खानापूर शहरांतर्गत रस्त्याची हद्द मोजणी व मार्किंग 2 व 3 फेब्रुवारीला
खानापूर : खानापूर शहरातील अंतर्गत रस्त्यांच्या हद्दीबाबत सुरू असलेल्या वादावर तोडगा काढण्यासाठी रस्त्याच्या सीमांकन (मार्किंग) प्रक्रियेला अखेर गती मिळाली आहे. शहरातील रस्त्यांच्या सर्वेक्षणाचे काम पूर्ण झाले असून दि. 2 व 3 फेब्रुवारी 2026 रोजी प्रत्यक्ष जागेवर हद्द मोजणी व मार्किंग करण्यात येणार आहे.
माजी नगरसेवक दिनकर मरगाळे व विवेक गिरी यांनी केलेल्या उपोषणामुळे या प्रकरणाला गती मिळाली आहे. तसेच खानापूरच्या माजी आमदार तथा एआयसीसी सचिव डॉ. अंजलीताई हेमंत निंबाळकर यांच्या सातत्यपूर्ण पाठपुराव्याला आणि सर्वपक्षीय नेतेमंडळींनी लढ्याला दिलेल्या पाठिंब्यामुळे हा निर्णय घेण्यात आला आहे.
खानापूर शहरातील विविध सर्वे नंबरला लागून असलेल्या रस्त्यांच्या हद्दी निश्चित करण्यासाठी भूदाखले विभागाकडून अधिकृत कारवाई हाती घेण्यात आली आहे. यासंदर्भात भूदाखले सहायक संचालक, खानापूर यांनी अधिकृत जाहीरनामा प्रसिद्ध केला आहे.
या जाहीरनाम्यानुसार, खानापूर गावातील रि.स.नं. 95/अ, 95/ब, 96/अ, 96/ब, 51, 49, 48, 97, 95 व 96 या सर्वे नंबरलगत असलेल्या रस्त्यांची मोजणी दि. 14 जानेवारी 2026 रोजी पूर्ण करण्यात आली होती. त्यानंतर सर्वे अभिलेखांची तपासणी करून नकाशा तयार करण्यात आला आहे.
त्यानुसार, दि. 2 व 3 फेब्रुवारी 2026 रोजी सकाळी 10.30 वाजता संबंधित रस्त्याच्या हद्दींची प्रत्यक्ष ठिकाणी ओळख (सीमांकन) व मार्किंग करण्यात येणार आहे. या प्रक्रियेसाठी संबंधित सर्व पक्षकार, अधिकारी व नागरिकांनी प्रत्यक्ष ठिकाणी उपस्थित राहून सहकार्य करावे, असे आवाहन भूदाखले सहायक संचालकांनी केले आहे. या कारवाईनंतर संपूर्ण अहवाल कार्यालयात सादर करण्याचे आदेश देण्यात आले आहेत.
या संदर्भात तालुका तहसीलदार, लोकोपयोगी विभाग (PWD), खानापूर उपविभाग व खानापूर नगर पंचायत यांना आवश्यक ती कार्यवाही करण्याबाबत सूचना देण्यात आल्या आहेत. तसेच शांतता भंग होण्याची शक्यता लक्षात घेता पोलीस विभागाचे कर्मचारी, महसूल निरीक्षक व ग्राम प्रशासन अधिकारी यांनाही उपस्थित राहण्याची विनंती करण्यात आली आहे.
खानापूर नगर पंचायतच्या मुख्याधिकाऱ्यांना रस्त्यालगतच्या इमारतधारक व नागरिकांना पूर्वसूचना देण्याचे निर्देश देण्यात आले आहेत. तसेच संबंधित प्रकरणातील अर्जदारांचे वकील अॅड. आय. आर. घाडी (खानापूर) यांनाही या निर्णयाची माहिती देण्यात आली आहे.
ही संपूर्ण प्रक्रिया वरिष्ठ भूमापक श्री. राजप्पा पट्टणशेट्टी व श्री. हरीश गणाचारी यांच्या मार्गदर्शनाखाली पार पडणार आहे.
