श्री विश्वकर्मा जयंती उत्साहात साजरी; विविध क्षेत्रातील मान्यवरांची उपस्थिती.
खानापूर : शनिवार दिनांक 31 जानेवारी 2026 रोजी श्री विश्वकर्मा जयंतीच्या निमित्ताने मंदिरामध्ये सकाळी 7 वाजता अभिषेक कार्यक्रम पार पडला. त्यानंतर होम-हवन कार्यक्रमासाठी मोठ्या संख्येने भक्तगण उपस्थित होते. सकाळी 10 वाजता ह. भ. प. पुंडलिक पाचंगे (असोगा) यांचे प्रभावी कीर्तन झाले.

दुपारी 12 वाजता विविध स्तरातील भाविकांची मोठी गर्दी झाली. संपूर्ण तालुक्याच्या कानाकोपऱ्यातून भक्तगण दर्शनासाठी उपस्थित होते. या कार्यक्रमाला माजी आमदार अरविंद पाटील, लैला शुगरचे एमडी सदानंद पाटील, संजय कुबल, प्रमोद कोचेरी, बसवराज सानिकोप, गुंडू तोपिनकट्टी, मोहन पाटील, नितीन पाटील यांच्यासह भाजपाचे अनेक नेते मंडळी उपस्थित होते. तसेच इरफान तालीकोटी, माजी जिल्हा पंचायत सदस्य विलास बेळगावकर व महाराष्ट्र एकीकरण समितीचे नेते, समाजातील प्रसिद्ध उद्योजक, कलाकार व मान्यवरांनीही हजेरी लावली.

हनुमंत सुतार यांनी प्रास्ताविक करून कार्यक्रमाची सुरुवात केली. समाजाने आतापर्यंत मंदिराच्या विकासासाठी केलेल्या कामांची सविस्तर माहिती त्यांनी दिली. माजी आमदार अरविंद पाटील यांनी समाजातील लोकांनी एकत्र येऊन मंदिराच्या पुढील विकास कामांना गती द्यावी तसेच पारंपरिक कला जपत आधुनिक कलेकडे वाटचाल करून प्रगती साधावी असे आवाहन केले.
जिल्हा पंचायत सदस्य विलास बेळगावकर यांनी शुभेच्छा देताना सांगितले की, समाजातील बांधवांनी भव्य-दिव्य कार्यक्रम आयोजित केला असून या एकीमुळे पुढील कार्य सहज पार पडेल. इरफान तालीकोटी यांनी मंदिर सभामंडपासाठी शासनाकडून निधी मिळवून देण्यासाठी पाठपुरावा करण्याचे आश्वासन दिले.
कार्यक्रमात अनेक दानशूर व्यक्तींचा सत्कार करण्यात आला. दुपारी 2 वाजता महाप्रसादाचे आयोजन करण्यात आले तसेच महिलांसाठी हळदी-कुंकू कार्यक्रम घेण्यात आला. त्यानंतर कार्यक्रमाची सांगता झाली.
सूत्रसंचालन यल्लारी सुतार व शंकर कमार यांनी केले तर आभार प्रदर्शन ज्योतिबा सुतार (बेकवाड) यांनी केले.
ಶ್ರೀ ವಿಶ್ವಕರ್ಮ ಜಯಂತಿ ಉತ್ಸಾಹದಿಂದ ಆಚರಣೆ; ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ.
