कोकण रेल्वेच्या सर्वांगीण विकासासाठी 7,760 कोटींच्या विशेष निधीला केंद्रीय मंत्रिमंडळाची मंजुरी ; खानापूर रेल्वे स्थानकाचा ‘अमृत भारत स्टेशन’ योजनेत समावेश करण्याची खासदार विश्वेश्वर हेगडे कागेरी यांची मागणी.
खानापूर : प्रतिनिधी
करावळी आणि मलेनाडू भागाची जीवनवाहिनी असलेल्या कोकण रेल्वेच्या सर्वांगीण विकासासाठी 7,760 कोटी रुपयांच्या विशेष निधीला केंद्रीय मंत्रिमंडळाची अंतिम मंजुरी मिळाल्याबद्दल उत्तर कन्नडचे खासदार विश्वेश्वर हेगडे- कागेरी यांनी समाधान व्यक्त केले आहे. या निर्णयामुळे कोकण रेल्वेच्या पायाभूत सुविधांना मोठी चालना मिळणार असून प्रवाशांच्या सुरक्षित व सुलभ प्रवासासह या भागातील आर्थिक, व्यापारी आणि पर्यटन क्षेत्राच्या विकासाला गती मिळेल, असे त्यांनी म्हटले आहे.
या महत्त्वपूर्ण निर्णयाबद्दल खासदार कागेरी यांनी पंतप्रधान नरेंद्र मोदी, केंद्रीय रेल्वेमंत्री अश्विनी वैष्णव आणि केंद्रीय रेल्वे राज्यमंत्री व्ही. सोमण्णा यांचे जनतेच्या वतीने अभिनंदन व आभार मानले.

केंद्रीय रेल्वेमंत्र्यांची भेट; विविध मागण्यांचे निवेदन….
दरम्यान, खासदार विश्वेश्वर हेगडे कागेरी यांनी नवी दिल्ली येथे केंद्रीय रेल्वेमंत्री अश्विनी वैष्णव यांची भेट घेऊन आपल्या मतदारसंघातील प्रमुख रेल्वे प्रकल्प आणि प्रलंबित मागण्यांबाबत चर्चा केली. यावेळी त्यांनी विविध मागण्यांचे निवेदनही सादर केले.
यामध्ये ताळगुप्पा–हुबळी रेल्वे प्रकल्पाला गती देणे, तसेच अंकोला–हुबळी, ताळगुप्पा–होन्नावर आणि धारवाड–कित्तूर–बेळगाव रेल्वे प्रकल्पांना प्राधान्याने गती देण्याची मागणी करण्यात आली.
तसेच कोकण रेल्वे मार्गावर सध्या धावणाऱ्या निवडक महत्त्वाच्या रेल्वेगाड्यांचा मार्गविस्तार करण्याची मागणीही करण्यात आली.
खानापूर रेल्वे स्थानकाचा अमृत भारत योजनेत समावेश करण्याची मागणी….
खानापूरच्या दृष्टीने महत्त्वाची मागणी करताना खासदार विश्वेश्वर हेगडे-कागेरी यांनी खानापूर रेल्वे स्थानकाचा केंद्र सरकारच्या ‘अमृत भारत स्टेशन’ योजनेत समावेश करून त्याचा आधुनिक पायाभूत सुविधांसह सर्वांगीण विकास करावा, अशी मागणी केली. यासोबतच खानापूर रेल्वे स्थानकावर प्रमुख रेल्वेगाड्यांना थांबा देण्याची मागणीही त्यांनी केली.
या मागण्यांना केंद्रीय रेल्वेमंत्र्यांनी सकारात्मक प्रतिसाद देत, मांडण्यात आलेल्या सर्व प्रकल्प व मागण्यांबाबत संबंधित अधिकाऱ्यांकडून तातडीने तपासणी करून योग्य ती कार्यवाही करण्याचे आश्वासन दिल्याची माहिती खासदार कागेरी यांनी दिली आहे.
ಕೊಂಕಣ ರೈಲ್ವೆಯ ಸಮಗ್ರ ಅಭಿವೃದ್ಧಿಗಾಗಿ 7,760 ಕೋಟಿ ರೂ.ಗಳ ವಿಶೇಷ ಅನುದಾನಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ; ಖಾನಾಪುರ ರೈಲು ನಿಲ್ದಾಣವನ್ನು ‘ಅಮೃತ್ ಭಾರತ್ ಸ್ಟೇಷನ್’ ಯೋಜನೆ ಅಡಿ ಸೇರ್ಪಡೆಗೊಳಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಗ್ರಹ.
