बसच्या आगीत 21 जणांचा होरपळून मृत्यू 16 जन गंभीर जखमी.
राजस्थानच्या जैसलमेर जिल्ह्यात एका खाजगी बसला अचानक आग लागली, त्यात किमान 21 प्रवाशांचा होरपळून मृत्यू झाल्याचे सांगण्यात येत आहे. तर या भीषण अपघातात 16 जण गंभीर जखमी झाले आहेत.
बसमध्ये 57 प्रवासी प्रवास करत होते. बस जोधपूरकडे जात असताना जैसलमेर-जोधपूर महामार्गावर हा अपघात झाला.
प्राथमिक माहितीतून धक्कादायक माहिती समोर आली आहे. फटाक्यांच्या स्फोटामुळे आग लागल्याची शक्यता पोलिस तपासत आहेत. राजस्थानचे मंत्री गजेंद्र सिंह खिमसर म्हणाले, “मी माझ्या आयुष्यात असा अपघात कधीच पाहिला नाही. बसमध्ये स्फोट झाला. एफएसएल टीम चौकशी करेल.”
मंत्र्यांनी पुढे सांगितले की, घटनास्थळाची पाहणी केली जात आहे आणि आवश्यक माहिती गोळा केली जात आहे. तपासात असे दिसून आले की काही प्रवासी फटाके घेऊन जात होते, ज्यामुळे आग पसरली आणि बसमध्ये अचानक स्फोट झाला. बसची स्थिती आणि त्यातील सामान पूर्णपणे जळून खाक झाले.
जैसलमेर पोलिसांच्या म्हणण्यानुसार, दुपारी ३ वाजताच्या सुमारास बस जैसलमेरहून निघाली. बस महामार्गावरून जात असताना, चालकाला गाडीच्या मागून धूर येत असल्याचे दिसले. त्याने बस थांबवण्याचा प्रयत्न केला, परंतु आग इतकी तीव्र होती की आगीने ती पूर्णपणे वेढली. स्थानिक आणि रस्त्यावरून जाणारे लोक घटनास्थळी धावले आणि बचाव कार्यात सहभागी झाले. लष्कराच्या जवानांनीही बचाव आणि मदत कार्यात मदत केली.
अग्निशमन दल आणि पोलिसांना तात्काळ माहिती देण्यात आली. जखमी प्रवाशांना जैसलमेरच्या जवाहर रुग्णालयात दाखल करण्यात आले, जिथे गंभीर जखमी झालेल्या 16 प्रवाशांना गंभीर अवस्थेत जोधपूर येथील रुग्णालयात हलवण्यात आले.
डीएनए चाचणीतून मृतांची ओळख पटणार..
भाजप आमदार प्रताप पुरी यांनी वृत्तसंस्थेला सांगितले की, बसला लागलेल्या आगीत २० प्रवाशांचा मृत्यू झाला. बसमधील १९ जणांचा मृत्यू झाला आणि जोधपूरला नेत असताना एका प्रवाशाचा गंभीर दुखापतीमुळे मृत्यू झाला. जैसलमेर जिल्हा प्रशासनाने मृतांची ओळख पटविण्यासाठी डीएनए चाचणी सुरू केली आहे. मृतदेह इतके जळाले आहेत की त्यांची ओळख फक्त डीएनएद्वारेच शक्य होईल. मृतदेह कुटुंबियांना सोपवण्यापूर्वी डीएनए जुळवणी केली जाईल.
जिल्हाधिकारी प्रताप सिंह यांनी अधिकाऱ्यांना जखमी प्रवाशांवर त्वरित उपचार करण्याचे निर्देश दिले. बाधित कुटुंबियांना मदत करण्यासाठी हेल्पलाइन क्रमांक देखील जारी करण्यात आले आहेत.
पंतप्रधान मोदींनी भरपाईची घोषणा …
राष्ट्रपती द्रौपदी मुर्मू आणि उपराष्ट्रपती सी.पी. राधाकृष्णन यांनी अपघातातील जीवितहानीबद्दल दुःख व्यक्त केले. पंतप्रधान नरेंद्र मोदी यांनी मृतांच्या कुटुंबियांना पंतप्रधान राष्ट्रीय मदत निधी (PMNRF) मधून प्रत्येकी ₹ 2 लाखांची आर्थिक मदत जाहीर केली. जखमी प्रवाशांना ₹50,000 मिळतील असे त्यांनी सांगितले.
