मंगलोरच्या कदरी मठाचे राजाजी निर्मलनाथजी महाराज यांची बाळेवाडी (बालकनाथ) मठाला भेट; भाविकांची मोठी उपस्थिती.
खानापूर : मंगलोर येथील कदरी मठाचे मठाधीश राजाजी निर्मलनाथजी महाराज यांनी मंगळवार, दि. 17 फेब्रुवारी रोजी रात्री 8.00 वाजता खानापूर–लोंढा मार्गावरील वाटरे नजीक असलेल्या बाळेवाडी (बालकनाथ) मठाला भेट दिली. त्यांच्या आगमनाने परिसरात उत्साहाचे वातावरण निर्माण झाले होते.
यावेळी बाळेवाडी मठाचे मठाधिपती सिंगनाथ महाराज, खानापूर तालुक्याचे माजी आमदार तसेच बेळगाव जिल्हा मध्यवर्ती सहकारी बँकेचे संचालक अरविंद पाटील यांनी राजाजींना पुष्पहार अर्पण करून त्यांचे स्वागत केले व आशीर्वाद घेतला.
यावेळी भाजपाचे जिल्हा उपाध्यक्ष प्रमोद कोचेरी, भाजपा युवा मोर्चाचे जिल्हा उपाध्यक्ष पंडित ओगले, नंदगड मार्केटिंग सोसायटीचे संचालक प्रकाश गावडे, मोहन पाटील, पत्रकार विवेक गिरी, दिनकर मरगाळे, बबन सुतार तसेच आदी मान्यवर उपस्थित होते.
दर बारा वर्षांनी भरत असलेल्या कुंभमेळ्याच्या परंपरेनुसार 2017 साली नाशिक येथे झालेल्या कुंभमेळ्यानंतर नवनाथ पंथीय साधूंची पायी झुंड मंगलोर येथील कदरी मठ पर्यंत प्रस्थान करते. मार्गात येणाऱ्या विविध ठिकाणी या झुंडीचे वास्तव्य असते. काही ठिकाणी नवीन मठाधीशांची नेमणूक केली जाते, तर काही ठिकाणी कार्य समाधानकारक असल्यास त्याच मठाधीशांची पुन्हा पुढील बारा वर्षासाठी नियुक्ती करण्यात येते.
नाशिक येथून झुंड प्रस्थान करताना झुंडीचे प्रमुख निवडले जातात, त्यांना ‘राजाजी’ म्हणून संबोधले जाते. राजाजींची निवड बारा वर्षांसाठी केली जाते. 2017 साली निर्मलनाथजी महाराज यांची झुंडीचे तसेच या मार्गावरील सर्व मठांच्या मठाधीशांचे प्रमुख (राजाजी) म्हणून नियुक्ती करण्यात आली होती. राजाजी निर्मलनाथजी महाराज हे मूळचे राजस्थान येथील असून नवनाथ पंथातील प्रमुख साधू म्हणून त्यांना मानाचे स्थान आहे.
या भेटीप्रसंगी बाळेवाडी मठाच्या व्याप्तीत येणाऱ्या कामतगा, गौसे, वाटरे तसेच परिसरातील इतर गावांतील भाविकांनी मोठ्या संख्येने उपस्थित राहून राजाजींचे दर्शन व आशीर्वाद घेतला. यावेळी परिसरात भक्तिमय वातावरण निर्माण झाले होते.
ಮಂಗಳೂರು ಕದ್ರಿ ಮಠದ ರಾಜಾಜಿ ನಿರ್ಮಲನಾಥಜಿ ಮಹಾರಾಜರ ಬಾಳೇವಾಡಿ (ಬಾಲಕನಾಥ) ಮಠಕ್ಕೆ ಭೇಟಿ; ಭಕ್ತರು ಭಾರಿ ಸಂಖ್ಯೆಯಲ್ಲಿ ಉಪಸ್ಥಿತಿ.
ಖಾನಾಪುರ : ಮಂಗಳೂರು ನಗರದಲ್ಲಿರುವ ಕದ್ರಿ ಮಠದ ಮಠಾಧೀಶರಾದ ರಾಜಾಜಿ ನಿರ್ಮಲನಾಥಜಿ ಮಹಾರಾಜರು ಮಂಗಳವಾರ, ಫೆಬ್ರವರಿ 17ರಂದು ರಾತ್ರಿ 8.00 ಗಂಟೆಗೆ ಖಾನಾಪುರ–ಲೋಂಡಾ ಮಾರ್ಗದ ವಾಟ್ರೆ ಸಮೀಪದಲ್ಲಿರುವ ಬಾಳೇವಾಡಿ (ಬಾಲಕನಾಥ) ಮಠಕ್ಕೆ ಭೇಟಿ ನೀಡಿದರು. ಅವರ ಆಗಮನದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು.
