शाळेसमोर साचणाऱ्या कचऱ्यामुळे विद्यार्थ्यांचे हाल; एसडीएमसी कमिटीचे नगरपंचायतीला निवेदन.
खानापूर : प्रतिनिधी
खानापूर येथील चिरमुरकर गल्लीतील सरकारी मराठी उच्च प्राथमिक शाळेच्या प्रवेशद्वारासमोर दर रविवारी व सोमवारी मोठ्या प्रमाणात कचरा साचत असल्याने विद्यार्थ्यांसह शिक्षकांना मोठा त्रास सहन करावा लागत आहे. या समस्येकडे तातडीने लक्ष देऊन कचरा टाकणाऱ्या संबंधित भाजीपाला व मासे विक्रेत्यांवर कारवाई करावी, अशी मागणी शाळा विकास व व्यवस्थापन समिती (एसडीएमसी), व पालक वर्ग आणि परिसरातील नागरिकांनी नगरपंचायतीकडे निवेदनाद्वारे केली आहे.
नगरपंचायतीच्या मुख्याधिकाऱ्यांना सादर करण्यात आलेल्या निवेदनात म्हटले आहे की, खानापूर येथे दर रविवारी आठवडी बाजार भरतो. त्याचबरोबर चिरमुरकर गल्ली परिसरातही बाजार भरत असून, वाळवलेले मासे, झिंगे तसेच भाजीपाला विक्रेते बाजार संपल्यानंतर आपला टाकाऊ कचरा शाळेच्या प्रवेशद्वारासमोरच टाकून जातात. परिणामी सोमवारी सकाळी शाळा सुरू होताना विद्यार्थ्यांना व शिक्षकांना दुर्गंधीयुक्त कचऱ्यातून वाट काढत शाळेत प्रवेश करावा लागतो.
या प्रकारामुळे विद्यार्थ्यांच्या आरोग्याचा प्रश्न निर्माण झाला असून शाळेच्या परिसराची स्वच्छता व शैक्षणिक वातावरणही बाधित होत असल्याची तक्रार एसडीएमसी कमिटी व नागरिकांनी केली आहे. विशेष म्हणजे यापूर्वीही नगरपंचायतीकडे याबाबत निवेदन देण्यात आले होते. मात्र अद्याप कोणतीही ठोस कारवाई करण्यात आलेली नसल्याचा आरोप निवेदनात करण्यात आला आहे.
नगरपंचायतीने संबंधित भाजीपाला व मासेविक्रेत्यांना सक्त ताकीद देऊन शाळेसमोर कचरा टाकण्यास प्रतिबंध करावा. तसेच शाळा सुरू होण्यापूर्वी पहाटेच सदर कचरा हटवून परिसर स्वच्छ ठेवावा, अशी मागणी करण्यात आली आहे.
याबाबत तातडीने उपाययोजना न झाल्यास नगरपंचायतीविरोधात आंदोलनात्मक भूमिका घेण्यात येईल, असा इशाराही निवेदनातून देण्यात आला आहे.
या निवेदनावर एसडीएमसी अध्यक्ष डी. एन. मोटार यांच्यासह हनमंत सुतार, अमीर अन्निगेरी, अनिल पाटील, यल्लाप्पा कदम, संतोष कवळेकर, शिवराज कदम, भरमाणी कदम, सटवाजी गुरव, दत्ताराम गुरव, दीपिका मोटार, सुजाता सूर्यवंशी, संजना मादार, मयुरी मोरे, दीपिका मोटार आदींच्या स्वाक्षऱ्या आहेत.
ಶಾಲೆಯ ಮುಂಭಾಗದಲ್ಲಿ ಸೇರುವ ಕಸದ ರಾಶಿಯಿಂದ ವಿದ್ಯಾರ್ಥಿಗಳಿಗೆ ತೊಂದರೆ; ಎಸ್ಡಿಎಂಸಿ ಸಮಿತಿಯಿಂದ ಪಟ್ಟಣ ಪಂಚಾಯತಿಗೆ ಮನವಿ.
