केसरेकर कुटुंबीयांना तातडीची आर्थिक मदत द्या; महाराष्ट्र एकीकरण समितीचे तहसीलदारमार्फत जिल्हाधिकाऱ्यांना निवेदन.
खानापूर : कुपवाड, जि. सांगली येथे 15 ऑगस्ट रोजी घडलेल्या दुर्दैवी हिंसक घटनेत मृत्यू झालेल्या हेब्बाळ (ता. खानापूर) येथील सौ. मनीषा मोहन केसरेकर व त्यांचे पती श्री. मोहन नागाप्पा केसरेकर यांच्या कुटुंबीयांना तातडीने आर्थिक मदत, पीडित नुकसानभरपाई आणि मोफत कायदेशीर सहाय्य उपलब्ध करून द्यावे, अशी मागणी खानापूर तालुका महाराष्ट्र एकीकरण समितीने केली आहे.
यासंदर्भात समितीच्या वतीने आज गुरुवारी 20 ऑगस्ट रोजी खानापूर तहसीलदार मार्फत बेळगाव जिल्हाधिकारी तथा जिल्हादंडाधिकारी यांना निवेदन देण्यात आले. निवेदनाचा स्वीकार खानापूरचे तहसीलदार दुंडाप्पा कोमार यांनी केला. मृत दाम्पत्याचे मूळ गाव हेब्बाळ असल्याने त्यांच्या कुटुंबीयांवर या घटनेनंतर अंत्यविधी, वैद्यकीय व कायदेशीर प्रक्रिया, प्रवास तसेच उदरनिर्वाहाचा अतिरिक्त आर्थिक भार पडला असल्याचे निवेदनात नमूद करण्यात आले आहे.
शासनाच्या लागू नियमांनुसार मृतांच्या कुटुंबीयांना तातडीचे सानुग्रह अनुदान मंजूर करावे तसेच लागू असलेल्या Victim Compensation Scheme अंतर्गत कायदेशीर वारसांना नुकसानभरपाई मिळण्यासाठी तातडीने कार्यवाही करावी, अशी मागणी करण्यात आली आहे.
तसेच कुटुंबीयांना जिल्हा विधी सेवा प्राधिकरण, सांगली यांच्यामार्फत मोफत कायदेशीर सल्ला व प्रतिनिधित्व उपलब्ध करून द्यावे. FIR, मृत्यू प्रमाणपत्र, पोस्टमॉर्टेम अहवाल, पंचनामा आणि नुकसानभरपाईसाठी आवश्यक कागदपत्रे मिळविण्यासाठी प्रशासनाने सहकार्य करावे, अशीही मागणी समितीने केली आहे.
मृतांच्या कायदेशीर वारसांना सामाजिक सुरक्षा, आर्थिक सहाय्य, निवारा, शिक्षण व पुनर्वसनाच्या उपलब्ध योजनांचा लाभ मिळवून देण्याचे निर्देश संबंधित विभागांना द्यावेत. तसेच सांगली आणि बेळगाव जिल्हा प्रशासनासह खानापूर तहसील कार्यालयाने समन्वय साधून महाराष्ट्र व कर्नाटक शासनाच्या उपलब्ध मदतीचा लाभ कुटुंबीयांना मिळवून द्यावा, अशी विनंती निवेदनातून करण्यात आली आहे.
दोन जिवलग व्यक्तींच्या मृत्यूमुळे कुटुंबावर अचानक आलेल्या संकटाची तीव्रता लक्षात घेऊन या प्रकरणाकडे मानवीय व सहानुभूतीपूर्वक दृष्टीने पाहून आर्थिक मदत, नुकसानभरपाई, कायदेशीर सहाय्य व इतर शासकीय लाभ शक्य तितक्या लवकर उपलब्ध करून द्यावेत, अशी मागणी खानापूर तालुका महाराष्ट्र एकीकरण समितीने केली आहे.
यावेळी महाराष्ट्र एकीकरण समितीचे ज्येष्ठ नेते व माजी आमदार दिगंबरराव पाटील, सरचिटणीस आबासाहेब दळवी, प्रकाश चव्हाण, गोपाळ पाटील, पांडुरंग सावंत, पुंडलिक पाटील, संजीव पाटील, पाटील गुरुजी तसेच समितीचे पदाधिकारी व कार्यकर्ते मोठ्या संख्येने उपस्थित होते.
ಕೇಸರೆಕರ ಕುಟುಂಬಕ್ಕೆ ತುರ್ತು ಆರ್ಥಿಕ ನೆರವು ನೀಡಿ; ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಖಾನಾಪುರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ.
ಖಾನಾಪುರ : ಸಾಂಗ್ಲಿ ಜಿಲ್ಲೆಯ ಕುವಾಡ್ನಲ್ಲಿ ಆಗಸ್ಟ್ 15ರಂದು ನಡೆದ ದುಃಖಕರ ಹಿಂಸಾತ್ಮಕ ಘಟನೆಯಲ್ಲಿ ಮೃತಪಟ್ಟ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಶ್ರೀಮತಿ ಮನೀಷಾ ಮೋಹನ್ ಕೇಸರೆಕರ ಹಾಗೂ ಅವರ ಪತಿ ಶ್ರೀ ಮೋಹನ್ ನಾಗಪ್ಪ ಕೇಸರೆಕರ ಅವರ ಕುಟುಂಬಕ್ಕೆ ತುರ್ತಾಗಿ ಆರ್ಥಿಕ ನೆರವು, ಸಂತ್ರಸ್ತರ ಪರಿಹಾರಧನ ಹಾಗೂ ಉಚಿತ ಕಾನೂನು ನೆರವು ಒದಗಿಸಬೇಕು ಎಂದು ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿ ಒತ್ತಾಯಿಸಿದೆ.
