खानापूर तहसीलदार कार्यालयात जिल्हाधिकाऱ्यांचा आढावा; आमगाव व तळेवाडी स्थलांतरावर चर्चा.
खानापूर : जिल्हाधिकारी मोहम्मद रोशन यांनी बुधवारी (ता. 28) रोजी खानापूर तहसीलदार कार्यालयाला भेट देऊन तालुक्यातील विविध प्रश्न व समस्यांचा सविस्तर आढावा घेतला. यावेळी आमगाव गावाच्या स्थलांतरासंदर्भात महत्त्वपूर्ण चर्चा करण्यात आली.

जिल्हाधिकाऱ्यांनी आमगाव ग्रामस्थांसाठी स्थलांतराचे दोन पर्याय मांडले. पहिल्या पर्यायानुसार तालुक्यातच 100 एकर जमीन उपलब्ध करून देण्यात येईल, मात्र कोणताही आर्थिक मोबदला मिळणार नाही. दुसऱ्या पर्यायात आमटे ग्रामपंचायत हद्दीत 30 एकर जमीन देऊन प्रत्येक कुटुंबाला 15 लाख रुपये आर्थिक मोबदला देण्यात येणार आहे. या दोन्ही पर्यायांवर ग्रामस्थांनी विचारविनिमय करून निर्णय घ्यावा, असे जिल्हाधिकाऱ्यांनी स्पष्ट केले. याबाबत 15 ते 20 दिवसांत पुन्हा बैठक घेऊन अंतिम निर्णय घेण्यात येणार आहे.
यावेळी बोलताना जिल्हाधिकाऱ्यांनी सांगितले की, सध्या आमगावकडे 85 एकर गावठाण जागा व 60 एकर गावरान जमीन असून त्याऐवजी हे पर्याय देण्यात येत आहेत.
बैठकीत तळेवाडी गावाच्या स्थलांतराचा आढावा देखील घेण्यात आला. तळेवाडीतील 27 लाभार्थ्यांना प्राथमिक टप्प्यात प्रत्येकी 10 लाख रुपये देण्यात आले असून काही लाभार्थ्यांनी नवीन जागा खरेदी केल्या आहेत. उर्वरित 5लाख रुपयांचे वितरण व कायदेशीर प्रक्रिया तातडीने पूर्ण करण्याचे निर्देश जिल्हाधिकाऱ्यांनी संबंधित अधिकाऱ्यांना दिले.
यावेळी हतरगुंजी ग्रामस्थांनी जिल्हाधिकाऱ्यांना निवेदन देऊन सांगितले की, पूर्वी गावाकडे 19 एकर 5 गुंठे गावरान जमीन होती. त्यातील काही भूखंड स्मशानभूमी, महाविद्यालय व इतर सार्वजनिक कामांसाठी देण्यात आल्याने सध्या फक्त 4 एकर जमीन शिल्लक आहे. ही उरलेली जमीनही देण्याच्या हालचाली सुरू असल्याने ती गावासाठी राखीव ठेवावी, अशी मागणी करण्यात आली. जिल्हाधिकाऱ्यांनी निवेदन स्वीकारत योग्य निर्णय घेण्याचे आश्वासन दिले.
दरम्यान, हक्कीपिक्की आदिवासी समुदायाने जिल्हाधिकाऱ्यांना निवेदन देऊन घरे, रेशन कार्ड व इतर मूलभूत सुविधा उपलब्ध करून देण्याची मागणी केली. या समुदायातील सुमारे 100 कुटुंबे (250 नागरिक) जंगलात वास्तव्यास असून वन विभागाकडून वारंवार त्यांना स्थलांतरित केले जात असल्याची माहितीही यावेळी देण्यात आली.
या बैठकीस प्रांताधिकारी श्रवणकुमार नाईक, तहसीलदार दुंडप्पा कोमार, आरएफओ नदाफ तसेच विविध खात्याचे अधिकारी व नागरिक मोठ्या संख्येने उपस्थित होते.
ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಪರಿಶೀಲನಾ ಸಭೆ; ಆಮಗಾಂವ್ ಮತ್ತು ತಳೇವಾಡಿ ಊರು ಸ್ಥಳಾಂತರ ಕುರಿತು ಚರ್ಚೆ
ಖಾನಾಪುರ, ತಾ. 28 : ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬುಧವಾರ (ತಾ. 28) ಖಾನಾಪುರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ತಾಲ್ಲೂಕಿನ ವಿವಿಧ ಸಮಸ್ಯೆಗಳು ಹಾಗೂ ವಿಚಾರಗಳ ಕುರಿತು ಸವಿಸ್ತಾರವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಆಮಗಾಂವ್ ಗ್ರಾಮದ ಸ್ಥಳಾಂತರ ಸಂಬಂಧ ಮಹತ್ವದ ಚರ್ಚೆ ನಡೆಯಿತು.
