खोट्या बॅनर प्रकरणावर खानापूर तालुका भाजपा महिला मोर्चाचे तहसीलदारांना तक्रार वजा निवेदन.
खानापूर : देशाचे पंतप्रधान नरेंद्र मोदी यांच्या प्रतिमेचा गैरवापर करून अपमानास्पद व खोटा मजकूर असलेला बॅनर लावण्यात आल्याच्या निषेधार्थ खानापूर तालुका भारतीय जनता पार्टी महिला मोर्चाने तहसीलदारांना तक्रार वजा निवेदन सादर करत संबंधितांवर कठोर कारवाई करण्याची मागणी केली आहे.
खानापूरचे तहसीलदार दुंडाप्पा कुमार यांना हे निवेदन मंगळवार दिनांक 10 फेब्रुवारी रोजी देण्यात आले. यावेळी भाजपा महिला मोर्चा खानापूर तालुका अध्यक्ष सुनिता संतोष पाटील, सेक्रेटरी रेणुका धबाले, तसेच जयश्री खानापुरी व महिला मोर्चाच्या अन्य पदाधिकारी व कार्यकर्त्या उपस्थित होत्या.
निवेदनात म्हटले आहे की, दि. 8 फेब्रुवारी 2026 रोजी कर्नाटक प्रदेश युथ काँग्रेसच्या पदाधिकाऱ्यांनी विधानसौध समोर पंतप्रधान नरेंद्र मोदी यांच्या प्रतिमेचा गैरवापर करत “देशाच्या संसदेत येण्याची हिंमत नाही असा पंतप्रधान देशाचे संरक्षण कसे करणार” असा खोटा व अपमानास्पद मजकूर असलेला बॅनर बेकायदेशीरपणे लावला होता. या प्रकारामुळे देशाचे पंतप्रधान तसेच केंद्र सरकारचा जाहीर अपमान करण्यात आला असून, राज्यातील कायदा व सुव्यवस्थेला धोका निर्माण करण्याचा प्रयत्न झाला असल्याचा आरोप महिला मोर्चाने केला आहे.
पंतप्रधानांचा फोटो वापरून खोटी माहिती प्रसारित करणे, त्यांची बदनामी करणे तसेच समाजात द्वेष, तेढ व अशांतता पसरविण्याचा प्रयत्न करणे हा गंभीर गुन्हा असल्याचे निवेदनात नमूद करण्यात आले आहे. अशा प्रकारामुळे राज्यात कायदा व सुव्यवस्था बिघडण्याची शक्यता असून, यामागे राजकीय अस्थिरता निर्माण करण्याचा कट असल्याचा आरोपही करण्यात आला आहे.
यामुळे कर्नाटक प्रदेश युथ काँग्रेसच्या संबंधित पदाधिकाऱ्यांविरोधात तात्काळ गुन्हा दाखल करून त्यांना अटक करण्यात यावी, अशी ठाम मागणी भाजपा महिला मोर्चाच्या वतीने प्रशासनाकडे करण्यात आली आहे. तसेच या प्रकरणाची गंभीर दखल घेऊन तात्काळ कठोर कारवाई करण्यात यावी, अन्यथा तालुक्यात मोठे जनआंदोलन उभे करण्यात येईल, असा इशाराही महिला मोर्चाने दिला आहे.
