शांतिनिकेतन शाळेचा १५ वा स्थापना दिवस उत्साहात साजरा; शाळेला आयएसओ मानांकन सर्टिफिकेट प्राप्त.
खानापूर (ता.14): श्री महालक्ष्मी ग्रुप तोपिनकट्टी संचलित शिक्षण संस्थेची शांतिनिकेतन पब्लिक स्कूल, खानापूर हिचा 15 वा स्थापना दिवस मंगळवारी (ता.14) शाळेच्या सभागृहात उत्साहात साजरा करण्यात आला.
कार्यक्रमाच्या अध्यक्षस्थानी शाळेचे संस्थापक तथा आमदार विठ्ठल हलगेकर होते. या प्रसंगी चांगली कामगिरी करणाऱ्या शिक्षक वर्ग, कर्मचारी वर्ग आणि चालकांचा सत्कार करण्यात आला. कार्यक्रमाच्या प्रारंभी शाळेच्या पीआरओ मनिषा हलगेकर-भोसले यांनी पाहुण्यांचे स्वागत करून प्रास्ताविक केले.
यावेळी निवृत्त लेक्चरर (सरकारी टीचर्स कॉलेज) एन.के. काळे यांनी आपल्या भाषणात सांगितले की, “धाडस, चिकाटी आणि शिस्तबद्ध कार्यपद्धतीमुळे शाळेला आज नावलौकिक प्राप्त झाला आहे. चांगले शिक्षक शाळा घडवतात, आणि त्याचे उत्तम उदाहरण म्हणजे शांतिनिकेतन शाळा आहे. तालुक्यात अशा प्रकारची शाळा नव्हती; भविष्याचा विचार करून तिची निर्मिती करण्यात आली असून आज ती आंतरराष्ट्रीय स्तरावरील शाळेसारखी विकसित झाली आहे.”
आमदार विठ्ठल हलगेकर म्हणाले, “स्थापना दिवस हा केलेल्या कार्याचा आढावा घेण्याचा आणि नव्या दिशेने वाटचाल करण्याचा दिवस असतो. विद्यार्थ्यांना अधिक दर्जेदार शिक्षण देण्यासाठी सतत सुधारणा करण्याचे आमचे प्रयत्न सुरू आहेत. शांतिनिकेतन शाळा आज तालुक्यातील ‘रोल मॉडेल’ शाळा ठरली आहे. शाळेला आयएसओ मानांकित सर्टिफिकेट मिळाले असून, ही मानांकन प्राप्त करणारी तालुक्यातील पहिली शाळा आहे.”
कार्यक्रमास संस्थेचे संचालक बंडू एल. मजुकर, राजेंद्र एस. पाटील, महादेव जी. बांदिवडेकर, प्राचार्य स्वातीकमल वाळवे, विठ्ठल करंबळकर, यलाप्पा तिरवीर, चांगप्पा निलजकर, राजाराम होनगेकर, महादेव पाटील, बाळगौंड पाटील यांच्यासह संचालक मंडळ, शिक्षकवर्ग आणि विद्यार्थी मोठ्या संख्येने उपस्थित होते.
ಶಾಂತಿನಿಕೇತನ ಶಾಲೆಯ 15ನೇ ಸಂಸ್ಥಾಪನಾ ದಿವಸ ಉತ್ಸಾಹದಿಂದ ಆಚರಣೆ; ಶಾಲೆಗೆ ISO ಮಾನ್ಯತೆ ಪ್ರಮಾಣಪತ್ರ ದೊರೆತ ಗೌರವ.
ಖಾನಾಪುರ (ತಾ.14): ಶ್ರೀ ಮಹಾಲಕ್ಷ್ಮಿ ಗ್ರೂಪ್, ತೋಪಿನಕಟ್ಟಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಂತಿನಿಕೇತನ ಪಬ್ಲಿಕ್ ಶಾಲೆ, ಖಾನಾಪುರ ಸಂಸ್ಥೆಯು ತನ್ನ 15ನೇ ಸಂಸ್ಥಾಪನ ದಿನವನ್ನು ಮಂಗಳವಾರ (ತಾ.14) ಶಾಲೆಯ ಸಭಾಂಗಣದಲ್ಲಿ ಉತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕರು ಹಾಗೂ ಜನ ಪ್ರಿಯ ಶಾಸಕರಾದ ವಿಠ್ಠಲ ಹಲಗೇಕರ ವಹಿಸಿದ್ದರು. ಈ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದ ಶಿಕ್ಷಕ ವರ್ಗ, ಸಿಬ್ಬಂದಿ ಹಾಗೂ ಚಾಲಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ಪಿಆರ್ಒ ಮನೀಷಾ ಹಲಗೇಕರ-ಭೋಸಲೆ ಅವರು ಅತಿಥಿಗಳಿಗೆ ಸ್ವಾಗತ ಕೋರಿ ಪ್ರಸ್ತಾವಿಕ ಭಾಷಣ ಮಾಡಿದರು.