ಇದೇ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಒಗಲೆ, ನಂದಗಡ ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕ ಪ್ರಕಾಶ್ ಗಾವಡೆ, ಮೋಹನ್ ಪಾಟೀಲ, ಪತ್ರಕರ್ತರಾದ ವಿವೇಕ್ ಗಿರಿ, ದಿನಕರ ಮರಗಾಳೆ, ಬಬನ್ ಸುತಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಾಳೇವಾಡಿ ಮಠದ ಮಠಾಧಿಪತಿ ಸಿಂಗನಾಥ ಮಹಾರಾಜರು ಹಾಗೂ ಖಾನಾಪುರ ತಾಲ್ಲೂಕಿನ ಮಾಜಿ ಶಾಸಕರು ಮತ್ತು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಅರವಿಂದ ಪಾಟೀಲರು ರಾಜಾಜಿಗಳಿಗೆ ಪುಷ್ಪಹಾರ ಅರ್ಪಿಸಿ ಸತ್ಕರಿಸಿ ಆಶೀರ್ವಾದ ಪಡೆದರು.
ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದ ಪರಂಪರೆಯಂತೆ, 2017ರಲ್ಲಿ ನಾಶಿಕದಲ್ಲಿ ನಡೆದ ಕುಂಭಮೇಳ ನಂತರ ನವನಾಥ ಪಂಥೀಯ ಸಾಧುಗಳ ಪಾದಯಾತ್ರೆಯ ಜುಂಡ ಮಂಗಳೂರು ಕದ್ರಿ ಮಠದವರೆಗೆ ಪ್ರಯಾಣಿಸುತ್ತದೆ. ಮಾರ್ಗಮಧ್ಯೆ ಬರುವ ವಿವಿಧ ಸ್ಥಳಗಳಲ್ಲಿ ಈ ಜುಂಡಗಳು ತಂಗುತ್ತದೆ. ಕೆಲವೆಡೆ ಹೊಸ ಮಠಾಧೀಶರನ್ನು ನೇಮಿಸಲಾಗುತ್ತದೆ; ಕಾರ್ಯ ತೃಪ್ತಿಕರವಾಗಿದ್ದರೆ ಅದೇ ಮಠಾಧೀಶರನ್ನು ಮುಂದಿನ ಹನ್ನೆರಡು ವರ್ಷಗಳಿಗೂ ಪುನರ್ನಿಯುಕ್ತಿ ಮಾಡಲಾಗುತ್ತದೆ.
ನಾಶಿಕದಿಂದ ಜುಂಡು ಪ್ರಾರಂಭವಾಗುವಾಗ ಅದರ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುತ್ತದೆ. ಅವರನ್ನು ‘ರಾಜಾಜಿ’ ಎಂದು ಸಂಬೋಧಿಸ ಲಾಗುತ್ತದೆ. ರಾಜಾಜಿಯವರನ್ನು ಹನ್ನೆರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. 2017ರಲ್ಲಿ ನಿರ್ಮಲನಾಥಜಿ ಮಹಾರಾಜರನ್ನು ಜುಂಡಿನ ಮುಖ್ಯಸ್ಥರಾಗಿ ಹಾಗೂ ಈ ಮಾರ್ಗದಲ್ಲಿರುವ ಎಲ್ಲಾ ಮಠಗಳ ಮಠಾಧೀಶರ ಪ್ರಧಾನ (ರಾಜಾಜಿ) ಆಗಿ ನೇಮಕ ಮಾಡಲಾಗಿತ್ತು. ರಾಜಾಜಿ ನಿರ್ಮಲನಾಥಜಿ ಮಹಾರಾಜರು ಮೂಲತಃ ರಾಜಸ್ಥಾನ ರಾಜ್ಯದವರು ಆಗಿದ್ದು, ನವನಾಥ ಪಂಥದ ಪ್ರಮುಖ ಸಾಧುಗಳಲ್ಲಿ ಒಬ್ಬರಾಗಿ ಗೌರವದ ಸ್ಥಾನವನ್ನು ಹೊಂದಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಬಾಳೇವಾಡಿ ಮಠದ ವ್ಯಾಪ್ತಿಗೆ ಬರುವ ಕಾಮತಗಾ, ಗೌಸೆ, ವಾಟ್ರೆ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ರಾಜಾಜಿಯವರ ದರ್ಶನ ಪಡೆದು ಆಶೀರ್ವಾದ ಪಡೆದರು. ಈ ವೇಳೆ ಭಾಗದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.