दरम्यान, ब्लॉक काँग्रेस, सर्वपक्षीय नेतेमंडळी तसेच माजी नगरसेवक दिनकर मरगाळे व विवेक गिरी यांच्या वतीने शहरातील सर्व नागरिक, कार्यकर्ते व नेतेमंडळींना दि. 2 व 3 फेब्रुवारी रोजी सकाळी 10.30 वाजता उपस्थित राहण्याचे आवाहन करण्यात आले आहे.
ಖಾನಾಪುರ ನಗರಾಂತರ್ಗತ ರಸ್ತೆ ಅಗಲೀಕರಣ ಕಾರ್ಯಕ್ಕೆ ಅಡ್ಡಿ ಉಂಟು ಆಗುತ್ತಿರುವ ರಸ್ತೆಗಳ ಗಡಿ ಮಾಪನ ಹಾಗೂ ಮಾರ್ಕಿಂಗ್ ಫೆಬ್ರವರಿ 2 ಮತ್ತು 3ರಂದು
ಖಾನಾಪುರ : ಖಾನಾಪುರ ಪಟ್ಟಣದ ಆಂತರಿಕ ರಸ್ತೆಗಳ ಅಗಲೀಕರಣಕ್ಕೆ ಅಡ್ಡಿ ಉಂಟಾಗುತ್ತಿರುವ ಗಡಿಗಳ ಕುರಿತು ಮುಂದುವರೆದಿದ್ದ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಸ್ತೆ ಗಡಿ ನಿರ್ಧಾರ (ಮಾರ್ಕಿಂಗ್) ಪ್ರಕ್ರಿಯೆಗೆ ಕೊನೆಗೂ ವೇಗ ಸಿಕ್ಕಿದೆ. ನಗರದಲ್ಲಿನ ಆಂತರಿಕ ರಸ್ತೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಫೆಬ್ರವರಿ 2 ಮತ್ತು 3, 2026ರಂದು ಸ್ಥಳದಲ್ಲೇ ಗಡಿ ಮಾಪನ ಹಾಗೂ ಮಾರ್ಕಿಂಗ್ ನಡೆಸಲಾಗುವುದು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ನಗರಸಭಾ ಸದಸ್ಯರಾದ ದಿನಕರ ಮರಗಾಳೆ ಹಾಗೂ ವಿವೇಕ ಗಿರಿ ಅವರು ನಡೆಸಿದ ಉಪವಾಸ ಸತ್ಯಾಗ್ರಹದಿಂದ ಪ್ರಕ್ರಿಯೆಗೆ ಗತಿ ಸಿಕ್ಕಿದೆ. ಜೊತೆಗೆ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿತಾಯಿ ಹೇಮಂತ ನಿಂಬಾಳಕರ ಅವರ ನಿರಂತರ ಹೋರಾಟ ಮತ್ತು ಎಲ್ಲಾ ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳ ನಾಯಕರು ನೀಡಿದ ಬೆಂಬಲದ ಫಲವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಖಾನಾಪುರ ಪಟ್ಟಣದ ವಿವಿಧ ಸರ್ವೆ ನಂಬರಗಳಿಗೆ ಹೊಂದಿಕೊಂಡಿರುವ ರಸ್ತೆಗಳ ಗಡಿಗಳನ್ನು ನಿಶ್ಚಿತಗೊಳಿಸುವ ಸಲುವಾಗಿ ಭೂದಾಖಲೆ ಇಲಾಖೆ ವತಿಯಿಂದ ಅಧಿಕೃತ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಭೂದಾಖಲೆ ಸಹಾಯಕ ನಿರ್ದೇಶಕರು, ಖಾನಾಪುರ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಈ ಪ್ರಕಟಣೆಯಂತೆ, ಖಾನಾಪುರ ಗ್ರಾಮದ ರೀ.ಸ.ನಂ. 95/ಅ, 95/ಬ, 96/ಅ, 96/ಬ, 51, 49, 48, 97, 95 ಹಾಗೂ 96 ಈ ಸರ್ವೆ ನಂಬರಗಳಿಗೆ ಹೊಂದಿಕೊಂಡಿರುವ ರಸ್ತೆಗಳ ಮಾಪನ ಕಾರ್ಯ ಜನವರಿ 14, 2026ರಂದು ಪೂರ್ಣಗೊಂಡಿದೆ. ನಂತರ ಸರ್ವೆ ದಾಖಲೆಗಳನ್ನು ಪರಿಶೀಲಿಸಿ ನಕ್ಷೆ ಸಿದ್ಧಪಡಿಸಲಾಗಿದೆ.
