
सोशल मीडियावर फोटो व्हायरल केल्याने तरुणीची धरणात उडी टाकून आत्महत्या.
कलबुर्गी ; सोशल मीडियावर आपल्यासोबतचे फोटो व्हायरल केल्यामुळे एका तरुणीने बेण्णेतोरा धरणाच्या पाण्यात उडी मारून आत्महत्या केल्याची घटना कलबुर्गी जिल्ह्यातील कमलापूर तालुक्यातील कुरिकोटी गावाजवळ घडली आहे.
कमलापूर तालुक्यातील भुसनगी गावची २२ वर्षीय साक्षी उप्पार या तरुणीने बेण्णेतोरा धरणाच्या पाण्यात उडी मारून आत्महत्या केली आहे. अभिषेक माळगे नावाच्या तरुणाने तिला त्रास दिला होता असा आरोप आहे. अभिषेकने साक्षीसोबतचे फोटो सोशल मीडियावर व्हायरल केले होते, त्यामुळेच तिने आत्महत्या केली असल्याचे बोलले जात आहे.
तरुणीच्या मृतदेहासाठी अग्निशमन दलाचे जवान कुरिकोटी धरणात कसून शोध घेत आहेत. ही घटना महागाव पोलिस ठाण्याच्या हद्दीत घडली आहे.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್; ಯುವತಿ ಡ್ಯಾಂಗೆ ಹಾರಿ ಆತ್ಮಹತ್ಯೆ
ಕಲಬುರಗಿ : ಸೋಶಿಯಲ್ ಮೀಡಿಯಾದಲ್ಲಿ ತನ್ನ ಜೊತೆಗಿನ ಪೋಟೋ ಹರಿಬಿಟ್ಟ ಕಾರಣಕ್ಕೆ ಬೆಣ್ಣೆತೋರಾ ಡ್ಯಾಂ ಹಿನ್ನಿರಿಗೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಬಳಿ ನಡೆದಿದೆ.
ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಯುವತಿ ಸಾಕ್ಷಿ ಉಪ್ಪಾರ್ (22) ಬೆಣ್ಣೆತೋರಾ ಹಿನ್ನಿರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಅಭಿಷೇಕ ಮಾಳಗೆ ಎಂಬ ಯುವಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಸಾಕ್ಷಿ ಜತೆಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ವೈರಲ್ ಮಾಡಿದ್ದ ಎನ್ನಲಾಗಿದ್ದು, ಅದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.
ಯುವತಿಯ ಮೃತದೇಹಕ್ಕಾಗಿ ಅಗ್ನಿಶಾಮಕ ದಳವು ಕುರಿಕೋಟ ಡ್ಯಾಂನಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಮಹಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