ಖಾನಾಪುರ : ಪ್ರತಿನಿಧಿ
ಖಾನಾಪುರದ ಚಿರಮುರಕರ ಗಲ್ಲಿಯಲ್ಲಿರುವ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದ ಎದುರು ಪ್ರತಿ ಭಾನುವಾರ ಹಾಗೂ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತಕ್ಷಣ ಗಮನಕ್ಕೆ ತೆಗೆದುಕೊಂಡು ಶಾಲೆಯ ಮುಂದೆ ಕಸ ಹಾಕುತ್ತಿರುವ ಸಂಬಂಧಿತ ತರಕಾರಿ ಹಾಗೂ ಮೀನು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್ಡಿಎಂಸಿ), ಪೋಷಕರು ಹಾಗೂ ಸ್ಥಳೀಯ ನಾಗರಿಕರು ಪಟ್ಟಣ ಪಂಚಾಯತಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಖಾನಾಪುರದಲ್ಲಿ ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತದೆ. ಅದಲ್ಲದೆ ಚಿರಮುರಕರ ಗಲ್ಲಿ ಪ್ರದೇಶದಲ್ಲಿಯೂ ಸಂತೆ ನಡೆಯುತ್ತಿದ್ದು, ಒಣಮೀನು, ಹಾಗೂ ತರಕಾರಿ ಮಾರಾಟಗಾರರು ವ್ಯಾಪಾರ ಮುಗಿದ ನಂತರ ತಮ್ಮ ತ್ಯಾಜ್ಯವನ್ನು ಶಾಲೆಯ ಪ್ರವೇಶ ದ್ವಾರದ ಎದುರೇ ಎಸೆಯುತ್ತಾರೆ ಎಂದು ತಿಳಿಸಲಾಗಿದೆ. ಇದರ ಪರಿಣಾಮವಾಗಿ ಸೋಮವಾರ ಬೆಳಿಗ್ಗೆ ಶಾಲೆ ಆರಂಭವಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದುರ್ವಾಸನೆ ಬೀರುವ ಕಸದ ಮಧ್ಯೆ ದಾರಿ ಮಾಡಿಕೊಂಡು ಶಾಲೆಗೆ ಪ್ರವೇಶಿಸಬೇಕಾದ ದುಸ್ಥಿತಿ ಉಂಟಾಗಿದೆ.
ಈ ಪರಿಸ್ಥಿತಿಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ಶಾಲೆಯ ಸ್ವಚ್ಛತೆ ಹಾಗೂ ಶೈಕ್ಷಣಿಕ ವಾತಾವರಣಕ್ಕೂ ಧಕ್ಕೆಯಾಗುತ್ತಿದೆ ಎಂದು ಎಸ್ಡಿಎಂಸಿ ಸಮಿತಿ ಹಾಗೂ ನಾಗರಿಕರು ದೂರಿದ್ದಾರೆ. ವಿಶೇಷವೆಂದರೆ, ಈ ವಿಷಯವಾಗಿ ಈ ಹಿಂದೆ ಸಹ ಪಟ್ಟಣ ಪಂಚಾಯತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಪಟ್ಟಣ ಪಂಚಾಯತಿಯು ಸಂಬಂಧಿತ ತರಕಾರಿ ಹಾಗೂ ಮೀನು ಮಾರಾಟಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಶಾಲೆಯ ಮುಂದೆ ಕಸ ಹಾಕುವುದನ್ನು ತಡೆಯಬೇಕು. ಅಲ್ಲದೆ ಶಾಲೆ ಆರಂಭವಾಗುವ ಮೊದಲು ಬೆಳಗ್ಗಿನ ಜಾವವೇ ಕಸವನ್ನು ತೆರವುಗೊಳಿಸಿ ಶಾಲಾ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಪಟ್ಟಣ ಪಂಚಾಯತಿಯ ವಿರುದ್ಧ ಹೋರಾಟಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಮನವಿಗೆ ಎಸ್ಡಿಎಂಸಿ ಅಧ್ಯಕ್ಷ ಡಿ.ಎನ್. ಮೋಟಾರ್ ಅವರೊಂದಿಗೆ ಹನುಮಂತ ಸುತಾರ, ಅಮೀರ್ ಅನ್ನಿಗೇರಿ, ಅನಿಲ್ ಪಾಟೀಲ್, ಯಲ್ಲಪ್ಪ ಕದಮ, ಸಂತೋಷ ಕವಳೆಕರ, ಶಿವರಾಜ ಕಡಂ, ಭರಮಾಣಿ ಕದಮ, ಸಟ್ವಾಜಿ ಗುರವ, ದತ್ತಾರಾಮ ಗುರವ, ದೀಪಿಕಾ ಮೋಟಾರ್, ಸುಜಾತಾ ಸೂರ್ಯವಂಶಿ, ಸಂಜನಾ ಮಾದಾರ, ಮಯೂರಿ ಮೋರೆ, ದೀಪಿಕಾ ಮೋಟಾರ್ ಸೇರಿದಂತೆ ಹಲವರ ಸಹಿಗಳು ಇವೆ.


