78 वर्षांच्या प्रतीक्षेनंतर औरतबैलमध्ये ज्ञानदीप प्रज्वलित; आमदार विठ्ठलराव हलगेकर यांच्या हस्ते नव्या शाळेचा शुभारंभ.
खानापूर : प्रतिनिधी
खानापूर तालुक्यातील बाळगुंद परिसरातील दुर्गम आणि दुर्लक्षित मानल्या जाणाऱ्या औरतबैल (गावळीवाडा) गावासाठी आजचा दिवस ऐतिहासिक ठरला. स्वातंत्र्यानंतर तब्बल 78 वर्षे प्राथमिक शिक्षणाच्या सुविधेपासून वंचित राहिलेल्या या गावात अखेर पहिली ते पाचवीपर्यंतच्या नव्या शाळेची सुरुवात झाली. खानापूर मतदारसंघाचे आमदार विठ्ठलराव हलगेकर यांच्या हस्ते शाळेचे उद्घाटन उत्साहपूर्ण वातावरणात पार पडले.
यावेळी तालुका शिक्षणाधिकारी पी. रामाप्पा, ग्रामस्थ, महिला, युवक तसेच विद्यार्थी मोठ्या संख्येने उपस्थित होते. शाळा सुरू झाल्यामुळे गावात आनंदाचे वातावरण निर्माण झाले असून ग्रामस्थांनी या उपक्रमाचे स्वागत केले.
अनेक वर्षांपासून या भागातील विद्यार्थ्यांना प्राथमिक शिक्षणासाठी दूरच्या गावांमध्ये जावे लागत होते. विशेषतः पावसाळ्याच्या काळात लहान मुलांना जीव धोक्यात घालून शिक्षणासाठी प्रवास करावा लागत असल्याने पालकांमध्ये चिंतेचे वातावरण होते. या समस्येची दखल घेत आमदार हलगेकर यांनी शासनाकडे सातत्याने पाठपुरावा करून गावासाठी नवीन शाळा मंजूर करून घेतली. त्यानंतर आवश्यक प्रक्रिया पूर्ण करत आज प्रत्यक्ष शाळेचा शुभारंभ करण्यात आला.
विद्यार्थ्यांच्या चेहऱ्यावरील आनंद हेच माझे समाधान : आमदार हलगेकर..
उद्घाटन समारंभात बोलताना आमदार विठ्ठलराव हलगेकर यांनी भावना व्यक्त करत सांगितले की, “देशाला स्वातंत्र्य मिळून अनेक दशके लोटली, तरी या गावात शिक्षणाची मूलभूत सुविधा उपलब्ध नव्हती. येथील विद्यार्थ्यांना भोगाव्या लागणाऱ्या अडचणी पाहून मन हेलावून जात होते. आज या मुलांसाठी शाळेची दारे खुली होताना त्यांच्या चेहऱ्यावरील आनंद पाहून मला मोठे समाधान मिळत आहे. या कार्यात योगदान देता आले, हे माझे भाग्य समजतो.”
शाळेच्या पहिल्याच दिवशी ग्रामस्थांनी आमदार हलगेकर यांचे उत्स्फूर्त स्वागत करत कृतज्ञता व्यक्त केली. नव्या शाळेमुळे औरतबैलसह परिसरातील विद्यार्थ्यांना शिक्षणासाठी भटकंती करावी लागणार नाही. त्यामुळे गावाच्या शैक्षणिक विकासाला नवी दिशा मिळणार असून भविष्यातील पिढ्यांसाठी प्रगतीचे नवे दालन खुले झाले आहे.
78 ವರ್ಷಗಳ ನಿರೀಕ್ಷೆಯ ಬಳಿಕ ಔರತಬೈಲ್ ಊರಿನಲ್ಲಿ ಜ್ಞಾನದೀಪ ಬೆಳಗಿತು; ಶಾಸಕ ವಿಠ್ಠಲರಾವ್ ಹಲಗೇಕರ ಅವರಿಂದ ಹೊಸ ಶಾಲೆಯ ಉದ್ಘಾಟನೆ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಬಾಳಗುಂದ ಪ್ರದೇಶದ ದುರ್ಗಮ ಹಾಗೂ ನಿರ್ಲಕ್ಷಿತ ಗ್ರಾಮವೆಂದು ಪರಿಗಣಿಸಲ್ಪಟ್ಟ ಔರತಬೈಲ್ (ಗವಳಿವಾಡಾ) ಗ್ರಾಮಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಸ್ವಾತಂತ್ರ್ಯಾ ನಂತರ ಸುಮಾರು 78 ವರ್ಷಗಳ ಕಾಲ ಪ್ರಾಥಮಿಕ ಶಿಕ್ಷಣ ಸೌಲಭ್ಯದಿಂದ ವಂಚಿತವಾಗಿದ್ದ ಈ ಗ್ರಾಮದಲ್ಲಿ ಕೊನೆಗೂ ಪ್ರಥಮ ತರಗತೂಯಿಂದ ಐದನೇ ತರಗತಿವರೆಗಿನ ಹೊಸ ಶಾಲೆಯ ಆರಂಭವಾಗಿದೆ. ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಠ್ಠಲರಾವ್ ಹಲಗೇಕರ ಅವರಿಂದ ಶಾಲೆಯ ಉದ್ಘಾಟನೆ ಸಂಭ್ರಮದಿಂದ ನೆರವೇರಿತು.
