खानापूर येथील प्रसिद्ध स्वामी विवेकानंद शिक्षण संस्थेला रु. 5 लाखांची बहुमोल देणगी; शेखर नाटेकर व बंधूंचा सत्कार.
खानापूर : खानापूर येथील श्री स्वामी विवेकानंद शिक्षण संस्था ही शैक्षणिक क्षेत्रातील एक अग्रगण्य संस्था असून येथे नर्सरी ते दहावी तसेच पदवीपूर्व (कला, वाणिज्य व विज्ञान) शिक्षणाची उत्तम सोय उपलब्ध आहे. संस्थेचे शैक्षणिक कार्य दर्जेदार पद्धतीने सुरू असल्यामुळे केंद्र सरकारच्या Ministry of Corporate Affairs यांनी व्यावसायिकांकडून CSR निधी स्वीकारण्यास संस्थेला अनुमती दिली आहे.
मुळचे जोयडा तालुक्यातील सुपा येथील श्री शेखर गणपती नाटेकर व त्यांचे बंधू सध्या बेळगाव येथे स्थायिक असून त्यांनी आपल्या व्यवसाय क्षेत्रात उल्लेखनीय यश संपादन केले आहे. त्यांचे वडील कै. गणपती नाटेकर हे शिक्षकी पेशातून निवृत्त झाले होते, तर आई गृहिणी होत्या. आपल्या आई-वडिलांच्या स्मृतिप्रीत्यर्थ आणि संस्थेच्या उल्लेखनीय कार्याची दखल घेत श्री शेखर नाटेकर व बंधूंनी संस्थेला नुकतीच रु. ५ लाखांची बहुमोल देणगी प्रदान केली.
दिनांक १४ फेब्रुवारी रोजी दहावीच्या विद्यार्थ्यांच्या निरोप समारंभाचे औचित्य साधून संस्थेतर्फे श्री शेखर नाटेकर व बंधूंचा सत्कार करण्यात आला. यावेळी बोलताना संस्थेचे अध्यक्ष अधिवक्ता चेतन अरुण मणेरीकर यांनी नाटेकर बंधूंच्या उदार योगदानाबद्दल कृतज्ञता व्यक्त करत त्यांचे मनःपूर्वक आभार मानले.
कार्यक्रमास संस्थेचे कार्यदर्शी श्री सुहास वामनराव कुलकर्णी, प्रमुख अतिथी व करिअर कौन्सेलर श्री दिपक पाटील, शाळेचे प्राचार्य श्री विनोद मराठे तसेच महाविद्यालयाचे प्राचार्य श्री पी. के. चापगावकर उपस्थित होते.
या कार्यक्रमाचा एक भाग म्हणून बेळगाव येथील संजय घोडावत शिक्षण संस्था येथे कार्यरत असलेले करिअर मार्गदर्शक श्री दिपक पाटील यांनी दहावीच्या विद्यार्थ्यांना मार्गदर्शन केले. भविष्यात यश संपादन करण्यासाठी कठोर परिश्रम, वेळेचे योग्य नियोजन, ध्येय निश्चिती, चिकाटी आणि सातत्य या गुणांचे महत्त्व त्यांनी अधोरेखित केले. त्यांच्या प्रेरणादायी मार्गदर्शनाचा विद्यार्थ्यांना मोठा लाभ झाला.
या प्रसंगी विद्यार्थ्यांसोबत मोठ्या संख्येने पालक वर्गही उपस्थित होता. कार्यक्रम उत्साहपूर्ण वातावरणात पार पडला.
ಖಾನಾಪುರದ ಪ್ರಸಿದ್ಧ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ರೂ. 5 ಲಕ್ಷಗಳ ಅಮೂಲ್ಯ ದೇಣಿಗೆ; ಶೇಖರ್ ನಾಟೇಕರ್ ಹಾಗೂ ಸಹೋದರರ ಸತ್ಕಾರ.
