बिडी येथे 22 कोटींच्या डॉ. बाबासाहेब आंबेडकर विद्यार्थी वसतिगृहाचे भूमिपूजन ; आमदार विठ्ठलराव हलगेकर यांच्या प्रयत्नांना यश; गरीब व मागासवर्गीय विद्यार्थ्यांसाठी भव्य स्वतंत्र वसतिगृहाची उभारणी.
खानापूर : प्रतिनिधी
कर्नाटक सरकारच्या समाज कल्याण विभाग तथा कर्नाटक वस्ती शिक्षण संस्था, बंगळुरू यांच्या संयुक्त विद्यमाने खानापूर तालुक्यातील बिडी येथे तब्बल 22 कोटी रुपये खर्चाच्या डॉ. बाबासाहेब आंबेडकर विद्यार्थी वसतिगृहाच्या इमारतीचा भूमिपूजन सोहळा आज उत्साहात पार पडला. खानापूरचे आमदार श्री. विठ्ठलराव हलगेकर यांच्या शुभहस्ते विधिवत पूजा व भूमिपूजन करून या महत्त्वाकांक्षी प्रकल्पाचा शुभारंभ करण्यात आला.
या कार्यक्रमाला बिडी ग्रामपंचायतीचे आधिकारी, परिसरातील ग्रामस्थ, शाळेचे मुख्याध्यापक, शिक्षक, विद्यार्थी तसेच विविध क्षेत्रातील मान्यवरांची उपस्थिती होती.

यावेळी बोलताना आमदार विठ्ठलराव हलगेकर म्हणाले की, पूर्वी या शाळेचे काम भाड्याच्या इमारतीत सुरू होते. जागेची कमतरता आणि विविध अडचणींमुळे विद्यार्थी व शिक्षकांना अनेक समस्यांना सामोरे जावे लागत होते. मात्र, आता 22 कोटी रुपयांच्या निधीतून भव्य व स्वतंत्र इमारत उभारण्यात येणार असून, विद्यार्थ्यांना अधिक चांगल्या शैक्षणिक सुविधा उपलब्ध होणार आहेत.
या प्रकल्पामुळे बिडी गावासह परिसरातील विद्यार्थ्यांना मोठा लाभ होणार असून, शिक्षणाच्या माध्यमातून गरीब, गरजू व मागासवर्गीय विद्यार्थ्यांच्या विकासाला चालना मिळेल, असा विश्वास त्यांनी व्यक्त केला. बिडी गावासाठी तसेच संपूर्ण खानापूर तालुक्याच्या शैक्षणिक क्षेत्रासाठी हा प्रकल्प महत्त्वाचा टप्पा ठरणार असल्याचेही त्यांनी सांगितले.
सरकारच्या माध्यमातून विद्यार्थ्यांसाठी करण्यात येत असलेल्या या महत्त्वपूर्ण कामाचे स्वागत करताना, शैक्षणिक पायाभूत सुविधा मजबूत झाल्याने ग्रामीण भागातील विद्यार्थ्यांना पुढील शिक्षणासाठी अधिक चांगले वातावरण मिळेल, असे उपस्थितांनी नमूद केले.
भूमिपूजन कार्यक्रमास बैलूर गावचे श्री. लक्ष्मण झांझरे, भाजपा नेते श्री. नारायण गुरव, स्थानिक भाजपा नेते श्री. सुनील मडीमणी, श्री. वसंत नाईक, स्थानिक नेते श्री. अशोक चलवादी यांच्यासह बिडी व परिसरातील ग्रामस्थ, कार्यकर्ते आणि नागरिक मोठ्या संख्येने उपस्थित होते.
22 कोटींच्या या प्रकल्पामुळे बिडी परिसरातील विद्यार्थ्यांसाठी निवास, शिक्षण आणि आवश्यक शैक्षणिक वातावरण उपलब्ध होण्यास मदत होणार असून, ग्रामीण भागातील विद्यार्थ्यांच्या शैक्षणिक प्रगतीसाठी हा प्रकल्प महत्त्वपूर्ण ठरणार आहे.
