आंतरराज्य वाहनचोरी करणाऱ्या टोळीचा मारिहाळ पोलिसांकडून पर्दाफाश; 95 लाखांहून अधिक किमतीची 21 वाहने जप्त, पाच आरोपी ताब्यात
बेळगाव : मारिहाळ पोलिसांनी आंतरराज्य आणि आंतरजिल्हा पातळीवर सक्रिय असलेल्या वाहनचोरीच्या टोळीचा यशस्वी पर्दाफाश केला असून आरोपींकडून तब्बल 21 चोरीची वाहने जप्त करण्यात आली आहेत. जप्त करण्यात आलेल्या वाहनांची एकूण अंदाजे किंमत सुमारे 95 लाख 50 हजार रुपये इतकी असल्याची माहिती पोलिसांनी पत्रकार परिषदेत दिली.
मारिहाळ पोलिस ठाण्याच्या हद्दीतील नीलजी क्रॉस परिसरात 27 नोव्हेंबर 2025 रोजी एका घरासमोर उभी केलेली अशोक लेलँड मिनी गुड्स ट्रक अज्ञात चोरट्यांनी लंपास केली होती. या घटनेबाबत मारिहाळ पोलिस ठाण्यात गुन्हा क्रमांक 144/2025 नोंद करण्यात आला. भारतीय न्याय संहिता (BNS) 2023 च्या कलम 303(2) अंतर्गत गुन्हा दाखल करून पोलिसांनी तपास सुरू केला.

तपासादरम्यान मारिहाळ पोलिसांनी विशेष पथक तयार करून विविध ठिकाणी माहिती गोळा करण्यास सुरुवात केली. चौकशीदरम्यान आरोपींची कार्यपद्धती उघडकीस आली. आरोपी प्रथम रात्रीच्या वेळी वेगवेगळ्या भागात जाऊन रॉयल एनफिल्ड मोटारसायकल किंवा सुझुकी ॲक्सेस स्कूटर यांसारखी वाहने चोरी करत. त्यानंतर या वाहनांचा वापर करून ते अशोक लेलँड मिनी गुड्स ट्रक चोरी करत असल्याचे समोर आले. चोरी केलेली वाहने नंतर विविध व्यक्तींना विक्री करून आरोपी आर्थिक फायदा मिळवत असल्याचे तपासात स्पष्ट झाले.
या प्रकरणात पोलिसांनी युसुफखान सिकंदर खान (वय 68, धारवाड), जाकीर हुसेन मोहम्मदसाब परदेवाले (वय 47, धारवाड), आजाद इब्राहिम मुतवली (वय 36, विजापूर), शफीक अहमद रफीक अहमद (वय 52, वेल्लूर, तामिळनाडू) आणि बसिर अहमद मकानदार (वय 38, दांडेली) या पाच आरोपींना ताब्यात घेतले आहे.
आरोपींकडून पोलिसांनी खालीलप्रमाणे वाहने जप्त केली आहेत:
- अशोक लेलँड मिनी गुड्स ट्रक – 8
- रॉयल एनफिल्ड मोटारसायकली – 5
- सुझुकी ॲक्सेस स्कूटर – 5
- हिरो स्प्लेंडर मोटारसायकली – 2
- होंडा डिओ स्कूटर – 1
अशा प्रकारे एकूण 21 चोरीची वाहने पोलिसांनी जप्त केली आहेत.
तपासात या वाहनांपैकी काही वाहने बेळगाव, तुमकूर, दावणगेरे तसेच महाराष्ट्रातील पुणे आणि सांगली या भागातून चोरीला गेल्याचे उघड झाले आहे. त्यामुळे या टोळीचा कार्यक्षेत्र अनेक जिल्हे आणि राज्यांपर्यंत पसरले असल्याचे स्पष्ट झाले आहे.
ही कारवाई बेळगाव ग्रामीण उपविभागाचे एसीपी गंगाधर बी. एम. यांच्या मार्गदर्शनाखाली करण्यात आली. यामध्ये मारिहाळ पोलिस ठाण्याचे निरीक्षक आय. आर. पट्टणशेट्टी, पीएसआय मंजनाथ हुलकुंद, चंद्रशेखर तसेच सीसीबी आणि इतर पोलिस कर्मचाऱ्यांच्या पथकाने सहभाग घेतला.
या धाडसी कारवाईबद्दल वरिष्ठ पोलिस अधिकाऱ्यांनी पथकाचे कौतुक केले असून प्रकरणाचा पुढील तपास सुरू असल्याची माहिती पोलिसांनी दिली.
