खानापूरात भाजपा कडून धर्मस्थळ प्रकरणावर भव्य निषेध मोर्चा. हजारों नागरिक व महिलांची उपस्थिती
खानापूर : श्री क्षेत्र धर्मस्थळ या पवित्र तीर्थक्षेत्राविरुद्ध काही समाजकंटक व डाव्या विचारसरणीच्या लोकांकडून होत असलेल्या अपप्रचाराचा भारतीय जनता पार्टी, खानापूर मंडळाने तीव्र निषेध व्यक्त केला. यासाठी सोमवार दिनांक 25 ऑगस्ट रोजी खानापूरात हजारोंच्या उपस्थितीत भव्य निषेध मोर्चाचे आयोजन करण्यात आले.
राम मंदिर येथून मोर्चाला सुरुवात झाली. अर्बन बँक चौक, विठ्ठल मंदिर, देसाई गल्ली, बाजारपेठ व स्टेशन रोड मार्गे तहसीलदार कार्यालयावर मोर्चा काढण्यात आला. यापूर्वी इस्कॉन मंदिराजवळ अवरोळी मठाचे मठाधीश चन्नबसव देवरू स्वामी यांनी मार्गदर्शन केले. सूत्रसंचालन व स्वागत तालुका पंचायतीचे माजी सभापती व भाजपाचे जनरल सेक्रेटरी मल्लाप्पा मारीहाळ यांनी केले.
तहसीलदार कार्यालयावर आल्यानंतर उप तहसीलदार कट्टीमणी यांनी मोर्चेकऱ्यांकडून निवेदन स्वीकारले. हे निवेदन जिल्हाधिकारी व राज्य सरकारकडे पाठविण्याची ग्वाही त्यांनी दिली. यावेळी आमदार विठ्ठल हलगेकर, भाजपा जिल्हा उपाध्यक्ष प्रमोद कोचेरी, अॅड. चेतन मनेरिकर, भाजपा युवा मोर्चा जिल्हा उपाध्यक्ष पंडित ओगले, बाबुराव देसाई, धनश्री सरदेसाई, गोविंद किरमटे, कोण्णेरी अल्लोळकर, राजू कलाम यांसह अनेक नेत्यांनी भाषणे केली. यावेळी भाजपाचे जनरल सेक्रेटरी मल्लाप्पा मारिहाळ यांनी सूत्रसंचालन उत्तमरीत्या केले.
निवेदनात म्हटले आहे की, “श्री क्षेत्र धर्मस्थळ हे देशभरातील कोट्यवधी भक्तांचे श्रद्धास्थान आहे. काही कुटिल प्रवृत्तीचे लोक खोटा अपप्रचार करून हिंदू धर्माला बदनाम करण्याचा कट रचत आहेत. अफवांमागील खरे सूत्रधार व त्यांचे कटकारस्थान सरकारने उघड करावे व दोषींवर कठोर कारवाई व्हावी.”
भाजपने काँग्रेस सरकारवर हिंदूंच्या धार्मिक भावनांचा वारंवार अपमान केल्याचा आरोप केला. मुख्यमंत्री व गृहमंत्र्यांनी तातडीने जनतेची माफी मागावी, अशी मागणीही करण्यात आली. तसेच या मागण्यांसाठी संपूर्ण तालुक्यात आंदोलन उभारले जाईल, असा इशाराही भाजपने दिला.
मोर्चात मोठ्या संख्येने नागरिक व महिलांचा सहभाग होता. यावेळी भाजपाचे जनरल सेक्रेटरी गुंडू तोप्पीनकट्टी, लैला शुगर एमडी सदानंद पाटील, नगरपंचायतीचे स्थायी समितीचे चेअरमन आप्पय्या कोडोळी, राजेंद्र रायका, संजय कंची, प्रशांत लक्केबैलकर, कीशोर हेब्बाळकर, मारुती पाटील, भरमानी पाटील, प्रकाश निलजकर, सदानंद होसुरकर, जांबोटी ग्रामपंचायत उपाध्यक्ष सुनील देसाई, संजय मयेकर, पंकज कुट्रे, धनंजय देवलतकर, सुंदर कुलकर्णी, मोहन पाटील, सुनील प्रभू, राहुल अळवणी आदींसह अनेक पदाधिकारी व कार्यकर्ते उपस्थित होते.
ಧರ್ಮಸ್ಥಳ ಪ್ರಕರಣದ ಕುರಿತು ಖಾನಾಪುರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ಪ್ರತಿಭಟನೆಯಲ್ಲಿ ಸಾವಿರಾರು ನಾಗರಿಕರು ಮತ್ತು ಮಹಿಳೆಯರು ಭಾಗವಹಿಸಿದ್ದರು.
ಖಾನಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಈ ಪವಿತ್ರ ತೀರ್ಥಕ್ಷೇತ್ರದ ವಿರುದ್ಧ ಕೆಲ ಸಮಾಜಕಂಟಕರು ಹಾಗೂ ಎಡಪಂಥೀಯರಿಂದ ನಡೆಯುತ್ತಿರುವ ತಪ್ಪುಪ್ರಚಾರವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ, ಖಾನಾಪುರ ಘಟಕದ ವತಿಯಿಂದ ಭಾರೀ ಪ್ರತಿಭಟನೆ ಮೆರವಣಿಗೆ ಆಯೋಜಿಸಲಾಯಿತು. ಸೋಮವಾರ 25 August ಸಾವಿರಾರು ನಾಗರಿಕರು ಹಾಗೂ ಮಹಿಳೆಯರ ಉಪಸ್ಥಿತಿಯಲ್ಲಿ ಈ ಭವ್ಯ ಮೆರವಣಿಗೆ ನಡೆಯಿತು.
