पंच गॅरंटी हमी योजनेची मासिक बैठक खानापूर तालुका पंचायत येथे संपन्न.

खानापूर : पंच गॅरंटी हमी योजनेची मासिक बैठक आज मंगळवार, दि. 27 जानेवारी 2026 रोजी तालुका पंचायत खानापूर येथे पार पडली. या बैठकीच्या अध्यक्षस्थानी खानापूर तालुका गॅरंटी योजना अध्यक्ष सूर्यकांत कुलकर्णी होते. बैठकीत राज्य सरकारच्या पाचही गॅरंटी योजनांबाबत संबंधित खात्यांच्या अधिकाऱ्यांकडून सविस्तर माहिती घेण्यात आली.
गृहज्योती योजना….
गृहज्योती योजनेचे अधिकारी प्रवीण बरगाले यांनी माहिती देताना सांगितले की, खानापूर तालुक्यात 63 हजार 239 लाभार्थी असून डिसेंबर महिन्यात सुमारे 1 कोटी 96 लाख रुपयांचे वीजबिल माफ करण्यात आले आहे. यावेळी सभासदांनी मांडलेल्या अडचणी ऐकून घेऊन त्या तात्काळ सोडवण्यासाठी संबंधित कर्मचाऱ्यांना सूचना देण्यात येतील, तसेच सुरळीत वीजपुरवठा करण्यात येईल, असे आश्वासन त्यांनी दिले.
शक्ती योजना…..
शक्ती योजनेबाबत माहिती देताना डेपो नियंत्रक शंकर कल्लाप्पा दुर्गावी यांनी सांगितले की, डिसेंबर महिन्यात 7 लाख 46 हजार 485 महिला प्रवाशांनी मोफत प्रवास केला असून त्याची रक्कम 2 कोटी 30 लाख 26 हजार 6 रुपये इतकी आहे.
यावेळी गॅरंटी योजनेचे सदस्य रुद्राप्पा पाटील यांनी इदलहोंड–सिंगिंकॉप मार्गे जाणारी बस पुढे माळअंकले, झाडअंकले मार्गे खानापूरपर्यंत सुरू करावी, अशी मागणी केली.
गृहलक्ष्मी योजना…..
गृहलक्ष्मी योजनेच्या अधिकारी असिस्टंट सीडीपीओ शारदा मराठे यांनी सांगितले की, खानापूर तालुक्यात 66 हजार 334 लाभार्थी असून सप्टेंबर महिन्यापर्यंत प्रत्येकी 2 हजार रुपये त्यांच्या खात्यावर जमा झाले आहेत.
तसेच 195 लाभार्थ्यांना आयटी/जीएसटी नोंदीमुळे रक्कम मिळालेली नाही, मात्र ज्यांच्याकडे प्रत्यक्षात आयटी/जीएसटी नाही, अशा लाभार्थ्यांची शहानिशा सुरू असून प्रक्रिया पूर्ण झाल्यानंतर त्यांनाही योजनेचा लाभ देण्यात येईल, असे त्यांनी स्पष्ट केले.
यावेळी अध्यक्ष सूर्यकांत कुलकर्णी यांनी सांगितले की, गृहलक्ष्मी विभागातील सीडीपीओ निलंबित झाले असून, नव्याने नेमणूक होणाऱ्या अधिकाऱ्यांनी गॅरंटी योजनांबाबतची कामे तात्काळ पूर्ण करावीत. कामचुकारपणा केल्यास तो सहन केला जाणार नाही, असा इशाराही त्यांनी दिला.
युवा निधी योजना…..
युवा निधी योजनेचे अधिकारी बैठकीस गैरहजर राहिल्याने त्यांना नोटीस देण्याचा ठराव यावेळी करण्यात आला.
अन्नभाग्य योजना…..
अन्नभाग्य योजनेबाबत डेप्युटी तहसीलदार आनंद एस. जांभळे व अन्नभाग्य निरीक्षक उदय खातेदार यांनी रेशन वितरणासंदर्भात माहिती दिली.
यावेळी गॅरंटी योजनेचे सदस्य प्रकाश मादार यांनी अनेक गंभीर बाबी सभागृहासमोर मांडल्या. नवीन रेशन कार्ड वितरणात योग्य शहानिशा न करता कार्ड वाटप सुरू असल्याचा संशय, तसेच ऑनलाइन अर्जदार, दुकानदार व संबंधित अधिकाऱ्यांमध्ये देवाण-घेवाण झाल्याचा संशय व्यक्त करण्यात आला.
अध्यक्ष सूर्यकांत कुलकर्णी यांनी नवीन रेशन कार्ड दिलेल्या ग्रामपंचायतींची नावे जाहीर करण्याबाबत लेखी नोटीस दिली होती, मात्र त्याला केवळ आकडेवारी स्वरूपात उत्तर देण्यात आल्याने संशय अधिक बळावला आहे. त्यामुळे याप्रकरणी वरिष्ठ अधिकाऱ्यांकडे तक्रार करून फेरतपासणी करण्याचा निर्णय घेण्यात आला.
