‘डिजिटल अरेस्ट’ फसवणुकीचा धक्कादायक प्रकार; बेळगावातील व्यावसायिकाला 15 कोटींचा गंडा.
बेळगाव : शहरातील एका ज्येष्ठ व्यावसायिकाला ‘डिजिटल अरेस्ट’ या नावाखाली सायबर गुन्हेगारांनी तब्बल 15 कोटी रुपयांची फसवणूक केल्याचा गंभीर प्रकार उघडकीस आला आहे. या प्रकरणी बेळगाव शहरातील सायबर, आर्थिक व अंमली पदार्थ (सीईएन) पोलीस ठाण्यात गुन्हा नोंदवण्यात आला असून, पोलीस यंत्रणा तपासात गुंतली आहे. प्राथमिक चौकशीत पोलिसांनी संशयितांशी संबंधित काही बँक खाती गोठवली आहेत. यामध्ये सुमारे 90 लाख रुपये असलेले एक खातेही समाविष्ट असून, ही रक्कम फसवणुकीतील असल्याचा अंदाज व्यक्त केला जात आहे.

आरोपींचा माग काढण्यासाठी पोलीस आयुक्त भूषण गुलाबराव बोरसे यांच्या मार्गदर्शनाखाली विशेष पथक स्थापन करण्यात आले आहे.
तपासातून समोर आलेल्या माहितीनुसार, पीडित व्यावसायिकाशी स्वतःला सरकारी अधिकारी म्हणून भासवणाऱ्या व्यक्तींनी व्हिडिओ कॉलद्वारे संपर्क साधला. त्याचे बँक खाते मनी लाँड्रिंग प्रकरणात अडकले असल्याचे खोटे सांगून त्याला कायदेशीर कारवाईची भीती दाखवण्यात आली. त्यानंतर ‘तपास’ आणि ‘सत्यापन’ या नावाखाली विविध खात्यांमध्ये पैसे जमा करण्यास भाग पाडण्यात आले.
फसवणूक करणाऱ्यांनी प्रक्रिया पूर्ण झाल्यानंतर रक्कम परत मिळेल, असे आश्वासन दिल्याने आणि भीतीच्या वातावरणात अडकलेल्या व्यावसायिकाने अनेक व्यवहार करत मोठी रक्कम हस्तांतरित केली. शेवटी त्याला तब्बल 15 कोटी रुपयांचा फटका बसला.
नागरिकांसाठी सूचना :…
अशा प्रकारच्या ‘डिजिटल अरेस्ट’ कॉल्सपासून सावध राहण्याचे आवाहन पोलिसांनी केले आहे. कोणताही सरकारी अधिकारी तपासासाठी पैसे दुसऱ्या खात्यात जमा करण्यास सांगत नाही. अशा वेळी घाबरून न जाता तत्काळ कॉल कट करून अधिकृत क्रमांकावरून बँक किंवा पोलिसांशी संपर्क साधावा.
वैयक्तिक माहिती, ओटीपी किंवा बँक तपशील कोणालाही देऊ नयेत. ‘डिजिटल अरेस्ट’ ही कोणतीही अधिकृत कायदेशीर प्रक्रिया नसल्याचे स्पष्ट करण्यात आले आहे.
फसवणूक झाल्यास तातडीने 1930 या राष्ट्रीय सायबर हेल्पलाइनवर संपर्क साधावा किंवा cybercrime.gov.in या संकेतस्थळावर तक्रार नोंदवावी. वेळेत कारवाई केल्यास पैसे परत मिळण्याची शक्यता वाढते, असेही पोलिसांनी नमूद केले आहे.
अशा प्रकारच्या सायबर गुन्ह्यांत वाढ होत असल्याने नागरिकांनी अधिक सतर्क राहण्याची गरज असल्याचेही पोलीस प्रशासनाने अधोरेखित केले आहे.
‘ಡಿಜಿಟಲ್ ಅರೆಸ್ಟ್’ ಮೋಸ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಘಟನೆ; ಬೆಳಗಾವಿಯ ಉದ್ಯಮಿಗೆ 15 ಕೋಟಿ ರೂ. ವಂಚನೆ.