राजस्थानचे मुख्यमंत्री भजन लाल शर्मा यांनी तात्काळ जैसलमेरला धाव घेतली आणि जखमी प्रवाशांच्या प्रकृतीची विचारपूस केली. त्यांनी अधिकाऱ्यांना जखमी प्रवाशांवर योग्य उपचार करण्याचे आणि पीडित कुटुंबियांना सर्वतोपरी मदत करण्याचे निर्देश दिले.
मुख्यमंत्र्यांनी सोशल मीडियावर एक पोस्ट करत लिहिले की, “जैसलमेरमध्ये बसला लागलेल्या आगीची घटना अत्यंत दुःखद आहे. मृतांच्या कुटुंबियांबद्दल माझ्या संवेदना. जखमी प्रवाशांवर योग्य उपचार करण्याचे आणि प्रभावित झालेल्यांना सर्वतोपरी मदत करण्याचे निर्देश अधिकाऱ्यांना देण्यात आले आहेत.”
ರಾಜಸ್ಥಾನದ ಜೈಸಲ್ಮೇರ್ನಲ್ಲಿ ಖಾಸಗಿ ಬಸ್ಸಿಗೆ ಬೆಂಕಿ — 21 ಪ್ರಯಾಣಿಕರು ಸಾವು, 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೈಸಲ್ಮೇರ್ (ರಾಜಸ್ಥಾನ):
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆ ಯೊಂದರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ಸಿಗೆ ಏಕಾಏಕಿ ಬೆಂಕಿ ತಗುಲಿ ಕನಿಷ್ಠ 21 ಪ್ರಯಾಣಿಕರು ಜೀವಂತವಾಗಿ ದಹನಗೊಂಡಿದ್ದು, 16 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ಒಟ್ಟು 57 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜೈಸಲ್ಮೇರ್–ಜೋಧಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಬಸ್ಸು ಜೋಧಪುರದ ಕಡೆಗೆ ತೆರಳುತ್ತಿದ್ದಾಗ ಮಧ್ಯದಲ್ಲೇ ಬೆಂಕಿ ಹೊತ್ತಿಕೊಂಡಿತು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ಸಿನೊಳಗೆ ಸಿಡಿ ಮದ್ದು (ಫಟಾಕಿಗಳು) ಇಟ್ಟಿದ್ದರಿಂದ ಅದಕ್ಕೆ ಬೆಂಕಿ ತಗೂಲಿ ಸ್ಫೋಟ ವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ರಾಜ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಅವರ ಪ್ರಕಾರ: “ನನ್ನ ಜೀವನದಲ್ಲಿ ಇಂತಹ ಅಪಘಾತ ನಾನು ಎಂದಿಗೂ ನೋಡಿಲ್ಲ. ಬಸ್ಸಿನೊಳಗೆ ಭಾರೀ ಸ್ಫೋಟ ಸಂಭವಿಸಿದೆ. ಎಫ್ಎಸ್ಎಲ್ ತಂಡ ತನಿಖೆ ನಡೆಸಲಿದೆ,” ಎಂದರು.
ಘಟನೆಯ ಸ್ಥಳವನ್ನು ಸಚಿವರು ಹಾಗೂ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೆಲ ಪ್ರಯಾಣಿಕರು ಫಟಾಕಿ ಸಾಗಿಸುತ್ತಿದ್ದರೆಂಬ ಮಾಹಿತಿ ದೊರೆತಿದೆ. ಅದರಿಂದ ಬೆಂಕಿ ವೇಗವಾಗಿ ಹರಡಿದ್ದು, ಸಂಪೂರ್ಣ ಬಸ್ ಹಾಗೂ ಅದರೊಳಗಿನ ಸಾಮಾನುಗಳು ಸುಟ್ಟು ಕರಕಲಾದವು.