ಈ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿ ಪಿ. ರಾಮಪ್ಪ, ಗ್ರಾಮಸ್ಥರು, ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿತ್ತು, ಗ್ರಾಮಸ್ಥರು ಈ ಉಪಕ್ರಮವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಹಲವಾರು ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣಕ್ಕಾಗಿ ದೂರದ ಗ್ರಾಮಗಳಿಗೆ ತೆರಳಬೇಕಾಗುತ್ತಿತ್ತು. ವಿಶೇಷವಾಗಿ ಮಳೆಗಾಲದಲ್ಲಿ ಪುಟ್ಟ ಮಕ್ಕಳು ಜೀವವನ್ನು ಪಣಕ್ಕಿಟ್ಟು ಶಿಕ್ಷಣಕ್ಕಾಗಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದ್ದುದರಿಂದ ಪಾಲಕರಲ್ಲಿ ಆತಂಕ ಮನೆ ಮಾಡಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಹಲಗೇಕರ ಅವರು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನ ನಡೆಸಿ ಗ್ರಾಮಕ್ಕೆ ಹೊಸ ಶಾಲೆಯನ್ನು ಮಂಜೂರು ಮಾಡಿಸಿದರು. ನಂತರ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇಂದು ಶಾಲೆಯನ್ನು ಅಧಿಕೃತವಾಗಿ ಆರಂಭಿಸಲಾಯಿತು.
ವಿದ್ಯಾರ್ಥಿಗಳ ಮುಖದಲ್ಲಿನ ಸಂತೋಷವೇ ನನ್ನ ತೃಪ್ತಿ : ಶಾಸಕ ಹಲಗೇಕರ
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ವಿಠ್ಠಲರಾವ್ ಹಲಗೇಕರ, “ದೇಶಕ್ಕೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ಈ ಗ್ರಾಮದಲ್ಲಿ ಶಿಕ್ಷಣದ ಮೂಲಭೂತ ಸೌಲಭ್ಯ ಇರಲಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಕಷ್ಟಗಳನ್ನು ಕಂಡಾಗ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಇಂದು ಈ ಮಕ್ಕಳಿಗಾಗಿ ಶಾಲೆಯ ಬಾಗಿಲು ತೆರೆಯುತ್ತಿರುವ ಸಂದರ್ಭದಲ್ಲಿ ಅವರ ಮುಖದಲ್ಲಿನ ಸಂತೋಷವನ್ನು ಕಂಡು ನನಗೆ ಅಪಾರ ತೃಪ್ತಿ ದೊರಕಿದೆ. ಈ ಕಾರ್ಯದಲ್ಲಿ ನನ್ನಿಂದ ಕೊಡುಗೆ ನೀಡಲು ಸಾಧ್ಯವಾದುದು ನನ್ನ ಭಾಗ್ಯವೆಂದು ಭಾವಿಸುತ್ತೇನೆ,” ಎಂದು ಹೇಳಿದರು.
ಶಾಲೆಯ ಮೊದಲ ದಿನವೇ ಗ್ರಾಮಸ್ಥರು ಶಾಸಕ ಹಲಗೇಕರ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದು, ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಹೊಸ ಶಾಲೆಯ ಆರಂಭದಿಂದ ಔರತಬೈಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ದೂರದೂರಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. ಇದರಿಂದ ಗ್ರಾಮದ ಶೈಕ್ಷಣಿಕ ಅಭಿವೃದ್ಧಿಗೆ ಹೊಸ ದಿಕ್ಕು ದೊರಕಲಿದ್ದು, ಮುಂದಿನ ಪೀಳಿಗೆಗಳಿಗೆ ಪ್ರಗತಿಯ ಹೊಸ ದಾರಿಗಳು ತೆರೆಯಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