ಬೆಳಗಾವಿ : ನಗರದಲ್ಲಿನ ಹಿರಿಯ ಉದ್ಯಮಿಯನ್ನು ‘ಡಿಜಿಟಲ್ ಅರೆಸ್ಟ್’ ಎಂಬ ಹೆಸರಿನಲ್ಲಿ ಸೈಬರ್ ಅಪರಾಧಿಗಳು ಭಾರಿ ಪ್ರಮಾಣದಲ್ಲಿ ಮೋಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಉದ್ಯಮಿಯಿಂದ ಸುಮಾರು 15 ಕೋಟಿ ರೂಪಾಯಿ ವಂಚಿಸಲಾಗಿದೆ. ಈ ಕುರಿತು ಬೆಳಗಾವಿ ನಗರದ ಸೈಬರ್, ಆರ್ಥಿಕ ಹಾಗೂ ಮಾದಕ ವಸ್ತುಗಳ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳೊಂದಿಗೆ ಸಂಬಂಧ ಹೊಂದಿರುವ ಕೆಲವು ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಈ ಖಾತೆಗಳಲ್ಲಿ ಸುಮಾರು 90 ಲಕ್ಷ ರೂಪಾಯಿ ಇರುವ ಒಂದು ಖಾತೆಯೂ ಸೇರಿದ್ದು, ಈ ಹಣವು ವಂಚನೆಯೊಂದಿಗಿನ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರ್ಸೆ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ತನಿಖೆಯ ಪ್ರಕಾರ, ಪೀಡಿತ ಉದ್ಯಮಿಯೊಂದಿಗೆ ತಮ್ಮನ್ನು ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡ ವ್ಯಕ್ತಿಗಳು ವಿಡಿಯೋ ಕಾಲ್ ಮೂಲಕ ಸಂಪರ್ಕ ಸಾಧಿಸಿದ್ದರು. ಅವರ ಬ್ಯಾಂಕ್ ಖಾತೆ ಮಣಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿದೆ ಎಂದು ಸುಳ್ಳು ಹೇಳಿ, ಕಾನೂನು ಕ್ರಮದ ಭೀತಿಯನ್ನು ಉಂಟುಮಾಡಿದರು.
ನಂತರ ‘ತನಿಖೆ’ ಮತ್ತು ‘ಪರಿಶೀಲನೆ’ ಎಂಬ ಹೆಸರಿನಲ್ಲಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಲು ಉದ್ಯಮಿಯನ್ನು ಒತ್ತಾಯಿಸಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಣವನ್ನು ಹಿಂತಿರುಗಿಸಲಾಗುವುದು ಎಂದು ನಂಬಿಕೆ ಮೂಡಿಸಿದ್ದರಿಂದ, ಭಯಭೀತನಾದ ಉದ್ಯಮಿ ಅನೇಕ ವ್ಯವಹಾರಗಳ ಮೂಲಕ ದೊಡ್ಡ ಮೊತ್ತವನ್ನು ವರ್ಗಾಯಿಸಿದರು. ಕೊನೆಯಲ್ಲಿ ಅವರಿಗೆ ಸುಮಾರು 15 ಕೋಟಿ ರೂಪಾಯಿ ನಷ್ಟ ಉಂಟಾಯಿತು.
ನಾಗರಿಕರಿಗೆ ಸೂಚನೆ :….
ಇಂತಹ ‘ಡಿಜಿಟಲ್ ಅರೆಸ್ಟ್’ ಕರೆಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ಯಾವುದೇ ಸರ್ಕಾರಿ ಅಧಿಕಾರಿ ತನಿಖೆಗಾಗಿ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲು ಹೇಳುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಭಯಪಡದೆ ತಕ್ಷಣ ಕರೆ ಕಟ್ ಮಾಡಿ, ಅಧಿಕೃತ ಸಂಖ್ಯೆಗಳ ಮೂಲಕ ಬ್ಯಾಂಕ್ ಅಥವಾ ಪೊಲೀಸರನ್ನು ಸಂಪರ್ಕಿಸಬೇಕು.
ವೈಯಕ್ತಿಕ ಮಾಹಿತಿ, OTP ಅಥವಾ ಬ್ಯಾಂಕ್ ವಿವರಗಳನ್ನು ಯಾರಿಗೂ ನೀಡಬಾರದು. ‘ಡಿಜಿಟಲ್ ಅರೆಸ್ಟ್’ ಎಂಬುದು ಯಾವುದೇ ಕಾನೂನುಬದ್ಧ ಪ್ರಕ್ರಿಯೆಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಂಚನೆಗೆ ಒಳಗಾದರೆ ತಕ್ಷಣ 1930 ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು ಅಥವಾ cybercrime.gov.in ವೆಬ್ಸೈಟ್ನಲ್ಲಿ ದೂರು ದಾಖಲಿಸಬೇಕು. ಸಮಯಕ್ಕೆ ಕ್ರಮ ಕೈಗೊಂಡರೆ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚ್ಚುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ನಾಗರಿಕರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ಇಲಾಖೆ ಒತ್ತಿಹೇಳಿದೆ.



