चापगाव जलजीवन मिशन कामांच्या चौकशीची मागणी; ग्रामस्थांचे तालुका पंचायतला निवेदन.
खानापूर : प्रतिनिधी
चापगाव (ता. खानापूर) ग्रामपंचायत हद्दीत जल जीवन मिशन (JJM) अंतर्गत राबविण्यात आलेल्या पाणीपुरवठा योजनेतील कथित अपूर्ण व निकृष्ट कामांची सखोल चौकशी करण्यात यावी, तसेच सर्व त्रुटी दूर होईपर्यंत संबंधित कंत्राटदारास कोणतेही पूर्णता प्रमाणपत्र, तसेच काम केलेले अंतिम बिल अथवा ना हरकत प्रमाणपत्र देऊ नये, अशी मागणी ग्रामस्थांनी केली आहे.
माजी ग्रामपंचायत अध्यक्ष रमेश मल्हारी धबाले यांच्या नेतृत्वाखाली ग्रामस्थांच्या शिष्टमंडळाने तालुका पंचायतीचे खानापूरचे कार्यकारी अधिकारी व चापगाव ग्रामपंचायत चे पीडीओ यांना निवेदन सादर केले.

निवेदनात नमूद करण्यात आले आहे की, चापगाव येथे जल जीवन मिशन योजनेसाठी सुमारे तीन कोटी रुपयांचा निधी मंजूर झाला असून मोठ्या प्रमाणावर कामे करण्यात आली आहेत. मात्र अनेक कामे अद्याप अपूर्ण असल्याचे दिसून येत असून, मंजूर अंदाजपत्रक व तांत्रिक निकषांनुसार कामे पूर्ण झाली आहेत की नाहीत याची सखोल पडताळणी करणे आवश्यक आहे.
ग्रामस्थांनी योजनेअंतर्गत वापरण्यात आलेल्या साहित्याचा दर्जा, कामाची गुणवत्ता, पाणीपुरवठ्याची नियमितता, लाभार्थ्यांपर्यंत पोहोच आणि योजनेची एकूण कार्यक्षमता यांची प्रत्यक्ष तपासणी करण्याची मागणी केली आहे. तसेच चापगाव येथे ग्रामसभा आयोजित करून ग्रामस्थांचे अभिप्राय, तक्रारी आणि सूचना जाणून घेण्यात याव्यात, अशीही मागणी करण्यात आली आहे.
निवेदनात आढळून येणाऱ्या सर्व त्रुटी दूर होईपर्यंत ग्रामपंचायतीने योजनेचा ताबा स्वीकारू नये आणि संबंधित कंत्राटदारास कोणतीही मंजुरी देऊ नये, अशी स्पष्ट भूमिका मांडण्यात आली आहे. याशिवाय, दोषी कंत्राटदारांवर दंडात्मक कारवाई करावी तसेच त्यांना पाठबळ देणाऱ्या संबंधित अधिकाऱ्यांवरही शिस्तभंगाची कारवाई करावी, अशी मागणी ग्रामस्थांनी केली आहे.
ग्रामस्थांच्या तक्रारींकडे दुर्लक्ष झाल्यास अथवा समाधानकारक कार्यवाही न झाल्यास तालुका पंचायत कार्यालयासमोर धरणे आंदोलन व निदर्शने करण्याचा इशाराही निवेदनातून देण्यात आला आहे.
यावेळी ग्रामपंचायतचे माजी अध्यक्ष रमेश धबाले, एसडीएमसी अध्यक्ष मष्णु चोपडे, यल्लाप्पा कदम, लक्ष्मण पाटील, गणेश कदम, बळवंत पाटील, यल्लाप्पा पाटील, जग्गू पाटील, सुनील धबाले, यल्लाप्पा धबाले, मष्णु सुतार, लक्ष्मण मादार, अर्जुन मादार, विठ्ठल सुतार, हनुमंत पाटील, तम्मा मारीहाळ, संजू मादार, बाळू गुरव, निंगाप्पा गुरव आदी ग्रामस्थ उपस्थित होते. निवेदनावर 100 पेक्षा जास्त नागरिकांच्या सह्या आहेत.
ಚಾಪಗಾವ್ ಜಲಜೀವನ ಮಿಷನ್ ಕಾಮಗಾರಿಗಳ ತನಿಖೆಗೆ ಆಗ್ರಹ; ಗ್ರಾಮಸ್ಥರಿಂದ ತಾಲ್ಲೂಕು ಪಂಚಾಯಿತಿಗೆ ಮನವಿ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಚಾಪಗಾವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ (JJM) ಅಡಿಯಲ್ಲಿ ಕೈಗೊಳ್ಳಲಾದ ಕುಡಿಯುವ ನೀರಿನ ಯೋಜನೆಯಲ್ಲಿನ ಆರೋಪಿತ ಅಪೂರ್ಣ ಹಾಗೂ ಕಳಪೆ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ, ಎಲ್ಲಾ ದೋಷಗಳು ಮತ್ತು ಕೊರತೆಗಳನ್ನು ಸರಿಪಡಿಸುವವರೆಗೆ ಸಂಬಂಧಿತ ಗುತ್ತಿಗೆದಾರರಿಗೆ ಯಾವುದೇ ಪೂರ್ಣತಾ ಪ್ರಮಾಣಪತ್ರ, ಅಂತಿಮ ಬಿಲ್ ಪಾವತಿ ಅಥವಾ ನಿರಾಕ್ಷೇಪಣಾ ಪತ್ರ (NOC) ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಮಲ್ಹಾರಿ ಧಬಾಳೆ ಅವರ ನೇತೃತ್ವದಲ್ಲಿ ಗ್ರಾಮಸ್ಥರ ನಿಯೋಗವು ಖಾನಾಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು (EO) ಹಾಗೂ ಚಾಪಗಾವ್ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ಮನವಿ ಸಲ್ಲಿಸಿತು.