ಜಿಲ್ಲಾಧಿಕಾರಿಗಳು ಆಮಗಾಂವ್ ಗ್ರಾಮಸ್ಥರಿಗೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಎರಡು ಆಯ್ಕೆಗಳು ಮುಂದಿಟ್ಟರು. ಮೊದಲ ಆಯ್ಕೆಯಂತೆ, ತಾಲ್ಲೂಕಿನಲ್ಲಿಯೇ 100 ಎಕರೆ ಭೂಮಿ ಒದಗಿಸಲಾಗುವುದು, ಆದರೆ ಯಾವುದೇ ಆರ್ಥಿಕ ಪರಿಹಾರ ದೊರೆಯುವುದಿಲ್ಲ. ಎರಡನೇ ಆಯ್ಕೆಯಲ್ಲಿ ಆಮಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 30 ಎಕರೆ ಭೂಮಿ ನೀಡಲಾಗುವುದು ಹಾಗೂ ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿ ಆರ್ಥಿಕ ಪರಿಹಾರ ನೀಡಲಾಗುತ್ತದೆ. ಈ ಎರಡೂ ಆಯ್ಕೆಗಳ ಬಗ್ಗೆ ಗ್ರಾಮಸ್ಥರು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಈ ಕುರಿತು 15 ರಿಂದ 20 ದಿನಗಳೊಳಗೆ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರಸ್ತುತ ಆಮಗಾಂವ್ ಗ್ರಾಮಕ್ಕೆ 85 ಎಕರೆ ಗ್ರಾಮದ ಜಾಗ ಹಾಗೂ 60 ಎಕರೆ ಗಾಯರಾಣ ಭೂಮಿ ಇದ್ದು, ಅದರ ಬದಲಿಗೆ ಈ ಆಯ್ಕೆಗಳು ನೀಡಲಾಗುತ್ತಿವೆ ಎಂದು ಹೇಳಿದರು. ಸಭೆಯಲ್ಲಿ ತಳೇವಾಡಿ ಗ್ರಾಮದ ಸ್ಥಳಾಂತರದ ಪರಿಶೀಲನೆಯನ್ನೂ ನಡೆಸಲಾಯಿತು. ತಳೇವಾಡಿಯ 27 ಲಾಭಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ತಲಾ 10 ಲಕ್ಷ ರೂಪಾಯಿ ನೀಡಲಾಗಿದ್ದು, ಕೆಲವರು ಹೊಸ ಜಾಗಗಳನ್ನು ಖರೀದಿಸಿದ್ದಾರೆ. ಉಳಿದ 5 ಲಕ್ಷ ರೂಪಾಯಿ ವಿತರಣೆ ಹಾಗೂ ಕಾನೂನು ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಹತ್ತರಗುಂಜಿ ಗ್ರಾಮದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಹಿಂದೆ ಗ್ರಾಮಕ್ಕೆ 19 ಎಕರೆ 5 ಗುಂಟೆ ಗಾಯರಾಣ ಭೂಮಿ ಇದ್ದು, ಅದರ ಕೆಲವು ಭಾಗವನ್ನು ಸ್ಮಶಾನಭೂಮಿ, ಮಹಾವಿದ್ಯಾಲಯ ಮತ್ತು ಇತರ ಸಾರ್ವಜನಿಕ ಕೆಲಸಗಳಿಗೆ ನೀಡಿರುವುದರಿಂದ ಈಗ ಕೇವಲ 4 ಎಕರೆ ಭೂಮಿ ಮಾತ್ರ ಉಳಿದಿದೆ ಎಂದು ತಿಳಿಸಿದರು. ಈ ಉಳಿದ ಭೂಮಿಯನ್ನೂ ನೀಡುವ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ಗ್ರಾಮದ ಬಳಕೆಗೆ ಕಾಯ್ದಿರಿಸಬೇಕು ಎಂದು ಬೇಡಿಕೆ ಇಟ್ಟರು. ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿ ಯೋಗ್ಯ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದರ ನಡುವೆ, ಹಕ್ಕಿ–ಪಿಕ್ಕಿ ಆದಿವಾಸಿ ಸಮುದಾಯದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮನೆಗಳು, ರೇಷನ್ ಕಾರ್ಡ್ ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಬೇಡಿಕೆ ಇಟ್ಟರು. ಈ ಸಮುದಾಯದ ಸುಮಾರು 100 ಕುಟುಂಬಗಳು (250 ನಾಗರಿಕರು) ಅರಣ್ಯ ಪ್ರದೇಶದಲ್ಲಿ ವಾಸವಿದ್ದು, ಅರಣ್ಯ ಇಲಾಖೆಯಿಂದ ಅವರನ್ನು ಮೇಲಿಂದ ಮೇಲೆ ಸ್ಥಳಾಂತರಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿದರು.
ಈ ಸಭೆಯಲ್ಲಿ ಪ್ರಾಂತಾಧಿಕಾರಿ ಶ್ರವಣಕುಮಾರ್ ನಾಯಕ್, ತಹಶೀಲ್ದಾರ್ ದುಂಡಪ್ಪ ಕೋಮಾರ, ಆರ್ಎಫ್ಒ ನದಾಫ್, ಅಡ್ವೊ. ಈಶ್ವರ ಘಾಡಿ, ಯಶವಂತ ಬಿರ್ಜೆ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



