खानापूर पोलीस स्थानकाला आयजी चेतन सिंह राठोड यांची भेट; कामकाजाची पाहणी, पोलीस कर्मचाऱ्यांचे कौतुक.
खानापूर : पोलीस दलाच्या कार्यक्षमतेचा आढावा घेण्यासाठी आयजी चेतन सिंह राठोड यांनी बुधवारी (दि. 25 मार्च) खानापूर पोलीस स्थानकाला भेट देऊन सविस्तर तपासणी व पाहणी (इन्स्पेक्शन) केले. यावेळी त्यांच्या समवेत बेळगाव जिल्हा पोलीस अधीक्षक (एसपी) के. राम राजन तसेच उपविभागीय पोलीस अधिकारी (डीएसपी) डॉ. वीरया हिरेमठ उपस्थित होते.

या पाहणीदरम्यान आयजी राठोड यांनी पोलीस स्थानकातील विविध नोंदी, गुन्हे तपासाची स्थिती, शिस्त, स्वच्छता तसेच नागरिकांना दिल्या जाणाऱ्या सेवा यांचा बारकाईने आढावा घेतला. पोलीस अधिकारी व कर्मचाऱ्यांशी संवाद साधत त्यांनी दैनंदिन कामकाजातील अडचणी जाणून घेतल्या आणि त्या सोडवण्यासाठी आवश्यक मार्गदर्शन केले.

यावेळी त्यांनी खानापूर पोलीस स्थानकातील अधिकारी व कर्मचाऱ्यांच्या कार्याची प्रशंसा करत, पुढील काळात अधिक जबाबदारीने व तत्परतेने कर्तव्य पार पाडण्याचे आवाहन केले. गुन्हेगारीवर नियंत्रण ठेवण्यासाठी तसेच जनतेचा विश्वास अधिक दृढ करण्यासाठी समन्वयाने काम करण्याचे निर्देशही त्यांनी दिले.

भेटीदरम्यान आयजी चेतन सिंह राठोड यांच्या हस्ते पोलीस स्थानक परिसरात वृक्षारोपण करण्यात आले. पर्यावरण संवर्धनाचा संदेश देत अशा उपक्रमांचे महत्त्व त्यांनी अधोरेखित केले.
यावेळी खानापूर पोलीस स्थानकाचे पोलीस निरीक्षक (पीआय) एल. एच. गोवंडी, पोलीस उपनिरीक्षक (पीएसआय) निरंजन स्वामी, पीएसआय पठाडे तसेच इतर पोलीस अधिकारी व कर्मचारी उपस्थित होते.
ಖಾನಾಪುರ ಪೊಲೀಸ್ ಠಾಣೆಗೆ ಐಜಿ ಚೇತನ ಸಿಂಗ್ ರಾಠೋಡ್ ಭೇಟಿ; ಪೊಲೀಸ್ ಸಿಬ್ಬಂದಿಯ ಕಾರ್ಯಪದ್ದತಿ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿ.
ಖಾನಾಪುರ : ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಅವಲೋಕಿಸಲು ಐಜಿ ಚೇತನ ಸಿಂಗ್ ರಾಠೋಡ್ ಅವರು ಬುಧವಾರ (ದಿ. 25 ಮಾರ್ಚ್) ಖಾನಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಸವಿಸ್ತಾರ ಪರಿಶೀಲನೆ (ಇನ್ಸ್ಪೆಕ್ಷನ್) ನಡೆಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಕೆ. ರಾಮ್ ರಾಜನ್ ಹಾಗೂ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಡಿಎಸ್ಪಿ) ಡಾ. ವೀರಯ್ಯ ಹಿರೇಮಠ ಉಪಸ್ಥಿತರಿದ್ದರು.
ಈ ಪರಿಶೀಲನೆಯ ಸಂದರ್ಭದಲ್ಲಿ ಐಜಿ ರಾಠೋಡ್ ಅವರು ಪೊಲೀಸ್ ಠಾಣೆಯ ವಿವಿಧ ದಾಖಲೆಗಳು, ಅಪರಾಧ ತನಿಖೆಯ ಸ್ಥಿತಿ, ಶಿಸ್ತು, ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಸಮಗ್ರವಾಗಿ ಅವಲೋಕಿಸಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ದೈನಂದಿನ ಕಾರ್ಯಗಳಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ವಿಚಾರಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಅವರು ಖಾನಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ಮತ್ತು ಚುರುಕಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಅಪರಾಧ ನಿಯಂತ್ರಣ ಹಾಗೂ ಜನರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸಲು ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದರು.
ಭೇಟಿಯ ವೇಳೆ ಐಜಿ ಚೇತನ ಸಿಂಗ್ ರಾಠೋಡ್ ಅವರ ಕೈಯಿಂದ ಪೊಲೀಸ್ ಠಾಣಾ ಪರಿಸರದಲ್ಲಿ ವೃಕ್ಷಾರೋಪಣವೂ ನೆರವೇರಿತು. ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತ, ಇಂತಹ ಉಪಕ್ರಮಗಳ ಮಹತ್ವವನ್ನು ಅವರು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಖಾನಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ (ಪಿಐ) ಎಲ್. ಎಚ್. ಗೋವಂಡಿ, ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ನಿರಂಜನ್ ಸ್ವಾಮಿ, ಪಿಎಸ್ಐ ಪಠಾಡೆ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಅದೇ ಸಮಯದಲ್ಲಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯ ಕಾರ್ಯ ಪದ್ದತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.