उपस्थिती….
या बैठकीस गॅरंटी योजनेचे सदस्य प्रकाश मादार, बाबू हत्तरवाड, इसाखान पठाण, जगदीश पाटील, रुद्राप्पा पाटील, गोविंद पाटील, युसुफ हरगी, प्रियांका गावकर, दीपा पाटील, शांताराम गुरव, राजा कुडाळे, विवेक तडकोड, संजय गावडे, योजनेचे कार्यदर्शी रमेश मेत्री आदी उपस्थित होते.
बैठकीचे सूत्रसंचालन व आभार व्यवस्थापक श्रीकांत सपटला यांनी मानले.
ಪಂಚ ಗ್ಯಾರಂಟಿ ಭರವಸೆ ಯೋಜನೆಯ ಮಾಸಿಕ ಸಭೆ ಖಾನಾಪುರ ತಾಲ್ಲೂಕ ಪಂಚಾಯತಿಯ ಸಭಾಂಗಣದಲ್ಲಿ ನಡೆಯಿತು.
ಖಾನಾಪುರ : ಪಂಚ ಗ್ಯಾರಂಟಿ ಭರವಸೆ ಯೋಜನೆಯ ಮಾಸಿಕ ಸಭೆಯು ಇಂದು ಮಂಗಳವಾರ, ಜನವರಿ 27, 2026 ರಂದು ಖಾನಾಪುರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಖಾನಾಪುರ ತಾಲ್ಲೂಕು ಗ್ಯಾರಂಟಿ ಯೋಜನಾ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಳ್ಳಲಾಯಿತು.
ಗೃಹಜ್ಯೋತಿ ಯೋಜನೆ….
ಗೃಹಜ್ಯೋತಿ ಯೋಜನೆಯ ಅಧಿಕಾರಿ ಪ್ರವೀಣ ಬರ್ಗಾಳೆ ಮಾಹಿತಿ ನೀಡುತ್ತಾ, ಖಾನಾಪುರ ತಾಲ್ಲೂಕಿನಲ್ಲಿ 63,239 ಫಲಾನುಭವಿಗಳು ಇದ್ದು, ಡಿಸೆಂಬರ್ ತಿಂಗಳಲ್ಲಿ ಸುಮಾರು 1 ಕೋಟಿ 96 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಸದಸ್ಯರು ವ್ಯಕ್ತಪಡಿಸಿದ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ತಕ್ಷಣ ಪರಿಹರಿಸಲು ಸಂಬಂಧಿಸಿದ ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಕ್ತಿ ಯೋಜನೆ…..
ಶಕ್ತಿ ಯೋಜನೆ ಕುರಿತು ಮಾಹಿತಿ ನೀಡಿದ ಡಿಪೋ ನಿಯಂತ್ರಕ ಶಂಕರ ಕಲ್ಲಪ್ಪ ದುರ್ಗಾವಿ ಅವರು, ಡಿಸೆಂಬರ್ ತಿಂಗಳಲ್ಲಿ 7,46,485 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, ಅದರ ವೆಚ್ಚ 2 ಕೋಟಿ 30 ಲಕ್ಷ 26 ಸಾವಿರ 6 ರೂಪಾಯಿ ಆಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಸದಸ್ಯ ರುದ್ರಪ್ಪ ಪಾಟೀಲ ಅವರು ಇದಲಹೊಂಡ–ಸಿಂಗಿನಕೋಪ್ ಮಾರ್ಗದ ಬಸ್ಸನ್ನು ಮುಂದುವರೆಸಿ ಮಾಳಅಂಕಲೆ, ಝಾಡಅಂಕಲೆ ಮಾರ್ಗವಾಗಿ ಖಾನಾಪುರವರೆಗೆ ಸಂಚರಿಸುವಂತೆ ಮಾಡುವಂತೆ ಬೇಡಿಕೆ ಸಲ್ಲಿಸಿದರು.
ಗೃಹಲಕ್ಷ್ಮೀ ಯೋಜನೆ…..
ಗೃಹಲಕ್ಷ್ಮೀ ಯೋಜನೆಯ ಅಧಿಕಾರಿ ಸಹಾಯಕ ಸಿಡಿಪಿಒ ಶಾರದಾ ಮರಾಠೆ ಮಾಹಿತಿ ನೀಡುತ್ತಾ, ಖಾನಾಪುರ ತಾಲ್ಲೂಕಿನಲ್ಲಿ 66,334 ಫಲಾನುಭವಿಗಳು ಇದ್ದು, ಸೆಪ್ಟೆಂಬರ್ ತಿಂಗಳವರೆಗೆ ಪ್ರತಿ ಫಲಾನುಭವಿಗೆ 2,000 ರೂಪಾಯಿ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು. ಅಲ್ಲದೆ ಐಟಿ/ಜಿಎಸ್ಟಿ ದಾಖಲೆಗಳ ಕಾರಣದಿಂದ 195 ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ, ಆದರೆ ವಾಸ್ತವದಲ್ಲಿ ಐಟಿ/ಜಿಎಸ್ಟಿ ಇಲ್ಲದ ಫಲಾನುಭವಿಗಳ ಪರಿಶೀಲನೆ ನಡೆಯುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರಿಗೂ ಯೋಜನೆಯ ಲಾಭ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು, ಗೃಹಲಕ್ಷ್ಮೀ ವಿಭಾಗದ ಸಿಡಿಪಿಒ ಅವರನ್ನು ಅಮಾನತುಗೊಳಿಸಲಾಗಿದ್ದು, ಹೊಸದಾಗಿ ನೇಮಕವಾಗುವ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕಾರ್ಯಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಕಾರ್ಯಚಟುವಟಿಕೆಯಲ್ಲಿ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯುವ ನಿಧಿ ಯೋಜನೆ…..
