हलगा येथे भव्य श्री लक्ष्मी मंदिर उभारणीस खासदार विश्वेश्वर हेगडे-कागेरी यांची भेट; निधी देण्याची ग्वाही.
खानापूर : प्रभू श्री रामचंद्रांनी समुद्रावर सेतू बांधताना वानर सैन्याबरोबरच एका खारुताईनेही आपल्या परीने योगदान दिल्याची कथा सर्वश्रुत आहे. त्याचप्रमाणे आपणही खासदार या नात्याने गावाच्या विकासकामांमध्ये ‘खारीचा वाटा’ उचलणार असल्याचे प्रतिपादन खासदार विश्वेश्वर हेगडे-कागेरी यांनी केले. खानापूर तालुक्यातील हलगा येथे नव्याने उभारण्यात येत असलेल्या भव्य व दिव्य श्री लक्ष्मी मंदिराच्या पाहणीदरम्यान ते बोलत होते.

हलगा (ता. खानापूर) येथे ग्रामस्थांच्या सहकार्याने श्री लक्ष्मी मंदिराचा जीर्णोद्धार करण्यात येत असून, जुने मंदिर हटवून त्याच ठिकाणी नव्या मंदिराची उभारणी सुरू आहे. या बांधकामाची पाहणी करण्यासाठी खासदार विश्वेश्वर हेगडे-कागेरी यांनी शुक्रवार, दि. 10 एप्रिल रोजी धावती भेट दिली. मंदिराच्या बांधकामाची माहिती घेत त्यांनी समाधान व्यक्त केले तसेच मंदिरासाठी खासदार निधीतून भरघोस निधी मंजूर करण्याची ग्वाही दिली.
यावेळी त्यांच्यासोबत खानापूर तालुक्याचे माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील, भाजपा राज्य कार्यकारिणी सदस्य प्रमोद कोचेरी, तालुका पंचायतीचे माजी उपसभापती व कर्नाटक राज्य वननिगमचे माजी सदस्य सुरेश देसाई आदी मान्यवर उपस्थित होते.
कार्यक्रमाच्या सुरुवातीला श्री लक्ष्मी मंदिर बांधकाम समितीचे अध्यक्ष रणजीत पाटील यांनी खासदारांचे स्वागत करून प्रास्ताविक भाषण केले. मंदिर बांधकाम समितीच्या वतीने खासदार विश्वेश्वर हेगडे-कागेरी यांचा सत्कार करण्यात आला. सत्काराला उत्तर देताना खासदारांनी मंदिराच्या उभारणीबाबत समाधान व्यक्त करत, गावात धार्मिक व शांततेचे वातावरण निर्माण होण्यासाठी अशी मंदिरे आवश्यक असल्याचे मत व्यक्त केले. ग्रामस्थांनी एकजुटीने मंदिर उभारणीचे कार्य हाती घेतल्याबद्दल त्यांनी विशेष कौतुक केले.
यावेळी श्री लक्ष्मी मंदिर जीर्णोद्धार समितीचे पदाधिकारी व सदस्य, पंचमंडळी, हलगा ग्रामस्थ तसेच महिला वर्ग मोठ्या संख्येने उपस्थित होता.
ಹಲಗಾ ಗ್ರಾಮದಲ್ಲಿ ಭವ್ಯ ಶ್ರೀ ಲಕ್ಷ್ಮೀ ದೇವಸ್ಥಾನ ನಿರ್ಮಾಣಕ್ಕೆ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ಭೇಟಿ; ಆರ್ಥಿಕ ನೆರವು ನೀಡುವ ಭರವಸೆ.
