मणतुर्गा विठ्ठल-रुक्मिणी सोसायटीत धक्कादायक चोरी; रोख रकमेसह वाहनांच्या चाव्या व आरसी बुकही लांबविले.
खानापूर : मणतुर्गा (ता. खानापूर) येथील विठ्ठल-रुक्मिणी मल्टीपर्पज को-ऑपरेटिव्ह सोसायटीच्या कार्यालयात अज्ञात चोरट्यांनी धक्कादायक चोरी केल्याची घटना उघडकीस आली आहे. चोरट्यांनी सोसायटीच्या कार्यालयाचे कुलूप व कडी तोडून आत प्रवेश करत दोन तिजोरी फोडल्या असून त्यातून 53 हजार रुपयांची रोख रक्कम, तसेच साठ वाहनांच्या चाव्या आणि तीस वाहनांची नोंदणी प्रमाणपत्रे (आरसी बुक) लांबविल्यामुळे परिसरात खळबळ उडाली आहे.
ही चोरी सोमवारी सकाळी उघडकीस आली. गावाच्या मध्यवर्ती भागात असलेल्या सोसायटीच्या कार्यालयावर रात्री अज्ञात चोरट्यांनी डल्ला मारल्याचे स्पष्ट झाले आहे. चोरट्यांनी कार्यालयातील दोन तिजोरींची कुलपे तोडून आत प्रवेश केला आणि रोख रक्कमेसह महत्त्वाची कागदपत्रे व वाहनांच्या चाव्या घेऊन पसार झाले.
सोसायटीत वाहन कर्ज योजनेंतर्गत कर्ज घेतलेल्या ग्राहकांच्या वाहनांची एक चावी व नोंदणी प्रमाणपत्रे नियमानुसार सोसायटीकडे ठेवली जातात. त्यामुळे दुचाकी व चारचाकी वाहनांच्या अनेक चाव्या आणि आरसी बुक सोसायटीत सुरक्षित ठेवण्यात आले होते. मात्र चोरट्यांनी ही सर्व सामग्री लांबविल्याने मोठी चिंता व्यक्त केली जात आहे.
चोरट्यांनी चोरीनंतर सीसीटीव्ही कॅमेऱ्यांचे डिजिटल व्हिडिओ रेकॉर्डिंग (डीव्हीआर) युनिटही काढून नेल्याने तपासात अडथळा निर्माण झाला आहे. वाहनांच्या चाव्या आणि आरसी बुक एकत्र मिळाल्यामुळे चोरटे संबंधित पत्त्यावर जाऊन वाहने चोरण्याचा कट रचत असावेत, अशी शंका ग्रामस्थ आणि पोलिसांकडून व्यक्त केली जात आहे.
या घटनेची माहिती मिळताच पोलिसांनी घटनास्थळी भेट देऊन पंचनामा केला असून आसपासच्या सीसीटीव्ही फुटेजच्या आधारे तपास सुरू केला आहे. चोरीचे स्वरूप गंभीर असल्याने या प्रकरणाचा सखोल तपास केला जात असून चोरट्यांचा शोध घेण्यासाठी विशेष पथक कार्यरत करण्यात आले आहे.
या घटनेमुळे सोसायटी सदस्यांमध्ये भीतीचे वातावरण निर्माण झाले असून ग्राहकांनी आपली वाहने सुरक्षित ठिकाणी ठेवण्याचे आवाहन करण्यात आले आहे.
ಮಂತುರ್ಗಾದ ವಿಠ್ಠಲ್–ರುಕ್ಮಿಣಿ ಸೊಸೈಟಿಯಲ್ಲಿ ಕಳ್ಳರ ಭಾರಿ ಕೈಚಳಕ; ನಗದು ಹಣದ ಜೊತೆಗೆ ವಾಹನಗಳ ಕೀಗಳು ಹಾಗೂ ಆರ್ಸಿ ಪುಸ್ತಕಗಳನ್ನೂ ಕಳವು..
