खानापूर तालुक्यात विशेष मतदार यादी पुनरीक्षण मोहिमेला प्रारंभ; 312 मतदान केंद्रांवर घरपोच पडताळणी, नागरिकांना सहकार्याचे आवाहन.
खानापूर, ता. 30 (प्रतिनिधी) : भारत निवडणूक आयोगाच्या विशेष संक्षिप्त मतदार यादी पुनरीक्षण (Special Summary Revision – SIR) कार्यक्रमांतर्गत खानापूर तालुक्यात मतदार यादी शुद्धीकरण व अद्ययावतीकरणाची व्यापक मोहीम मंगळवार (ता. 30) पासून सुरू करण्यात आली आहे. या मोहिमेअंतर्गत तालुक्यातील प्रत्येक पात्र मतदाराची माहिती अचूक करण्यासाठी 312 मतदान केंद्रांवर घराघरात जाऊन पडताळणी केली जाणार आहे.

मोहिमेच्या प्रारंभी मतदान नोंदणी अधिकारी बलराम चव्हाण, सहाय्यक मतदान नोंदणी अधिकारी दुंडप्पा कोमार व सुनील देसाई, जांबोटीचे महसूल निरीक्षक, संबंधित बीएलओ, बीएलओ पर्यवेक्षक आणि कार्यालयीन कर्मचाऱ्यांनी माजी आमदार दिगंबर पाटील यांच्या निवासस्थानी भेट देऊन त्यांना व त्यांच्या कुटुंबीयांना गणना फॉर्मचे वितरण केले. त्यानंतर अधिकाऱ्यांनी इदलहोंड, केरवाड आणि गुंडेनाट्टी या गावांना भेट देत नागरिकांशी प्रत्यक्ष संवाद साधला व मतदार पुनरीक्षण मोहिमेचे महत्त्व समजावून सांगितले.
मतदान नोंदणी अधिकारी बलराम चव्हाण यांनी सांगितले की, 30 जून ते 29 जुलै 2026 या कालावधीत विशेष पुनरीक्षण मोहीम राबविण्यात येणार असून प्रत्येक मतदान केंद्रासाठी नियुक्त करण्यात आलेले बूथ लेव्हल अधिकारी (बीएलओ) घराघरात भेट देऊन मतदारांची माहिती, आवश्यक कागदपत्रे तसेच नाव, पत्ता, जन्मतारीख, छायाचित्र आणि इतर तपशीलांची पडताळणी करतील. यामधून मतदार यादी अधिक अचूक, अद्ययावत आणि त्रुटीमुक्त करण्याचा उद्देश आहे.

या मोहिमेदरम्यान नवीन मतदारांची नोंदणी, चुकीच्या नोंदींमध्ये दुरुस्ती, पत्ता बदल, मृत अथवा स्थलांतरित मतदारांची माहिती अद्ययावत करणे आदी बाबींवर विशेष भर दिला जाणार आहे. त्यामुळे प्रत्येक नागरिकाने बीएलओंना आवश्यक ती माहिती व कागदपत्रे वेळेत उपलब्ध करून देऊन प्रशासनाला सहकार्य करावे, असे आवाहन करण्यात आले आहे.
मतदार नोंदणी व पडताळणीसाठी जन्म दाखला, शाळा सोडल्याचा दाखला किंवा शैक्षणिक प्रमाणपत्र, पासपोर्ट (असल्यास), जात प्रमाणपत्र, कायम निवासी दाखला, आधार कार्ड, मतदार ओळखपत्र, पॅन कार्ड, तसेच जमीन किंवा घर वाटपाशी संबंधित प्रमाणपत्रे यांसारखी कागदपत्रे आवश्यक राहणार आहेत. संबंधित कागदपत्रे उपलब्ध असल्यास पडताळणीची प्रक्रिया अधिक सुलभ होणार असल्याचे प्रशासनाने स्पष्ट केले आहे.
ಖಾನಾಪುರ ತಾಲ್ಲೂಕಿನಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ; 312 ಮತಗಟ್ಟೆಗಳಲ್ಲಿ ಮನೆಮನೆಗೆ ತೆರಳಿ ಪರಿಶೀಲನಾ ಕಾರ್ಯಾರಂಭ, ಸಾರ್ವಜನಿಕರಿಂದ ಸಹಕಾರದ ಮನವಿ.
ಖಾನಾಪುರ, ಜೂನ್ 30 (ಪ್ರತಿನಿಧಿ): ಭಾರತಿಯ ಚುನಾವಣಾ ಆಯೋಗದ ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ (Special intensive Summary Revision – SIR) ಕಾರ್ಯಕ್ರಮದ ಅಂಗವಾಗಿ ಖಾನಾಪುರ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಹಾಗೂ ನವೀಕರಣದ ಅಂಗವಾಗಿ ವ್ಯಾಪಕ ಅಭಿಯಾನವನ್ನು ಮಂಗಳವಾರ (ಜೂನ್ 30) ರಿಂದ ಆರಂಭಿಸಲಾಗಿದೆ. ಈ ಅಭಿಯಾನದಡಿ ತಾಲ್ಲೂಕಿನ ಪ್ರತಿಯೊಬ್ಬ ಅರ್ಹ ಮತದಾರರ ಮಾಹಿತಿಯನ್ನು ನಿಖರಗೊಳಿಸುವ ಉದ್ದೇಶದಿಂದ 312 ಮತಗಟ್ಟೆಗಳಲ್ಲಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಲಾಗುತ್ತದೆ.