ಖಾನಾಪೂರ : ಶನಿವಾರ ದಿನಾಂಕ 31 ಜನವರಿ 2026 ರಂದು ಶ್ರೀ ವಿಶ್ವಕರ್ಮ ಜಯಂತಿ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಗೆ ಅಭಿಷೇಕ ಕಾರ್ಯಕ್ರಮ ನೆರವೇರಿತು. ನಂತರ ಹೋಮ-ಹವನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಬೆಳಿಗ್ಗೆ 10 ಗಂಟೆಗೆ ಹ. ಭ. ಪ. ಪುಂಡಲಿಕ ಪಾಚಂಗೆ (ಅಸೋಗಾ) ಅವರ ಪ್ರಭಾವಿ ಕೀರ್ತನೆ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಭಕ್ತರ ಭಾರೀ ಜನಸ್ತೋಮ ಸೇರಿತು. ಸಂಪೂರ್ಣ ತಾಲ್ಲೂಕಿನ ಎಲ್ಲೆಡೆಯಿಂದ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಅರವಿಂದ್ ಪಾಟೀಲ್, ಲೈಲಾ ಶುಗರ್ಸನ ಎಂಡಿ ಸದಾನಂದ್ ಪಾಟೀಲ್, ಸಂಜಯ ಕುಬಲ್, ಪ್ರಮೋದ್ ಕೋಚೇರಿ, ಬಸವರಾಜ್ ಸಾನಿಕೊಪ್ಪ, ಗುಂಡು ತೋಪಿನಕಟ್ಟಿ, ಮೋಹನ್ ಪಾಟೀಲ್, ನಿತಿನ್ ಪಾಟೀಲ್ ಸೇರಿದಂತೆ ಬಿಜೆಪಿ ಪಕ್ಷದ ಅನೇಕ ನಾಯಕರು ಉಪಸ್ಥಿತರಿದ್ದರು. ಜೊತೆಗೆ ಇರ್ಫಾನ್ ತಲಿಕೋಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಲಾಸ್ ಬೆಳಗಾವ್ಕರ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರು, ಸಮಾಜದ ಪ್ರಸಿದ್ಧ ಉದ್ಯಮಿಗಳು, ಕಲಾವಿದರು ಹಾಗೂ ಗಣ್ಯರು ಕೂಡ ಹಾಜರಿದ್ದರು.
ಹನುಮಂತ್ ಸುತಾರ್ ಅವರು ಪ್ರಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜವು ಇದುವರೆಗೆ ದೇವಾಲಯದ ಅಭಿವೃದ್ಧಿಗೆ ಮಾಡಿರುವ ಕೆಲಸಗಳ ವಿವರವಾದ ಮಾಹಿತಿ ನೀಡಿದರು. ಮಾಜಿ ಶಾಸಕರಾದ ಅರವಿಂದ್ ಪಾಟೀಲ್ ಅವರು ಸಮಾಜದ ಜನರು ಒಗ್ಗಟ್ಟಾಗಿ ದೇವಾಲಯದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕು ಹಾಗೂ ಪಾರಂಪರಿಕ ಕಲೆಗಳನ್ನು ಉಳಿಸಿಕೊಂಡು ಆಧುನಿಕ ಕಲೆ ಕಡೆಗೆ ಸಾಗುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ವಿಲಾಸ್ ಬೆಳಗಾವ್ಕರ್ ಅವರು ಶುಭಾಶಯ ಸಲ್ಲಿಸಿ, ಸಮಾಜದ ಬಾಂಧವರು ಭವ್ಯ-ದಿವ್ಯ ಕಾರ್ಯಕ್ರಮ ಆಯೋಜಿಸಿರುವುದಾಗಿ ಮತ್ತು ಈ ಏಕತೆಯಿಂದ ಮುಂದಿನ ಕಾರ್ಯಗಳು ಸುಲಭವಾಗಿ ನೆರವೇರಲಿವೆ ಎಂದು ಹೇಳಿದರು. ಇರ್ಫಾನ್ ತಲಿಕೋಟಿ ಅವರು ದೇವಾಲಯ ಸಭಾಮಂಡಪಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅನೇಕ ದಾನಶೂರರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು, ಮಹಿಳೆಯರಿಗಾಗಿ ಅರಿಸಿನ-ಕುಂಕುಮ ಕಾರ್ಯಕ್ರಮವೂ ಆಯೋಜಿಸಲಾಯಿತು. ನಂತರ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮ ನಿರ್ವಹಣೆಯನ್ನು ಯಲ್ಲಾರಿ ಸುತಾರ್ ಹಾಗೂ ಶಂಕರ ಕಮಾರ್ ಅವರು ಮಾಡಿದರು ಮತ್ತು ಜ್ಯೋತಿಬಾ ಸುತಾರ್ ಬೆಕವಾಡ ಅವರು ಧನ್ಯವಾದ ಅರ್ಪಿಸಿದರು.