ಖಾನಾಪುರ: ಮಂತುರ್ಗಾ (ತಾ. ಖಾನಾಪುರ) ಗ್ರಾಮದ ವಿಠ್ಠಲ್–ರುಕ್ಮಿಣಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿಯ ಕಚೇರಿಯಲ್ಲಿ ಅಜ್ಞಾತ ಕಳ್ಳರ ಕೈಚಳಕ ತೋರಿಸಿ ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಸೊಸೈಟಿ ಕಚೇರಿಯ ಬೀಗ ಮುರಿದು ಒಳನುಗ್ಗಿ ಎರಡು ತಿಜೋರಿಗಳನ್ನು ಒಡೆದು, ಅದರಿಂದ 53 ಸಾವಿರ ರೂ. ನಗದು ಹಣದ, ಜೊತೆ 60 ವಾಹನಗಳ ಕೀಗಳು ಹಾಗೂ 30 ವಾಹನಗಳ ನೋಂದಣಿ ಪ್ರಮಾಣಪತ್ರಗಳು (ಆರ್ಸಿ ಬುಕ್) ಕಳವು ಮಾಡಿರುವುದರಿಂದ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಕಳ್ಳತನ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಗ್ರಾಮದ ಮಧ್ಯಭಾಗದಲ್ಲಿರುವ ಸೊಸೈಟಿ ಕಚೇರಿಯಲ್ಲಿ ರಾತ್ರಿ ಅಜ್ಞಾತ ಕಳ್ಳರು ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ಕಳ್ಳರು ಕಚೇರಿಯಲ್ಲಿದ್ದ ಎರಡು ತಿಜೋರಿಗಳ ಬೀಗಗಳನ್ನು ಮುರಿದು ಒಳನುಗ್ಗಿ ನಗದು ಹಣದ ಜೊತೆಗೆ ಮಹತ್ವದ ದಾಖಲೆಗಳು ಹಾಗೂ ವಾಹನಗಳ ಕೀಗಳನ್ನು ಕೊಂಡೊಯ್ದಿದ್ದಾರೆ.
ಸೊಸೈಟಿಯಲ್ಲಿ ವಾಹನ ಸಾಲ ಯೋಜನೆಯಡಿ ಸಾಲ ಪಡೆದ ಗ್ರಾಹಕರ ವಾಹನಗಳ ಒಂದು ಕೀ ಹಾಗೂ ನೋಂದಣಿ ಪ್ರಮಾಣಪತ್ರ ನಿಯಮಾನುಸಾರ ಸೊಸೈಟಿಯಲ್ಲಿ ಇಡಲಾಗುತ್ತದೆ. ಆದ್ದರಿಂದ ದ್ವಿಚಕ್ರ ಹಾಗೂ ನಾಲ್ಕು ವಾಹನಗಳ ಅನೇಕ ಕೀಗಳು ಮತ್ತು ಆರ್ಸಿ ಪುಸ್ತಕಗಳನ್ನು ಸೊಸೈಟಿಯಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು. ಆದರೆ ಕಳ್ಳರು ಇವುಗಳನ್ನು ಕಳವು ಮಾಡಿರುವುದರಿಂದ ದೊಡ್ಡ ಆತಂಕ ವ್ಯಕ್ತವಾಗುತ್ತಿದೆ.
ಕಳ್ಳರು ಕಳ್ಳತನದ ನಂತರ ಸಿಸಿ ಟಿವಿ ಕ್ಯಾಮೆರಾಗಳ ಡಿಜಿಟಲ್ ವಿಡಿಯೋ ರೆಕಾರ್ಡಿಂಗ್ (ಡಿವಿಆರ್) ಯುನಿಟ್ ಕೂಡ ತೆಗೆದುಕೊಂಡು ಹೋಗಿರುವುದರಿಂದ ತನಿಖೆಗೆ ಅಡಚಣೆ ಉಂಟಾಗಿದೆ. ವಾಹನಗಳ ಕೀಗಳು ಮತ್ತು ಆರ್ಸಿ ಬುಕ್ ಒಂದೇ ಕಡೆ ದೊರಕಿರುವುದರಿಂದ ಕಳ್ಳರು ಸಂಬಂಧಿತ ವಿಳಾಸಗಳಿಗೆ ತೆರಳಿ ವಾಹನಗಳನ್ನು ಕಳವು ಮಾಡುವ ಸಂಚು ರೂಪಿಸುತ್ತಿರಬಹುದೆಂಬ ಶಂಕೆಯನ್ನು ಗ್ರಾಮಸ್ಥರು ಹಾಗೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ. ಕಳ್ಳತನದ ಸ್ವರೂಪ ಗಂಭೀರವಾಗಿರುವುದರಿಂದ ಪ್ರಕರಣದ ಆಳವಾದ ತನಿಖೆ ನಡೆಸಲಾಗುತ್ತಿದ್ದು, ಕಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಈ ಘಟನೆಯಿಂದ ಸೊಸೈಟಿ ಸದಸ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಹಕರು ತಮ್ಮ ವಾಹನಗಳನ್ನು ಸುರಕ್ಷಿತವಾಗಿ ಇಡುವಂತೆ ಮನವಿ ಮಾಡಲಾಗಿದೆ.



