रक्षाबंधन सणानिमित्त भाजप महिला मोर्चाकडून पोलीस व केएसआरटीसी कर्मचाऱ्यांना राखी बांधून सन्मान
खानापूर (ता. 9 सप्टेंबर 2025) – भारतीय जनता पार्टी महिला मोर्चा, खानापूर तालुका यांच्या वतीने तालुका अध्यक्षा सुनिता पाटील यांच्या नेतृत्वाखाली रक्षाबंधन सण उत्साहात साजरा करण्यात आला. या उपक्रमाअंतर्गत खानापूर पोलीस ठाणे व खानापूर केएसआरटीसी बस डेपो येथे जाऊन पोलीस अधिकारी, पोलीस कर्मचारी तसेच बस डेपो अधिकारी व कर्मचाऱ्यांना राखी बांधून त्यांच्या सेवाभावाचा सन्मान करण्यात आला.

सकाळी प्रथम खानापूर पोलीस स्थानकाला भेट देऊन पीआय एल. एच. गोवंडी, पीएसआय एम. बी. बिरादार, एएसआय तसेच सर्व पोलीस कर्मचाऱ्यांना राखी बांधण्यात आली. त्यानंतर केएसआरटीसी बस डेपो येथे डेपो मॅनेजर, अधिकारी व कर्मचारी यांना महिला मोर्चाच्या कार्यकर्त्यांनी राखी बांधून शुभेच्छा दिल्या.
या कार्यक्रमाला खानापूर तालुक्याचे आमदार विठ्ठल हलगेकर, भाजपा जिल्हा उपाध्यक्ष प्रमोद कोचेरी, तालुका पंचायतीचे माजी सभापती मल्लाप्पा मारीहाळ, भाजपाचे जनरल सेक्रेटरी गुंडू तोप्पीनकट्टी, ॲड. चेतन मणेरीकर यांच्यासह महिला मोर्चाच्या पदाधिकारी व कार्यकर्त्या मोठ्या संख्येने उपस्थित होत्या.
कार्यक्रमादरम्यान आमदार विठ्ठल हलगेकर, मल्लाप्पा मारीहाळ, प्रमोद कोचेरी व सुनिता पाटील यांनी पोलीस व केएसआरटीसी कर्मचाऱ्यांच्या निस्वार्थ सेवेसाठी कृतज्ञता व्यक्त केली व रक्षाबंधन सणाच्या हार्दिक शुभेच्छा दिल्या.
या वेळी सानिया पाटील, शितल लोकोळकर, राणी पाटील, संगीता पाटील, कस्तुरा गावडा, रेखा पाटील, शीतल लोहार, खानापूर पीकेपीएस संचालक बाळाराम पाटील, भाजपा युवा नेते किशोर हेब्बाळकर यांची उपस्थिती लक्षणीय होती.
ರಕ್ಷಾಬಂಧನ ಹಬ್ಬದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪೊಲೀಸ್ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿಗೆ ರಾಖಿ ಕಟ್ಟಿ ಗೌರವ ನೀಡಿದರು.
ಖಾನಾಪುರ (ತಾ. 9 ಸೆಪ್ಟೆಂಬರ್ 2025) – ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ, ಖಾನಾಪುರ ತಾಲೂಕು ಘಟಕದ ವತಿಯಿಂದ ತಾಲೂಕು ಅಧ್ಯಕ್ಷೆ ಸುನಿತಾ ಪಾಟೀಲ ಅವರ ನೇತೃತ್ವದಲ್ಲಿ ರಕ್ಷಾಬಂಧನ ಹಬ್ಬವನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಖಾನಾಪುರ ಪೊಲೀಸ್ ಠಾಣೆ ಹಾಗೂ ಖಾನಾಪುರ ಕೆಎಸ್ಆರ್ಟಿಸಿ ಬಸ್ ಡೆಪೋಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿ ಹಾಗೂ ಬಸ್ ಡೆಪೋ ಅಧಿಕಾರಿ-ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಅವರ ಸೇವಾಭಾವಕ್ಕೆ ಗೌರವ ಸಲ್ಲಿಸಿದರು.
ಬೆಳಿಗ್ಗೆ ಮೊದಲು ಖಾನಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಿಐ ಎಲ್. ಎಚ್. ಗೋವಂಡಿ, ಪಿಎಸ್ಐ ಎಂ. ಬಿ. ಬಿರಾದಾರ, ಎಎಸ್ಐ ಹಾಗೂ ಎಲ್ಲ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಲಾಯಿತು. ಬಳಿಕ ಕೆಎಸ್ಆರ್ಟಿಸಿ ಬಸ್ ಡೆಪೋಗೆ ತೆರಳಿ, ಡೆಪೋ ಮ್ಯಾನೇಜರ್, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ರಾಖಿ ಕಟ್ಟಿ ಶುಭಾಶಯ ಕೋರಿದರು.
ಈ ಕಾರ್ಯಕ್ರಮಕ್ಕೆ ಖಾನಾಪುರ ಶಾಸಕ ವಿಠ್ಠಲ್ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ, ತಾಲೂಕು ಪಂಚಾಯತ್ ಮಾಜಿ ಸಭಾಪತಿ ಮಲ್ಲಪ್ಪಾ ಮಾರಿಹಾಳ, ಬಿಜೆಪಿ ಜನರಲ್ ಸೆಕ್ರೆಟರಿ ಗುಂಡು ತೊಪ್ಪಿನಕಟ್ಟಿ, ಅಡ್ವೊ. ಚೇತನ್ ಮನೇರಿಕರ್ ಸೇರಿದಂತೆ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಕಾರ್ಯಕ್ರಮದ ವೇಳೆ ಶಾಸಕ ವಿಠ್ಠಲ್ ಹಲಗೇಕರ, ಮಲ್ಲಪ್ಪ ಮಾರಿ ಹಾಳ, ಪ್ರಣೋದ್ ಕೊಚೇರಿ ಹಾಗೂ ಸುನಿತಾ ಪಾಟೀಲ ಅವರು ಪೊಲೀಸ್ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿಗಳ ನಿಸ್ವಾರ್ಥ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ರಕ್ಷಾಬಂಧನ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಾನೀಯಾ ಪಾಟೀಲ, ಶಿತಲ್ ಲೋಕೊಳ್ಕರ್, ರಾಣಿ ಪಾಟೀಲ, ಸಂಗೀತಾ ಪಾಟೀಲ, ಕಸ್ತೂರಾ ಗಾವಡ, ರೇಖಾ ಪಾಟೀಲ, ಶಿತಲ್ ಲೋಹಾರ್, ಖಾನಾಪುರ ಪಿಕೆಪಿಎಸ್ ನಿರ್ದೇಶಕ ಬಾಲರಾಮ ಪಾಟೀಲ, ಬಿಜೆಪಿ ಯುವ ನಾಯಕ ಕಿಶೋರ್ ಹೆಬ್ಬಾಳ್ಕರ್ ಹಾಜರಿದ್ದರು.

