एलकेजी-यूकेजी वर्गांमुळे अंगणवाड्यांतील पटसंख्या घटली; खानापूर तालुक्यातील अंगणवाडी कर्मचाऱ्यांचे निवेदन, विविध समस्यांकडे प्रशासनाचे लक्ष वेधले
खानापूर (प्रतिनिधी) : खानापूर तालुक्यातील सरकारी प्राथमिक शाळांमध्ये एलकेजी व युकेजीचे वर्ग सुरू झाल्यानंतर अंगणवाड्यांमधील विद्यार्थ्यांची संख्या घटू लागल्याची गंभीर बाब समोर आली आहे. यामुळे भविष्यात अनेक अंगणवाड्यांच्या अस्तित्वावरच प्रश्नचिन्ह निर्माण होण्याची भीती व्यक्त करत खानापूर तालुका अंगणवाडी वर्कर्स अँड हेल्पर्स फेडरेशनने बालविकास विभागाच्या सीडीपीओ तसेच जिल्हा शिक्षणाधिकारी लीलावती हिरेमठ यांना निवेदन सादर केले.

निवेदनात नमूद केल्याप्रमाणे, तीन ते सहा वर्षे वयोगटातील बालकांना पूर्वप्राथमिक शिक्षण देण्यात अंगणवाड्यांची महत्त्वाची भूमिका आहे. मात्र शासकीय शाळांमध्ये एलकेजी-यूकेजीचे वर्ग सुरू झाल्यामुळे अनेक पालक आपल्या मुलांचा प्रवेश थेट शाळांमध्ये घेत आहेत. परिणामी अंगणवाड्यांतील पटसंख्या सातत्याने कमी होत असून, ही परिस्थिती कायम राहिल्यास काही केंद्रे बंद होण्याचा धोका निर्माण होऊ शकतो. त्यामुळे अंगणवाड्यांमध्ये विद्यार्थ्यांची संख्या वाढविण्यासाठी शासनाने ठोस उपाययोजना कराव्यात, अशी मागणी करण्यात आली आहे.
याशिवाय अंगणवाडी सेविका आणि मदतनीस यांच्यावर दिवसेंदिवस अतिरिक्त कामांचा ताण वाढत असल्याचाही मुद्दा निवेदनात मांडण्यात आला आहे. पोषण अभियानांतर्गत मुलांना अंडी वाटपाची जबाबदारी अंगणवाड्यांवर आहे. मात्र बाजारात एका अंड्याची किंमत सुमारे दहा रुपये असताना शासनाकडून केवळ सहा रुपये अनुदान मिळत असल्याने उर्वरित रक्कम कशी भरायची, असा प्रश्न सेविकांसमोर उभा राहिला आहे.
पोषण ट्रॅकर प्रणालीमुळे प्रत्येक बालकाच्या आहाराची व पोषणाची माहिती नियमितपणे ऑनलाइन नोंदवावी लागत असून, त्यासाठी मोठ्या प्रमाणावर वेळ द्यावा लागत असल्याचेही कर्मचाऱ्यांनी सांगितले. त्याचबरोबर बीएलओ, गृहज्योती, सर्वेक्षण आणि इतर विविध शासकीय कामांची जबाबदारीही अंगणवाडी कर्मचाऱ्यांवर टाकली जात असल्याने मूळ कामावर परिणाम होत असल्याची खंत त्यांनी व्यक्त केली.
रेशन वितरणातील विलंबाचाही मुद्दा यावेळी उपस्थित करण्यात आला. मागील महिन्याचा आहारसाठा पुढील महिन्यात मिळत असल्याने पालकांकडून वारंवार विचारणा होत असून, त्यांना समाधानकारक उत्तर देताना सेविकांची मोठी अडचण होत असल्याचे निवेदनात नमूद करण्यात आले आहे. नियमित व वेळेत पोषण आहार उपलब्ध करून देण्याची मागणीही करण्यात आली.
अंगणवाडी केंद्रांचे अस्तित्व टिकविणे, विद्यार्थ्यांची पटसंख्या वाढविणे, अतिरिक्त कामाचा बोजा कमी करणे, अंडी अनुदानात वाढ करणे, पोषण आहार वेळेत उपलब्ध करून देणे तसेच विविध प्रशासकीय अडचणी तातडीने सोडवाव्यात, अशा प्रमुख मागण्या या निवेदनातून करण्यात आल्या.
