19 वर्षांनंतर काटगाळीत श्री महालक्ष्मी देवीची यात्रा-विकासकामांसाठी प्रशासन सज्ज ; आमदार विठ्ठलराव हलगेकर. जत्रेपूर्व सभेत ग्रामस्थांच्या विविध मागण्या; रस्ते, पाणी, वीज व मंदिर दुरुस्तीला प्राधान्य देण्याचे आमदार विठ्ठलराव हलगेकर यांचे आश्वासन.
खानापूर : खानापूर तालुक्यातील काटगाळी गावाचे ग्रामदैवत श्री महालक्ष्मी देवीची जत्रा तब्बल 19 वर्षांच्या प्रदीर्घ कालावधीनंतर पुढील वर्षी एप्रिल महिन्यात मोठ्या उत्साहात आणि भक्तिमय वातावरणात साजरी होणार आहे. या पार्श्वभूमीवर जत्रेच्या तयारीसह गावातील विविध विकासकामांचा आढावा घेण्यासाठी श्री महालक्ष्मी मंदिर परिसरात जत्रापूर्व सभेचे आयोजन करण्यात आले होते. यावेळी खानापूरचे आमदार विठ्ठलराव हलगेकर प्रमुख पाहुणे म्हणून उपस्थित होते.
सभेच्या प्रारंभी तालुका पंचायत ई.ओ. रमेश मेस्त्री, इंजिनिअरिंग उपविभागाचे आर. व्ही. जाधव, कृषी विभागाचे एडी चव्हाण साहेब तसेच सीडीपीओ अधिकारी यांचे पुष्पगुच्छ देऊन स्वागत करण्यात आले.
यावेळी ग्रामस्थांच्या वतीने गावातील विविध प्रलंबित विकासकामे व समस्यांचा पाढा अधिकाऱ्यांसमोर मांडण्यात आला. काटगाळी ते हायवे रस्ता, गणीबैल व निट्टूर जोडरस्ते, नागुर्डा व मोदेकोप रस्ता, गावातील चक्कर लाईन रस्ता, गणपती गल्लीतील पेव्हर्स ब्लॉक, रामलिंग व कल्मेश्वर मंदिरांची दुरुस्ती व रस्ते, 35 नवीन विद्युत खांब, सहा हायमास्ट दिवे, नवीन बोअरवेल आणि पाण्याच्या टाक्यांची उभारणी आदी मागण्या यावेळी करण्यात आल्या.
जत्रेपूर्वी रस्ते, पाणी आणि वीज व्यवस्था सक्षम करणार…
सभेला मार्गदर्शन करताना आमदार विठ्ठलराव हलगेकर म्हणाले, “तब्बल १९ वर्षांनंतर होणारी श्री महालक्ष्मी देवीची जत्रा हा काटगाळी गावासह संपूर्ण परिसरासाठी मोठा सोहळा आहे. जत्रेच्या काळात येणाऱ्या भाविकांची व पाहुण्यांची कोणतीही गैरसोय होऊ नये, यासाठी रस्ते, पिण्याचे पाणी आणि वीज यांची व्यवस्था प्राधान्याने करण्यात येईल.”
शासकीय योजना तसेच व्ही.बी.जी. राम जी योजनेअंतर्गत ग्रामपंचायतीला प्राप्त निधीचा योग्य वापर करून गावातील विकासकामे गुणवत्तापूर्ण व दीर्घकाळ टिकणारी असावीत, असेही त्यांनी सांगितले. जत्रेदरम्यान विजेचा अतिरिक्त भार सहन होण्यासाठी ट्रान्सफॉर्मरची क्षमता वाढवून देण्यात येईल, तसेच रस्ते व पाणी समस्यांबाबत संबंधित शासकीय अधिकाऱ्यांना आवश्यक सूचना देण्यात आल्याचे आमदार हलगेकर यांनी स्पष्ट केले.
१९ वर्षांनंतर होणाऱ्या या जत्रेच्या पार्श्वभूमीवर झालेल्या पूर्वतयारी बैठकीमुळे काटगाळी व परिसरातील ग्रामस्थांमध्ये उत्साहाचे वातावरण निर्माण झाले आहे.