ನಿವೃತ್ತ ಉಪನ್ಯಾಸಕರಾದ (ಗವರ್ಮೆಂಟ್ ಟೀಚರ್ಸ್ ಕಾಲೇಜ್) ಎನ್.ಕೆ. ಕಾಳೆ ಮಾತನಾಡಿ — “ಧೈರ್ಯ, ಶಿಸ್ತು ಮತ್ತು ನಿಷ್ಠೆ ಇವುಗಳ ಶಕ್ತಿಯೇ ಈ ಶಾಲೆಯ ಯಶಸ್ಸಿನ ಮೂಲವಾಗಿದೆ. ಉತ್ತಮ ಶಿಕ್ಷಕರು ಶಾಲೆಯನ್ನು ರೂಪಿಸುತ್ತಾರೆ, ಮತ್ತು ಶಾಂತಿನಿಕೇತನ ಶಾಲೆ ಅದರ ಒಂದು ಉಜ್ವಲ ಉದಾಹರಣೆ. ಈ ರೀತಿಯ ಶಾಲೆ ತಾಲ್ಲೂಕಿನಲ್ಲಿ ಮೊದಲು ಇರಲಿಲ್ಲ; ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇದರ ಸ್ಥಾಪನೆ ನಡೆಯಿತು ಮತ್ತು ಇಂದು ಅದು ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿದೆ,” ಎಂದರು.
ಶಾಸಕ ವಿಠ್ಠಲ ಹಲಗೇಕರ ತಮ್ಮ ಭಾಷಣದಲ್ಲಿ — “ಸ್ಥಾಪನಾ ದಿನವು ಮಾಡಿದ ಕಾರ್ಯಗಳ ಮೌಲ್ಯಮಾಪನ ಮಾಡುವ ಮತ್ತು ಹೊಸ ದಿಕ್ಕಿನಲ್ಲಿ ಪ್ರಗತಿಯತ್ತ ಹೆಜ್ಜೆ ಇಡುವ ದಿನವಾಗಿದೆ. ವಿದ್ಯಾರ್ಥಿಗಳಿಗೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಪ್ರಯತ್ನಗಳು ನಿರಂತರವಾಗಿವೆ. ಇಂದು ಶಾಂತಿನಿಕೇತನ ಶಾಲೆ ತಾಲ್ಲೂಕಿನ ‘ಮಾದರಿ ಶಾಲೆ’ ಯಾಗಿದೆ. ಶಾಲೆಗೆ ISO ಪ್ರಮಾಣಪತ್ರ ದೊರೆತಿದ್ದು, ಈ ಗೌರವ ಪಡೆಯುವ ತಾಲ್ಲೂಕಿನ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.” ಎಂದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು ಬಂಡೂ ಎಲ್. ಮಜುಕರ, ರಾಜೇಂದ್ರ ಎಸ್. ಪಾಟೀಲ, ಮಹಾದೇವ ಜಿ. ಬಾಂದಿವಾಡೆಕರ, ಪ್ರಾಚಾರ್ಯೆ ಸ್ವಾತಿಕಮಲ್ ವಾಳವೆ, ವಿಠ್ಠಲ ಕರಂಬಳಕರ, ಯಲಪ್ಪ ತಿರವೀರ್, ಚಾಂಗಪ್ಪ ನಿಲಜ್ಕರ್, ರಾಜಾರಾಮ ಹೊನಗೇಕರ್, ಮಹಾದೇವ ಪಾಟೀಲ, ಬಾಳಗೌಂಡ ಪಾಟೀಲ ಸೇರಿದಂತೆ ನಿರ್ದೇಶಕ ಮಂಡಳಿ, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

