शांतिनिकेतन पदवीपूर्व महाविद्यालयाच्या विद्यार्थ्याची जलतरण स्पर्धेत राष्ट्रीय पातळीवर निवड.
खानापूर (ता. 3 नोव्हेंबर) : शांतिनिकेतन पदवीपूर्व महाविद्यालयाचा कुशल विद्यार्थी कुमार आर्यन पाटील याने अलीकडेच झालेल्या राज्यस्तरीय जलतरण क्रीडा स्पर्धेत नेत्रदीपक कामगिरी करत सर्वांचे लक्ष वेधून घेतले आहे. आपल्या उत्कृष्ट प्रदर्शनाच्या बळावर त्याची राष्ट्रीय पातळीवरील जलतरण स्पर्धेसाठी निवड झाली असून, हा शांतिनिकेतन महाविद्यालयासाठी अभिमानाचा क्षण ठरला आहे.
राज्यस्तरीय पदवीपूर्व महाविद्यालयीन जलतरण स्पर्धेचे आयोजन स्कूल गेम्स फेडरेशन ऑफ इंडिया, कर्नाटक यांच्या संयुक्त विद्यमाने करण्यात आले होते. या स्पर्धेत आर्यन पाटील याने विविध प्रकारांमध्ये चमकदार यश मिळवत सुवर्ण, रजत आणि कास्य अशी पदकत्रयी आपल्या नावावर केली आहेत.
त्याने 200 मीटर बटरफ्लाय स्ट्रोक आणि 4×100 मीटर मिडल रिले या प्रकारांमध्ये सुवर्ण पदक, ४×१०० मीटर फ्री स्टाईल रिले मध्ये रजत पदक, तसेच ५० मीटर बॅकस्ट्रोक प्रकारात कास्य पदक जिंकत शांतिनिकेतन महाविद्यालयाचे नाव राज्यभर उजळवले.
या उल्लेखनीय यशाबद्दल खानापूरचे आमदार आणि श्री महालक्ष्मी ग्रुप सोसायटी तोपिनकट्टीचे संस्थापक-अध्यक्ष श्री विठ्ठलराव सोमान्ना हलगेकर यांनी आर्यनचे मन:पूर्वक अभिनंदन केले आणि राष्ट्रीय पातळीवरील स्पर्धेसाठी शुभेच्छा दिल्या.
तसेच महाविद्यालयाचे सेक्रेटरी श्री आर. एस. पाटील, संचालकवर्ग आणि प्राचार्या सौ. सुवर्णा निलजकर यांनीही आर्यनच्या परिश्रमाचे कौतुक करत त्याच्यावर अभिनंदनाचा वर्षाव केला.
आर्यनला त्याचे पालक, प्राचार्या, प्राध्यापकवर्ग आणि सहविद्यार्थ्यांकडून सातत्याने प्रोत्साहन मिळत असून, आगामी राष्ट्रीय स्पर्धेत तो राज्याचे आणि महाविद्यालयाचे नाव आणखी उज्ज्वल करेल, असा विश्वास व्यक्त केला जात आहे.
ಶಾಂತಿನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆ
ಖಾನಾಪುರ (ತಾ. ನವೆಂಬರ್ 3) : ಶಾಂತಿನಿಕೇತನ ಪದವಿಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಕುಮಾರ ಆರ್ಯನ್ ಪಾಟೀಲ್ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಈಜು ಕ್ರೀಡಾ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ. ತನ್ನ ಅತ್ಯುತ್ತಮ ಪ್ರದರ್ಶನದ ಬಲದಿಂದ ಅವನು ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದು, ಇದು ಶಾಂತಿನಿಕೇತನ ಕಾಲೇಜಿಗೆ ಹೆಮ್ಮೆಯ ಕ್ಷಣವಾಗಿದೆ.
ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ಈಜು ಸ್ಪರ್ಧೆಯನ್ನು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಆರ್ಯನ್ ಪಾಟೀಲ್ ವಿವಿಧ ವಿಭಾಗಗಳಲ್ಲಿ ಮೆರೆದ ಸಾಧನೆಯಿಂದ ಸುವರ್ಣ, ರಜತ ಮತ್ತು ಕಂಚಿನ ಪದಕಗಳು ಗಳಿಸಿದ್ದಾನೆ.
ಅವನು 200 ಮೀಟರ್ ಬಟರ್ಫ್ಲೈ ಸ್ಟ್ರೋಕ್ ಮತ್ತು 4×100 ಮೀಟರ್ ಮಿಡಲ್ ರಿಲೇ ವಿಭಾಗಗಳಲ್ಲಿ ಸುವರ್ಣ ಪದಕ, 4×100 ಮೀಟರ್ ಫ್ರೀ ಸ್ಟೈಲ್ ರಿಲೇ ನಲ್ಲಿ ರಜತ ಪದಕ, ಹಾಗೂ 50 ಮೀಟರ್ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಶಾಂತಿನಿಕೇತನ ಕಾಲೇಜಿನ ಹೆಸರನ್ನು ರಾಜ್ಯಾದ್ಯಂತ ಮೆರೆದಿದ್ದಾನೆ.
ಈ ಉಲ್ಲೇಖನೀಯ ಸಾಧನೆಗಾಗಿ ಖಾನಾಪುರದ ಶಾಸಕರು ಹಾಗೂ ಶ್ರೀ ಮಹಾಲಕ್ಷ್ಮಿ ಗ್ರೂಪ್ ಸೊಸೈಟಿ ತೋಪಿನಕಟ್ಟಿ ಸಂಸ್ಥಾಪಕಾಧ್ಯಕ್ಷ ಶ್ರೀ ವಿಠ್ಠಲರಾವ ಸೋಮಣ್ಣ ಹಲಗೇಕರ್ ಅವರು ಆರ್ಯನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಹಾಗೇ ಕಾಲೇಜಿನ ಕಾರ್ಯದರ್ಶಿ ಶ್ರೀ ಆರ್.ಎಸ್. ಪಾಟೀಲ್, ನಿರ್ದೇಶಕರ ವರ್ಗ ಮತ್ತು ಪ್ರಾಂಶುಪಾಲೆ ಸೌ. ಸುವರ್ಣಾ ನಿಲಜ್ಕರ್ ಅವರೂ ಆರ್ಯನ್ ಅವರ ಪರಿಶ್ರಮವನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ.
ಆರ್ಯನ್ಗೆ ಅವರ ಪೋಷಕರು, ಪ್ರಾಂಶುಪಾಲೆ, ಪ್ರಾಧ್ಯಾಪಕರ ವರ್ಗ ಹಾಗೂ ಸಹಪಾಠಿಗಳಿಂದ ನಿರಂತರ ಪ್ರೋತ್ಸಾಹ ದೊರೆಯುತ್ತಿದ್ದು, ಮುಂಬರುವ ರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಕಾಲೇಜಿನ ಹೆಸರನ್ನು ಇನ್ನಷ್ಟು ಮೆರೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ.


