खानापूर तालुक्यात 5 सप्टेंबरपासून ‘प्रजासेवा आंदोलन’; नागरिकांच्या तक्रारींचे होणार निराकरण.
खानापूर : सार्वजनिकांच्या समस्या व तक्रारींचे तातडीने निराकरण करण्याच्या उद्देशाने खानापूर तालुक्यात सप्टेंबर महिन्यात विविध ठिकाणी ‘प्रजासेवा आंदोलन’ (जनता भेट व तक्रार निवारण) कार्यक्रमाचे आयोजन करण्यात आले आहे. राज्य सरकारच्या निर्देशानुसार तालुकास्तरावर हे कार्यक्रम घेण्यात येणार आहेत.
खानापूर शहरातील लोकमान्य भवन सभागृहात शनिवार दि. 5 सप्टेंबर रोजी सकाळी 11 वाजता प्रजासेवा आंदोलनाचे आयोजन करण्यात आले आहे. या कार्यक्रमाच्या अध्यक्षस्थानी बेळगाव जिल्ह्याचे पालकमंत्री सतीश जारकीहोळी राहणार आहेत. यावेळी खानापूर तालुक्याचे आमदार विठ्ठलराव हलगेकर तसेच जिल्हा व तालुकास्तरीय विविध विभागांचे अधिकारी उपस्थित राहून नागरिकांच्या समस्या व तक्रारी ऐकून घेणार आहेत.
यानंतर 12 सप्टेंबर रोजी नंदगड येथील TAPCMS कल्याण मंडपात, 19 सप्टेंबर रोजी बिडी येथील ज्ञानेश्वर कल्याण मंडपात तसेच 26 सप्टेंबर रोजी गुंजी येथील सरकारी मराठी हायस्कूलमध्ये सकाळी 11 वाजता प्रजासेवा आंदोलनाचे आयोजन करण्यात आले आहे. या कार्यक्रमांच्या अध्यक्षस्थानी खानापूरचे आमदार विठ्ठलराव हलगेकर राहणार आहेत.
या प्रजासेवा आंदोलनाच्या माध्यमातून नागरिकांना आपल्या विविध शासकीय कामांबाबतच्या अडचणी, प्रलंबित तक्रारी तसेच विविध विभागांशी संबंधित समस्या थेट प्रशासनासमोर मांडता येणार आहेत. संबंधित अधिकारी उपस्थित राहून तक्रारींच्या निवारणासाठी आवश्यक कार्यवाही करणार आहेत.
खानापूर तालुक्यातील सर्व नागरिकांनी या प्रजासेवा आंदोलनाचा लाभ घ्यावा, असे आवाहन खानापूरचे तहसीलदार तथा तालुका कार्यकारी दंडाधिकारी, दुंडाप्पा कोमार यांनी केले आहे.
ಖಾನಾಪುರ ತಾಲೂಕಿನಲ್ಲಿ ಸೆಪ್ಟೆಂಬರ್ 5ರಿಂದ ‘ಪ್ರಜಾಸೇವಾ ಆಂದೋಲನ’; ಸಾಮಾನ್ಯ ನಾಗರಿಕರ ದೂರುಗಳಿಗೆ ಪರಿಹಾರ ನೀಡುವ ಉದ್ದೇಶ.
ಖಾನಾಪುರ : ಸಾರ್ವಜನಿಕರ ಸಮಸ್ಯೆಗಳು ಹಾಗೂ ದೂರುಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಖಾನಾಪುರ ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಸ್ಥಳಗಳಲ್ಲಿ ‘ಪ್ರಜಾಸೇವಾ ಆಂದೋಲನ’ (ಜನತಾ ಭೇಟಿ ಹಾಗೂ ದೂರು ನಿವಾರಣೆ) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ತಾಲೂಕು ಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಖಾನಾಪುರ ನಗರದ ಲೋಕಮಾನ್ಯ ಭವನ ಸಭಾಂಗಣದಲ್ಲಿ ಶನಿವಾರ, ಸೆಪ್ಟೆಂಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ವಹಿಸಲಿದ್ದು. ಈ ಸಂದರ್ಭದಲ್ಲಿ ಖಾನಾಪುರ ತಾಲೂಕಿನ ಶಾಸಕ ವಿಠ್ಠಲರಾವ್ ಹಲಗೇಕರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ನಾಗರಿಕರ ಸಮಸ್ಯೆಗಳು ಹಾಗೂ ದೂರುಗಳನ್ನು ಆಲಿಸಲಿದ್ದಾರೆ.
ಇದಾದ ಬಳಿಕ ಸೆಪ್ಟೆಂಬರ್ 12ರಂದು ನಂದಗಡದ TAPCMS ಕಲ್ಯಾಣ ಮಂಟಪದಲ್ಲಿ, ಸೆಪ್ಟೆಂಬರ್ 19ರಂದು ಬೀಡಿಯ ಜ್ಞಾನೇಶ್ವರ ಕಲ್ಯಾಣ ಮಂಟಪದಲ್ಲಿ ಹಾಗೂ ಸೆಪ್ಟೆಂಬರ್ 26ರಂದು ಗುಂಜಿಯ ಸರ್ಕಾರಿ ಮರಾಠಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಖಾನಾಪುರ ತಾಲೂಕಿನ ಜನಪ್ರಿಯ ಶಾಸಕ ವಿಠ್ಠಲರಾವ್ ಹಲಗೇಕರ್ ವಹಿಸಲಿದ್ದಾರೆ.
ಈ ಪ್ರಜಾಸೇವಾ ಆಂದೋಲನದ ಮೂಲಕ ನಾಗರಿಕರು ತಮ್ಮ ವಿವಿಧ ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ತೊಂದರೆಗಳು, ಬಾಕಿ ಇರುವ ದೂರುಗಳು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ಆಡಳಿತದ ಮುಂದೆ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ದೂರುಗಳ ಪರಿಹಾರಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
ಖಾನಾಪುರ ತಾಲೂಕಿನ ಎಲ್ಲಾ ನಾಗರಿಕರು ಈ ಪ್ರಜಾಸೇವಾ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕು, ಎಂದು ಖಾನಾಪುರದ ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ದುಂಡಪ್ಪ ಕೋಮಾರ ಅವರು ಮನವಿ ಮಾಡಿದ್ದಾರೆ.

