लोंढा बसस्थानकाची दुरवस्था; तातडीने कारवाई न झाल्यास उग्र आंदोलन – डॉ. सुनील एम. एस. यांचा इशारा.
लोंढा : लोंढा गावातील बसस्थानकाची अत्यंत दयनीय अवस्था उघडकीस आली असून, कर्नाटक युवरक्षण वेदिकेचे राज्याध्यक्ष डॉ. सुनील एम.एस. यांनी नुकतीच बसस्थानकाला भेट देऊन पाहणी केली. पाहणीदरम्यान बोलताना त्यांनी, बसस्थानकात प्रवाशांसाठी आवश्यक असलेल्या मूलभूत सुविधांचा पूर्णतः अभाव असल्याबद्दल तीव्र नाराजी व्यक्त केली.
बसस्थानकात योग्य रस्ते व्यवस्था नाही, वीजपुरवठा अपुरा आहे, तसेच मागील चार वर्षांपासून कंट्रोलरची नियुक्तीच नसल्याचा आरोप त्यांनी केला. याशिवाय पिण्याच्या पाण्याची सोय नाही, शौचालयांची व्यवस्था नाही, तसेच शालेय विद्यार्थ्यांसाठी नियमित व पुरेशी बससेवा उपलब्ध नसल्यामुळे विद्यार्थी, ज्येष्ठ नागरिक आणि महिलांना मोठ्या अडचणींचा सामना करावा लागत असल्याचे त्यांनी सांगितले.
या सर्व समस्यांकडे संबंधित परिवहन विभागाच्या अधिकाऱ्यांनी तातडीने लक्ष देऊन उपाययोजना कराव्यात, अशी जोरदार मागणी डॉ. सुनील एम.एस. यांनी केली. जर लवकरात लवकर या प्रश्नांची दखल घेऊन तोडगा काढण्यात आला नाही, तर कर्नाटक युवारक्षण वेदिकेच्या वतीने मोठ्या प्रमाणावर उग्र आंदोलन व तीव्र निदर्शने छेडली जातील, असा स्पष्ट इशाराही त्यांनी दिला.
ಲೋಂಡಾ ಬಸ್ ನಿಲ್ದಾಣದ ದುರವಸ್ಥೆ: ತಕ್ಷಣ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ – ಡಾ. ಸುನೀಲ ಎಂ.ಎಸ್ ಎಚ್ಚರಿಕೆ
ಲೋಂಡಾ ಗ್ರಾಮದಲ್ಲಿ ನಮ್ಮ ಕರ್ನಾಟಕ ಯುವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಡಾ. ಸುನೀಲ ಎಂ.ಎಸ್ ಅವರು ಭೇಟಿ ನೀಡಿ ಲೋಂಡಾ ಬಸ್ ನಿಲ್ದಾಣವನ್ನು ಪರಿಶೀಲಿಸಿದರು. ಪರಿಶೀಲನೆಯ ವೇಳೆ ಮಾತನಾಡಿದ ಅವರು, ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಿರುವುದು ಅತ್ಯಂತ ಖೇದಕರ ಸಂಗತಿ ಎಂದು ಹೇಳಿದರು.
ಬಸ್ ನಿಲ್ದಾಣದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ, ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಕೊರತೆಯಾಗಿದೆ, ಹಾಗೂ ಕಂಟ್ರೋಲರ್ ವ್ಯವಸ್ಥೆ ಕಳೆದ ನಾಲ್ಕು ವರ್ಷಗಳಿಂದ ಇಲ್ಲ ಎಂದು ಅವರು ಆರೋಪಿಸಿದರು. ಇದಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಮತ್ತು ಶಾಲಾ ಮಕ್ಕಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಈ ಎಲ್ಲಾ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಡಾ. ಸುನೀಲ ಎಂ.ಎಸ್ ಅವರು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದಲ್ಲಿ, ಕರ್ನಾಟಕ ಯುವರಕ್ಷಣಾ ವೇದಿಕೆ ವತಿಯಿಂದ ದೊಡ್ಡ ಮಟ್ಟದ ಉಗ್ರ ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.