ಬಿಡಿಯಲ್ಲಿ 22 ಕೋಟಿ ರೂಪಾಯಿ ವೆಚ್ಚದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿದ್ಯಾರ್ಥಿ ವಸತಿ ನಿಲಯಕ್ಕೆ ಭೂಮಿಪೂಜೆ; ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಪ್ರಯತ್ನಕ್ಕೆ ಯಶಸ್ಸು; ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಭವ್ಯ ಸ್ವತಂತ್ರ ವಸತಿ ನಿಲಯ ನಿರ್ಮಾಣ.
ಖಾನಾಪುರ : ಪ್ರತಿನಿಧಿ
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಖಾನಾಪುರ ತಾಲೂಕಿನ ಬಿಡಿ ಗ್ರಾಮದಲ್ಲಿ ಒಟ್ಟು 22 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡದ ಭೂಮಿಪೂಜೆ ಸಮಾರಂಭ ಇಂದು ಸಂಭ್ರಮದಿಂದ ನೆರವೇರಿತು. ಖಾನಾಪುರ ತಾಲೂಕಿನ ಜನ ಪ್ರಿಯ ಶಾಸಕ ಶ್ರೀ ವಿಠ್ಠಲರಾವ್ ಹಲಗೇಕರ್ ಅವರ ಶುಭಹಸ್ತದಿಂದ ವಿಧಿವತ್ತಾಗಿ ಪೂಜೆ ಸಲ್ಲಿಸಿ ಭೂಮಿಪೂಜೆ ನೆರವೇರಿಸುವ ಮೂಲಕ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಡಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು, ಹಿಂದೆ ಈ ಶಾಲೆಯ ಕಾರ್ಯಚಟುವಟಿಕೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸ್ಥಳಾವಕಾಶದ ಕೊರತೆ ಹಾಗೂ ವಿವಿಧ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದರು. ಆದರೆ ಇದೀಗ 22 ಕೋಟಿ ರೂಪಾಯಿ ಅನುದಾನದಲ್ಲಿ ಭವ್ಯ ಹಾಗೂ ಸ್ವತಂತ್ರ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಿದರು.
ಈ ಯೋಜನೆಯಿಂದ ಬಿಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದ್ದು, ಶಿಕ್ಷಣದ ಮೂಲಕ ಬಡ, ಅಗತ್ಯವಿರುವ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಬಿಡಿ ಗ್ರಾಮ ಮಾತ್ರವಲ್ಲದೆ ಇಡೀ ಖಾನಾಪುರ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಈ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅವರು ಹೇಳಿದರು.
ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕೈಗೊಳ್ಳಲಾಗುತ್ತಿರುವ ಈ ಮಹತ್ವದ ಕಾಮಗಾರಿಯನ್ನು ಸ್ವಾಗತಿಸಿದ ಸ್ಥಳೀಯರು, ಶೈಕ್ಷಣಿಕ ಮೂಲಸೌಕರ್ಯಗಳು ಬಲಪಡಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಪಡೆಯಲು ಉತ್ತಮ ವಾತಾವರಣ ಕಲ್ಪಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಭೂಮಿಪೂಜೆ ಕಾರ್ಯಕ್ರಮದಲ್ಲಿ ಬೈಲೂರು ಗ್ರಾಮದ ಶ್ರೀ ಲಕ್ಷ್ಮಣ ಝಾಂಝರೆ, ಬಿಜೆಪಿ ಮುಖಂಡ ಶ್ರೀ ನಾರಾಯಣ ಗುರುವ್, ಸ್ಥಳೀಯ ಬಿಜೆಪಿ ಮುಖಂಡ ಶ್ರೀ ಸುನಿಲ್ ಮಡ್ಡಿಮಣಿ, ಶ್ರೀ ವಸಂತ ನಾಯಕ್, ಸ್ಥಳೀಯ ಮುಖಂಡ ಶ್ರೀ ಅಶೋಕ ಚಲವಾದಿ ಸೇರಿದಂತೆ ಬಿಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಕಾರ್ಯಕರ್ತರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
22 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ ಬಿಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ವಸತಿ, ಶಿಕ್ಷಣ ಹಾಗೂ ಅಗತ್ಯ ಶೈಕ್ಷಣಿಕ ವಾತಾವರಣ ಕಲ್ಪಿಸಲು ಸಹಕಾರಿಯಾಗಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ.