ಖಾನಾಪುರ : ಭಗವಾನ್ ಶ್ರೀ ರಾಮಚಂದ್ರರು ಸಮುದ್ರದ ಮೇಲೆ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ವಾನರಸೇನೆ ಜೊತೆಗೆ ಒಂದು ಅಳಿಲೂ ತನ್ನ ಶಕ್ತಿಮಟ್ಟಿಗೆ ಸಹಾಯ ಮಾಡಿದ ಕಥೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ನಾವು ಕೂಡ ತಮ್ಮ ಕ್ಷೇತ್ರದ ಸಂಸದರ ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ‘ಅಳಿಲಿನ ಪಾಲು’ ನೀಡುವೆವು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭರವಸೆ ನೀಡಿದರು. ಅವರು ಖಾನಾಪುರ ತಾಲ್ಲೂಕಿನ ಹಲಗಾ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಭವ್ಯ ಹಾಗೂ ದಿವ್ಯ ಶ್ರೀ ಲಕ್ಷ್ಮೀ ದೇವಸ್ಥಾನದ ಕಾಮಗಾರಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಮಾತನಾಡಿದರು.
ಹಲಗಾ (ತಾ. ಖಾನಾಪುರ) ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದಿಂದ ಶ್ರೀ ಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದ್ದು, ಹಳೆಯ ದೇವಸ್ಥಾನವನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸ ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ. ಈ ಕಾಮಗಾರಿಯನ್ನು ವೀಕ್ಷಿಸಲು ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಶುಕ್ರವಾರ, ದಿ. 10 ಏಪ್ರಿಲ್ ರಂದು ಸದೀಚೈ ಭೇಟಿ ನೀಡಿದರು. ದೇವಸ್ಥಾನದ ನಿರ್ಮಾಣ ಕಾರ್ಯಗಳ ಕುರಿತು ಮಾಹಿತಿ ಪಡೆದು ಅವರು ತೃಪ್ತಿ ವ್ಯಕ್ತಪಡಿಸಿದರು ಹಾಗೂ ದೇವಸ್ಥಾನಕ್ಕಾಗಿ ಸಂಸದ ನಿಧಿಯಿಂದ ಸಮರ್ಪಕ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಖಾನಾಪುರ ತಾಲ್ಲೂಕಿನ ಮಾಜಿ ಶಾಸಕರೂ ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ನ ನಿರ್ದೇಶಕರೂ ಆದ ಅರವಿಂದ ಪಾಟೀಲ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ್ ಕೋಚೇರಿ, ತಾಲ್ಲೂಕು ಪಂಚಾಯತ್ನ ಮಾಜಿ ಉಪಸಭಾಪತಿ ಹಾಗೂ ಕರ್ನಾಟಕ ರಾಜ್ಯ ವನನಿಗಮದ ಮಾಜಿ ಸದಸ್ಯ ಸುರೇಶ ದೇಸಾಯಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಲಕ್ಷ್ಮೀ ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ರಣಜೀತ್ ಪಾಟೀಲ ಅವರು ಸಂಸದರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ದೇವಸ್ಥಾನ ನಿರ್ಮಾಣ ಸಮಿತಿಯ ವತಿಯಿಂದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು ದೇವಸ್ಥಾನದ ನಿರ್ಮಾಣ ಕಾರ್ಯ ಕುರಿತು ಸಂತೋಷ ವ್ಯಕ್ತಪಡಿಸಿ, ಗ್ರಾಮದಲ್ಲಿ ಧಾರ್ಮಿಕ ಹಾಗೂ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಇಂತಹ ದೇವಸ್ಥಾನಗಳು ಅಗತ್ಯವೆಂದು ಅಭಿಪ್ರಾಯಪಟ್ಟರು. ಗ್ರಾಮಸ್ಥರು ಏಕತೆಯಿಂದ ದೇವಸ್ಥಾನ ನಿರ್ಮಾಣ ಕಾರ್ಯ ಕೈಗೊಂಡಿರುವುದನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಪಂಚಮಂಡಳಿ, ಹಲಗಾ ಗ್ರಾಮಸ್ಥರು ಹಾಗೂ ಮಹಿಳಾ ವರ್ಗದವರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


