बेळगाव : हायकोर्टाचा महत्त्वाचा निकाल — हुक्केरी DCC बँक निवडणुकीस हिरवा कंदील; माजी खासदार रमेश कट्टींना मोठा दिलासा!
बेळगाव (ता.18) : बेळगाव जिल्हा मध्यवर्ती सहकारी बँकेच्या (DCC Bank) हुक्केरी मतदारसंघातील निवडणुकीवरून सुरू असलेला वाद अखेर मिटला आहे. कर्नाटक उच्च न्यायालयाने आज (शनिवार) दिलेल्या महत्त्वपूर्ण निर्णयानुसार, ही निवडणूक नियोजितप्रमाणे 19 ऑक्टोबर रोजीच पार पडणार आहे. या निकालामुळे माजी खासदार रमेश कत्ती यांना मोठा दिलासा मिळाला आहे.
ही निवडणूक आधी हायकोर्टाच्या आदेशानुसार स्थगित करण्यात आली होती. भीमसेन बागी यांनी मतदार यादित आपले नाव समाविष्ट न केल्याचा आरोप करत उच्च न्यायालयात याचिका दाखल केली होती. त्यानंतर न्यायालयाने प्राथमिक सुनावणीत मतदानावर तात्पुरती स्थगिती दिली होती.
या आदेशाविरोधात रमेश कत्ती यांच्या वकिलांनी उच्च न्यायालयात धाव घेतली. प्रकरणाची पुन्हा सुनावणी करताना, न्यायालयाच्या द्विसदस्यीय खंडपीठाने ही निवडणूक विशेष बाब म्हणून घेत, नियोजित तारखेलाच म्हणजेच 19 ऑक्टोबर रोजी मतदान घेण्याचा आदेश दिला आहे.
जिल्हा मध्यवर्ती सहकारी बँकेच्या संचालक मंडळाच्या सर्वसाधारण निवडणुकीअंतर्गत हुक्केरी तालुक्यातील विविध प्राथमिक कृषी पतसंस्थांच्या प्रतिनिधी मतदारसंघाची निवडणूक स्थगित करण्यात आली होती. मात्र, हायकोर्टाच्या आजच्या आदेशानंतर आता रविवारीच मतदान होणार आहे.
या निर्णयाची माहिती समजताच रमेश कत्ती यांच्या मूळगावी बेल्लद बागेवाडी येथे समर्थकांनी फटाके फोडून जल्लोष साजरा केला.
DCC ಬ್ಯಾಂಕ್ ನ ಹುಕ್ಕೇರಿ ಚುನಾವಣೆ ಅ. 19ರಂದೇ ನಡೆಸಲು ಹೈಕೋರ್ಟ್ ಆದೇಶ.
23 ಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಹುಕ್ಕೇರಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯನ್ನು ಮುಂದೂಡಿದ್ದ ಹೈಕೋರ್ಟ್ ಶನಿವಾರ ಮತ್ತೆ ಪ್ರಕರಣದ ವಿಚಾರಣೆ ನಡೆಸಿ ಅ. 19ರಂದೇ ಮತದಾನ ನಡೆಸುವಂತೆ ಹೈಕೋರ್ಟ್ ದ್ವಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದ್ದು, ಮಾಜಿ ಸಂಸದ ರಮೇಶ ಕತ್ತಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಭೀಮಸೇನ ಬಾಗಿ ಎಂಬವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮತದಾನಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ನೀಡಿತ್ತು. ಈ ಬಗ್ಗೆ ರಮೇಶ ಕತ್ತಿ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ, ನಿಗದಿಯಾದ ಅ. 19ರಂದೇ ಮತದಾನ ನಡೆಸುವಂತೆ ಶನಿವಾರವೇ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಅ. 19ರಂದು ನಡೆಯಬೇಕಿದ್ದ ಆಡಳಿತ ಮಂಡಳಿ ಸಾಮಾನ್ಯ ಚುನಾವಣೆಗೆ ಸಂಬಂಧಿಸಿದಂತೆ ಹುಕ್ಕೇರಿ ತಾಲೂಕಿನ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಿಂದ(ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ) ಪ್ರತಿನಿಧಿಸುವ ಮತಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಹೈಕೋರ್ಟ್ ನ ಮುಂದಿನ ಆದೇಶ ಆಗುವವರೆಗೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಈಗ ಮತದಾನದ ಹಿಂದಿನ ದಿನವೇ ಹೈಕೋರ್ಟ್ ನೀಡಿರುವ ಆದೇಶ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಗಳು ರವಿವಾರ ನಡೆಯಲಿವೆ.
ತೀರ್ಪು ಹೊರ ಬರುತ್ತಿದ್ದಂತೆ ರಮೇಶ ಕತ್ತಿ ಅವರ ತವರೂರು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