ಅದರನ್ವಯ, ಫೆಬ್ರವರಿ 2 ಮತ್ತು 3, 2026ರಂದು ಬೆಳಿಗ್ಗೆ 10.30 ಗಂಟೆಗೆ ಸಂಬಂಧಿಸಿದ ರಸ್ತೆಗಳ ಸ್ಥಳದಲ್ಲೇ ಗಡಿ ಗುರುತು (ಸೀಮಾಂಕನ) ಮತ್ತು ಮಾರ್ಕಿಂಗ್ ಕಾರ್ಯ ನಡೆಯಲಿದೆ. ಈ ಪ್ರಕ್ರಿಯೆಗೆ ಸಂಬಂಧಪಟ್ಟ ಎಲ್ಲಾ ಪಕ್ಷಕಾರರು, ಅಧಿಕಾರಿಗಳು ಹಾಗೂ ನಾಗರಿಕರು ಸ್ಥಳದಲ್ಲಿ ಹಾಜರಾಗಿ ಸಹಕರಿಸಬೇಕು ಎಂದು ಭೂದಾಖಲೆ ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ. ಈ ಕಾರ್ಯದ ನಂತರ ಸಂಪೂರ್ಣ ವರದಿಯನ್ನು ಕಚೇರಿಗೆ ಸಲ್ಲಿಸಲು ಸೂಚನೆ ನೀಡಲಾಗಿದೆ.
ಈ ಸಂಬಂಧ ತಾಲೂಕು ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ (PWD), ಖಾನಾಪುರ ಉಪವಿಭಾಗ ಮತ್ತು ಖಾನಾಪುರ ನಗರ ಪಂಚಾಯತ್ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಶಾಂತಿ ಭಂಗವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸಹ ಸ್ಥಳದಲ್ಲಿರುವಂತೆ ವಿನಂತಿಸಲಾಗಿದೆ.
ಖಾನಾಪುರ ನಗರ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ರಸ್ತೆ ಪಕ್ಕದಲ್ಲಿರುವ ಕಟ್ಟಡ ಮಾಲೀಕರು ಹಾಗೂ ನಾಗರಿಕರಿಗೆ ಪೂರ್ವಸೂಚನೆ ನೀಡುವಂತೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಸಂಬಂಧಿತ ಪ್ರಕರಣದ ಅರ್ಜಿದಾರರ ವಕೀಲರಾದ ಅಡ್ವೊ. ಐ.ಆರ್. ಘಾಡಿ (ಖಾನಾಪುರ) ಅವರಿಗೆ ಈ ನಿರ್ಧಾರದ ಮಾಹಿತಿ ನೀಡಲಾಗಿದೆ.
ಈ ಸಂಪೂರ್ಣ ಪ್ರಕ್ರಿಯೆ ಹಿರಿಯ ಭೂಮಾಪಕರು ಶ್ರೀ ರಾಜಪ್ಪ ಪಟ್ಟಣಶೆಟ್ಟಿ ಹಾಗೂ ಶ್ರೀ ಹರೀಶ ಗಣಚಾರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಈ ನಡುವೆ ಬ್ಲಾಕ್ ಕಾಂಗ್ರೆಸ್, ಎಲ್ಲಾ ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳ ನಾಯಕರು ಹಾಗೂ ಮಾಜಿ ನಗರಸಭಾ ಸದಸ್ಯರಾದ ದಿನಕರ ಮರಗಾಳೆ ಮತ್ತು ವಿವೇಕ ಗಿರಿ ಅವರ ಪರವಾಗಿ, ಪಟ್ಟಣದ ಎಲ್ಲಾ ನಾಗರಿಕರು, ಕಾರ್ಯಕರ್ತರು ಮತ್ತು ನಾಯಕರು ಫೆಬ್ರವರಿ 2 ಮತ್ತು 3ರಂದು ಬೆಳಿಗ್ಗೆ 10.30 ಗಂಟೆಗೆ ಸ್ಥಳದಲ್ಲಿ ಹಾಜರಾಗಬೇಕೆಂದು ಮನವಿ ಮಾಡಲಾಗಿದೆ.