ಮನವಿಯಲ್ಲಿ ಉಲ್ಲೇಖಿಸಿರುವಂತೆ, ಚಾಪಗಾವ್ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಗಾಗಿ ಸುಮಾರು ಮೂರು ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಯೋಜನೆಯಡಿ ವ್ಯಾಪಕ ಪ್ರಮಾಣದ ಕಾಮಗಾರಿಗಳು ನಡೆದಿವೆ. ಆದರೆ ಹಲವಾರು ಕಾಮಗಾರಿಗಳು ಇನ್ನೂ ಅಪೂರ್ಣವಾಗಿದ್ದು, ಮಂಜೂರಾದ ಅಂದಾಜು ಪತ್ರಿಕೆ ಹಾಗೂ ತಾಂತ್ರಿಕ ಮಾನದಂಡಗಳ ಪ್ರಕಾರ ಕಾಮಗಾರಿಗಳು ಪೂರ್ಣಗೊಂಡಿವೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.
ಯೋಜನೆಯಡಿ ಬಳಸಲಾದ ಸಾಮಗ್ರಿಗಳ ಗುಣಮಟ್ಟ, ಕಾಮಗಾರಿಯ ಮಟ್ಟ, ಕುಡಿಯುವ ನೀರಿನ ಸರಬರಾಜಿನ ನಿಯಮಿತತೆ, ಫಲಾನುಭವಿಗಳಿಗೆ ಯೋಜನೆ ತಲುಪಿರುವ ಪ್ರಮಾಣ ಹಾಗೂ ಯೋಜನೆಯ ಒಟ್ಟಾರೆ ಕಾರ್ಯಕ್ಷಮತೆಯ ಕುರಿತು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅದರ ಜೊತೆಗೆ, ಚಾಪಗಾವ್ ಗ್ರಾಮದಲ್ಲಿ ಗ್ರಾಮಸಭೆ ಆಯೋಜಿಸಿ ಗ್ರಾಮಸ್ಥರ ಅಭಿಪ್ರಾಯಗಳು, ದೂರುಗಳು ಮತ್ತು ಸಲಹೆಗಳನ್ನು ಆಲಿಸಬೇಕು ಎಂಬ ಬೇಡಿಕೆಯನ್ನೂ ಮನವಿಯಲ್ಲಿ ಮಾಡಲಾಗಿದೆ.
ಕಾಮಗಾರಿಗಳಲ್ಲಿರುವ ಎಲ್ಲಾ ದೋಷಗಳು ಮತ್ತು ಕೊರತೆಗಳನ್ನು ಸರಿಪಡಿಸುವವರೆಗೆ ಗ್ರಾಮ ಪಂಚಾಯಿತಿಯು ಯೋಜನೆಯನ್ನು ತನ್ನ ವಶಕ್ಕೆ ಸ್ವೀಕರಿಸಬಾರದು ಹಾಗೂ ಸಂಬಂಧಿತ ಗುತ್ತಿಗೆದಾರರಿಗೆ ಯಾವುದೇ ರೀತಿಯ ಅನುಮೋದನೆ ನೀಡಬಾರದು ಎಂದು ಮನವಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಇದರ ಜೊತೆಗೆ, ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಬೇಕು ಹಾಗೂ ಅವರಿಗೆ ಬೆಂಬಲ ನೀಡಿರುವ ಸಂಬಂಧಿತ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ದೂರುಗಳನ್ನು ನಿರ್ಲಕ್ಷಿಸಿದಲ್ಲಿ ಅಥವಾ ತೃಪ್ತಿಕರ ಕ್ರಮ ಕೈಗೊಳ್ಳದಿದ್ದಲ್ಲಿ ಖಾನಾಪುರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಮೇಶ್ ಧಬಾಲೆ, ಎಸ್ಡಿಎಂಸಿ ಅಧ್ಯಕ್ಷ ಮಷ್ಣು ಚೋಪಡೆ, ಯಲ್ಲಪ್ಪ ಕದಮ, ಲಕ್ಷ್ಮಣ ಪಾಟೀಲ, ಗಣೇಶ್ ಕದಮ, ಬಳವಂತ ಪಾಟೀಲ, ಯಲ್ಲಪ್ಪ ಪಾಟೀಲ, ಜಗ್ಗು ಪಾಟೀಲ, ಸುನೀಲ್ ಧಬಾಲೆ, ಯಲ್ಲಪ್ಪ ಧಬಾಲೆ, ಮಷ್ಣು ಸುತಾರ, ಲಕ್ಷ್ಮಣ ಮಾದಾರ, ಅರ್ಜುನ ಮಾದಾರ, ವಿಠ್ಠಲ ಸುತಾರ, ಹನುಮಂತ ಪಾಟೀಲ, ತಮ್ಮಾ ಮಾರಿಹಾಳ, ಸಂಜು ಮಾದಾರ, ಬಾಳು ಗುರುವ, ನಿಂಗಪ್ಪ ಗುರುವ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಮನವಿಗೆ 100 ಕ್ಕೂ ಹೆಚ್ಚು ಗ್ರಾಮಸ್ಥರ ಸಹಿಗಳು ಇರುವುದಾಗಿ ತಿಳಿದುಬಂದಿದೆ.