ಜೈಸಲ್ಮೇರ್ ಪೊಲೀಸರ ಪ್ರಕಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್ ಜೈಸಲ್ಮೇರ್ನಿಂದ ಹೊರಟಿತ್ತು. ಬಸ್ಸಿನ ಚಾಲಕನಿಗೆ ಬಸ್ಸಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬಸ್ ನಿಲ್ಲಿಸಲು ಯತ್ನಿಸಿದರೂ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿತು. ಸ್ಥಳೀಯರು ಹಾಗೂ ರಸ್ತೆಯಿಂದ ತೆರಳುತ್ತಿದ್ದವರು ತಕ್ಷಣವೇ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡರು. ಸೇನೆ ಸಿಬ್ಬಂದಿಯೂ ಸಹಾಯಕ್ಕೆ ಧಾವಿಸಿದರು.
ಅಗ್ನಿಶಾಮಕ ದಳ ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ಮೊದಲು ಜೈಸಲ್ಮೇರ್ನ ಜವಾಹರ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು, ನಂತರ ಗಂಭೀರ ಸ್ಥಿತಿಯ 16 ಮಂದಿಯನ್ನು ಜೋಧಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಡಿಎನ್ಎ ಪರೀಕ್ಷೆಯಿಂದ ಮೃತರ ಗುರುತು
ಭಾಜಪಾ ಶಾಸಕ ಪ್ರತಾಪ ಪುರಿ ಮಾಹಿತಿ ನೀಡುತ್ತ : ಬಸ್ಸಿಗೆ ಬೆಂಕಿ ತಗುಲಿದ ಪರಿಣಾಮ 20 ಪ್ರಯಾಣಿಕರು ಮೃತಪಟ್ಟಿದ್ದಾರೆ. ಸ್ಥಳದಲ್ಲೇ 19 ಮಂದಿ ಸಾವನ್ನಪ್ಪಿದ್ದು, ಒಬ್ಬರು ಜೋಧಪುರಕ್ಕೆ ಕರೆದೊಯ್ಯುವ ವೇಳೆ ಮೃತಪಟ್ಟರು.
ಮೃತದೇಹಗಳು ಸಂಪೂರ್ಣವಾಗಿ ಸುಟ್ಟುಹೋಗಿರುವುದರಿಂದ ಜಿಲ್ಲಾ ಆಡಳಿತ ಡಿಎನ್ಎ ಪರೀಕ್ಷೆ ಮೂಲಕ ಗುರುತಿನ ಪತ್ತೆ ಮಾಡುತ್ತಿದೆ. ಕುಟುಂಬಗಳಿಗೆ ಮೃತದೇಹ ಹಸ್ತಾಂತರಿಸುವ ಮೊದಲು ಡಿಎನ್ಎ ಪೂರಕತೆ ಪರಿಶೀಲಿಸಲಾಗುವುದು.
ಜಿಲ್ಲಾಧಿಕಾರಿ ಪ್ರತಾಪ ಸಿಂಗ್ ಅವರು ಅಧಿಕಾರಿಗಳಿಗೆ ಗಾಯಾಳುಗಳ ಚಿಕಿತ್ಸೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಗಾಯಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಹೆಲ್ಪ್ಲೈನ್ ಸಂಖ್ಯೆ ಪ್ರಕಟಿಸಲಾಗಿದೆ.
ಪ್ರಧಾನಿ ಮೋದಿಯಿಂದ ಪರಿಹಾರ ಘೋಷಣೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಈ ಅಪಘಾತದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಸಹಾಯ ನಿಧಿಯಿಂದ ₹2 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ ₹50,000 ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಭಜನಲಾಲ್ ಶರ್ಮಾ ತುರ್ತುವಾಗಿ ಜೈಸಲ್ಮೇರ್ಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅವರು ಅಧಿಕಾರಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಪೀಡಿತ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯ ಒದಗಿಸಲು ಸೂಚಿಸಿದರು.
ಸಿಎಂ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು:
“ಜೈಸಲ್ಮೇರ್ನಲ್ಲಿ ಬಸ್ಸಿಗೆ ಬೆಂಕಿ ತಗುಲಿದ ಘಟನೆ ಅತ್ಯಂತ ದುಃಖದಾಯಕ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳ ಚಿಕಿತ್ಸೆ ಹಾಗೂ ಪೀಡಿತರಿಗೆ ಸಹಾಯ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.” ಎಂದು ತಿಳಿಸಿದ್ದಾರೆ.

