खानापूर सरकारी रुग्णालयासमोरील व स्टेशन रोडवरील सरकारी कॉम्प्लेक्स मधील दुकाने पुन्हा लिलावात काढा ; भीम सेना संघटनेचे निवेदन.
खानापूर : खानापूर शहरातील नवीन सरकारी रुग्णालयासमोरील तसेच राजा शिवछत्रपती चौक ते चव्हाण यांच्या किराणा दुकानापर्यंत असलेल्या सरकारी कॉम्प्लेक्समधील दुकाने पुन्हा नव्याने लिलावात काढावीत, अशी मागणी भीम सेना संघटनेचे तालुका अध्यक्ष मल्लेशी गोविंद पोळ यांच्या नेतृत्वाखाली तालुका पंचायत कार्यकारी अधिकाऱ्यांकडे निवेदनाद्वारे केली आहे.
निवेदनात म्हटले आहे की, सदर सरकारी दुकाने सुमारे 25 वर्षांपूर्वी लाभार्थ्यांना देण्यात आली असून हे दुकानदार सध्या तालुका पंचायतकडे दरमहा 3,000 ते 4,000 रुपये भाडे भरत आहेत. मात्र हेच दुकानदार लिलावात घेतलेली दुकाने इतरांना उपभाड्याने देऊन दरमहा 35,000 रुपये पर्यंत भाडे वसूल करत असल्याचा आरोप करण्यात आला आहे. त्यामुळे सरकारला मिळणारे उत्पन्न अत्यल्प असून काही निवडक लोकांना मोठा आर्थिक फायदा होत असल्याचे संघटनेचे म्हणणे आहे.
तसेच खानापूर शहरातील अनुसूचित जाती व अनुसूचित जमातीतील अनेक युवक बेरोजगार असून त्यांना रोजगाराची संधी मिळावी, यासाठी सदर दुकाने पुन्हा लिलावात काढून नव्या लाभार्थ्यांना देण्यात यावीत, अशी मागणी करण्यात आली आहे.
जर प्रशासनाने तात्काळ कारवाई केली नाही, तर भीम सेना संघटनेच्या वतीने तालुका पंचायत कार्यालयाला घेराव घालण्याचा इशाराही निवेदनात देण्यात आला आहे.
सदर निवेदनावर संघटनेच्या पदाधिकाऱ्यांच्या स्वाक्षऱ्या आहेत. तसेच स्थानिक नागरिकांनी या मागणीचे समर्थन केले आहे.
ಖಾನಾಪುರ ಸರ್ಕಾರಿ ಆಸ್ಪತ್ರೆ ಎದುರಿನ ಹಾಗೂ ಸ್ಟೇಷನ್ ರೋಡ್ನ ಸರ್ಕಾರಿ ಕಾಂಪ್ಲೆಕ್ಸ್ನ ಅಂಗಡಿಗಳನ್ನು ಮರುಹರಾಜಿಗೆ ಹಾಕಬೇಕು; ಭೀಮ ಸೇನಾ ಸಂಘಟನೆಯ ಮನವಿ.
ಖಾನಾಪುರ : ಖಾನಾಪುರ ಪಟ್ಟಣದ ಹೊಸ ಸರ್ಕಾರಿ ಆಸ್ಪತ್ರೆ ಎದುರು ಹಾಗೂ ರಾಜಾ ಶಿವಛತ್ರಪತಿ ಚೌಕ್ನಿಂದ ಚವಾಣ್ ಅವರ ಕಿರಾಣಿ ಅಂಗಡಿಯವರೆಗೆ ಇರುವ ಸರ್ಕಾರಿ ಕಾಂಪ್ಲೆಕ್ಸ್ನ ಅಂಗಡಿಗಳನ್ನು ಮತ್ತೆ ಹೊಸದಾಗಿ ಹರಾಜಿಗೆ ಹಾಕಬೇಕು ಎಂದು ಭೀಮ ಸೇನಾ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲೇಶಿ ಗೋವಿಂದ ಪೋಳ ಅವರ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಮನವಿಯಲ್ಲಿ ತಿಳಿಸಿರುವಂತೆ, ಈ ಸರ್ಕಾರಿ ಅಂಗಡಿಗಳನ್ನು ಸುಮಾರು 25 ವರ್ಷಗಳ ಹಿಂದೆ ಲಾಭಾರ್ಥಿಗಳಿಗೆ ನೀಡಲಾಗಿದ್ದು, ಪ್ರಸ್ತುತ ಈ ಅಂಗಡಿ ಮಾಲೀಕರು ತಾಲೂಕು ಪಂಚಾಯತ್ಗೆ ತಿಂಗಳಿಗೆ 3,000 ರಿಂದ 4,000 ರೂಪಾಯಿ ಬಾಡಿಗೆ ಪಾವತಿಸುತ್ತಿದ್ದಾರೆ. ಆದರೆ ಇದೇ ಅಂಗಡಿದಾರರು ಹರಾಜಿನಲ್ಲಿ ಪಡೆದ ಅಂಗಡಿಗಳನ್ನು ಇತರರಿಗೆ ಉಪಬಾಡಿಗೆಗೆ ನೀಡಿ ತಿಂಗಳಿಗೆ 35,000 ರೂಪಾಯಿವರೆಗೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಸಂಘಟನೆ ಮಾಡಿದೆ.
ಇದರಿಂದ ಸರ್ಕಾರಕ್ಕೆ ದೊರೆಯಬೇಕಾದ ಆದಾಯ ಅತೀ ಕಡಿಮೆಯಾಗಿದ್ದು, ಕೆಲವೇ ಆಯ್ದ ವ್ಯಕ್ತಿಗಳಿಗೆ ಹೆಚ್ಚಿನ ಆರ್ಥಿಕ ಲಾಭವಾಗುತ್ತಿದೆ ಎಂದು ಸಂಘಟನೆಯ ಅಭಿಪ್ರಾಯವಾಗಿದೆ.
ಇದಲ್ಲದೆ, ಖಾನಾಪುರ ಪಟ್ಟಣದಲ್ಲಿರುವ ಅನುಸುಚಿತ ಜಾತಿ ಮತ್ತು ಅನುಸುಚಿತ ಜನಾಂಗದ ಅನೇಕ ಯುವಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ಉದ್ಯೋಗದ ಅವಕಾಶ ಕಲ್ಪಿಸಲು ಈ ಅಂಗಡಿಗಳನ್ನು ಮರುಹರಾಜಿಗೆ ಹಾಕಿ ಹೊಸ ಲಾಭಾರ್ಥಿಗಳಿಗೆ ನೀಡಬೇಕು ಎಂದು ಸಂಘಟನೆ ಮನವಿ ಮಾಡಿದೆ.
ಆಡಳಿತವು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಭೀಮ ಸೇನಾ ಸಂಘಟನೆಯ ವತಿಯಿಂದ ತಾಲೂಕು ಪಂಚಾಯತ್ ಕಚೇರಿಗೆ ಘೇರಾವ್ ಹಾಕುವ ಎಚ್ಚರಿಕೆಯನ್ನು ಮನವಿಯಲ್ಲಿ ನೀಡಲಾಗಿದೆ. ಈ ಮನವಿಗೆ ಸಂಘಟನೆಯ ಪದಾಧಿಕಾರಿಗಳ ಸಹಿ ಇದ್ದು, ಸ್ಥಳೀಯ ನಾಗರಿಕರೂ ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.