ಈ ಸಂಬಂಧ ಸಮಿತಿಯ ವತಿಯಿಂದ ಇಂದು ಗುರುವಾರ, ಆಗಸ್ಟ್ 20ರಂದು ಖಾನಾಪುರ ತಹಶೀಲ್ದಾರ್ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಖಾನಾಪುರದ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರು ಸ್ವೀಕರಿಸಿದರು.
ಮೃತ ದಂಪತಿಯ ಮೂಲ ಗ್ರಾಮ ಹೆಬ್ಬಾಳವಾಗಿರುವುದರಿಂದ, ಈ ಘಟನೆಯ ನಂತರ ಅವರ ಕುಟುಂಬದ ಮೇಲೆ ಅಂತ್ಯಕ್ರಿಯೆ, ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆಗಳು, ಪ್ರಯಾಣ ಸೇರಿದಂತೆ ವಿವಿಧ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಮೃತರ ಕುಟುಂಬಕ್ಕೆ ತುರ್ತು ಸಾಂತ್ವನಧನ ಮಂಜೂರು ಮಾಡಬೇಕು. ಅಲ್ಲದೆ, ಅನ್ವಯವಾಗುವ Victim Compensation Scheme ಅಡಿಯಲ್ಲಿ ಮೃತರ ಕಾನೂನುಬದ್ಧ ವಾರಸುದಾರರಿಗೆ ಪರಿಹಾರಧನ ದೊರೆಯುವಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಸಮಿತಿ ಆಗ್ರಹಿಸಿದೆ.
ಇದರ ಜೊತೆಗೆ ಕುಟುಂಬದ ಸದಸ್ಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾಂಗ್ಲಿ ಇವರ ಮೂಲಕ ಉಚಿತ ಕಾನೂನು ಸಲಹೆ ಹಾಗೂ ಕಾನೂನು ಪ್ರತಿನಿಧಿತ್ವ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. FIR, ಮರಣ ಪ್ರಮಾಣಪತ್ರ, ಮರಣೋತ್ತರ ಪರೀಕ್ಷೆಯ ವರದಿ, ಪಂಚನಾಮೆ ಹಾಗೂ ಪರಿಹಾರಧನ ಪಡೆಯಲು ಅಗತ್ಯವಿರುವ ಇತರ ದಾಖಲೆಗಳನ್ನು ಪಡೆಯುವಲ್ಲಿ ಆಡಳಿತವು ಕುಟುಂಬಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಮೃತರ ಕಾನೂನುಬದ್ಧ ವಾರಸುದಾರರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ನೆರವು, ವಸತಿ, ಶಿಕ್ಷಣ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಯೋಜನೆಗಳ ಲಾಭ ದೊರೆಯುವಂತೆ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಸಮಿತಿ ಮನವಿ ಮಾಡಿದೆ.
ಅಲ್ಲದೆ, ಸಾಂಗ್ಲಿ ಹಾಗೂ ಬೆಳಗಾವಿ ಜಿಲ್ಲಾಡಳಿತದ ಜೊತೆಗೆ ಖಾನಾಪುರ ತಹಶೀಲ್ದಾರ್ ಕಚೇರಿಯು ಸಮನ್ವಯ ಸಾಧಿಸಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳ ಮೂಲಕ ಲಭ್ಯವಿರುವ ಎಲ್ಲಾ ರೀತಿಯ ನೆರವು ಮತ್ತು ಸೌಲಭ್ಯಗಳನ್ನು ಮೃತರ ಕುಟುಂಬಕ್ಕೆ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಎರಡು ಆತ್ಮೀಯ ವ್ಯಕ್ತಿಗಳ ಸಾವಿನಿಂದ ಕುಟುಂಬದ ಮೇಲೆ ಏಕಾಏಕಿ ಎದುರಾದ ಸಂಕಷ್ಟದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಕರಣವನ್ನು ಮಾನವೀಯ ಹಾಗೂ ಸಹಾನುಭೂತಿಯ ದೃಷ್ಟಿಕೋನದಿಂದ ಪರಿಗಣಿಸಿ, ಆರ್ಥಿಕ ನೆರವು, ಪರಿಹಾರಧನ, ಕಾನೂನು ನೆರವು ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ಒದಗಿಸಬೇಕು, ಎಂದು ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ದಿಗಂಬರರಾವ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಅಬಾಸಾಹೇಬ್ ದಳವಿ, ಪ್ರಕಾಶ್ ಚವಾಣ್, ಗೋಪಾಲ್ ಪಾಟೀಲ್, ಪಾಂಡುರಂಗ ಸಾವಂತ್, ಪುಂಡಲೀಕ ಪಾಟೀಲ್, ಸಂಜೀವ್ ಪಾಟೀಲ್ ಮತ್ತು ಪಾಟೀಲ್ ಗುರೂಜಿ ಸೇರಿದಂತೆ ಸಮಿತಿಯ ಅಪಾರ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