प्रमुख उपस्थिती…
आमदार विठ्ठलराव हलगेकर, तालुका पंचायत ई.ओ. रमेश मेत्री, भाजपा नेते तथा अॅडव्होकेट चेतन मनेरीकर, भाजपा नेते शंकर पाटील, तोपीनकट्टी ग्रामपंचायतीचे माजी चेअरमन नारायण गुरव, भाजपा युवा नेते दत्ता कदम, इंजिनिअरिंग उपविभागाचे आर. व्ही. जाधव, कृषी विभागाचे एडी चव्हाण साहेब, सीडीपीओ अधिकारी, नागुर्डा ग्रामपंचायतीचे पीडीओ प्रवीण सायनाक, काटगाळी पंच कमिटी, ग्रामस्थ व विविध शासकीय अधिकारी उपस्थित होते.
19 ವರ್ಷಗಳ ನಂತರ ಕಾಟಗಾಳಿ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆ – ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತ ಸಜ್ಜು; ಶಾಸಕ ವಿಠ್ಠಲರಾವ್ ಹಲಗೇಕರ್. ಜಾತ್ರಾ ಪೂರ್ವ ಸಭೆಯಲ್ಲಿ ಗ್ರಾಮಸ್ಥರ ವಿವಿಧ ಬೇಡಿಕೆಗಳು; ರಸ್ತೆ, ನೀರು, ವಿದ್ಯುತ್ ಹಾಗೂ ದೇವಸ್ಥಾನ ದುರಸ್ತಿಗೆ ಆದ್ಯತೆ ನೀಡುವುದಾಗಿ ಶಾಸಕ ವಿಠ್ಠಲರಾವ್ ಹಲಗೇಕರ್ ಭರವಸೆ.
ಖಾನಾಪುರ : ಖಾನಾಪುರ ತಾಲೂಕಿನ ಕಾಟಗಾಳಿ ಗ್ರಾಮದ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಯು ಬರೋಬ್ಬರಿ 19 ವರ್ಷಗಳ ದೀರ್ಘ ಅವಧಿಯ ನಂತರ ಮುಂದಿನ ಏಪ್ರಿಲ್ ತಿಂಗಳಲ್ಲಿ ಅತ್ಯಂತ ಸಂಭ್ರಮ ಹಾಗೂ ಭಕ್ತಿಮಯ ವಾತಾವರಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಸಿದ್ಧತೆಗಳ ಜೊತೆಗೆ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಲು ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಜಾತ್ರಾ ಪೂರ್ವ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಖಾನಾಪುರದ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ತಾಲೂಕು ಪಂಚಾಯತ್ ಇ.ಒ. ರಮೇಶ್ ಮೇಸ್ತ್ರಿ, ಎಂಜಿನಿಯರಿಂಗ್ ಉಪವಿಭಾಗದ ಆರ್.ವಿ. ಜಾಧವ್, ಕೃಷಿ ಇಲಾಖೆಯ ಎಡಿ ಚವ್ಹಾಣ್ ಸಾಹೇಬರು ಹಾಗೂ ಸಿಡಿಪಿಒ ಅಧಿಕಾರಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಲಾಯಿತು.
ಈ ವೇಳೆ ಗ್ರಾಮಸ್ಥರ ಪರವಾಗಿ ಗ್ರಾಮದ ವಿವಿಧ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಕಾಟಗಾಳಿ–ಹೈವೇ ರಸ್ತೆ, ಗಣಿಬೈಲ್ ಹಾಗೂ ನಿಟ್ಟೂರು ಸಂಪರ್ಕ ರಸ್ತೆಗಳು, ನಾಗುರ್ಡಾ ಮತ್ತು ಮೋದೇಕೋಪ್ ರಸ್ತೆ, ಗ್ರಾಮದ ಚಕ್ಕರ್ಲೈನ್ ರಸ್ತೆ, ಗಣಪತಿ ಗಲ್ಲಿಯ ಪೇವರ್ಸ್ ಬ್ಲಾಕ್, ರಾಮಲಿಂಗ ಹಾಗೂ ಕಲ್ಮೇಶ್ವರ ದೇವಸ್ಥಾನಗಳ ದುರಸ್ತಿ ಮತ್ತು ರಸ್ತೆ ಕಾಮಗಾರಿಗಳು, 35 ಹೊಸ ವಿದ್ಯುತ್ ಕಂಬಗಳು, ಆರು ಹೈಮಾಸ್ಟ್ ದೀಪಗಳು, ಹೊಸ ಬೋರ್ವೆಲ್ ಹಾಗೂ ನೀರಿನ ಟ್ಯಾಂಕ್ಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಮಂಡಿಸಲಾಯಿತು.
