अजित पवारांच्या विमानाचा अपघात, 6 जणांचा मृत्यू झाल्याची माहिती, बारामतीमध्ये लँडींगदरम्यान घडली घटना.
बारामती ; बारामतीतून मोठी बातमी समोर आली आहे, राज्याचे उपमुख्यमंत्री अजित पवारांच्या विमानाचा अपघात झाला असल्याची माहिती समोर आली आहे. विमानाचा बारामतीमध्ये लँडिंगदरम्यान अपघात झाला आहे. विमानात अजित पवार आणि त्यांचे सुरक्षारक्षक होते, असंही सांगितलं जात आहे.
लँडिंगच्या वेळेस हा अपघात झाल्याची माहिती मिळाली आहे या अपघातात अजित पवार यांच्यासह सहा जण मृत्यूमुखी पडल्याचे समजते
या विमानातातून प्रवास करणाऱ्यांना बाहेर काढण्यात आले आहे. विमानातून प्रवास करणारे काही जण जखमी झाल्याची प्राथमिक माहिती आहे. लँडिंगच्या वेळेस हा अपघात झाल्याचे समजते. ज्या ठिकाणी हा अपघात झाला त्या ठिकाणी धुराचे लोट पसरले आहेत. यामध्ये जखमी झालेल्यांना रुग्णालयात उपचारांसाठी दाखल करण्यात येत आहे, या विमानांमधून अजित पवार प्रवास करत होते, याची पुष्टी आहे, पवार कुटूंबाकडून अपघताची माहिती घेतली जात आहे, अपघाताच्या ठिकाणी पोलिस आणि अग्नीशामक दल दाखल झाले आहे, विमानाचा अपघात झाल्यानंतर विमानाने पेट घेतला अशी माहिती समोर आली आहे.
हा अपघात अतिशय भीषण होता अशी माहिती आहे, परिसरातील नागरिक अपघातस्थळी दाखल झाले आहेत. विमानाचे अवशेष आजूबाजूला पडल्याचं दिसून येत आहे, अग्निशामक दलाकडून बचावकार्य सुरू आहे. अजित पवारांसह एकूण 6 जण होते. अजित पवारांवर उपचार सुरू असल्याची माहिती समोर आली आहे, मात्र अजित पवारांसोबत कोण कोण होत त्याबाबातची माहिती आलेली नाही. मात्र अजित पवार यांच्यासोबत त्यांचे सुरक्षा रक्षक सोबत असल्याचे समजते.
विमानातून प्रवास करणाऱ्याची प्रकृती गंभीर असल्याची माहिती आहे. हा भीषण अपघात झाल्यानंतर विमानाने पेट घेतला, त्यानंतर विमानाचा जळून कोळसा झाला आहे, परिसरातील नागरिकही मदतीसाठी घटनास्थळी दाखल झाले आहेत. अजित पवारांना बारामतीमध्येच उपचारांसाठी दाखल करण्यात आलेलं आहे. डॉक्टरांचं पथक बारामतीमध्ये दाखल होत असल्याची माहिती आहे. विमान लँड होताना नेमकं काय घडलं आणि विमानाने कसा पेट घेतला याबाबतची माहिती समोर आलेली नाही.
सुप्रिया सुळे, सुनेत्रा पवार आणि पार्थ पवार सध्या शरद पवारांच्या निवासस्थानी…..
सुप्रिया सुळे, सुनेत्रा पवार आणि पार्थ पवार दिल्लीहून बारामतीला रवाना होणार आहेत. सुप्रिया सुळे, सुनेत्रा पवार आणि पार्थ पवार सध्या शरद पवारांच्या निवासस्थानी एकत्र आहेत.
विमानातील सहा प्रवाशांचा मृत्यू…..
या विमानात प्रवास करणाऱ्या अजित पवारासह सहा प्रवाशांचा मृत्यू झाला असल्याची माहिती समोर आली आहे. सकाळी 9 ते 9.15 वाजण्याच्या सुमारास हा भीषण अपघात झाला आहे. तर DGCAने दिलेल्या माहितीनुसार सहा प्रवाशांचा मृत्यू झाला आहे.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇನ್ನುಳಿದ 5 ಜನರು, ಬಾರಾಮತಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಸಾವು
ಬಾರಾಮತಿ : ಬಾರಾಮತಿಯಿಂದ ದೊಡ್ಡ ಸುದ್ದಿ .
ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಮಾನವು ಬಾರಾಮತಿಯಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಅಜಿತ್ ಪವಾರ್ ಹಾಗೂ ಅವರ ಭದ್ರತಾ ಸಿಬ್ಬಂದಿ ಕೂಡ ಇದ್ದರು ಎಂದು ಹೇಳಲಾಗುತ್ತಿದೆ.
ಲ್ಯಾಂಡಿಂಗ್ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ದೊರೆತಿದೆ. ಈ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆಯಲಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಇದೆ.
ಲ್ಯಾಂಡಿಂಗ್ ಸಮಯದಲ್ಲೇ ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಹೊಗೆಯ ದಟ್ಟ ಮೋಡಗಳು ಹರಡಿರುವುದು ಕಂಡುಬಂದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಈ ವಿಮಾನದಲ್ಲಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದರು ಎಂಬುದು ದೃಢಪಟ್ಟಿದೆ. ಪವಾರ್ ಕುಟುಂಬದಿಂದ ಅಪಘಾತದ ಮಾಹಿತಿ ಪಡೆಯಲಾಗುತ್ತಿದೆ.
ಅಪಘಾತ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿದೆ. ವಿಮಾನ ಅಪಘಾತದ ನಂತರ ಬೆಂಕಿ ಹೊತ್ತಿಕೊಂಡಿದು ಈ ಅಪಘಾತ ಅತ್ಯಂತ ಭೀಕರವಾಗಿತ್ತು ಎಂಬ ಮಾಹಿತಿ ಇದೆ. ಸುತ್ತಮುತ್ತಲಿನ ನಾಗರಿಕರು ಅಪಘಾತ ಸ್ಥಳಕ್ಕೆ ಧಾವಿಸಿದ್ದಾರೆ.
ವಿಮಾನದ ಅವಶೇಷಗಳು ಸುತ್ತಮುತ್ತ ಚದುರಿಕೊಂಡಿರುವುದು ಕಂಡುಬಂದಿದೆ. ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಅಜಿತ್ ಪವಾರ್ ಸೇರಿದಂತೆ ಒಟ್ಟು ಆರು ಜನರು ವಿಮಾನದಲ್ಲಿದ್ದರು. ಅವರ ಜೊತೆ ಇನ್ಯಾರು ಇದ್ದರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಅಜಿತ್ ಪವಾರ್ ಅವರ ಜೊತೆ ಭದ್ರತಾ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಇದೆ. ಈ ಭೀಕರ ಅಪಘಾತದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿದೆ. ಸುತ್ತಮುತ್ತಲಿನ ನಾಗರಿಕರೂ ಸಹ ಸಹಾಯಕ್ಕಾಗಿ ಘಟನೆ ಸ್ಥಳಕ್ಕೆ ಆಗಮಿಸಿದ್ದಾರೆ.
ವಿಮಾನ ಲ್ಯಾಂಡಿಂಗ್ ವೇಳೆ ನಿಖರವಾಗಿ ಏನಾಯಿತು ಮತ್ತು ವಿಮಾನಕ್ಕೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಸುಪ್ರಿಯಾ ಸುಳೆ, ಸುನೇತ್ರಾ ಪವಾರ್ ಮತ್ತು ಪಾರ್ಥ್ ಪವಾರ್ ಪ್ರಸ್ತುತ ಶರದ್ ಪವಾರ್ ಅವರ ನಿವಾಸದಲ್ಲಿದ್ದಾರೆ.
ಸುಪ್ರಿಯಾ ಸುಳೆ, ಸುನೇತ್ರಾ ಪವಾರ್ ಮತ್ತು ಪಾರ್ಥ್ ಪವಾರ್ ದೆಹಲಿಯಿಂದ ಬಾರಾಮತಿಗೆ ಹೊರಡಲಿದ್ದಾರೆ.
ವಿಮಾನದಲ್ಲಿದ್ದ ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಜಿತ್ ಪವಾರ್ ಸೇರಿದಂತೆ ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಿಗ್ಗೆ 9 ರಿಂದ 9.15 ಗಂಟೆಗಳ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.
DGCA ನೀಡಿದ ಮಾಹಿತಿಯ ಪ್ರಕಾರ ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ.



