मोहम्मद पैगंबरांच्या जन्माला 1500 वर्षे पूर्ण झाल्याच्या निमित्ताने खानापूर शहरात भव्य जलसा काढण्यात आला.
खानापूर : ईद-ए-मिलाद (ईदु नबी) निमित्त यावर्षी पैगंबर हजरत मोहम्मद पैगंबरांच्या जन्माला 1500 वर्षे पूर्ण झाल्याच्या निमित्ताने खानापूर शहरात रवीवारी 14 रोजी भव्य जलसा काढण्यात आला. विद्यानगर खानापूर येथून सुरू झालेला हा जलसा खानापूर शहरात फिरून परत विद्यानगरकडे रवाना झाला. युवा नेते व अंजुमन इस्लामचे तालुका अध्यक्ष इरफान तालिकोटी व मुस्लिम समाजातील अनेक नेते मंडळींनी यामध्ये भाग घेतला होता. इरफान तालिकोटी यांनी आपले मनोगत सांगितले व जलसा मध्ये भाग घेतलेल्या सर्वांचे आभार मानले.
सकाळपासूनच मुस्लिम बांधवांनी मोठ्या संख्येने हजेरी लावली. शहरातील मुख्य मार्गावरून शोभायात्रा काढण्यात आली. या जलशामध्ये धार्मिक घोषवाक्ये व फलकांच्या माध्यमातून पैगंबरांच्या शिकवणीचे दर्शन घडविण्यात आले. पोलिस प्रशासनाने योग्य बंदोबस्त ठेवून मिरवणूक सुरळीत पार पाडली.
ಈದ್-ಎ-ಮಿಲಾದ್ (ಈದ್-ಎ-ನಬಿ) ಪ್ರಯುಕ್ತ ಖಾನಾಪುರದಲ್ಲಿ ಶೋಭಾ ಯಾತ್ರೆಯ ಮೆರವಣಿಗೆ.
ಖಾನಾಪುರ: ಈದ್-ಎ-ಮಿಲಾದ್ (ಈದು ನಬಿ) ಪ್ರಯುಕ್ತ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜನನಕ್ಕೆ 1500 ವರ್ಷಗಳು ಪೂರ್ಣವಾದ ಹಿನ್ನೆಲೆ ಖಾನಾಪುರ ನಗರದಲ್ಲಿ ಭವ್ಯ ಜಲ್ಸಾ ಆಯೋಜಿಸಲಾಯಿತು. ವಿದ್ಯಾನಗರ ಖಾನಾಪುರದಿಂದ ಪ್ರಾರಂಭವಾದ ಈ ಜಲ್ಸಾ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಪುನಃ ವಿದ್ಯಾನಗರಕ್ಕೆ ಮರಳಿತು.
ಯುವ ನಾಯಕ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ತಾಲೂಕು ಅಧ್ಯಕ್ಷ ಇರ್ಫಾನ್ ತಾಲಿಕೋಟಿ ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು. ಜಲ್ಸಾದಲ್ಲಿ ಮಾತನಾಡಿದ ಇರ್ಫಾನ್ ತಾಲಿಕೋಟಿ ಅವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಬೆಳಗ್ಗೆಯಿಂದಲೇ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ನಗರದ ಮುಖ್ಯ ರಸ್ತೆಯ ಮೂಲಕ ಶೋಭಾಯಾತ್ರೆ ನಡೆಯಿತು. ಈ ಜಲ್ಸಾದಲ್ಲಿ ಧಾರ್ಮಿಕ ಘೋಷಣೆಗಳು ಹಾಗೂ ಫಲಕಗಳ ಮೂಲಕ ಪೈಗಂಬರ್ ಅವರ ಉಪದೇಶಗಳನ್ನು ತೋರಿಸಲಾಯಿತು. ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತು ಕೈಗೊಂಡಿದ್ದು, ಮೆರವಣಿಗೆ ಸುಸೂತ್ರವಾಗಿ ನೆರವೇರಿತು.



