चिक्कोडी जवळ ट्रक-दुचाकीचा भीषण अपघात : एकाच कुटुंबातील तिघांचा जागीच मृत्यू.
चिक्कोडी : बेळगाव जिल्ह्यातील रायबाग तालुका येथील अलखनूर गावाच्या हद्दीत घडलेल्या भीषण अपघातात एकाच कुटुंबातील तिघांचा जागीच मृत्यू झाल्याची हृदयद्रावक घटना घडली आहे. कर्नाटक-महाराष्ट्र सीमेवरील जमखंडी-मिरज राज्य महामार्गावर ट्रक आणि दुचाकी यांच्यात समोरासमोर झालेल्या धडकेत ही दुर्दैवी घटना घडली आहे.

मृतांची ओळख महाराष्ट्रातील जयसिंगपूर येथील रहिवासी गिरेप्पा कुंदराळी (वय 38 वर्ष), त्यांची पत्नी मंजुळा कुंदराळी (वय 28) आणि सात वर्षांची मुलगी आराध्या अशी झाली आहे. गिरेप्पा हे खासगी कंपनीत नोकरी करत असल्याची माहिती मिळाली आहे.
जामखंडीकडे जाताना घडली दुर्घटना…
कुंदराळी कुटुंबीय आपल्या मूळ गावी जमखंडीकडे दुचाकीवरून जात असताना अलखनूर गावाजवळ समोरून येणाऱ्या ट्रकची जोरदार धडक बसली. धडकेची तीव्रता इतकी होती की दुचाकी पूर्णपणे चक्काचूर झाली आणि तिघेही रस्त्यावर फेकले गेले.
गंभीर दुखापतींमुळे गिरेप्पा, मंजुळा आणि आराध्या यांचा जागीच मृत्यू झाला. अपघाताचे भीषण दृश्य पाहून परिसरातील नागरिकही हादरले.
स्थानिकांचे प्रयत्न निष्फळ….
अपघाताची माहिती मिळताच स्थानिक नागरिकांनी तत्काळ घटनास्थळी धाव घेत मदतकार्य सुरू केले. मात्र तिघेही आधीच मृत झाल्याचे स्पष्ट झाले. पोलिसांनी घटनास्थळी भेट देऊन पंचनामा केला.
या प्रकरणाची नोंद हुक्केरी उपविभागातील हाऱुगेरी पोलीस ठाण्यात करण्यात आली असून ट्रक चालकाला ताब्यात घेण्यात आले आहे. अपघाताचे नेमके कारण शोधण्यासाठी पुढील तपास सुरू आहे.
रस्ते सुरक्षेचा प्रश्न ऐरणीवर….
या दुर्घटनेमुळे राज्य महामार्गांवरील सुरक्षेचा प्रश्न पुन्हा एकदा ऐरणीवर आला आहे. अतिवेग, निष्काळजी वाहनचालक आणि वाहतूक नियमांचे उल्लंघन ही अपघातांची प्रमुख कारणे असल्याचे स्थानिकांनी सांगितले.
पोलिसांनी वाहनचालकांनी हेल्मेटचा वापर करावा, वेगमर्यादा पाळावी आणि वाहतूक नियमांचे काटेकोर पालन करावे, असे आवाहन केले आहे.
ಚಿಕ್ಕೋಡಿ ಬಳಿ ಟ್ರಕ್ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು.
ಚಿಕ್ಕೋಡಿ : ಚಿಕ್ಕೋಡಿ ಸಮೀಪ ರಾಯಬಾಗ ತಾಲ್ಲೂಕಿನ ಅಲಖನೂರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ಜಂಖಂಡಿ–ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಮಹಾರಾಷ್ಟ್ರದ ಜಯಶಿಂಗಪೂರ Jaysingpur ನಿವಾಸಿಗಳಾದ ಗಿರೆಪ್ಪ ಕುಂದರಾಳಿ (ವಯಸ್ಸು 38), ಅವರ ಪತ್ನಿ ಮಂಜುಳಾ ಕುಂದರಾಳಿ (ವಯಸ್ಸು 28) ಹಾಗೂ ಏಳು ವರ್ಷದ ಪುತ್ರಿ ಆರಾಧ್ಯ ಎಂದು ಗುರುತಿಸಲಾಗಿದೆ. ಗಿರೆಪ್ಪ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಜಂಖಂಡಿಗೆ ತೆರಳುವ ವೇಳೆ ದುರಂತ…
ಕುಂದರಾಳಿ ಕುಟುಂಬ ತಮ್ಮ ಮೂಲ ಗ್ರಾಮ ಜಂಖಂಡಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಲಖನೂರ ಗ್ರಾಮದ ಬಳಿ ಎದುರಿನಿಂದ ಬಂದ ಟ್ರಕ್ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ಮೂವರು ರಸ್ತೆ ಮೇಲೆ ಎಸೆಯಲ್ಪಟ್ಟರು. ಗಂಭೀರ ಗಾಯಗಳಿಂದ ಗಿರೆಪ್ಪ, ಮಂಜುಳಾ ಹಾಗೂ ಆರಾಧ್ಯ ಸ್ಥಳದಲ್ಲೇ ಮೃತಪಟ್ಟರು. ಅಪಘಾತದ ಭೀಕರ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದರು.
ಫಲ ನೀಡದ ಸ್ಥಳೀಯರ ಪ್ರಯತ್ನ…
ಅಪಘಾತದ ಮಾಹಿತಿ ದೊರಕುತ್ತಿದ್ದಂತೆ ಸ್ಥಳೀಯರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಆದರೆ ಮೂವರು ಆಗಲೇ ಮೃತಪಟ್ಟಿರುವುದು ಸ್ಪಷ್ಟವಾಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು. ಈ ಪ್ರಕರಣ ಹುಕ್ಕೇರಿ Hukkeri ಉಪವಿಭಾಗದ ಹಾರುಗೆರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಟ್ರಕ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಮುಂದಿನ ತನಿಖೆ ಮುಂದುವರಿದಿದೆ.
ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಅಜಾಗುರುತೆ …
ಈ ದುರ್ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿಗಳಲ್ಲಿನ ರಸ್ತೆ ಸುರಕ್ಷತೆ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅತಿವೇಗ, ನಿರ್ಲಕ್ಷ್ಯ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಅಪಘಾತಗಳ ಪ್ರಮುಖ ಕಾರಣಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಾಹನ ಸವಾರರು ಹೆಲ್ಮೆಟ್ ಧರಿಸಬೇಕು, ವೇಗ ಮಿತಿ ಪಾಲಿಸಬೇಕು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.