ಜಾತ್ರೆಗೂ ಮುನ್ನ ರಸ್ತೆ, ನೀರು ಮತ್ತು ವಿದ್ಯುತ್ ವ್ಯವಸ್ಥೆ ಬಲಪಡಿಸಲಾಗುವುದು…
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು, 19 ವರ್ಷಗಳ ನಂತರ ನಡೆಯಲಿರುವ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಯು ಕಾಟಗಾಳಿ ಗ್ರಾಮ ಸೇರಿದಂತೆ ಇಡೀ ಸುತ್ತಮುತ್ತಲಿನ ಪ್ರದೇಶಕ್ಕೆ ಒಂದು ದೊಡ್ಡ ಸಂಭ್ರಮದ ಕಾರ್ಯಕ್ರಮವಾಗಿದೆ. ಜಾತ್ರೆಯ ಸಂದರ್ಭದಲ್ಲಿ ಆಗಮಿಸುವ ಭಕ್ತರು ಹಾಗೂ ಅತಿಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗುವುದು,” ಎಂದು ಹೇಳಿದರು.
ಸರ್ಕಾರಿ ಯೋಜನೆಗಳು ಹಾಗೂ ವ್ಹಿ.ಬಿ.ಜಿ. ರಾಮ್ ಜಿ ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಲಭ್ಯವಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಹಾಗೂ ದೀರ್ಘಕಾಲ ಬಾಳಿಕೆ ಬರುವ ರೀತಿಯಲ್ಲಿ ನಡೆಯಬೇಕು ಎಂದು ಅವರು ತಿಳಿಸಿದರು.
ಜಾತ್ರೆಯ ಸಂದರ್ಭದಲ್ಲಿ ವಿದ್ಯುತ್ನ ಹೆಚ್ಚುವರಿ ಹೊರೆ ನಿಭಾಯಿಸಲು ಟ್ರಾನ್ಸ್ಫಾರ್ಮರ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಡಲಾಗುವುದು. ಅಲ್ಲದೆ ರಸ್ತೆ ಹಾಗೂ ನೀರಿನ ಸಮಸ್ಯೆಗಳ ಕುರಿತು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಶಾಸಕ ಹಲಗೇಕರ್ ಅವರು ಸ್ಪಷ್ಟಪಡಿಸಿದರು.
19 ವರ್ಷಗಳ ನಂತರ ನಡೆಯಲಿರುವ ಈ ಜಾತ್ರೆಯ ಹಿನ್ನೆಲೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಿಂದ ಕಾಟಗಾಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.
ಪ್ರಮುಖ ಉಪಸ್ಥಿತಿ…
ಶಾಸಕ ವಿಠ್ಠಲರಾವ್ ಹಲಗೇಕರ್, ತಾಲೂಕು ಪಂಚಾಯತ್ ಇ.ಒ. ರಮೇಶ್ ಮೇತ್ರಿ, ಬಿಜೆಪಿ ಮುಖಂಡ ಹಾಗೂ ಅಡ್ವೊಕೇಟ್ ಚೇತನ್ ಮನೇರಿಕರ್, ಬಿಜೆಪಿ ಮುಖಂಡ ಶಂಕರ ಪಾಟೀಲ್, ತೋಪಿನಕಟ್ಟಿ ಗ್ರಾಮ ಪಂಚಾಯಿತಿಯ ಮಾಜಿ ಚೇರ್ಮನ್ ನಾರಾಯಣ ಗುರವ, ಬಿಜೆಪಿ ಯುವ ಮುಖಂಡ ದತ್ತಾ ಕದಮ್, ಎಂಜಿನಿಯರಿಂಗ್ ಉಪವಿಭಾಗದ ಆರ್.ವಿ. ಜಾಧವ್, ಕೃಷಿ ಇಲಾಖೆಯ ಎಡಿ ಚವ್ಹಾಣ್ ಸಾಹೇಬರು, ಸಿಡಿಪಿಒ ಅಧಿಕಾರಿ, ನಾಗುರ್ಡಾ ಗ್ರಾಮ ಪಂಚಾಯಿತಿಯ ಪಿಡಿಒ ಪ್ರವೀಣ್ ಸಾಯನಕ್, ಕಾಟಗಾಳಿ ಪಂಚ್ ಕಮಿಟಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ವಿವಿಧ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.