हे निवेदन महिला व बालविकास विभागाच्या सीडीपीओ तसेच जिल्हा शिक्षणाधिकारी लीलावती हिरेमठ यांना सादर करण्यात आले. यावेळी खानापूर तालुक्यातील अंगणवाडी सेविका, मदतनीस आणि फेडरेशनचे पदाधिकारी मोठ्या संख्येने उपस्थित होते.
ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ವರ್ಗದ ಜೋತೆ ಎಲ್ಕೆಜಿ– ಯುಕೆಜಿ ತರಗತಿಗಳು ಆರಂಭವಾದ ಕಾರಣ ಅಂಗನವಾಡಿಗಳಲ್ಲಿನ ಮಕ್ಕಳ ಸಂಖ್ಯೆ ಕುಸಿತ; ಖಾನಾಪುರ ತಾಲ್ಲೂಕಿನ ಅಂಗನವಾಡಿ ಸಿಬ್ಬಂದಿಯಿಂದ ಮನವಿ.
ಖಾನಾಪುರ : ಖಾನಾಪುರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಅಂಗನವಾಡಿಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಅಂಗನವಾಡಿಗಳ ಸಮಸ್ಯೆಗಳನ್ನು ಪರಿಹರಿಸಿ, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಖಾನಾಪುರ ತಾಲ್ಲೂಕು ಅಂಗನವಾಡಿ ವರ್ಕರ್ಸ್ ಅಂಡ್ ಹೆಲ್ಪರ್ಸ್ ಫೆಡರೇಶನ್ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಅಂಗನವಾಡಿ ಸಿಬ್ಬಂದಿಗಳ ಮೇಲೆ ಹೆಚ್ಚುವರಿ ಕೆಲಸದ ಭಾರ ಹಾಕಲಾಗಿದೆ. ಮೂರುರಿಂದ ಆರು ವರ್ಷದ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತದೆ. ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ಸುಮಾರು 10 ರೂಪಾಯಿಯಾಗಿದೆ. ಆದರೆ ಸರ್ಕಾರವು ಪ್ರತಿ ಮೊಟ್ಟೆಗೆ ಕೇವಲ 6 ರೂಪಾಯಿ ಅನುದಾನ ನೀಡುತ್ತಿದೆ. ಉಳಿದ 4 ರೂಪಾಯಿಯನ್ನು ಯಾರು ಭರಿಸಬೇಕು ಎಂಬ ಪ್ರಶ್ನೆ ಅಂಗನವಾಡಿ ಕಾರ್ಯಕರ್ತೆಯರ ಮುಂದಿದೆ.
ಇದರ ಜೊತೆಗೆ ಪೋಷಣ್ ಟ್ರ್ಯಾಕರ್ (Poshan Tracker) ಕೆಲಸವೂ ಹೆಚ್ಚಾಗಿದೆ. ಪ್ರತಿಯೊಬ್ಬ ಮಗುವಿನ ಆಹಾರ ಹಾಗೂ ಪೌಷ್ಠಿಕ ಮಾಹಿತಿಯನ್ನು ಸರ್ಕಾರಕ್ಕೆ ದಾಖಲಿಸಿ ಸಲ್ಲಿಸಬೇಕಾಗಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್ಒ (BLO), ಗೃಹಜ್ಯೋತಿ ಸೇರಿದಂತೆ ಇತರೆ ಇಲಾಖೆಗಳ ಕೆಲಸಗಳನ್ನೂ ನೀಡಲಾಗಿದೆ. ಕಳೆದ ತಿಂಗಳ ಪಡಿತರವನ್ನು ಪ್ರಸ್ತುತ ತಿಂಗಳಲ್ಲಿ ವಿತರಿಸಲಾಗುತ್ತಿರುವುದರಿಂದ ಮಕ್ಕಳ ಪಾಲಕರ ಪ್ರಶ್ನೆಗಳಿಗೆ ಉತ್ತರ ನೀಡುವುದು ಅಂಗನವಾಡಿ ಸಿಬ್ಬಂದಿಗೆ ಕಷ್ಟಕರವಾಗುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ (CDPO) ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಖಾನಾಪುರ ತಾಲ್ಲೂಕಿನ ಅಂಗನವಾಡಿ ಸಿಬ್ಬಂದಿಗಳು ಉಪಸ್ಥಿತರಿದ್ದರು.