ತಪ್ಪು ಮಾಹಿತಿ ನೀಡುವ ಬ್ಯಾನರ ಅಳವಡಿಸಿದ ಪ್ರಕರಣದ ಕುರಿತು ಖಾನಾಪುರ ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ತಹಶೀಲ್ದಾರ್ಗಳಿಗೆ ದೂರು ಸ್ವರೂಪದ ಮನವಿ ಸಲ್ಲಿಕೆ
ಖಾನಾಪುರ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡು ಅವಮಾನಕಾರಿ ಹಾಗೂ ತಪ್ಪು ಮಾಹಿತಿಯುಳ್ಳ ಬ್ಯಾನರ್ ಹಾಕಿದ ಘಟನೆಗೆ ವಿರೋಧವಾಗಿ, ಖಾನಾಪುರ ತಾಲ್ಲೂಕು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ತಹಶೀಲ್ದಾರ್ರಿಗೆ ದೂರು ಸ್ವರೂಪದ ಮನವಿ ಸಲ್ಲಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಖಾನಾಪುರದ ತಹಶೀಲ್ದಾರ್ ದುಂಡಪ್ಪ ಕುಮಾರ್ ಅವರಿಗೆ ಈ ಮನವಿಯನ್ನು ಮಂಗಳವಾರ ದಿನಾಂಕ 10 ಫೆಬ್ರವರಿ 2026 ರಂದು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಖಾನಾಪುರ ತಾಲ್ಲೂಕು ಅಧ್ಯಕ್ಷೆ ಸುನಿತಾ ಸಂತೋಷ ಪಾಟೀಲ್, ಕಾರ್ಯದರ್ಶಿ ರೆಣುಕಾ ಧಬಾಲೆ, ಹಾಗು ಜಯಶ್ರೀ ಖಾನಾಪುರಿ ಸೇರಿದಂತೆ ಮಹಿಳಾ ಮೋರ್ಚಾದ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಮನವಿಯಲ್ಲಿ ಹೇಳಿರುವಂತೆ, 2026ರ ಫೆಬ್ರವರಿ 8ರಂದು ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ನ ಪದಾಧಿಕಾರಿಗಳು ವಿಧಾನಸೌಧದ ಮುಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿತ್ರವನ್ನು ದುರುಪಯೋಗಪಡಿಸಿಕೊಂಡು, “ದೇಶದ ಸಂಸತ್ತಿಗೆ ಬರಲು ಧೈರ್ಯವಿಲ್ಲದ ಪ್ರಧಾನಮಂತ್ರಿ ದೇಶದ ರಕ್ಷಣೆಯನ್ನು ಹೇಗೆ ಮಾಡಲಿದ್ದಾರೆ?” ಎಂಬ ತಪ್ಪು ಹಾಗೂ ಅವಮಾನಕಾರಿ ಸಂದೇಶ ಹೊಂದಿದ ಬ್ಯಾನರ್ ಅನ್ನು ಹಾಕಿದ್ದರು.
ಈ ಘಟನೆ ದೇಶದ ಪ್ರಧಾನಮಂತ್ರಿ ಹಾಗೂ ಕೇಂದ್ರ ಸರ್ಕಾರವನ್ನು ಸಾರ್ವಜನಿಕವಾಗಿ ಅವಮಾನಿಸಿದಂತಾಗಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಮಹಿಳಾ ಮೋರ್ಚಾ ಆರೋಪಿಸಿದೆ.
ಪ್ರಧಾನಮಂತ್ರಿಯ ಫೋಟೋ ಬಳಸಿ ಸುಳ್ಳು ಮಾಹಿತಿಯನ್ನು ಹರಡುವುದು, ಅವರ ಮಾನಹಾನಿ ಮಾಡುವುದು ಹಾಗೂ ಸಮಾಜದಲ್ಲಿ ದ್ವೇಷ, ವೈಮನಸ್ಸು ಮತ್ತು ಅಶಾಂತಿ ಮೂಡಿಸಲು ಯತ್ನಿಸುವುದು ಗಂಭೀರ ಅಪರಾಧವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಕೃತ್ಯಗಳಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದ್ದು, ಇದರ ಹಿಂದೆ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಸಂಚು ಇದೆ ಎಂದು ಕೂಡ ಆರೋಪಿಸಲಾಗಿದೆ.
ಆದ್ದರಿಂದ, ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ನ ಸಂಬಂಧಪಟ್ಟ ಪದಾಧಿಕಾರಿಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಬಿಜೆಪಿ ಮಹಿಳಾ ಮೋರ್ಚಾ ಆಡಳಿತಕ್ಕೆ ಕಟ್ಟುನಿಟ್ಟಾಗಿ ಆಗ್ರಹಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತಾಲ್ಲೂಕಿನಲ್ಲಿ ದೊಡ್ಡ ಜನಾಂದೋಲನ ನಡೆಸಲಾಗುವುದು ಎಂದು ಮಹಿಳಾ ಮೋರ್ಚಾ ಎಚ್ಚರಿಕೆ ನೀಡಿದೆ.