ಖಾನಾಪುರ : ಪ್ರತಿನಿಧಿ
ಕರಾವಳಿ ಮತ್ತು ಮಲೆನಾಡು ಪ್ರದೇಶದ ಜೀವನಾಡಿಯಾಗಿರುವ ಕೊಂಕಣ ರೈಲ್ವೆಯ ಸಮಗ್ರ ಅಭಿವೃದ್ಧಿಗಾಗಿ 7,760 ಕೋಟಿ ರೂಪಾಯಿಗಳ ವಿಶೇಷ ಅನುದಾನಕ್ಕೆ ಕೇಂದ್ರ ಸಚಿವ ಸಂಪುಟದ ಅಂತಿಮ ಅನುಮೋದನೆ ದೊರೆತಿರುವುದಕ್ಕೆ ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದ ಕೊಂಕಣ ರೈಲ್ವೆಯ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದ್ದು, ಪ್ರಯಾಣಿಕರ ಸುರಕ್ಷಿತ ಹಾಗೂ ಸುಗಮ ಸಂಚಾರದ ಜೊತೆಗೆ ಈ ಭಾಗದ ಆರ್ಥಿಕ, ವಾಣಿಜ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೂ ವೇಗ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಹತ್ವದ ನಿರ್ಧಾರಕ್ಕಾಗಿ ಸಂಸದ ಕಾಗೇರಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವರ ಭೇಟಿ; ವಿವಿಧ ಬೇಡಿಕೆಗಳ ಮನವಿ….
ಈ ನಡುವೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ತಮ್ಮ ಕ್ಷೇತ್ರದ ಪ್ರಮುಖ ರೈಲ್ವೆ ಯೋಜನೆಗಳು ಹಾಗೂ ಬಾಕಿ ಉಳಿದಿರುವ ಬೇಡಿಕೆಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಅವರು ವಿವಿಧ ಬೇಡಿಕೆಗಳ ಮನವಿಯನ್ನೂ ಸಲ್ಲಿಸಿದರು.
ಇದರಲ್ಲಿ ತಾಳಗುಪ್ಪ–ಹುಬ್ಬಳ್ಳಿ ರೈಲ್ವೆ ಯೋಜನೆಗೆ ವೇಗ ನೀಡುವುದು, ಅಲ್ಲದೆ ಅಂಕೋಲಾ–ಹುಬ್ಬಳ್ಳಿ, ತಾಳಗುಪ್ಪ–ಹೊನ್ನಾವರ ಹಾಗೂ ಧಾರವಾಡ–ಕಿತ್ತೂರು–ಬೆಳಗಾವಿ ರೈಲ್ವೆ ಯೋಜನೆಗಳಿಗೆ ಆದ್ಯತೆಯ ಮೇರೆಗೆ ವೇಗ ನೀಡುವಂತೆ ಆಗ್ರಹಿಸಲಾಯಿತು.
ಅದೇ ರೀತಿ, ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಆಯ್ದ ಪ್ರಮುಖ ರೈಲುಗಳ ಮಾರ್ಗ ವಿಸ್ತರಣೆ ಮಾಡುವಂತೆ ಕೂಡ ಮನವಿ ಮಾಡಲಾಗಿದೆ.
ಖಾನಾಪುರ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆ ಅಡಿ ಸೇರ್ಪಡೆಗೊಳಿಸುವಂತೆ ಆಗ್ರಹ….
ಖಾನಾಪುರದ ತಾಲೂಕಿನ ದೃಷ್ಟಿಯಿಂದ ಮಹತ್ವದ ಬೇಡಿಕೆಯನ್ನು ಮುಂದಿಟ್ಟ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಖಾನಾಪುರ ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರದ ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಗೆ ಸೇರ್ಪಡೆಗೊಳಿಸಿ, ಆಧುನಿಕ ಮೂಲಸೌಕರ್ಯಗಳೊಂದಿಗೆ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು, ಎಂದು ಆಗ್ರಹಿಸಿದರು.
ಇದರ ಜೊತೆಗೆ ಖಾನಾಪುರ ರೈಲು ನಿಲ್ದಾಣದಲ್ಲಿ ಪ್ರಮುಖ ರೈಲುಗಳಿಗೆ ನಿಲುಗಡೆ ನೀಡುವಂತೆ ಕೂಡ ಅವರು ಒತ್ತಾಯಿಸಿದರು.
ಈ ಬೇಡಿಕೆಗಳಿಗೆ ಕೇಂದ್ರ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಂಡಿಸಲಾದ ಎಲ್ಲಾ ಯೋಜನೆಗಳು ಹಾಗೂ ಬೇಡಿಕೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ತಕ್ಷಣ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಕಾಗೇರಿ ಅವರು ತಿಳಿಸಿದ್ದಾರೆ.



