 ಮತ್ತು 129/70) ಎರಡೂ ಪಕ್ಷಗಳ ನಡುವೆ ಸಮಜಾಯಿಷಿ ನಡೆದು ಬಾಡಿಗೆ ಅವಧಿಯನ್ನು ಡಿಸೆಂಬರ್ 31, 2017ರವರೆಗೆ ವಿಸ್ತರಿಸಿ ತದನಂತರ ಜಮೀನು ಮಠಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಯಿತು. ಅದರಂತೆ, ಫೆಬ್ರವರಿ 6, 2021ರಂದು ಶ್ರೀ ಗೋಪಾಲ ಕೃಷ್ಣ ಕಾಮತ್ ಅವರು ಸಂಬಂಧಿತ ಜಮೀನುಗಳನ್ನು ಕವಳೆ ಮಠಕ್ಕೆ ಹಸ್ತಾಂತರಿಸಿದರು. ಪ್ರಸ್ತುತ ಮಠದ ವತಿಯಿಂದ ಈ ಜಮೀನುಗಳಲ್ಲಿ ಕೃಷಿ, ವಾಣಿಜ್ಯ ಹಾಗೂ ತೋಟಗಾರಿಕಾ ಚಟುವಟಿಕೆಗಳು ನಡೆಯುತ್ತಿವೆ.
ಆದಾಗ್ಯೂ, ಈ ಪ್ರಕರಣವು ಪ್ರಸ್ತುತ ಖಾನಾಪುರದ ದಿವಾಣಿ ನ್ಯಾಯಾಲಯದಲ್ಲಿ (ಪ್ರಕರಣ ಸಂಖ್ಯೆ MA 1, MA 2 ಮತ್ತು MA 35) ಹಾಗೂ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲಿ ಬಾಕಿಯಾಗಿದೆ. ನ್ಯಾಯಾಲಯವು ಸಂಬಂಧಿತ ಪ್ರತಿವಾದಿಗಳಿಗೆ ಜಮೀನಿನ ಮೇಲೆ ಯಾವುದೇ ತೃತೀಯ ಪಕ್ಷದ ಹಕ್ಕುಗಳನ್ನು ಸೃಷ್ಟಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದೆ.
ಈ ಸ್ಥಿತಿಯಲ್ಲಿಯೂ ಶ್ರೀ ಕಂದಿ ರವಿಕುಮಾರ್ ಅವರು 50 ರಿಂದ 60 ಜನರೊಂದಿಗೆ ಸರ್ವೇ ಸಂಖ್ಯೆ 40 ಮತ್ತು 45ರಲ್ಲಿ ಅನಧಿಕೃತ ಪ್ರವೇಶ ಮಾಡಿ ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರು ಅಲ್ಲಿ ತಮ್ಮ ಹೆಸರಿನ ಫಲಕಗಳ ಜೊತೆಗೆ ‘ಭೀಮಸೇನೆ ಅಧ್ಯಕ್ಷ, ಕರ್ನಾಟಕ ರಾಜ್ಯ’ ಎಂಬ ಫಲಕಗಳನ್ನು ಅಳವಡಿಸಿದ್ದು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಫಲಕಗಳನ್ನೂ ಸ್ಥಾಪಿಸಿದ್ದಾರೆ. ಇದರಿಂದ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಉಂಟಾಗಿದೆ ಎಂದು ಶಿವಾನಂದ ಸರಸ್ವತಿ ಸ್ವಾಮೀಜಿ ಆರೋಪಿಸಿದರು.
ಈ ಸಂಬಂಧ ಸ್ಥಳೀಯ ಪೊಲೀಸ್ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಪೊಲೀಸರ ಪಾತ್ರದ ಮೇಲೂ ಪ್ರಶ್ನೆಗಳು ಏಳುತ್ತಿವೆ.
ಇದಲ್ಲದೆ, ಕಂಪನಿಯ ನಿರ್ದೇಶಕರು ಹುಬ್ಬಳ್ಳಿಯ ಶ್ರೀ ಚೇತನ ಅಶೋಕ್ ಭರದ್ವಾಡ ಅವರಿಗೆ ಸಾಮಾನ್ಯ ಮುಖತ್ಯಾರಪತ್ರ (GPA) ನೀಡಿದ್ದು, ಅವರು ರಾಜಕೀಯ ಪ್ರಭಾವವನ್ನು ಬಳಸಿ ಆಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬೆಳವಣಿಗೆಗಳಿಂದ ದೇಶದಾದ್ಯಂತ ಕವಳೆ ಮಠದ ಭಕ್ತರಲ್ಲಿ ಆತಂಕ ಮೂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಭಕ್ತರು ಖಾನಾಪುರಕ್ಕೆ ಆಗಮಿಸಿ ಆಡಳಿತ ಮತ್ತು ಪೊಲೀಸರ ಬಳಿ ನ್ಯಾಯಕ್ಕಾಗಿ ಮನವಿ ಮಾಡಲು ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದೆ.
ಈ ಪ್ರಕರಣದಲ್ಲಿ ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಿ ಅತಿಕ್ರಮಣ ತೆರವುಗೊಳಿಸಿ, ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ.
ಈ ವೇಳೆ ಅಡ್ವೊಕೇಟ್ ಪ್ರದ್ಯೂಮ್ನ ಜಿ. ಭಾಟೆ, ಅಡ್ವೊಕೇಟ್ ಪದ್ಮಾ ಹಳ್ಯಾಳಿ, ಜಯಂತ ಖಾಸನೀಸ್, ಕಿಶೋರ್ ನಾಯಕ್, ಪ್ರದೀಪ ದಲಾಲ್ ಮತ್ತು ಬಂಧುಗಳು, ನಿಲೇಶ್ ಬೋರ್ಕರ್ ಹಾಗೂ ಸ್ಥಳದಲ್ಲಿ ಸಸಿ ನೆಟ್ಟವರು, ಕಟ್ಟಡ ನಿರ್ಮಾಣ ಮಾಡಿದ ಗವಂಡಿ ಮಿಸ್ತ್ರಿಗಳು, ಫ್ಯಾಬ್ರಿಕೇಶನ್ ಮಿಸ್ತ್ರಿಗಳು, ರೋಹಿತ್ ಪಾಟೀಲ್, ಗಣೇಶ್ ಹಳ್ಯಾಳಕರ, ವಿಠ್ಠಲ್ ಸಾಳುಂಖೆ, ಚಂದ್ರಕಾಂತ್ ಸುರೋಜಿ, ಪ್ರಕಾಶ ಅಗಣೋಜಿ ಉಪಸ್ಥಿತರಿದ್ದರು.