ಖಾನಾಪುರ : ಖಾನಾಪುರದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು, ಇಲ್ಲಿ ನರ್ಸರಿ ರಿಂದ ದಶಮ ತರಗತಿ ತನಕ ಹಾಗೂ ಪದವಿ ಪೂರ್ವ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ಶಿಕ್ಷಣದ ಉತ್ತಮ ವ್ಯವಸ್ಥೆ ಇದೆ. ಸಂಸ್ಥೆಯ ಶೈಕ್ಷಣಿಕ ಕಾರ್ಯಗಳು ಗುಣಮಟ್ಟದಿಂದ ಸಾಗುತ್ತಿರುವ ಹಿನ್ನೆಲೆ, ಕೇಂದ್ರ ಸರ್ಕಾರದ Ministry of Corporate Affairs ವತಿಯಿಂದ ವೃತ್ತಿಪರರಿಂದ CSR ನಿಧಿಯನ್ನು ಸ್ವೀಕರಿಸಲು ಅನುಮತಿ ನೀಡಲಾಗಿದೆ.
ಮೂಲತಃ ಜೋಯ್ಡಾ ತಾಲ್ಲೂಕಿನ ಸುಪಾ ಗ್ರಾಮದವರಾದ ಶ್ರೀ ಶೇಖರ್ ಗಣಪತಿ ನಾಟೇಕರ್ ಮತ್ತು ಅವರ ಸಹೋದರರು ಈಗ ಬೆಳಗಾವಿಯಲ್ಲಿ ನೆಲೆಸಿದ್ದು, ತಮ್ಮ ವ್ಯಾಪಾರ ಕ್ಷೇತ್ರದಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಅವರ ತಂದೆ ಕೀರ್ತಿಶೇಷ ಗಣಪತಿ ನಾಟೇಕರ್ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದರು, ತಾಯಿ ಗೃಹಿಣಿಯಾಗಿದ್ದರು. ತಮ್ಮ ತಾಯಿ-ತಂದೆಯರ ಸ್ಮರಣಾರ್ಥ ಹಾಗೂ ಸಂಸ್ಥೆಯ ಶ್ಲಾಘನೀಯ ಕಾರ್ಯವನ್ನು ಗಮನಿಸಿ, ಶ್ರೀ ಶೇಖರ್ ನಾಟೇಕರ್ ಮತ್ತು ಸಹೋದರರು ಸಂಸ್ಥೆಗೆ ಇತ್ತೀಚೆಗೆ ರೂ. 5 ಲಕ್ಷಗಳ ಅಮೂಲ್ಯ ದೇಣಿಗೆಯನ್ನು ನೀಡಿದ್ದಾರೆ.
ಫೆಬ್ರವರಿ 14ರಂದು ದಶಮ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಂಗವಾಗಿ, ಸಂಸ್ಥೆಯ ವತಿಯಿಂದ ಶ್ರೀ ಶೇಖರ್ ನಾಟೇಕರ್ ಮತ್ತು ಸಹೋದರರ ಸತ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ವಕೀಲ ಚೇತನ ಅರುಣ ಮನೇರಿಕರ್ ಅವರು ನಾಟೇಕರ್ ಸಹೋದರರ ಉದಾರ ಸಹಕಾರಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ಸುಹಾಸ ವಾಮನರಾವ ಕುಲಕರ್ಣಿ, ಮುಖ್ಯ ಅತಿಥಿ ಹಾಗೂ ಕರಿಯರ್ ಕೌನ್ಸೆಲರ್ ಶ್ರೀ ದೀಪಕ್ ಪಾಟೀಲ್, ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ವಿನೋದ ಮರಾಠೆ ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀ ಪಿ.ಕೆ. ಚಾಪಗಾವ್ಕರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಭಾಗವಾಗಿ ಬೆಳಗಾವಿಯ ಸಂಜಯ್ ಗೋಡಾವತ ಶಿಕ್ಷಣ ಸಂಸ್ಥಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರಿಯರ್ ಮಾರ್ಗದರ್ಶಕ ಶ್ರೀ ದೀಪಕ್ ಪಾಟೀಲ್ ಅವರು ದಶಮ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಸಮಯ ನಿರ್ವಹಣೆ, ಗುರಿ ನಿಶ್ಚಯ, ಧೈರ್ಯ ಹಾಗೂ ಸ್ಥಿರತೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರ ಪ್ರೇರಣಾದಾಯಕ ಮಾತುಗಳು ವಿದ್ಯಾರ್ಥಿಗಳಿಗೆ ಮಹತ್ತರ ಉಪಯೋಗವಾಗಿವೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರೂ ಉಪಸ್ಥಿತರಿದ್ದರು. ಕಾರ್ಯಕ್ರಮ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.