ರಾಮಮಂದಿರದಿಂದ ಮೆರವಣಿಗೆಗೆ ಚಾಲನೆ ದೊರೆತು. ಅರ್ಭನ್ ಬ್ಯಾಂಕ್ ಚೌಕ, ವಿಠ್ಠಲ ದೇವಸ್ಥಾನ, ದೇಸಾಯಿ ಗಲ್ಲಿ, ಬಜಾರಪೇಟೆ ಹಾಗೂ ಸ್ಟೇಷನ್ ರಸ್ತೆ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ಮೆರವಣಿಗೆ ಸಾಗಿತು.
ಈ ಮೊದಲು ಇಸ್ಕಾನ್ ದೇವಸ್ಥಾನ ಹತ್ತಿರ ಅವರೋಳಿ ಮಠಾಧೀಶ ಚನ್ನಬಸವ ದೇವರು ಸ್ವಾಮೀಜಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಜನರಲ್ ಸೆಕ್ರಟರಿ ಮಲ್ಲಪ್ಪ ಮರಿಹಾಳ ನಿರ್ವಹಿಸಿದರು.
ಮೆರವಣಿಗೆ ತಹಶೀಲ್ದಾರ್ ಕಚೇರಿಗೆ ತಲುಪಿದ ನಂತರ ಉಪ ತಹಶೀಲ್ದಾರ್ ಕಟ್ಟಿಮಣಿಯವರು ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜನಪ್ರಿಯ ಶಾಸಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೊಚೇರಿ, ಅಡ್ವ. ಚೇತನ ಮನೇರಿಕರ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ ಒಗಲೆ, ಬಾಬುರಾವ್ ದೇಸಾಯಿ, ಧನಶ್ರೀ ಸರದೆಸಾಯಿ, ಗೋವಿಂದ ಕಿರ್ಮಟೆ, ಕೊಣ್ಣೇರಿ ಅಲ್ಲೋಳಕರ, ರಾಜು ಕಲಾಮ್ ಮೊದಲಾದವರು ಭಾಷಣ ಮಾಡಿದರು.
ಮನವಿಯಲ್ಲಿ, “ಶ್ರೀ ಕ್ಷೇತ್ರ ಧರ್ಮಸ್ಥಳವು ದೇಶದ ಕೋಟ್ಯಾಂತರ ಭಕ್ತರ ನಂಬಿಕೆ ಕೇಂದ್ರವಾಗಿದೆ. ಕೆಲ ಕಪಟ ಮನೋಭಾವದವರು ಸುಳ್ಳು ಪ್ರಚಾರ ಮಾಡಿ ಹಿಂದೂ ಧರ್ಮದ ಹೆಸರು ಕೆಡಿಸಲು ಸಂಚು ರೂಪಿಸಿದ್ದಾರೆ. ಸರ್ಕಾರವು ಇದರ ನಿಜವಾದ ಸೂತ್ರಧಾರರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಉಲ್ಲೇಖಿಸಲಾಗಿದೆ.
ಭಾರತೀಯ ಜನತಾ ಪಾರ್ಟಿಯು ಕಾಂಗ್ರೆಸ್ ಸರ್ಕಾರದ ಮೇಲೆ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಹೆಚ್ಚಾಗಿ ಅವಮಾನ ಮಾಡುತ್ತಿರುವುದಾಗಿ ಆರೋಪಿಸಿ, ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ತಕ್ಷಣ ಸಾರ್ವಜನಿಕ ಕ್ಷಮೆ ಕೋರಬೇಕೂ ಎಂದು ಆಗ್ರಹಿಸಿತು. ಬೇಡಿಕೆಗಳಿಗಾಗಿ ತಾಲ್ಲೂಕಿನಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಜನರಲ್ ಸೆಕ್ರಟರಿ ಗುಂಡು ಟೊಪ್ಪಿನಕಟ್ಟಿ, ಲೈಲಾ ಶುಗರ್ ಎಂ.ಡಿ. ಸದಾನಂದ ಪಾಟೀಲ್, ನಗರಪಂಚಾಯಿತಿ ಸಮಿತಿ ಅಧ್ಯಕ್ಷ ಅಪ್ಪಯ್ಯ ಕೊಡೋಳಿ, ರಾಜೇಂದ್ರ ರೈಕಾ, ಸಂಜಯ ಕಂಚಿ, ಪ್ರಶಾಂತ್ ಲಕ್ಕೇಬೈಲ್ಕರ್, ಕಿಶೋರ್ ಹೆಬ್ಬಾಳಕರ, ಮಾರುತಿ ಪಾಟೀಲ್, ಭರಮಣಿ ಪಾಟೀಲ್, ಪ್ರಕಾಶ ನಿಲಜ್ಕರ್, ಸದಾನಂದ ಹೊಸೂರಕರ, ಜಾಂಬೋಟಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸುನಿಲ್ ದೇಸಾಯಿ, ಸಂಜಯ ಮಯೇಕರ್, ಪಂಕಜ್ ಕುಟ್ರೆ, ಧನಂಜಯ ದೇವಲತ್ಕರ್, ಸುಂದರ ಕುಲಕರ್ಣಿ, ಮೋಹನ್ ಪಾಟೀಲ್, ಸುನಿಲ್ ಪ್ರಭು, ರಾಹುಲ್ ಅಳವಣಿ ಸೇರಿದಂತೆ ಅನೇಕ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.