ಯುವ ನಿಧಿ ಯೋಜನೆಯ ಅಧಿಕಾರಿ ಸಭೆಗೆ ಗೈರುಹಾಜರಾಗಿದ್ದರಿಂದ, ಅವರಿಗೆ ನೋಟಿಸ್ ನೀಡುವ ನಿರ್ಣಯ ಕೈಗೊಳ್ಳಲಾಯಿತು.
ಅನ್ನಭಾಗ್ಯ ಯೋಜನೆ…..
ಅನ್ನಭಾಗ್ಯ ಯೋಜನೆ ಕುರಿತು ಉಪ ತಹಸೀಲ್ದಾರ್ ಆನಂದ ಎಸ್. ಜಾಂಭಳೆ ಹಾಗೂ ಅನ್ನಭಾಗ್ಯ ನಿರೀಕ್ಷಕ ಉದಯ ಖಾತೇದಾರ ಅವರು ರೇಷನ್ ವಿತರಣೆ ಕುರಿತು ಮಾಹಿತಿ ನೀಡಿದರು. ಈ ವೇಳೆ ಗ್ಯಾರಂಟಿ ಯೋಜನೆ ಸದಸ್ಯ ಪ್ರಕಾಶ ಮಾದಾರ ಅವರು ಹಲವು ಗಂಭೀರ ವಿಷಯಗಳನ್ನು ಸಭೆಯ ಮುಂದಿಟ್ಟರು. ಹೊಸ ರೇಷನ್ ಕಾರ್ಡ್ ವಿತರಣೆಯಲ್ಲಿ ಸರಿಯಾದ ಪರಿಶೀಲನೆ ಇಲ್ಲದೇ ಕಾರ್ಡ್ ನೀಡಲಾಗುತ್ತಿದೆ ಎಂಬ ಅನುಮಾನ, ಹಾಗೂ ಆನ್ಲೈನ್ ಅರ್ಜಿದಾರರು, ಅಂಗಡಿ ಮಾಲೀಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ನಡುವೆ ಹೊಂದಾಣಿಕೆ ನಡೆದಿರುವ ಶಂಕೆ ವ್ಯಕ್ತಪಡಿಸಿದರು.
ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಹೊಸ ರೇಷನ್ ಕಾರ್ಡ್ ನೀಡಿರುವ ಗ್ರಾಮ ಪಂಚಾಯತಿಗಳ ಹೆಸರನ್ನು ಪ್ರಕಟಿಸುವಂತೆ ಲಿಖಿತ ನೋಟಿಸ್ ನೀಡಿದ್ದರೂ, ಕೇವಲ ಸಂಖ್ಯಾ ಮಾಹಿತಿಯನ್ನು ನೀಡಿರುವುದರಿಂದ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ದೂರು ನೀಡಿ ಪುನರ್ಪರಿಶೀಲನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ಉಪಸ್ಥಿತಿ….
ಸಭೆಯಲ್ಲಿ ಗ್ಯಾರಂಟಿ ಯೋಜನೆ ಸದಸ್ಯರಾದ ಪ್ರಕಾಶ ಮಾದಾರ, ಬಾಬು ಹತ್ತರವಾಡ, ಇಸಾಖಾನ್ ಪಠಾಣ, ಜಗದೀಶ ಪಾಟೀಲ, ರುದ್ರಪ್ಪ ಪಾಟೀಲ, ಗೋವಿಂದ ಪಾಟೀಲ, ಯೂಸುಫ್ ಹರಗಿ, ಪ್ರಿಯಾಂಕಾ ಗಾವ್ಕರ್, ದೀಪಾ ಪಾಟೀಲ, ಶಾಂತರಾಮ ಗುರವ, ರಾಜಾ ಕುಡಾಳೆ, ವಿವೇಕ ತಡಕೋಡ, ಸಂಜಯ ಗಾವಡೆ, ಯೋಜನೆಯ ಕಾರ್ಯದರ್ಶಿ ರಮೇಶ್ ಮೆತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭೆಯ ಸೂತ್ರಸಂಚಲನ ಹಾಗೂ ವಂದನೆಗಳನ್ನು ವ್ಯವಸ್ಥಾಪಕ ಶ್ರೀಕಾಂತ ಸಪಟ್ಲಾ ವಹಿಸಿದ್ದರು.