ಅಭಿಯಾನದ ಆರಂಭದ ಸಂದರ್ಭದಲ್ಲಿ ಮತದಾರರ ನೋಂದಣಿ ಅಧಿಕಾರಿ ಬಲರಾಮ ಚವ್ಹಾಣ್, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳಾದ ದುಂಡಪ್ಪ ಕೋಮಾರ ಹಾಗೂ ಸುನೀಲ ದೇಸಾಯಿ, ಜಾಂಬೋಟಿಯ ಕಂದಾಯ ನಿರೀಕ್ಷಕರು, ಸಂಬಂಧಿತ ಬೂತ್ ಲೆವೆಲ್ ಅಧಿಕಾರಿಗಳು (BLO), ಬಿಎಲ್ಒ ಮೇಲ್ವಿಚಾರಕರು ಹಾಗೂ ಕಚೇರಿ ಸಿಬ್ಬಂದಿಗಳು ಮಾಜಿ ಶಾಸಕ ದಿಗಂಬರ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಗಣತಿ ನಮೂನೆ (Enumeration Form) ವಿತರಿಸಿದರು. ನಂತರ ಅಧಿಕಾರಿಗಳು ಇದಲಹೊಂಡ, ಕೇರವಾಡ ಹಾಗೂ ಗುಂಡೆನಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಿ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಮಹತ್ವವನ್ನು ವಿವರಿಸಿದರು.
ಮತದಾರರ ನೋಂದಣಿ ಅಧಿಕಾರಿ ಬಲರಾಮ ಚವ್ಹಾಣ್ ಅವರು ಮಾತನಾಡಿ, 2026ರ ಜೂನ್ 30ರಿಂದ ಜುಲೈ 29ರವರೆಗೆ ವಿಶೇಷ ಪರಿಷ್ಕರಣೆ ಅಭಿಯಾನವನ್ನು ನಡೆಸಲಾಗುತ್ತಿದ್ದು, ಪ್ರತಿ ಮತಗಟ್ಟೆಗೆ ನೇಮಕಗೊಂಡಿರುವ ಬೂತ್ ಲೆವೆಲ್ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ, ಅಗತ್ಯ ದಾಖಲೆಗಳು ಹಾಗೂ ಹೆಸರು, ವಿಳಾಸ, ಜನ್ಮ ದಿನಾಂಕ, ಭಾವಚಿತ್ರ ಮತ್ತು ಇತರೆ ವಿವರಗಳನ್ನು ಪರಿಶೀಲಿಸಲಿದ್ದಾರೆ. ಇದರ ಮೂಲಕ ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ, ನವೀಕೃತ ಹಾಗೂ ದೋಷರಹಿತವಾಗಿಸುವುದು ಮುಖ್ಯ ಉದ್ದೇಶವಾಗಿದೆ.
ಈ ಅಭಿಯಾನದ ಸಂದರ್ಭದಲ್ಲಿ ಹೊಸ ಮತದಾರರ ನೋಂದಣಿ, ತಪ್ಪಾದ ದಾಖಲೆಗಳ ತಿದ್ದುಪಡಿ, ವಿಳಾಸ ಬದಲಾವಣೆ, ಮೃತಪಟ್ಟ ಅಥವಾ ಸ್ಥಳಾಂತರಗೊಂಡ ಮತದಾರರ ಮಾಹಿತಿಯನ್ನು ನವೀಕರಿಸುವುದು ಸೇರಿದಂತೆ ವಿವಿಧ ವಿಷಯಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಬೂತ್ ಲೆವೆಲ್ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯೊಂದಿಗೆ ಬೇಕಾದ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಿ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಮತದಾರರ ನೋಂದಣಿ ಹಾಗೂ ಪರಿಶೀಲನೆಗಾಗಿ ಜನನ ಪ್ರಮಾಣಪತ್ರ, ಶಾಲೆ ತೊರೆದ ಪ್ರಮಾಣಪತ್ರ ಅಥವಾ ಶೈಕ್ಷಣಿಕ ಪ್ರಮಾಣಪತ್ರ, ಪಾಸ್ಪೋರ್ಟ್ (ಇದ್ದಲ್ಲಿ), ಜಾತಿ ಪ್ರಮಾಣಪತ್ರ, ಶಾಶ್ವತ ನಿವಾಸ ಪ್ರಮಾಣಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಹಾಗು ಜಮೀನು ಅಥವಾ ಮನೆ ಹಂಚಿಕೆ ಸಂಬಂಧಿತ ಪ್ರಮಾಣಪತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಸಂಬಂಧಿತ ದಾಖಲೆಗಳು ಲಭ್ಯವಿದ್ದಲ್ಲಿ ಪರಿಶೀಲನೆ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ ಎಂದು ಆಡಳಿತ ಸ್ಪಷ್ಟಪಡಿಸಿದೆ.


