ऊस दरवाढीसाठी खानापूरात अखिल कर्नाटक रयत संघटनेचे रास्ता रोको आंदोलन; योग्य दराच्या आश्वासनानंतर आंदोलन मागे.
खानापूर (ता. 3 नोव्हेंबर) : ऊस उत्पादक शेतकऱ्यांना टनाला 3500रु प्रमाणे दर देण्यात यावा, या मागणीसाठी अखिल कर्नाटक रयत संघटनेच्या वतीने सोमवारी खानापूर येथील बसवेश्वर चौक (जांबोटी क्रॉस) येथे तब्बल चार तासांचा रस्ता रोको आंदोलन करण्यात आला. या आंदोलनाचे नेतृत्व संघटनेचे राज्य उपाध्यक्ष किशोर मिठारी यांनी केले.
आंदोलनादरम्यान शेतकऱ्यांनी “जिल्हाधिकारी आल्याशिवाय आंदोलन मागे घेणार नाही” असा ठाम पवित्रा घेतला होता. परिस्थिती नियंत्रणात ठेवण्यासाठी तहसीलदार दुंडाप्पा कोमार यांनी घटनास्थळी भेट देऊन शेतकऱ्यांची समजूत काढण्याचा प्रयत्न केला. परंतु शेतकरी ठाम राहिल्याने अखेर लैला शुगर्सचे एम.डी. सदानंद पाटील यांना घटनास्थळी बोलवण्यात आले.
सदानंद पाटील यांनी आंदोलनस्थळी येऊन शेतकऱ्यांना आश्वासन दिले की, लैला शुगर्स तर्फे सध्या ऊसाची पहिली उचल ₹3100 दिली जात आहे आणि बेळगाव जिल्ह्यात जो दर जाहीर होईल, तोच दर शेतकऱ्यांना देण्यात येईल. हे आश्वासन मिळाल्यानंतर शेतकऱ्यांनी आंदोलन मागे घेतले.
या वेळी अवरोळी मठाचे चन्नबसव देवरु यांनी शेतकऱ्यांना मार्गदर्शन करत, “तालुक्यातील साखर कारखान्यांना ऊस पुरवठा करून सहकार्य करावे,” असे आवाहन केले.
रस्ता रोकोदरम्यान पोलीस निरीक्षक लालसाब गवंडी आणि त्यांच्या सहकाऱ्यांनी आंदोलनाच्या ठिकाणी कठोर बंदोबस्त ठेवत शांततेत आंदोलन पार पडावे यासाठी प्रयत्न केले. तथापि, आंदोलनामुळे चारही दिशांना वाहनांच्या लांबच लांब रांगा लागल्या आणि वाहतूक काही काळ विस्कळीत झाली.
या आंदोलनात किशोर मिठारी, अशोक यमकनमर्डी, नासीर बागवान (जेडीएस नेते), काडसिद्धेश्वर स्वामी, अँटोन सोज, रमेश वीरापुरे, बिष्टप्पा सुंबळी, नारायण पाटील, राजू वीरापुरे, सेबॅस्टियन सोजा, पास्कल सोजा, गोपाल आगशिमनी, यल्लाप्पा चन्नापूर, शिवाजी अंबडगट्टी, रवी अंबडगट्टी, दत्ता बिडकर यांच्यासह खानापूर तालुक्यातील शेतकरी व नागरिक मोठ्या संख्येने उपस्थित होते.
शेतकऱ्यांनी या आंदोलनाद्वारे स्पष्ट संदेश दिला की, योग्य ऊसदरासाठी संघर्ष सुरूच राहील, आणि शासन व साखर कारखान्यांनी शेतकऱ्यांच्या हिताचा विचार करून दर निश्चित करावा, अशी मागणी त्यांनी केली.
ಅಖಿಲ ಕರ್ನಾಟಕ ರೈತ ಸಂಘಟನೆ ವತಿಯಿಂದ ಖಾನಾಪುರದಲ್ಲಿ ಕಬ್ಬು ಬೆಲೆ ಹೆಚ್ಚಳಕ್ಕಾಗಿ ರಸ್ತೆ ರೋಕೂ ಮಾಡಿ ಪ್ರತಿಭಟನೆ; ಬೆಂಬಲ ಬೆಲೆಯ ಭರವಸೆಯ ನಂತರ ಪ್ರತಿಭಟನೆ ಹಿಂಪಡೆದ ರೈತರು.
ಖಾನಾಪುರ (ತಾ. ನ. 3) : ಪ್ರತಿ ಟನ್ಗೆ ₹3500 ರಂತೆ ಕಬ್ಬಿನ ಬೆಲೆ ನಿಗದಿಪಡಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಅಖಿಲ ಕರ್ನಾಟಕ ರೈತ ಸಂಘಟನೆಯ ವತಿಯಿಂದ ಸೋಮವಾರ ಖಾನಾಪುರದ ಬಸವೇಶ್ವರ ಚೌಕ್ (ಜಾಂಬೋಟಿ ಕ್ರಾಸ್) ಬಳಿ ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ರೋಕೋ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯನ್ನು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕಿಶೋರ್ ಮಿಠಾರಿ ಅವರು ನೇತೃತ್ವ ವಹಿಸಿದ್ದರು.