ಅಂತರರಾಜ್ಯ ವಾಹನ ಕಳ್ಳರ ಜಾಲ ಪತ್ತೆ; 95 ಲಕ್ಷ ಮೌಲ್ಯದ 21 ವಾಹನಗಳೊಂದಿಗೆ ಐವರು ವಶಕ್ಕೆ
ಬೆಳಗಾವಿ : ಮಾರಿಹಾಳ ಪೊಲೀಸ್ ಠಾಣೆ ಪೊಲೀಸರು ಅಂತರರಾಜ್ಯ ಹಾಗೂ ಅಂತರಜಿಲ್ಲಾ ಮಟ್ಟದಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪತ್ತೆಹಚ್ಚಿ, ಒಟ್ಟು 21 ಕಳ್ಳತನದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನಗಳ ಅಂದಾಜು ಮೌಲ್ಯ 95.50 ಲಕ್ಷ ರೂಪಾಯಿ ಎಂದು ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2025ರ ನವೆಂಬರ್ 27 ರಂದು ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿಲಜಿ ಕ್ರಾಸ್ ಪ್ರದೇಶದ ಒಂದು ಮನೆಯ ಮುಂದೆ ನಿಲ್ಲಿಸಿದ್ದ ಅಶೋಕ್ ಲೇಲ್ಯಾಂಡ್ ಮಿನಿ ಗುಡ್ಸ್ ಟ್ರಕ್ ಕಳ್ಳತನವಾಗಿದ್ದ ದೂರು ದಾಖಲಾಗಿ ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 144/2025 ಅಡಿ BNS 2023ರ ಕಲಂ 303(2) ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ತನಿಖೆ ವೇಳೆ ಪೊಲೀಸರು ವಿಶೇಷ ತಂಡ ರಚಿಸಿ ಮಾಹಿತಿ ಸಂಗ್ರಹಿಸಿದಾಗ, ಕೆಲವು ಆರೋಪಿಗಳು ರಾತ್ರಿ ವೇಳೆಯಲ್ಲಿ ವಿವಿಧ ಸ್ಥಳಗಳಿಗೆ ತೆರಳಿ ರಾಯಲ್ ಎನ್ಫೀಲ್ಡ್ ಮೋಟಾರ್ಸೈಕಲ್ ಅಥವಾ ಸುಜುಕಿ ಆಕ್ಸೆಸ್ ಸ್ಕೂಟರ್ ಕಳ್ಳತನ ಮಾಡಿ, ಅದೇ ವಾಹನಗಳನ್ನು ಬಳಸಿ ನಂತರ ಅಶೋಕ್ ಲೇಲ್ಯಾಂಡ್ ಮಿನಿ ಗುಡ್ಸ್ ವಾಹನಗಳನ್ನು ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಳ್ಳತನದ ವಾಹನಗಳನ್ನು ನಂತರ ವಿವಿಧ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಯೂಸಫ್ ಖಾನ್ ಸಿಕಂದರ್ ಖಾನ್ (68 ವರ್ಷ, ಧಾರವಾಡ), ಜಾಕೀರ್ ಹುಸೇನ್ ಮೊಹಮ್ಮದ್ ಸಾಬ್ ಪರದೇವಾಲೆ (47 ವರ್ಷ, ಧಾರವಾಡ), ಆಜಾದ್ ಇಬ್ರಾಹಿಂ ಮುತವಲಿ (36 ವರ್ಷ, ವಿಜಯಪುರ), ಶಫೀಕ್ ಅಹ್ಮದ್ ರಫೀಕ್ ಅಹ್ಮದ್ (52 ವರ್ಷ, ವೆಲ್ಲೂರು, ತಮಿಳುನಾಡು) ಮತ್ತು ಬಸೀರ್ ಅಹ್ಮದ್ ಮಕಂದಾರ್ (38 ವರ್ಷ, ದಾಂಡೇಲಿ) ಎಂಬ ಐವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಪೊಲೀಸರು ಕೆಳಕಂಡ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ:
ಅಶೋಕ್ ಲೇಲ್ಯಾಂಡ್ ಮಿನಿ ಗುಡ್ಸ್ ಟ್ರಕ್ – 8
ರಾಯಲ್ ಎನ್ಫೀಲ್ಡ್ ಮೋಟಾರ್ಸೈಕಲ್ – 5
ಸುಜುಕಿ ಆಕ್ಸೆಸ್ ಸ್ಕೂಟರ್ – 5
ಹೀರೋ ಸ್ಪ್ಲೆಂಡರ್ ಮೋಟಾರ್ಸೈಕಲ್ – 2
ಹೊಂಡಾ ಡಿಯೋ ಸ್ಕೂಟರ್ – 1
ಹೀಗೆ ಒಟ್ಟು 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನಗಳಲ್ಲಿ ಕೆಲವು ಬೆಳಗಾವಿ, ತುಮಕೂರು, ದಾವಣಗೆರೆ ಹಾಗೂ ಮಹಾರಾಷ್ಟ್ರದ ಪುಣೆ ಮತ್ತು ಸಾಂಗಲಿ ಪ್ರದೇಶಗಳಿಂದ ಕಳ್ಳತನವಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಕಾರ್ಯಾಚರಣೆ ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಗಂಗಾಧರ ಬಿ.ಎಂ. ಅವರ ಮಾರ್ಗದರ್ಶನದಲ್ಲಿ, ಮಾರಿಹಾಳ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಐ.ಆರ್. ಪಟ್ಟಣಶೆಟ್ಟಿ, ಪಿಎಸ್ಐ ಮಂಜುನಾಥ ಹುಳಕುಂದ, ಚಂದ್ರಶೇಖರ ಹಾಗೂ ಸಿಸಿಬಿ ಮತ್ತು ಇತರೆ ಪೊಲೀಸ್ ಸಿಬ್ಬಂದಿಗಳ ತಂಡದಿಂದ ನಡೆಸಲಾಗಿದೆ. ಪೊಲೀಸ್ ಆಯುಕ್ತರು ಈ ತಂಡದ ಕಾರ್ಯವನ್ನು ಶ್ಲಾಘಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.