ಪ್ರತಿಭಟನೆಯ ಸಮಯದಲ್ಲಿ ರೈತರು “ಜಿಲ್ಲಾಧಿಕಾರಿ ಬರುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ” ಎಂಬ ದೃಢ ನಿಲುವು ತೆಗೆದುಕೊಂಡಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿ ಇರಿಸಲು ತಹಶೀಲ್ದಾರ್ ದುಂಡಪ್ಪ ಕೊಮಾರ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು ತಮ್ಮ ನಿಲುವಿಗೆ ಭದ್ಧರಾದ ಕಾರಣ, ಕೊನೆಗೆ ಲೈಲಾ ಶುಗರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಅವರನ್ನು ಸ್ಥಳಕ್ಕೆ ಆಹ್ವಾನಿಸಲಾಯಿತು.
ಸದಾನಂದ ಪಾಟೀಲ ಅವರು ಸ್ಥಳಕ್ಕೆ ಬಂದು ರೈತರಿಗೆ ಭರವಸೆ ನೀಡುತ್ತಾ: “ಲೈಲಾ ಶುಗರ್ಸ್ನಿಂದ ಸದ್ಯಕ್ಕೆ ಪ್ರತಿ ಟನ್ಗೆ ₹3100 ಮುಂಗಡವಾಗಿ ನೀಡಲಾಗುವುದು, ಮತ್ತು ಬೆಳಗಾವಿ ಜಿಲ್ಲೆಯಲ್ಲಿ ದರ ನಿಗದಿಯಾಗುತ್ತದೋ ಅದೇ ದರ ನಮ್ಮ ಕಾರ್ಖಾನೆ ರೈತರಿಗೆ ನೀಡುತ್ತದೆ.” ಎಂಬ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.
ಈ ಸಂದರ್ಭದಲ್ಲಿ ಅವ್ರೋಳಿ ಮಠದ ಚನ್ನಬಸವ ದೇವರು ರೈತರಿಗೆ ಮಾರ್ಗದರ್ಶನ ನೀಡಿ, “ತಾಲೂಕಿನ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ನೀಡಿ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ರಸ್ತೆ ರೋಕೋ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಲಾಲಸಾಬ್ ಗವಂಡಿ ಮತ್ತು ಅವರ ಸಿಬ್ಬಂದಿ ಸ್ಥಳದಲ್ಲಿ ಕಠಿಣ ಬಂದೋಬಸ್ತು ಒದಗಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಯುವಂತೆ ನೋಡಿಕೊಂಡರು. ಆದಾಗ್ಯೂ, ಪ್ರತಿಭಟನೆಯ ಪರಿಣಾಮವಾಗಿ ನಾಲ್ಕೂ ದಿಕ್ಕುಗಳಲ್ಲಿ ವಾಹನಗಳ ಸಂಚಾರಕ್ಕೆ ತಡೆ ಒಡ್ಡಿದ ಕಾರಣ ಉದ್ದ ಸಾಲುಗಳು ನಿರ್ಮಾಣವಾಗಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಯಿತು.
ಈ ಪ್ರತಿಭಟನೆಯಲ್ಲಿ ಕಿಶೋರ್ ಮಿಠಾರಿ, ಅಶೋಕ್ ಯಮಕನಮರ್ಡಿ, ನಾಸೀರ್ ಬಾಗವಾನ್ (ಜೆಡಿಎಸ್ ನಾಯಕ), ಕಾಡಸಿದ್ಧೇಶ್ವರ ಸ್ವಾಮಿ, ಅಂತೋನ್ ಸೊಜ್, ರಮೇಶ್ ವೀರಾಪುರ, ಬಿಷ್ಟಪ್ಪ ಸುಂಬಳಿ, ನಾರಾಯಣ ಪಾಟೀಲ, ರಾಜು ವೀರಾಪುರ, ಸೆಬಾಸ್ಟಿಯನ್ ಸೊಜಾ, ಪಾಸ್ಕಲ್ ಸೊಜಾ, ಗೋಪಾಲ್ ಅಗಶಿಮನಿ, ಯಲ್ಲಪ್ಪ ಚನ್ನಾಪುರ, ಶಿವಾಜಿ ಅಂಬಡಗಟ್ಟಿ, ರವಿ ಅಂಬಡಗಟ್ಟಿ, ದತ್ತಾ ಬಿಡ್ಕರ್ ಸೇರಿದಂತೆ ಖಾನಾಪುರ ತಾಲ್ಲೂಕಿನ ಹಲವಾರು ರೈತರು ಮತ್ತು ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.
ರೈತರು ಈ ಪ್ರತಿಭಟನೆಯ ಮೂಲಕ ಸ್ಪಷ್ಟ ಸಂದೇಶ ನೀಡಿದ್ದು — “ಸಮಂಜಸ ಕಬ್ಬು ದರ ದೊರೆಯುವ ತನಕ ಹೋರಾಟ ಮುಂದುವರಿಯುತ್ತದೆ, ಮತ್ತು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ರೈತರ ಹಿತದೃಷ್ಟಿಯಿಂದ ದರ ನಿಗದಿಪಡಿಸಬೇಕು” ಎಂದು ಅವರು ಆಗ್ರಹಿಸಿದರು.



